ನಟಸಾರ್ವಭೌಮ ಚಿತ್ರದ ಕಥೆ ಕೇಳಿದಾಗ ಥ್ರಿಲ್ಲಾದೆ. ಜರ್ನಲಿಸ್ಟ್ ಪಾತ್ರ ನನಗೂ ಹೊಸದು. ಹೀಗಾಗಿ ಕ್ಯೂರಿಯಾಸಿಟಿ ಶುರುವಾಯ್ತು. ಜೊತೆಗೆ ಹಾರರ್ ಎಲಿಮೆಂಟ್ಸ್ ಇವೆ ಎಂದಾಗ ಇನ್ನಷ್ಟು ಕುತೂಹಲ ಹುಟ್ಟಿತು... ಎಂದು ಕಥೆ ಕೇಳಿದಾಗಿನ ಅನುಭವ ಹೇಳಿಕೊಂಡಿದ್ದಾರೆ ಪುನೀತ್.
ಅಂದಹಾಗೆ ಕನ್ನಡದಲ್ಲಿ ಜರ್ನಲಿಸ್ಟ್ ಪಾತ್ರಗಳನ್ನು ಹಲವರು ಮಾಡಿದ್ದಾರೆ. ಆದರೆ, ಇವತ್ತಿಗೂ ಕನ್ನಡ ಸಿನಿಮಾಗಳಲ್ಲಿ ಜರ್ನಲಿಸ್ಟ್ ಪಾತ್ರ ಎಂದರೆ ತಕ್ಷಣ ನೆನಪಿಗೆ ಬರುವ 2 ಚಿತ್ರಗಳು ಜ್ವಾಲಾಮುಖಿ ಮತ್ತು ನ್ಯೂ ಡೆಲ್ಲಿ.
`ನನಗೂ ಅಷ್ಟೆ, ಕಥೆ ಕೇಳಿದ ತಕ್ಷಣ ಅಪ್ಪಾಜಿಯ ಜ್ವಾಲಾಮುಖಿ ಸಿನಿಮಾ ಮತ್ತು ಅಂಬರೀಷ್ ಅಂಕಲ್ ಅಭಿನಯದ ನ್ಯೂ ಡೆಲ್ಲಿ ಸಿನಿಮಾ ನೆನಪಾಯ್ತು. ಆದರೆ, ಇದು ಅಂತಹ ಪಾತ್ರ ಅಲ್ಲ. ನಾನಿಲ್ಲಿ ಫೋಟೋ ಜರ್ನಲಿಸ್ಟ್ ಎಂದಿದ್ದಾರೆ ಪುನೀತ್.