ಪಂಚತಂತ್ರ ಸಕ್ಸಸ್ ಬಳಿಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರೋ ಸಿನಿಮಾ ‘ಗಾಳಿಪಟ-2. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ತಾರಾಗಣದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದ ಯೋಗರಾಜ್ ಭಟ್, ಈಗ ತಮ್ಮ ಟೀಂಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಗೆ ಆಹ್ವಾನ ಕೊಟ್ಟಿದ್ದಾರೆ.
ಈಗಾಗಲೇ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಮಹೇಶ್ ದಾನಣ್ಣವರ್ ಪ್ರಭುದೇವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರಂತೆ. ಮಾತುಕತೆಯೂ ನಡೆದಿದೆಯಂತೆ. 2002ರಲ್ಲಿ ಹೆಚ್2ಒ ಚಿತ್ರದಲ್ಲಿ ನಟಿಸಿದ್ದ ಪ್ರಭುದೇವ,ಆನಂತರ ಕನ್ನಡದಲ್ಲಿ ನಟಿಸಿಲ್ಲ. ಸದ್ಯಕ್ಕೆ ದಬಾಂಗ್-3ಯಲ್ಲಿ ಬ್ಯುಸಿಯಾಗಿರುವ ಪ್ರಭುದೇವ, ಭಟ್ಟರ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ.
ಗಣೇಶ್, ದಿಗಂತ್, ಪವನ್ ಕುಮಾರ್, ಆದಿತಿ ಪ್ರಭುದೇವ, ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಟಿಸುತ್ತಿರುವ ಚಿತ್ರವಿದು. ಸೆಪ್ಟೆಂಬರ್ನಿಂದ ಶೂಟಿಂಗ್ ಶುರುವಾಗಲಿದ್ದು, ಮಲೆನಾಡಿನಲ್ಲಿಯೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ ಯೋಗರಾಜ್ ಭಟ್.