ಪುನೀತ್ ರಾಜಕುಮಾರ್ ಹೊಂಬಾಳೆಯನ್ನು ತಮ್ಮ ಸಂಸ್ಥೆಯೆಂದೇ ಭಾವಿಸಿದ್ದರು. ಅದನ್ನು ಹಲವೆಡೆ ಹೇಳಿಕೊಂಡೂ ಇದ್ದರು. ಹೋಮ್ ಬ್ಯಾನರ್ ನಂತೆಯೇ ಇತ್ತು. ಹೀಗಾಗಿಯೇ ಮೂರು ಚಿತ್ರಗಳನ್ನು ಮಾಡಿದ್ದರು. ನಾಲ್ಕನೇ ಚಿತ್ರ ಸೆಟ್ಟೇರಿತ್ತು. ವಿಧಿಯಾಟ ಬಿಡಿ. ಆದರೆ.. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರಕ್ಕೂ ಅವರೇ ಹೀರೋ ಆಗಬೇಕಿತ್ತಂತೆ.
ಕಾಂತಾರ ಚಿತ್ರದ ಸ್ಕ್ರಿಪ್ಟ್ ಓಕೆ ಆದಾದ ರಿಷಬ್ ಶೆಟ್ಟಿಯವರ ತಲೆಯಲ್ಲಿದ್ದುದು ಪುನೀತ್ ಹೆಸರು. ಚಿತ್ರದ ಕಥೆ ಪುನೀತ್ ಅವರಿಗೆ ಇಷ್ಟವಾದರೂ ಡೇಟ್ ಕ್ಲಾಷ್ ಆಗುತ್ತಿತ್ತು. ಏಕೆಂದರೆ ಒಂದು ನಿರ್ದಿಷ್ಟ ಸಮಯದಲ್ಲಿಯೇ ಚಿತ್ರದ ಚಿತ್ರೀಕರಣ ಆಗಬೇಕಿತ್ತು. ಅದಕ್ಕೆ ಸಮಯ ಹೊಂದಿಸೋಕೆ ಆಗುತ್ತಿರಲಿಲ್ಲ. ಹೀಗಾಗಿ ಪುನೀತ್ ಅವರೇ ರಿಷಬ್ ಶೆಟ್ಟಿಯವರ ಹೆಸರು ಸೂಚಿಸಿದರು. ರಿಷಬ್ ಶೆಟ್ಟಿ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕಾರ್ತಿಕ್ ಗೌಡ.
ಸೆಪ್ಟೆಂಬರ್ 30ರಂದು ಕಾಂತಾರ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ನಟಿಸಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.