` ತಮ್ಮ ಅಭಿಮಾನಿಯ ಈ ಅಭಿಮಾನ ಮಾದರಿಯಾಗೋದು ಬೇಡ ಅಂದ್ರು ಸಿದ್ದರಾಮಯ್ಯ, ಯಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಮ್ಮ ಅಭಿಮಾನಿಯ ಈ ಅಭಿಮಾನ ಮಾದರಿಯಾಗೋದು ಬೇಡ ಅಂದ್ರು ಸಿದ್ದರಾಮಯ್ಯ, ಯಶ್
Siddaramaiah, Yash

ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.

ಈ ಮಾತನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಹೇಳಿದ್ಧಾರೆ. ಅವರ ಇಂತಹ ಮಾತಿಗೆ ಕಾರಣವಾಗಿದ್ದು ಮಂಡ್ಯ ಜಿಲ್ಲೆಯ ಕೋಡಿದೊಡ್ಡಿ ಗ್ರಾಮದ ರಾಮಕೃಷ್ಣ. ಆತ ಅದೇನು ಕಾರಣಕ್ಕೋ ಏನೋ.. ನೊಂದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ತನ್ನ ಅಂತಿಮ ಪತ್ರದಲ್ಲಿ ನಾನು ಸಿದ್ದರಾಮಯ್ಯ ಮತ್ತು ಯಶ್ ಅಭಿಮಾನಿ. ನನ್ನ ಅಂತ್ಯ ಸಂಸ್ಕಾರಕ್ಕೆ ಅವರು ಬರಬೇಕು ಎಂದು ಬರೆದಿಟ್ಟಿದ್ದ. ಸಿದ್ದರಾಮಯ್ಯನವರೇನೋ ಬಿಡುವು ಮಾಡಿಕೊಂಡು ಹೋದರಾದರೂ, ನಟ ಯಶ್ ಹೋಗೋಕೆ ಸಾಧ್ಯವಾಗಲಿಲ್ಲ.

ಅತ್ತ  ಸಂಸ್ಕಾರ ಮುಗಿಸಿದ ಬಳಿಕ ಸಿದ್ದರಾಮಯ್ಯ  ಹಾಗೂ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಯಶ್ ಇಬ್ಬರೂ ಒಂದೇ ಮಾತು ಹೇಳಿದ್ರು. ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.

ನಿಮ್ಮ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲ. ಸಾವು ಎಲ್ಲದಕ್ಕೂ ಪರಿಹಾರವಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ, ಆತ್ಮಹತ್ಯೆ ಕೆಟ್ಟದ್ದು ಎಂಬರ್ಥದಲ್ಲಿಯೇ ಇಬ್ಬರೂ ಮಾತನಾಡಿದ್ದಾರೆ. ಅದು ಸತ್ಯ ತಾನೇ..