` ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ..
Kanthara Movie Image

ಕಾಂತಾರ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ. ಕಾಡನ್ನು ಉಳಿಸಲು ಹೋರಾಡುವ ಅಧಿಕಾರಿ ಮುರಳೀಧರ್ ಆಗಿ ಕಿಶೋರ್, ಊರಿನ ಪರವಾಗಿ ಶಿವ, ದೇವೇಂದ್ರನ ದುರಾಸೆ, ಅಚ್ಯುತ್, ಫಾರೆಸ್ಟ್ ಗಾರ್ಡ್ ಆಗಿ ಲೀಲಾ..ಮಾನಸಿ ಸುಧೀರ್.. ಎಲ್ಲರೂ ಅದ್ಭುತ ಎನ್ನಿಸುವಂತೆ ನಟಿಸಿದ್ದಾರೆ. ನಿರ್ದೇಶಕರಾಗಿ ರಿಷಬ್ ಶೆಟ್ಟಿ 100ಕ್ಕೆ 100 ಅಂಕ ಗಿಟಿಸಿದರೆ, ನಟನಾಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ಧಾರೆ.ಅದರಲ್ಲೂ ಕೊನೆಯ 30 ನಿಮಿಷಗಳ ಭೂತದ ಕೋಲದಲ್ಲಿ ದೈವದ ರೂಪದಲ್ಲಿ ಬೆರಗು ಹುಟ್ಟಿಸುತ್ತಾರೆ. ಚಿತ್ರ ನೋಡಿದವರೆಲ್ಲ ಚಿತ್ರಕ್ಕೆ ಶಹಬ್ಬಾಸ್ ಎಂದಿದ್ದಾರೆ.

ಚಿತ್ರ ಮುಗಿಯುತ್ತಿದ್ದಂತೆ ರಕ್ಷಿತ್ ಶೆಟ್ಟಿ ಕುಪ್ಪಳಿಸಿಕೊಂಡು ಬಂದು ರಿಷಬ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.

ರಕ್ಷಿತ್ ಶೆಟ್ಟಿ : ನನಗೆ ರಿಷಬ್ ಪೂರ್ತಿ ಸಿನಿಮಾವನ್ನು ತೋರಿಸಿರಲಿಲ್ಲ. ಪ್ರೀಮಿಯರ್ ಶೋನಲ್ಲಿಯೇ ನೋಡು ಎಂದಿದ್ದ. ಕನ್ನಡದಲ್ಲಂತೂ ಇಂತಾ ಚಿತ್ರ ಬಂದಿರಲಿಲ್ಲ. ಹೊಸತನದ ಚಿತ್ರ. ಎಲ್ಲರೂ ಸಿನಿಮಾ ನೋಡಿ. ಅಷ್ಟೆ.

ಅನೂಪ್ ಭಂಡಾರಿ : ಹೀರೋ ಮತ್ತು ಡೈರೆಕ್ಟರ್. ಇಬ್ಬರಲ್ಲಿ ಯಾರು ಬೆಟರ್ ಎಂದು ಹೇಳೋದು ಕಷ್ಟವಾಗುತ್ತಿದೆ.

ವಿನಯ್ ರಾಜಕುಮಾರ್ : ಏನು ಹೇಳಬೇಕು ಗೊತ್ತಾಗುತ್ತಿಲ್ಲ. ತುಂಬಾ ಒಳ್ಳೆಯ ಸಿನಿಮಾ.

ಅನುಶ್ರೀ : ಕಾಂತಾರ ಈ ವರ್ಷದ ಕನ್ನಡದ ಹೆಮ್ಮೆ. ಭಾರತದ ಹೆಮ್ಮೆ.

ಸಿಂಪಲ್ ಸುನಿ : ಕನ್ನಡದ ಮಣ್ಣಿನ ಚಿತ್ರ. ದೈವಿಕ ಚಿತ್ರ. ಅನುಭವಿಸುವಂತ ಚಿತ್ರ. ಚಿತ್ರಕ್ಕೆ ಹೋಗುವಾಗ ಕೈಮುಗಿದು ಹೋಗಬೇಕು. ಕೈ ಮುಗಿದೇ ಹೊರಬರಬೇಕು.

ಸಂತೋಷ್ ಆನಂದರಾಮ್ : ಕೊನೆಯ 20 ನಿಮಿಷಗಳಂತೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

ಅಶ್ವಿನಿ ಪುನೀತ್ ರಾಜಕುಮಾರ್ : ನ್ಯೂನತೆಗಳೇ ಕಾಣದ ಸಿನಿಮಾ. ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ಗರಿ ಕಾಂತಾರ. ಹೊಂಬಾಳೆ ಮತ್ತು ರಿಷಬ್ ಶೆಟ್ಟಿಯವರ ಶ್ರಮ ಎದ್ದು ಕಾಣುತ್ತದೆ. ಖಂಡಿತಾ ಪ್ರತಿಯೊಬ್ಬ ಕನ್ನಡಿಗರೂ ನೋಡಬೇಕಾದ ಸಿನಿಮಾ.

ಯುವ ರಾಜಕುಮಾರ್ : ಚಿತ್ರದ ಕ್ಲೈಮಾಕ್ಸ್ ಅಂತೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಅದ್ಭುತ ಸಿನಿಮಾ.

ರಮ್ಯಾ : ಕನ್ನಡದಲ್ಲಿ ಇಂತಹ ಚಿತ್ರಗಳು ಬರುತ್ತಿರುವುದು ನೋಡುವುದೇ ಒಂದು ಖುಷಿ. ಇಂತಹ ಚಿತ್ರ ಎಲ್ಲಿಯೂ ಆಗಿಲ್ಲ. ಹೊಂಬಾಳೆ, ರಿಷಬ್ ಶೆಟ್ಟಿ ಅದ್ಭುತ ಸಿನಿಮಾ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಚಿತ್ರ ನೋಡಿದ ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ ಥಿಯೇಟರಿನಲ್ಲಿ ಕ್ಷಣ ಕ್ಷಣವೂ ರಕ್ಷಿತ್ ಶೆಟ್ಟಿ ಸೀಟಿನಿಂದ ಎದ್ದು ನಿಂತು ಎಕ್ಸೈಟ್ ಆಗುತ್ತಿದ್ದರು. ಅದೇ ರೀತಿಯಲ್ಲಿ ಪ್ರೇಕ್ಷಕರೂ ಇದ್ದರು.