` ದರ್ಶನ್‍ಗೆ ಮಿ.ಇಂಡಿಯಾ ವಿಲನ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
mr india anoop is villain for yajamana
Darshan, Anoop Singh Thakur Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಖಳನಾಯಕರಾಗಿ ಅನೂಪ್ ಸಿಂಗ್ ಠಾಕೂರ್ ಬರುತ್ತಿದ್ದಾರೆ. ಅನೂಪ್ ಸಿಂಗ್ ಠಾಕೂರ್ ಕೇವಲ ನಟರಲ್ಲ. ಬಾಡಿಬಿಲ್ಡಿಂಗ್‍ನಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪ್ರಶಸ್ತಿ ಗೆದ್ದಿರುವ ಕ್ರೀಡಾಪಟು. 2015ರಲ್ಲಿ ಮಿ.ಇಂಡಿಯಾ ಪ್ರಶಸ್ತಿ ಪಡೆದಿದ್ದವರು. ಈಗ ದರ್ಶನ್ ಚಿತ್ರಕ್ಕೆ ವಿಲನ್.

ಈ ಚಿತ್ರದಲ್ಲಿ ದರ್ಶನ್ ಎದುರು ಮೂವರು ಖಳನಾಯಕರಿದ್ದಾರೆ. ಹೀರೋ ಧನಂಜಯ್, ಅಭಿನವ ವಜ್ರಮುನಿ ರವಿಶಂಕರ್ ಜೊತೆ ಈಗ ಅನೂಪ್ ಸಿಂಗ್ ಠಾಕೂರ್ ಸೇರ್ಪಡೆಯಾಗಿದ್ದಾರೆ.

ಕನ್ನಡದಲ್ಲಿ ಈ ಹಿಂದೆ ರೋಗ್ ಚಿತ್ರದಲ್ಲಿ ಸೈಕೋ ಪಾತ್ರದಲ್ಲಿ ಗಮನ ಸೆಳೆದಿದ್ದ ಅನೂಪ್ ಸಿಂಗ್ ಠಾಕೂರ್, ಸಿಂಗಂ 3 ಚಿತ್ರದಲ್ಲಿ ಸೂರ್ಯ ಎದುರು ಖಳನಾಗಿ ಅಬ್ಬರಿಸಿದ್ದವರು. ರಾಮಾಯಣ ಧಾರಾವಾಹಿಯಲ್ಲಿ ಹನುಮಂತನ ಪಾತ್ರದಲ್ಲಿ ಮಿಂಚಿದ್ದ ಅನೂಪ್ ಸಿಂಗ್ ಠಾಕೂರ್, ದರ್ಶನ್ ಎದುರು ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದಾರೆ.