` ಕಿಶೋರ್ ಪಾತ್ರಕ್ಕೆ ದರ್ಶನ್ ಬಂದಿದ್ದು ಹೇಗೆ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
an inside story behind sindhoora lakshmana
Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಧೂರ ಲಕ್ಷ್ಮಣನ ಪಾತ್ರ ಮಾಡುತ್ತಿರೋದು ಗೊತ್ತಿರೋ ವಿಷಯವೇ. ಉಮಾಪತಿಯವರೇ ನಿರ್ಮಾಪಕ, ಸಿಂಧೂರ ಲಕ್ಷ್ಮಣನೆಂದೇ ಗುರುತಿಸಿಕೊಂಡಿದ್ದ ಸುಧೀರ್ ಅವರ ಪುತ್ರ ತರುಣ್ ಸುಧೀರ್ ನಿರ್ದೇಶಕ. ಆದರೆ, ಈ ಪಾತ್ರವನ್ನು ಕಿಶೋರ್ ಮಾಡಬೇಕಿತ್ತು ಎಂಬ ವಿಷಯ ಗೊತ್ತಾಗಿದೆ.

ಆಕ್ಚುಯಲಿ `ಶೂರ ಸಿಂಧೂರ ಲಕ್ಷ್ಮಣ' ಎಂಬ ಟೈಟಲ್ 2 ವರ್ಷದ ಹಿಂದೆ ರಿಜಿಸ್ಟರ್ ಆಗಿತ್ತು. ರಾಧಾಕೃಷ್ಣ ಪಲ್ಲಕ್ಕಿ ಡೈರೆಕ್ಟರ್. ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ ಕಿಶೋರ್ ಅವರನ್ನೂ ಆಯ್ಕೆ ಮಾಡಿದ್ದರು. ಆದರೀಗ ಅವರೇ ತಮ್ಮ ಕಥೆ, ರಿಸರ್ಚ್ ಡೀಟೈಲ್ಸ್ ಎಲ್ಲವನ್ನೂ ಉಮಾಪತಿಯವರಿಗೆ ಕೊಟ್ಟಿದ್ದಾರಂತೆ. ದರ್ಶನ್ ಅವರು ಆ ಪಾತ್ರ ಮಾಡಿದರೆ, ಚಿತ್ರ ಇನ್ನಷ್ಟು ಹೆಚ್ಚು ಜನರಿಗೆ ರೀಚ್ ಆಗುತ್ತೆ. ಕಮರ್ಷಿಯಲ್ ಆಗಿಯೂ ಹಿಟ್ ಆಗುತ್ತೆ. ಈ ಸಿನಿಮಾ ಬಗ್ಗೆ ತರುಣ್ ಸುಧೀರ್ ಮತ್ತು ಉಮಾಪತಿ ನನ್ನ ಜೊತೆ ಚರ್ಚಿಸಿದರು. ಹಕ್ಕುಗಳನ್ನು ಅವರಿಗೆ ಕೊಟ್ಟಿದ್ದೇನೆ. ಕಿಶೋರ್ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ ರಾಧಾಕೃಷ್ಣ ಪಲ್ಲಕ್ಕಿ.

ಆ ಕಥೆಯ ಹಕ್ಕುಗಳು ಈಗ ಉಮಾಪತಿ ಅವರ ಬಳಿ ಇವೆ. ಈಗಿನ್ನೂ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ದರ್ಶನ್ ಅವರು ಆಗಲೇ 2 ಚಿತ್ರ ಒಪ್ಪಿಕೊಂಡಿದ್ದಾರೆ. ಅವು ಮುಗಿದ ನಂತರವೇ ಈ ಸಿನಿಮಾ ಎಂದಿದ್ದಾರೆ ತರುಣ್ ಸುಧೀರ್. ಅಪ್ಪಿತಪ್ಪಿಯೂ ಚಿತ್ರದ ಟೈಟಲ್ ಬಗ್ಗೆಯೂ ಮಾತನಾಡಿಲ್ಲ.