` ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ
Dhanush, Simbu, Vishal Image

ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಕಾರುಬಾರು ದೊಡ್ಡದು. ನಟರನ್ನು ದೇವರಂತೆಯೇ ಕಾಣುತ್ತಾರೆ. ಅಂತಹ ಚಿತ್ರರಂಗದಲ್ಲಿ ಸ್ಟಾರ್ ನಟರು ಈಗ ಬಹಿಷ್ಕಾರದ ಬಿಸಿ ಎದುರಿಸುತ್ತಿದ್ದಾರೆ. ಅದರಲ್ಲೂ ಧನುಷ್, ವಿಶಾಲ್, ಸಿಂಬು, ಅಥರ್ವ ಅವರಂತಹ ನಟರು. ಈ ಎಲ್ಲ ನಟರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ  ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ. ಕಳೆದ  13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ  ನಟರು  ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್ ಮಾಡಲಾಗಿದೆ ಎನ್ನುವುದು.

ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ  ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು  ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ.

ಇಷ್ಟಕ್ಕೂ ಯಾವ್ಯಾವ ನಟರ ಮೇಲೆ ಯಾವ ರೀತಿಯ ಆರೋಪಗಳಿವೆ ಅನ್ನೋದನ್ನ ನೋಡೋದಾದ್ರೆ..

ನಟ ಸಿಂಬು : ಶೂಟಿಂಗ್ ಜಾಗಕ್ಕೆ ಹೇಳಿದ ಸಮಯಕ್ಕೆ ಬರುವುದಿಲ್ಲ. ಚಿತ್ರೀಕರಣವನ್ನ ಯಾವಾಗ ಎಂದರೆ ಆವಾಗ ಪ್ಯಾಕಪ್ ಮಾಡಿಸ್ತಾರೆ.

ಧನುಷ್ : ತಮ್ಮ ಬ್ಯಾನರ್ ಚಿತ್ರಕ್ಕಾಗಿ ಬೇರೆಯವರಿಗೆ ಒಪ್ಪಿಕೊಂಡಿದ್ದ ಚಿತ್ರಗಳಿಗೆ ಸ್ಪಂದಿಸುವುದಿಲ್ಲ

ವಿಶಾಲ್ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ.

ಅಥರ್ವ : ಇವರನ್ನು ನಂಬಿಕೊಂಡು ಯಾವುದೇ ಪ್ಲಾನ್ ಮಾಡಿಕೊಳ್ಳೋಕೆ ಆಗಲ್ಲ. ಚಿತ್ರೀಕರಣ, ಚಿತ್ರದ ಪ್ರಚಾರ ಎಲ್ಲವೂ ಇವರ ಬೇಜವಾಬ್ದಾರಿಯಿಂದಾಗಿ ದುಬಾರಿಯಾಗುತ್ತಿದೆ.