ಕಿರಣ್ ರಾಜ್ ಹೀರೋ ಆಗಿರುವ ಮೊದಲ ಚಿತ್ರ ಬಡ್ಡೀಸ್. ಈ ವಾರ ರಿಲೀಸ್ ಆಗುತ್ತಿರುವ ಚಿತ್ರತಂಡಕ್ಕೆ ಆಘಾತ ನೀಡಿರುವುದು ಕರೆಂಟ್ ಕಂಬ. ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರಕ್ಕಾಗಿಯೇ ವಿಶೇಷ ವಾಹನ ಸಿದ್ಧ ಮಾಡಿದ್ದು, ಜಿಲ್ಲೆ ಜಿಲ್ಲೆಗೂ ಭೇಟಿ ನೀಡುತ್ತಿದೆ. ಈ ವೇಳೆ ಬೆಳಗಾವಿಯಲ್ಲಿ ವಾಹನದ ಮೇಲೆ ಕರೆಂಟ್ ಕಂಬ ಬಿದ್ದಿದ್ದು ವಾಹನ ನಜ್ಜುಗುಜ್ಜಾಗಿದೆ.
ಕಾಲೇಜ್`ವೊಂದರಲ್ಲಿ ಪ್ರಚಾರ ಮುಗಿಸಿ ಬರುತ್ತಿರುವಾಗ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದೆವು. ಆಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಆ ವೇಳೆ ವಾಹನದಲ್ಲಿ ಯಾರೊಬ್ಬರೂ ಇರಲಿಲ್ಲ. ದೇವರು ದೊಡ್ಡವನು ಎಂದಿದ್ದಾರೆ ಕಿರಣ್ ರಾಜ್.
ಬಡ್ಡೀಸ್, ಸ್ನೇಹದ ಮಹತ್ವ ಸಾರುವ ಕಥೆಯುಳ್ಳ ಸಿನಿಮಾ. ಕಿರಣ್ ರಾಜ್ ಅವರಿಗೆ ಸಿರಿ ಪ್ರಹ್ಲಾದ್ ನಾಯಕಿಯಾಗಿ ನಟಿಸಿದ್ದಾರೆ. ಇದು ಗುರುತೇಜ್ ಶೆಟ್ಟಿ ನಿರ್ದೇಶನದ ಸಿನಿಮಾ.