` ಶೃಂಗಾರದ ಹೊಂಗೆಮರ ನಾಳೆ ಹೂ ಬಿಡುತ್ತೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
panchantantra's first single song tomorrow
Panchatantra's Sringaradha Hongemara

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ... ನಾಚಿಕೆಯು ನಮ್ಮ ಜೊತೆ ಠೂ ಬಿಟ್ಟಿದೆ.. ಯೋಗರಾಜ್ ಭಟ್ಟರ ಈ ಶೃಂಗಾರ ಕವಿತೆ ಹಾಡಾಗಿದೆ. ಕನಸಾಗಿದೆ. ಹದಿ ಹರೆಯದ ಮನಸ್ಸುಗಳಿಗೆ ಕಿಚ್ಚಿಟ್ಟಿದೆ. ಕನಸುಗಳು ಮೊಗ್ಗಾಗಿವೆ. ನಾಳೆ ಹೂ ಬಿಡಬೇಕು.

ಪಂಚತಂತ್ರ ಚಿತ್ರದ ಈ ಹಾಡಿಗೆ ಧ್ವನಿಯಾಗಿರುವುದು ವಿಜಯ್ ಪ್ರಕಾಶ್. ಡಿ ಬೀಟ್ಸ್‍ನಲ್ಲಿ ನಾಳೆ ಹಾಡನ್ನು ಚಿತ್ರರಸಿಕರಿಗೆ ಕೇಳಿಸಲಿದ್ದಾರೆ ಭಟ್ಟರು. ಹಾಡು ಕೇಳಿದ ಮೇಲೆ ಪ್ರೇಮಿಗಳು ನಾಚಿಕೆ ಬಿಟ್ಟು ಹೂ ಬಿಡಿಸೋಕೆ ಹೋಗೋದು ಗ್ಯಾರಂಟಿ. ಕಿವಿಗೆ ಶೃಂಗಾರ ತುಂಬಿಕೊಳ್ಳೋಕೆ ಸಿದ್ಧರಾಗಿ.