` ಮಳೆಗಾಲಕ್ಕೆ ಭಟ್ಟರು ವೇಯ್ಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogaraj bhat waiting for monsoon season
Yogaraj Bhat

ಯೋಗರಾಜ್ ಭಟ್ಟರು ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈಗ ಮಳೆ ಬರಬೇಕು, ಕರುನಾಡು ಹಸಿರಾಗಬೇಕು, ತುಂತುರು ಮಳೆ ಹನಿಹನಿಯಾಗಿ ಸುರಿಯುತ್ತಿರಬೇಕು. ಮುಂಗಾರು ಮಳೆಯ ಲೀಲೆ ಶುರುವಾದರೆ, ಭಟ್ಟರ ಕ್ಯಾಮೆರಾ ಆನ್ ಆಗಲಿದೆ. ಅದು ಗಾಳಿಪಟ-2 ಚಿತ್ರಕ್ಕಾಗಿ.

ಗಾಳಿಪಟ-2 ಚಿತ್ರದ ಕಥೆ, ಸನ್ನಿವೇಶಗಳಿಗೆ ಮಳೆಯ ಅಗತ್ಯವಿದೆ. ಹಚ್ಚ ಹಸಿರಿನ ಪರಿಸರ ಬೇಕಿದೆ. ಸದ್ಯಕ್ಕೆ ಸೂರ್ಯ ಸುಡುಸುಡು ಕೆಂಡವಾಗಿದ್ದಾನೆ. ಹೀಗಾಗಿ ಭಟ್ಟರು ಗಾಳಿಪಟ-2 ಚಿತ್ರವನ್ನು ಶುರು ಮಾಡಲು ಮಳೆಗಾಲಕ್ಕೆ ಕಾಯುತ್ತಿದ್ದಾರೆ.

ಶರಣ್, ರಿಷಿ, ಪವನ್ ಕುಮಾರ್ ನಟಿಸುತ್ತಿರುವ ಚಿತ್ರದಲ್ಲಿ, ಸೋನಾಲ್ ಮಂಥೆರೋ(ಪಂಚತಂತ್ರ ಖ್ಯಾತಿ), ಶರ್ಮಿಳಾ ಮಾಂಡ್ರೆ ನಾಯಕಿಯರು. ಭಟ್ಟರ ಚಿತ್ರಕ್ಕೆ ಈ ಬಾರಿ ಅರ್ಜುನ್ ಜನ್ಯ ಸಂಗೀತವಿದ್ದು, ಮಹೇಶ್ ಚಿತ್ರದ ನಿರ್ಮಾಪಕರು.