` ಶ್ರೀಮುರಳಿಗೆ ಆಪರೇಷನ್ : ಹೇಗಿದೆ ಕಂಡೀಷನ್? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶ್ರೀಮುರಳಿಗೆ ಆಪರೇಷನ್ : ಹೇಗಿದೆ ಕಂಡೀಷನ್?
Sriimurali Image

ನಟ ಶ್ರೀಮುರಳಿ ಬಘೀರ ಚಿತ್ರದ ಚಿತ್ರೀಕರಣ ವೇಳೆ ಏಟು ಮಾಡಿಕೊಂಡಿದ್ದರು. ಪೆಟ್ಟು ಗಂಭೀರವಾಗಿಯೇ ಇತ್ತು. ತಕ್ಷಣ ಶ್ರೀಮುರಳಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶ್ರೀಮುರಳಿ ಅವರ ಮೊಣಕಾಲಿಗೆ ಆಪರೇಷನ್ ಮಾಡಲಾಗಿದ್ದು, ಡಾಕ್ಟರ್ಸ್ 6 ವಾರಗಳ ರೆಸ್ಟ್ ಹೇಳಿದ್ದಾರೆ. 6 ವಾರ ಅಂದ್ರೆ ಒಂದೂವರೆ ತಿಂಗಳು ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿಯೇ ಇರಬೇಕು. ನಂತರದ ಒಂದೂವರೆ ತಿಂಗಳಲ್ಲಿ ಮೊಣಕಾಲಿನ ಮೇಲೆ ಪ್ರೆಷರ್ ಹಾಕದೆ ಓಡಾಡಬಹುದು. ಅದಾದ ಮೇಲೆ ನಾರ್ಮಲ್ ಸ್ಟೇಜ್‍ಗೆ ಬಂದಿದ್ದಾರೆಯೇ ಇಲ್ಲವೇ ಎಂಬುದನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಿ ವೈದ್ಯರು ನಿರ್ಧರಿಸುತ್ತಾರೆ.

ಅಂದ್ರೆ ಇನ್ನಾರು ತಿಂಗಳು ಶ್ರೀಮುರಳಿ ಫೈಟು, ಡಾನ್ಸು ಮಾಡುವಂತಿಲ್ಲ. ಅಲ್ಲಿಯವರೆಗೆ ಬಘೀರ ಚಿತ್ರದ ಚಿತ್ರೀಕರಣವೂ ನಡೆಯುವಂತಿಲ್ಲ. ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಕಡೆಯ ಹಂತದ ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಕೆಲವೇ ಕೆಲವು ದೃಶ್ಯಗಳು ಬಾಕಿಯಿದ್ದವು. ಆದರೆ ದುರದೃಷ್ಟವಶಾತ್ ಈ ಅಪಘಾತ ನಡೆದು ಬಘೀರ ಚಿತ್ರಕ್ಕೂ ಬ್ರೇಕ್ ಬಿದ್ದಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನವರ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದೆ.

ಮದಗಜ ಚಿತ್ರದ ಚಿತ್ರೀಕರಣ ವೇಳೆ ನಡೆದಿದ್ದ ಅಪಘಾತದ ಎಫೆಕ್ಟ್ ಇದು. ಆಗ ಎಡಗಾಲಿಗೆ ಪೆಟ್ಟು ಬಿದ್ದಿತ್ತು. ಆಗ ಆಪರೇಷನ್ ಬದಿಗೆ ಸರಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಮತ್ತೊಮ್ಮೆ ಅದೇ ಕಾಲಿಗೆ ಪೆಟ್ಟು ಬಿದ್ದು, ಸ್ಥಿತಿ ಗಂಭೀರವಾಗಿದೆ.