ನೀನಾಸಂ ಸತೀಶ್ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಮಿಳಿನಲ್ಲಿ ಶಶಿಕುಮಾರ್ ಜೊತೆ ಪಗೈವಾನುಲು ಅರುಲ್ವಾಯ್ ಚಿತ್ರದಲ್ಲಿ ನಟಿಸುತ್ತಿರೋ ಸತೀಶ್, ಚಿತ್ರೀಕರಣ ಮುಗಿಸಿದ್ದಾರೆ.
ಈ ಚಿತ್ರಕ್ಕೆ ಶೇಕ್ಸ್ಪಿಯರ್ ಅವರ ನಾಟಕವೊಂದು ಸ್ಫೂರ್ತಿಯಂತೆ. ಚಿತ್ರದಲ್ಲಿ ಸತೀಶ್ ಖೈದಿಯಾಗಿ ನಟಿಸಿದ್ದಾರೆ. ಅನಿಸ್ ಅಬ್ಬಾಸ್ ಅನ್ನೋ ಹೊಸ ಹುಡುಗ ನಿರ್ದೇಶಿಸುತ್ತಿರುವ ಚಿತ್ರವಿದು.
ಶಶಿಕುಮಾರ್, ನೀನಾಸಂ ಸತೀಶ್, ಬಿಂದು ಮಾಧವಿ, ವಾಣಿ ಭೋಜನ್, ನಾಸರ್, ಜಯಪ್ರಕಾಶ್ ನಟಿಸಿರುವ ಚಿತ್ರವಿದು.