ಕಾಂತಾರ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುತ್ತಿರುವ ಸಿನಿಮಾ. ಕರಾವಳಿಯ ದೈವ ಮತ್ತು ಭೂತಕೋಲದ ನಂಬಿಕೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟವನ್ನು ಚೆಂದದ ಕಥೆಯೊಂದಿಗೆ ಜನರಿಗೆ ಪರಿಚಯಿಸಿದ ಸಿನಿಮಾ. ಸಿನಿಮಾ ನೋಡಿದವರು ರಿಷಬ್ ಶೆಟ್ಟಿಯವರಲ್ಲಿ ಪಂಜುರ್ಲಿ/ಗುಳಿಗನನ್ನೇ ಕಾಣುತ್ತಿದ್ದಾರೆ. ಹೊಂಬಾಳೆ ಸಿನಿಮಾ ಮತ್ತೊಂದು ಹೊಸ ಕಾನ್ಸೆಪ್ಟ್ಗೆ ಬಂಡವಾಳ ಹೂಡಿ ಗೆದ್ದಿದೆ. ಸಿನಿಮಾ ರಿಲೀಸ್ ಆದಾಗ ಪಾನ್ ಇಂಡಿಯಾ ಕಾನ್ಸೆಪ್ಟ್ ಇರಲಿಲ್ಲ. ಈಗ ಎಲ್ಲ ಭಾಷೆಗಳಲ್ಲೂ ಕಾಂತಾರಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ.
ತೆಲುಗಿನಲ್ಲಿ ಕಾಂತಾರ ಕ್ರೇಜ್ ಜೋರಾಗಿದ್ದು. ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್ ಭರ್ಜರಿ ಯಶಸ್ಸು ಗಳಿಸಿದೆ. ಈಗಾಗಳೇ ಪ್ರಭಾಸ್, ನಾನಿ ಮೊದಲಾದವರು ಚಿತ್ರದ ಬಗ್ಗೆ ಮೆಚ್ಚುಗೆ ತೋರಿಸಿದ್ದಾರೆ. ಅವರ ಹೇಳಿಕೆಗಳೇ ಚಿತ್ರಕ್ಕೆ ದೊಡ್ಡಮಟ್ಟದ ಪ್ರಚಾರ ಒದಗಿಸಿವೆ. ಟ್ರೇಲರ್ ನೋಡಿದವರ ಸಂಖ್ಯೆ 7 ಲಕ್ಷಕ್ಕೂ ಹೆಚ್ಚು. ಸಿನಿಮಾವನ್ನು ಕನ್ನಡದಲ್ಲಿ ನೋಡಿದ ತೆಲುಗರೇ ಚಿತ್ರದ ಪ್ರಚಾರವನ್ನು ತೆಲುಗಿನಲ್ಲಿ ಆರಂಭಿಸಿದ್ದಾರೆ. ಇಷ್ಟಪಟ್ಟು..
ಹಿಂದಿಯಲ್ಲಿ ಕೂಡಾ ಮೋಡಿ ಮಾಡಿದೆ. ಚಿತ್ರದ ಟ್ರೇಲರ್ ಈಗಾಗಲೇ 70ಲಕ್ಷ ಹಿಟ್ಸ್ ಕಂಡಿದೆ. ಅಲ್ಲಿಯೂ ಅಷ್ಟೆ. ಕನ್ನಡದಲ್ಲಿ ಈಗಾಗಲೇ ನೋಡಿದ ಬೇರೆ ಭಾಷೆಯವರೇ ಪ್ರೀತಿಯಿಂದ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ತಮಿಳಿನಲ್ಲಿ ಅಕ್ಟೋಬರ್ 16ಕ್ಕೆ ರಿಲೀಸ್ ಆಗುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಹೊಣೆ ಹೊತ್ತುಕೊಂಡಿದ್ದಾರೆ.