ಕಾಂತಾರ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ರಿಷಬ್ ಶೆಟ್ಟಿ ಡೈರೆಕ್ಟರ್ ಕಂ ಹೀರೋ. ಸಪ್ತಮಿ ಗೌಡ ನಾಯಕಿ. ಚಿತ್ರದ ಟ್ರೇಲರ್ ನೋಡಿದವರಿಗೆ ಬೆರಗು ಹುಟ್ಟಿಸುವುದು ಕಿಶೋರ್ ಪಾತ್ರ ಹೊರಹೊಮ್ಮಿರುವ ರೀತಿ.
ಕಿಶೋರ್`ಗೆ ರಿಷಬ್ ಶೆಟ್ಟಿ ಜೊತೆಗಿನ ಗೆಳೆತನ ಇಂದಿನದಲ್ಲ. ಅಟ್ಟಹಾಸ ಚಿತ್ರದಿಂದಲೂ ಇದೆ. ಉಳಿದವರು ಕಂಡಂತೆ, ಕಥಾ ಸಂಗಮ ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ. ಈ ಚಿತ್ರದಲ್ಲಿ ಮುಖ್ಯವಾದ ಪಾತ್ರವನ್ನೇ ಕೊಟ್ಟಿದ್ದಾರೆ ರಿಷಬ್.
ನನಗಿಂತ ಹೆಚ್ಚು ಕಥೆ ಮುಖ್ಯ. ಕಲಾವಿದರು ಕಥೆ ಹೇಳೋ ಟೂಲ್ ಅಷ್ಟೆ. ಇದು ವ್ಯವಸ್ಥೆ, ರಾಜಕೀಯ ಮತ್ತು ಅಧಿಕಾರದ ನಡುವೆ ಈಗೋಗನ್ನೇ ಮೈತುಂಬಾ ತುಂಬಿಕೊಂಡಿರುವವನ ಪಾತ್ರ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವೇ ಚಿತ್ರದ ಕಥೆ. ಚಿತ್ರದ ಕಥೆ ಹೃದಯಕ್ಕೆ ಹತ್ತಿರವಾದದ್ದು ಎನ್ನುತ್ತಾರೆ ಕಿಶೋರ್.
ಕಿಶೋರ್ ಅವರಿಗೆ ಸೆಪ್ಟೆಂಬರ್ 30 ಎರಡು ಟೆನ್ಷನ್. ಕನ್ನಡದಲ್ಲಿ ಕಾಂತಾರಾ ತೆರೆಗೆ ಬರುತ್ತಿದೆ. ಕಾಂತಾರಾದಲ್ಲಿ ಹೀರೋಗಿರುವಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕಿಶೋರ್ ಅವರದ್ದು. ಅತ್ತ.. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಕೂಡಾ ತೆರೆಗೆ ಬರುತ್ತಿದೆ. ಸ್ಟಾರುಗಳಿಂದ ತುಂಬಿ ತುಳುಕುತ್ತಿರುವ ಆ ಚಿತ್ರದಲ್ಲಿ ಕಿಶೋರ್ ಅವರಿಗೂ ಪ್ರಧಾನ ಪಾತ್ರವಿದೆ.
ನನಗೂ ನಿರೀಕ್ಷೆಯಿದೆ. ಆದರೆ ಇದು ಎರಡು ಒಳ್ಳೆ ಕಥೆಗಳನ್ನು ನೋಡುವ ಸಮಯ ಅಷ್ಟೆ. ಸ್ಪರ್ಧೆ ಅಥವಾ ಪೈಪೋಟಿ ಅಲ್ಲ. ಎರಡೂ ಸಿನಿಮಾಗಳಲ್ಲಿ ಸುಂದರವಾದ ಕಥೆಯಿದೆ ಎನ್ನುತ್ತಾರೆ ಕಿಶೋರ್.