ಉಪೇಂದ್ರ ಮತ್ತೊಮ್ಮೆ ನಿರ್ದೇಶಕರಾಗಿರೋ ಸಿನಿಮಾ ಯುಐ ಚಿತ್ರದ ಶೂಟಿಂಗ್ ಶುರುವಾಗಿದೆ. ಇತ್ತೀಚೆಗಷ್ಟೇ ಬಂಡಿಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಬಹುತೇಕ ಚಿತ್ರರಂಗವೇ ಹಾಜರಿದ್ದು ಡೈರೆಕ್ಟರ್ ಉಪ್ಪಿಗೆ ಶುಭ ಕೋರಿತ್ತು.
ಮಂಗಳವಾರದಿಂದ ಚಿತ್ರದ ಚಿತ್ರೀಕರಣ ಶುರುವಾಗಿದೆ. ಕೆ.ಪಿ.ಶ್ರೀಕಾಂತ್, ಲಹರಿ ಮನೋಹರ್ ಜಂಟಿ ನಿರ್ಮಾಣದ ಚಿತ್ರವಿದು.
ಉಪೇಂದ್ರ ಚಿತ್ರಕ್ಕೆ ಈ ಬಾರಿಯೂ ದಕ್ಷಿಣ ಭಾರತದ ದೊಡ್ಡ ನಟಿಯೊಬ್ಬರು ಬರಲಿದ್ದಾರೆ ಎಂಬ ಸುದ್ದಿ ಇದೆ. ಮೂಲಗಳ ಪ್ರಕಾರ ಉಪೇಂದ್ರ ಟೀಂ ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ.