ರಾಬರ್ಟ್ ನಂತರ ದರ್ಶನ್ ಮದಕರಿ ನಾಯಕ ಚಿತ್ರ ಮಾಡಬೇಕಿತ್ತು. ಲಾಕ್ ಡೌನ್ ಕಾರಣದಿಂದಾಗಿ ಅದು ಮುಂದಕ್ಕೆ ಹೋಗಿದೆ. ರಾಕ್ಲೈನ್ ಚಿತ್ರವನ್ನು ಮಾಡಬೇಕಿತ್ತು. ಅದರ ಬಗ್ಗೆ ಸದ್ದಿಲ್ಲ. ಇದರ ನಡುವೆಯೇ ಯಜಮಾನ ಟೀಂ ರಿಪೀಟ್ ಆಗಿದೆ. ಯೆಸ್, ಅದು ಡಿ 55.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಶೈಲಜಾ ನಾಗ್ ಅವರಿಗೇ ಕಾಲ್ ಶೀಟ್ ಕೊಟ್ಟಿದ್ದಾರೆ. ಡೈರೆಕ್ಟರ್ ಸೀಟ್ನಲ್ಲಿ ಹರಿಕೃಷ್ಣ ಬಂದಿದ್ದಾರೆ. ಸದ್ಯಕ್ಕೆ ಸಿಕ್ಕಿರೋ ಸುದ್ದಿ ಇಷ್ಟು ಮಾತ್ರ. ಯಜಮಾನ ಚಿತ್ರದಲ್ಲಿ ಎಣ್ಣೆ ಗಾಣದ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಿ ಗೆದ್ದಿದ್ದ ಹರಿಕೃಷ್ಣ, ಈ ಬಾರಿ ಎಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಕಥೆ, ಸಿನಿಮಾ ಟೈಟಲ್ ಎಲ್ಲವೂ ಶೀಘ್ರದಲ್ಲೇ ಅನೌನ್ಸ್ ಆಗಲಿದೆ.