ಶಿವರಾಜ್ ಕುಮಾರ್ ಮತ್ತು ಸುದೀಪ್ ಎಂಬ ಎರಡು ಧೃವತಾರೆಗಳನ್ನು ಒಂದುಗೂಡಿಸಿ, ದಿ ವಿಲನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಪ್ರೇಮ್, ಈ ಬಾರಿಯ ದೀಪಾವಳಿಯನ್ನು ಹಸಿರು ಹಂಚುವ ಮೂಲಕ ಆಚರಿಸಿದ್ದಾರೆ. ದಿ ವಿಲನ್ ಚಿತ್ರತಂಡದ ಸದಸ್ಯರಿಗೆ ಸಸಿ ಹಂಚಿದ್ದಾರೆ.
ಇದಕ್ಕೆಲ್ಲ ಯಾರು ಕಾರಣ ಎಂದರೆ, ಅವರ ಮಗನಂತೆ, ದೀಪಾವಳಿಗೆ ಯಾವ ಪಟಾಕಿ ಬೇಕು ಎಂದು ಕೇಳಿದಾಗ, ಅವರ ಮಗ ಬೇಡ ಪಪ್ಪಾ, ಪೊಲ್ಯೂಷನ್ ಆಗುತ್ತೆ. ಬೊಂಬೆ ತಂದುಕೊಡು ಎಂದನಂತೆ. ಮಗ ಸೂರ್ಯ ಹೇಳಿದ ಮಾತು ಪ್ರೇರನೆಯಾಯಿತು. ಹೀಗಾಗಿ ಚಿತ್ರತಂಡದವರಿಗೂ ಪಟಾಕಿ ಬದಲು, ಸಸಿ ಹಂಚಿದೆ ಎಂದಿದ್ದಾರೆ ಪ್ರೇಮ್.