ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್. ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಕೂಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್.
ಅಮೀರ್ ಖಾನ್ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ. ಮಾಡುತ್ತಿದ್ದಾರೆ. ಜೊತೆಗೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎನ್ನುವ ಮೂಲಕ ಭಾರತದ ಬಗ್ಗೆ ವಿದೇಶಗಳಲ್ಲಿ ಕೆಟ್ಟ ಇಮೇಜ್ ಸೃಷ್ಟಿಸಿದವರು. ನಮ್ಮ ನೆಲದ ಸಂಸ್ಕøತಿ ಗೌರವಿಸದ ಈತನ ಚಿತ್ರವನ್ನು ನಾವೇಕೆ ನೋಡಬೇಕು ಎನ್ನುವುದು ಎನ್ನುವುದು ಕೆಲವರ ವಾದ. ಹೀಗಾಗಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಅಭಿಯಾನವೇ ಶುರುವಾಗಿದೆ. ಸ್ವತಃ ಅಮೀರ್ ಖಾನ್ ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಸಿನಿಮಾ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ.. ಈ ಹಿಂದೆ ಅಮೀರ್ ಖಾನ್ ಹಾಗೂ ಕರೀನ ಕಪೂರ್ ನಮ್ಮ ಸಿನಿಮ ಇಷ್ಟವಿಲ್ಲದೇ ಹೋದರೆ ನೋಡಲೇಬೇಡಿ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಬಾಯ್ಕಾಟ್ ಅಭಿಯಾನವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹಾಗಂತ ಇದು ಅಮೀರ್ ಖಾನ್ ಅವರಿಗಷ್ಟೇ ತಟ್ಟುತ್ತಿರುವ ಬಿಸಿ ಅಲ್ಲ.
ಇದೇ ವೇಳೆ ರಿಲೀಸ್ ಆಗುತ್ತಿರುವ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಚಿತ್ರಕ್ಕೂ ಇದೇ ರೀತಿ ಬಾಯ್ಕಾಟ್ ಅಭಿಯಾನ ನಡೆಯುತ್ತಿದೆ. ಹಾಗಂತ ಅಕ್ಷಯ್ ಕುಮಾರ್ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ತಂದರಾ ಎಂದರೆ ವಿಷಯ ಅದಲ್ಲ. ಅಕ್ಷಯ್ ಕುಮಾರ್ ಬಹಿರಂಗವಾಗಿ ನರೇಂದ್ರ ಮೋದಿಯನ್ನು ಹೊಗಳಿದವರು. ಜೊತೆಗೆ ಅಕ್ಷಯ್ ಚಿತ್ರಗಳ ಕಥೆಗಳು ಮೋದಿ ಸರ್ಕಾರದ ಯೋಜನೆಗಳಿಗೆ ಪೂರಕವಾಗಿದ್ದವು. ಹಿಂದೂ ರಾಜರ ಹಾಗೂ ಭಾರತದ ಗೂಢಚಾರರ ಕಥೆ ಹೇಳಿದ ಚಿತ್ರಗಳು. ಇದರ ಹೊರತಾಗಿ ಅವರೇನು ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದವರಲ್ಲ. ಅಕ್ಷಯ್ ಕುಮಾರ್ ಅವರಿಗೆ ಮೋದಿ ಬೆಂಬಲಿಗ ಎಂಬ ಇಮೇಜ್, ರಕ್ಷಾ ಬಂಧನ್ ಚಿತ್ರದ ವಿರುದ್ಧ ಅಭಿಯಾನಕ್ಕೆ ಕಾರಣವಾಗಿದೆ.
ಇತ್ತೀಚೆಗೆ ರಾಣಾ ಪ್ರತಾಪ್ ಚಿತ್ರದ ಹೀನಾಯ ಸೋಲಿನ ನಂತರ ಅಕ್ಷಯ್ ಕುಮಾರ್ ಅವರಿಗೂ ಗೆಲುವು ಬೇಕಿದೆ. ಎಂದಿನಂತೆ ವರ್ಷಗಳ ಗ್ಯಾಪ್ ನಂತರ ಬರುತ್ತಿರುವ ಅಮೀರ್ ಖಾನ್ ಅವರಿಗೂ ಗೆಲುವು ಬೇಕಿದೆ. ಇದರ ನಡುವೆ ಬಾಯ್ಕಾಟ್ ಅಭಿಯಾನಗಳು.. ಯಾರ ಬಾಯ್ಕಾಟ್ ಗೆಲ್ಲುತ್ತೋ.. ಕಾದು ನೋಡಬೇಕು.