ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಅಭಿನಯ ಚಾತುರ್ಯದಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು ರಂಗಾಯಣ ರಘು. ಅಭಿನವ ಬಾಲಣ್ಣ ಎಂದೇ ಕರೆಸಿಕೊಳ್ಳುವ ರಘು, ಒಂದೊಂದು ಪಾತ್ರಕ್ಕೂ ಒಂದೊಂದು ಮ್ಯಾನರಿಸಂ ಕೊಟ್ಟು ಯಶಸ್ವಿಯಾದವರು. ವಂದೇಮಾತರಂ, ಟಿಪ್ಪೂ ಸುಲ್ತಾನ್.. ಜೈ ಕರ್ನಾಟಕ ಮಾತೆ ಎಂಬ ಅವರ ದುನಿಯಾ ಡೈಲಾಗ್ ಈಗಲೂ ಜನಪ್ರಿಯ.
ಕನ್ನಡ ಚಿತ್ರರಂಗದ ಬ್ಯುಸಿ ಪೋಷಕ ನಟರಾಗಿರುವ ರಂಗಾಯಣ ರಘು, ರಾಜಕೀಯದತ್ತ ಮನಸ್ಸು ಮಾಡಿದ್ದಾರೆ. ಈ ವರ್ಷ ನಡೆಯುವ ಚುನಾವಣೆಯಲ್ಲಿ ಅವರು ಮಧುಗಿರಿ ಅಥವಾ ಪಾವಗಡದಿಂದ ಚುನಾವಣೆಗೆ ನಿಂತರೂ ಅಚ್ಚರಿ ಪಡಬೇಕಿಲ್ಲ.
ರಂಗಾಯಣ ರಘು ಅವರ ತಂದೆ ಹಾಗೂ ಅಣ್ಣ ಜೆಡಿಎಸ್ನಲ್ಲಿಯೇ ಗುರುತಿಸಿಕೊಂಡವರು. ದೇವೇಗೌಡ ಹಾಗೂ ಕುಮಾರ ಸ್ವಾಮಿ ವಿಶೇಷ ಅಭಿಮಾನವಿದೆ. ಹೀಗಾಗಿ ಜೆಡಿಎಸ್ ನನ್ನ ಪ್ರಥಮ ಆಯ್ಕೆ ಎಂದಿದ್ದಾರೆ ರಘು. ಬೇರೆ ಪಕ್ಷದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ.
ಪತ್ನಿಯೊಂದಿಗೆ ಇನ್ನೂ ಚರ್ಚಿಸಿಲ್ಲ. ಪತ್ನಿ ಹಾಗೂ ಮಕ್ಕಳು ಒಪ್ಪಿಗೆ ಕೊಟ್ಟರೆ ರಾಜಕೀಯಕ್ಕೆ ಬರುತ್ತೇನೆ. ಸದ್ಯಕ್ಕೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ ರಘು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾದಿಂದ ರಾಜಕೀಯಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
Related Articles :-