ನವರಸ ನಾಯಕ ಜಗ್ಗೇಶ್ ರಾಯರ ಪರಮಭಕ್ತ. ದೇವರು ದಿಂಡಿರು, ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆಯಿರುವ ಜಗ್ಗೇಶ್, ಈಗ ತಮ್ಮ ಊರಿನಲ್ಲೇ ಒಂದು ದೇವಸ್ಥಾನ ಕಟ್ಟಿಸಿದ್ದಾರೆ. ತಮ್ಮ ಹುಟ್ಟೂರು ಜಡೇಮಾಯಸಂದ್ರದಲ್ಲಿ 300 ವರ್ಷಗಳಷ್ಟು ಹಳೆಯದಾದ, ಶಿಥಿಲವಾಗಿದ್ದ ಕಾಲಭೈರವೇಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. ಅದು ಅವರ ತಾಯಿಯ ನೆನಪಿಗಾಗಿ.
ನನ್ನಿಂದ ಇಂಥಾದ್ದೊಂದು ಕೆಲಸ ಮಾಡಿಸಿದ ದೇವರಿಗೆ ನಾನು ಚಿರಋಣಿ ಎಂದು ಮತ್ತೊಮ್ಮೆ ಭಕ್ತಿ ಭಾವ ಮೆರೆದಿದ್ದಾರೆ ಜಗ್ಗೇಶ್.