ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಲು ರೆಡಿಯಾಗಿರುವ ದರ್ಶನ್, ಚಿತ್ರದಲ್ಲಿ ಪ್ರಣಯೇಶ್ವರನಾಗಿಯೂ ನಟಿಸಿದ್ದಾರೆ. ಮುನಿರತ್ನ ಕುರುಕ್ಷೇತ್ರದ ಪ್ರಣಯಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಭಾನುಮತಿಯಾಗಿ ಮೇಘನಾ ರಾಜ್ ಅವರೊಂದಿಗೆ `ಚಾರುತಂತಿ ನಿನ್ನ ತನುವು.. ನುಡಿಸ ಬರುವೆನು ದಿನಾ.. ಹಾಡು ಪ್ರೇಮಪರ್ವದ ಸರಸ ಸಲ್ಲಾಪದ ಗೀತೆ.
ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಡಿಗೆ ಭಾವನೆ ತುಂಬಿದ್ದರೆ, ಸಾಹಿತ್ಯ ನೀಡಿರುವುದು ಡಾ.ನಾಗೇಂದ್ರ ಪ್ರಸಾದ್. ಹರಿಕೃಷ್ಣ ಸಂಗೀತದ ಹಾಡು ವೈಭವಯುತವಾಗಿ ಚಿತ್ರೀಕರಣಗೊಂಡಿದೆ.