ಇದು ಅನಿರೀಕ್ಷಿತವೇನಲ್ಲ. ಅಂಬರೀಷ್ ಮತ್ತು ದರ್ಶನ್ ನಡುವಿನ ಬಾಂಧವ್ಯ ನೋಡಿದ್ದವರಿಗೆ ಇದು ಅಚ್ಚರಿಯೂ ಅಲ್ಲ. ದರ್ಶನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ಯಾರೇ ಕೇಕ್ ತಂದರೂ ಕೇಕ್ ಕತ್ತರಿಸುವುದಿಲ್ಲ. ದಯವಿಟ್ಟು ಒತ್ತಾಯ ಮಾಡಬೇಡಿ. ಇದೊಂದು ವರ್ಷ ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ ದರ್ಶನ್. ಅವರು ಅಂಬಿ ಹೆಸರು ಹೇಳುತ್ತಿಲ್ಲ.. ಅಷ್ಟೆ..
ಇತ್ತ.. ತಿಂಗಳಿಗೆ ಮೊದಲೇ ದರ್ಶನ್ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿಕೊಂಡಿರೋ ಅಭಿಮಾನಿಗಳು, ಡಿ ಬಾಸ್ ಎಂಬ ಬೆಳ್ಳಿ ಕಡಗಗಳನ್ನು ಮಾಡಿಸಿ, ಗಿಫ್ಟ್ ಕೊಡೋಕೆ ರೆಡಿಯಾಗುತ್ತಿದ್ದಾರೆ.