ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕು, ಗಂಗಾ ಸ್ನಾನ ಮಾಡಬೇಕು ಎನ್ನುವುದು ಹಿಂದೂಗಳ ಕನಸು, ನಂಬಿಕೆ. ಸಹಜವಾಗಿಯೇ ಹಿರಿಯರಿಗೆ ಆ ಬಯಕೆ ಇರುತ್ತದೆ. ತಂದೆ-ತಾಯಿಗೆ ಕಾಶಿ ದರ್ಶನ ಮಾಡಿಸುವುದು ಮಹಾಪುಣ್ಯದ ಕೆಲಸ ಎನ್ನುವುದು ನಂಬಿಕೆ. ಈಗ ಶರಣ್ ಆ ಕೆಲಸ ಮಾಡಿದ್ದಾರೆ.
ಶರಣ್ ಅವರಿಗೆ ಇಬ್ಬರು ತಾಯಿಯರು. ತಂದೆ ಕೃಷ್ಣ ಹಾಗೂ ಅಮ್ಮಂದಿರ ಜೊತೆ ಕಾಶಿಯಲ್ಲಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಅಪ್ಪ-ಅಮ್ಮಂದಿರ ಜೊತೆ ವಿಶ್ವನಾಥನ ದರ್ಶನ ಪಡೆಯುವ ಭಾಗ್ಯ ನನ್ನದಾಗಿತ್ತು ಎಂದು ಖುಷಿ ಹಂಚಿಕೊAಡಿದ್ದಾರೆ ಶರಣ್.