` ಕೆಜಿಎಫ್ ೧ನಲ್ಲಿ ಅಧೀರನ ಮುಖ ತೋರಿಸದೇ ಇದ್ದದ್ದಕ್ಕೆ ಅವರೇ ಕಾರಣ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the reason why adheera's face was not showed
KGF movie Image

ಕೆಜಿಎಫ್ ಚಾಪ್ಟರ್ ೧ನಲ್ಲಿ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಅಧೀರ. ಆದರೆ, ಸೂರ್ಯವರ್ಧನ್ ನಂತರ ನರಾಚಿ ಗಣಿಯ ಒಡೆಯನಾಗುವುದು ಆತನ ಮಗ ಗರುಡ. ಗರುಡನನ್ನು ಹೊಡೆಯುವುದು ಸುಪಾರಿ ಕಿಲ್ಲರ್ ರಾಕಿ. ಇದು ಕೆಜಿಎಫ್ ೧ ಶಾರ್ಟ್ & ಸ್ವೀಟ್ ಸ್ಟೋರಿ. ಅಧೀರನ ಪ್ರವೇಶ ಆಗುವುದು ಚಾಪ್ಟರ್ ೨ನಲ್ಲಿ.

ಆದರೆ, ಇಡೀ ಚಿತ್ರದಲ್ಲಿ ಎಲ್ಲಿಯೂ ಅಧೀರನ ದರ್ಶನ ಮಾಡಿಸಿರಲಿಲ್ಲ ನಿರ್ದೇಶಕ ಪ್ರಶಾಂತ್ ನೀಲ್. ಸ್ಯಾಂಪಲ್ಲಿಗೂ ಮುಖ ತೋರಿಸಿರಲಿಲ್ಲ. ಅದಕ್ಕೆ ಕಾರಣ, ಸಂಜಯ್ ದತ್. ಆ ಪಾತ್ರದ ಕಲ್ಪನೆ ಮೂಡಿದಾಗಲೇ ಸಂಜಯ್ ದತ್ ಅವರಿಂದಲೇ ಈ ಪಾತ್ರ ಮಾಡಿಸಬೇಕು ಎನಿಸಿತ್ತು. ಹೀಗಾಗಿ ಅಧೀರನ ಪಾತ್ರವನ್ನು ತೋರಿಸಿರಲಿಲ್ಲ. ಕೆಜಿಎಫ್ ಚಾಪ್ಟರ್ ೧ ನೋಡಿದರೆ, ಅವರು ಖಂಡಿತಾ ಈ ಪಾತ್ರ ಒಪ್ಪಿಕೊಳ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಸಂಜಯ್ ದತ್ ಅಧೀರನ ಪಾತ್ರ ಮಾಡಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಪ್ರಶಾಂತ್ ನೀಲ್.