ಚಿತ್ರದ ಡೈರೆಕ್ಟರ್ ಕನ್ನಡಿಗ, ಪ್ರಭುದೇವ. ಚಿತ್ರದ ವಿಲನ್ ಕನ್ನಡಿಗ ಸುದೀಪ್. ಜೊತೆಗೆ ಸಲ್ಮಾನ್ ಖಾನ್ ಚಿತ್ರವೊಂದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬರುತ್ತಿದೆ. ಹೀಗಾಗಿ ಇದು ಕನ್ನಡ ಸಿನಿಮಾ. ಕನ್ನಡಿಗರ ಸಿನಿಮಾ ಎಂದರು ಸಲ್ಲು.
ಸುದೀಪ್ ನನ್ನ ಸಹೋದರನಿದ್ದಂತೆ ಎಂದು ಹೊಗಳಿದ್ದ ಸಲ್ಮಾನ್, ಇದು ಸುದೀಪ್ ಸಿನಿಮಾ. ಅವರು ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದರು. ತಾರೀಕು ನಂದು, ಟೈಮೂ ನಂದು ಎಂದು ಕನ್ನಡದಲ್ಲೇ ಹೇಳಿದ ಸಲ್ಮಾನ್ ಕನ್ನಡ ನಂಗೂ ಬರುತ್ತೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಯಕಿ ಸೋನಾಕ್ಷಿ ಸಿನ್ಹಾ, ನಿರ್ದೇಶಕ ಪ್ರಭುದೇವ ಕೂಡಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.