ದಬಾAಗ್ 3 ಚಿತ್ರದ ಪ್ರಮೋಷನ್ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಖಾನ್ ಅವರಿಗೆ ಅಚ್ಚರಿ ಕೊಟ್ಟಿದ್ದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ. ಮೊದಲೇ ರಾಜಕೀಯ ಬೆಳವಣಿಗೆ ಚಿತ್ರ ವಿಚಿತ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲಿ ವಿಜಯೇಂದ್ರ ಭೇಟಿ ಕುತೂಹಲ ಹುಟ್ಟಿಸಿದ್ದು ಸತ್ಯ. ಮೊದಲೇ ಬಿಜೆಪಿಗೆ ನೆಲೆಯೇ ಇಲ್ಲದ ಮಂಡ್ಯದ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿರುವ ವಿಜಯೇಂದ್ರ, ಸಲ್ಮಾನ್ ಖಾನ್ ಭೇಟಿಗೆ ಕಾರಣ ಏನಿರಬಹುದು ಎಂಬ ಕುತೂಹಲಕ್ಕೆ ಚಿತ್ರತಂಡದವರೇ ಉತ್ತರ ಕೊಟ್ಟಿದ್ದಾರೆ.
ಕಾಲೇಜು ದಿನಗಳಿಂದಲೂ ವಿಜಯೇಂದ್ರ ಅವರಿಗೆ ಸಲ್ಮಾನ್ ಚಿತ್ರಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಒಬ್ಬ ಅಭಿಮಾನಿಯಾಗಿ ವಿಜಯೇಂದ್ರ ಸಲ್ಮಾನ್ ಅವರನ್ನು ಭೇಟಿ ಮಾಡಿದ್ದಾರೆ ಎಂದಿದ್ದಾರೆ