ರಾಣಾ ಚಿತ್ರವನ್ನು ಯಶ್ ಮಾಡುತ್ತಿಲ್ಲವಂತೆ. ಅದೇ ಕಥೆಯನ್ನು ಶಿವಣ್ಣಗಾಗಿ ನಿರ್ದೇಶಿಸಲು ಹರ್ಷ ರೆಡಿಯಾಗಿದ್ದಾರಂತೆ. ಶಿವಣ್ಣ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಸರಿದಾಡಿದ್ದವು. ಇದಕ್ಕೆಲ್ಲ ನಿರ್ದೇಶಕ ಹರ್ಷ ಅವರೇ ಉತ್ತರ ಕೊಟ್ಟಿದ್ದಾರೆ.
ರಾಣಾ ಚಿತ್ರದಲ್ಲಿ ಯಶ್ ಅವರೇ ನಟಿಸ್ತಾರೆ. ಅದು ಅವರಿಗಾಗಿಯೇ ಸಿದ್ಧಪಡಿಸಿರುವ ಕಥೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ ಹರ್ಷ.
ನಾನು ಶಿವಣ್ಣನ ದೊಡ್ಡ ಅಭಿಮಾನಿ. ಅವರು ಯೆಸ್ ಎಂದರೆ, ಹೊಸದೊಂದು ಕಥೆಯನ್ನು ಅವರಿಗಾಗಿಯೇ ಸಿದ್ಧಪಡಿಸುತ್ತೇನೆ. ಬೇರೆ ಹೀರೋಗೆ ಮಾಡಿದ ಕಥೆಯನ್ನು ಅವರಿಗೆ ಮಾಡುವುದಿಲ್ಲ ಎಂದಿದ್ದಾರೆ ಹರ್ಷ.
ಹರ್ಷ, ಶಿವಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು, ಭಜರಂಗಿ ಹಾಗೂ ವಜ್ರಕಾಯ ಎರಡೂ ಚಿತ್ರಗಳು ಸೂಪರ್ ಹಿಟ್ ಸಾಲಿನಲ್ಲಿವೆ. ಸದ್ಯಕ್ಕೆ ಹರ್ಷ ಅವರ ಸೀತಾರಾಮ ಕಲ್ಯಾಣ ಚಿತ್ರ 25 ದಿನಗಳತ್ತ ಮುನ್ನುಗ್ಗುತ್ತಿದೆ.
Related Articles :-