ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ. ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ನ ಈ ಸಿನಿಮಾ, ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ಚಿತ್ರೀಕರಣದಲ್ಲಿರುವ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ, ಈಗ ಕಲರಿಪಯಟ್ಟು ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಕಲರಿಪಯಟ್ಟು ಕೇರಳದ ಸಮರಕಲೆ. ಭಾರತೀಯ ಪ್ರಕಾರದ ಮಾರ್ಷಲ್ ಆಟ್ರ್ಸ್. ಮರ್ಮ ಕಲೈ ಅಂತಾನೂ ಕರೀತಾರೆ. ಈ ಸಮರಕಲೆಯನ್ನ ಶ್ರೀನಿಧಿ ಶೆಟ್ಟಿ ಇದ್ದಕ್ಕಿದ್ದಂತೆ ಪ್ರಾಕ್ಟೀಸ್ ಮಾಡ್ತಿರೋದು ಏಕೆ..? ಕೆಜಿಎಫ್ ಸಿನಿಮಾಗೂ ಕಲರಿಪಯಟ್ಟು ಕಲೆಗೂ ಏನು ಸಂಬಂಧ..? ಗೊತ್ತಿಲ್ಲ.
ಶ್ರೀನಿಧಿ ಶೆಟ್ಟಿಯವರ ಕಲರಿಪಯಟ್ಟು ಪ್ರಾಕ್ಟೀಸ್ ಫೋಟೋ, ಕೆಜಿಎಫ್ ಕುರಿತು ಇನ್ನಷ್ಟು ಕುತೂಹಲ ಸೃಷ್ಟಿಸಿರುವುದಂತೂ ಸತ್ಯ.