ರಾಜು ಕನ್ನಡ ಮೀಡಿಯಂ.. ರಿಲೀಸ್ಗೆ ರೆಡಿಯಾಗಿದೆ. ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದ ಪುನರ್ಮಿಲನ ಕುತೂಹಲ ಮೂಡಿಸಿದ್ದರೆ, ಕಿಚ್ಚನ ಇರುವಿಕೆ ಆ ಕುತೂಹಲಕ್ಕೆ ಕಿಚ್ಚು ಹಚ್ಚಿದೆ.
ಕಣ್ಣೀರಲಿ ಕಾಡಿಗೆ ಕರಗಿ.. ಅಂಗೈ ಮದರಂಗಿ ಒಣಗಿ.. ಕಾದಿಗೆ ನಿನಗಾಗಿ ಬರುವೆಯಾ.. ಎಂಬ ಟ್ರೇಲರ್ನಲ್ಲಿರುವ ಪುಟ್ಟ ಸಾಲುಗಳು ನವಿರು ಪ್ರೇಮದ ಸುಳಿವು ನೀಡುತ್ತವೆ. ಪಂಚಿಂಗ್ ಡೈಲಾಗ್ಗಳಿಗೆ ಕೊರತೆಯೇ ಇಲ್ಲ. ಗುರುನಂದನ್ ಸ್ಟೈಲ್ಗೆ ಸಡ್ಡು ಹೊಡೆದಿರುವುದು ಆವಂತಿಕಾ ಶೆಟ್ಟಿ-ಆಶಿಕಾ ಸೌಂದರ್ಯ. ಸಾಧು ಕೋಕಿಲಾ-ಕುರಿ ಪ್ರತಾಪ್ ಜೋಡಿಯ ಹಾಸ್ಯದೌತಣವನ್ನೂ ನೀಡಿರುವ ನಿರ್ದೇಶಕ ನರೇಶ್ ಕುಮಾರ್ ಪ್ರತಿಭೆಗೆ ಸಂಗೀತದ ಮೂಲಕ ಸಾಥ್ ಕೊಟ್ಟಿರುವುದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್.