` ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ..
Avatara Purusha Movie Image

ಓವರ್ ಆ್ಯಕ್ಟಿಂಗ್ ಅನಿಲ : ಶರಣ್

ಓವರ್ ಆಕ್ಟಿಂಗ್ ಮಾಡೋದೇ ಇವನಿಗೆ ಮುಳುವಾಗಬಹುದಾ..? ಶರಣ್ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ. 100ನೇ ಸಿನಿಮಾದಲ್ಲಿ ಹೀರೋ ಆಗಿ ಗೆದ್ದ ಶರಣ್‍ಗೆ ಈ ಪಾತ್ರ ತಮ್ಮ ಆರಂಭದ ದಿನಗಳನ್ನು ನೆನಪಿಸಿದೆಯಂತೆ.

ಸಿರಿ : ಅಶಿಕಾ ರಂಗನಾಥ್

ಅನಿಲನನ್ನು ಕರ್ಣ ಎಂದು ಹೇಳ್ಕೊಂಡು ಕರೆದುಕೊಂಡು ಬರೋ ಚೆಲುವೆ. ಬೇಕಿತ್ತಾ ಇದೆಲ್ಲ ಅನ್ನೋವಾಗ್ಲೇ ಲವ್ವಾಗುತ್ತೆ.. ಮುಂದಿರೋದೇ ಚುಟು ಚುಟು..

ರಾಮಾ ಜೋಯಿಸ್ : ಸಾಯಿಕುಮಾರ್

ಸಕಲ ವಿದ್ಯಾಪಾರಂಗತರು.

ಸುಶೀಲಾ : ಭವ್ಯ

ಇವರು ಹುಡುಕುತ್ತಿರುವ ಮಗನೇ ಕರ್ಣ. ಆತ ಅನಿಲ್ ಅರ್ಥಾತ್ ಶರಣ್ ಅಲ್ಲ. ರಿಯಲ್ ಕರ್ಣ ಸಿಗ್ತಾನಾ..?

ಯಶೋಧಾ : ಸುಧಾರಾಣಿ

ತವರು ಮನೆಯ ಪ್ರೀತಿಗಾಗಿ ಕಾಯುತ್ತಿರೋ ಮಗಳು. ಇವರಿಗಾಗಿಯೇ ಸಿರಿ ಅನಿಲನನ್ನು ಕರ್ಣನನ್ನಾಗಿ ತೋರಿಸುವ ಸಾಹಸಕ್ಕೆ ಕೈ ಹಾಕೋದು.

ಗಣಪ : ಸಾಧುಕೋಕಿಲ

ಕಾಮಿಡಿಗಾಗಿಯೇ ಹುಟ್ಟಿದ ಅರ್ಧಂಬರ್ಧ ತಿಳಿದುಕೊಂಡಿರೋ ಗಾಂಪ

ಇನ್ನು ಭೋಜರಾಜ, ಕಂಠೀ ಜೋಯಿಸ, ಬ್ರಹ್ಮ ಜೋಯಿಸ, ಹಿನ್ನುಡಿ.. ಹೀಗೆ ಹಲವು ಪಾತ್ರಗಳು ಬರುತ್ತವೆ. ಶಾಕ್ ಕೊಡಲೆಂದೇ ಬರುವವನು ಕುಮಾರ.

ಕುಮಾರ : ಶ್ರೀನಗರ ಕಿಟ್ಟಿ

ಈತನಿಗೆ ನಿಲುಕದ.. ಸಿಲುಕದ ಶಕ್ತಿಗಳೇ ಇಲ್ಲ..

ಇವರನ್ನೆಲ್ಲ ಇಟ್ಟುಕೊಂಡೇ ಅವತಾರ ಪುರುಷನಿಗೆ ಅಷ್ಟದಿಗ್ಬಂಧನ ಮಂಡಲಕ ಹಾಕಿಸಿದ್ದಾರೆ ಸುನಿ. ಸೇಫ್ ಝೋನ್‍ನಿಂದ ಆಚೆ ಹೋಗಿ ಸೃಷ್ಟಿಸಿರೋ ಹೊಸತನದ ಕತೆ ಅವತಾರ ಪುರುಷ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ನಿರೀಕ್ಷೆ ದೊಡ್ಡದು.