ಹೆಸರು ಪಡ್ಡೆಹುಲಿ. ಹೀರೋ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು. ಹೀರೋಯಿನ್, ನಿಶ್ವಿಕಾ ನಾಯ್ಡು. ಗುರು ದೇಶಪಾಂಡೆ ನಿರ್ದೇಶನದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ. ಹೆಸರು ನೋಡಿದರೆ ಪಡ್ಡೆಹುಲಿ. ಆದರೆ, ಚಿತ್ರದಲ್ಲಿ ಕನ್ನಡದ ಖ್ಯಾತನಾಮಕ ಭಾವಗೀತೆಗಳೆಲ್ಲ ಇವೆ.
ಬಿ.ಆರ್. ಲಕ್ಷ್ಮಣ್ ರಾವ್ ಅವರ `ಹೇಳಿ ಹೋಗು ಕಾರಣ...ಜಿ.ಪಿ.ರಾಜರತ್ನಂ ಅವರ `ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ...ಬಸವಣ್ಣನವರ ವಚನ `ಕಳಬೇಡ.. ಕೊಲಬೇಡ.. ಹುಸಿಯ ನುಡಿಯಲೂ ಬೇಡ..
ಡಿ.ವಿ.ಗುಂಡಪ್ಪನವರ `ಬದುಕು ಜಟಕಾ ಬಂಡಿ.. ವಿಧಿ ಅದರ ಸಾಹೇಬ..ಕೆ.ಎಸ್. ನರಸಿಂಹ ಸ್ವಾಮಿಯವರ `ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..
ಭಾವಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಅಜನೀಶ್. ಈ ಹಾಡುಗಳು ಪಡ್ಡೆಹುಲಿ ಎಂಬ ಹೆಸರಿನ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ಬಂದಿದ್ದು ಏಕೆ..? ಅದೇ ಚಿತ್ರದ ಕಥೆ ಅಂತಾರೆ ಗುರು ದೇಶಪಾಂಡೆ. ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷವಾಗಲಿದೆ.