` ರಾವಣ ಜಿಕೆ ಗುರಿಯಿಟ್ಟಿದ್ದು ಯಾರಿಗೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jayram karthik
Karthik Jayram Status Creates Hungama

ಹಿಂದಿ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್, ರಾವಣನ ಪಾತ್ರ ಮಾಡಿದವರಲ್ಲೇ ದಿ ಬೆಸ್ಟ್ ಎಂಬ ಅಭಿಪ್ರಾಯ ಬಾಲಿವುಡ್​ನಿಂದ ಹೊರಹೊಮ್ಮಿದೆ. ಇದಕ್ಕೆಜೆಕೆ ಖುಷಿಯಾಗಿದ್ದಾರೆ. ಆ ಖುಷಿಯನ್ನೂ ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಜೆಕೆ, ಸ್ಯಾಂಡಲ್​ವುಡ್​ ನನ್ನನ್ನು ಪೌರಾಣಿಕ ಪಾತ್ರಕ್ಕೆ ತಿರಸ್ಕರಿಸಿತ್ತು ಎಂದೂ ಹೇಳಿಕೊಂಡಿದ್ದಾರೆ. ಆದರೆ, ಅದೇ ಪೌರಾಣಿಕ ಕಥೆಯಲ್ಲಿ ಮಿಂಚಿದ್ದು ಅವರಿಗೂ ಖುಷಿ ಕೊಟ್ಟಿದೆ.

ಆದರೆ, ಆ ಖುಷಿಯ ಮಧ್ಯೆ ಅವರು ಹೇಳಿರುವ ಇನ್ನೊಂದು ಮಾತು ವಿವಾದ ಸೃಷ್ಟಿಸಿದೆ. ನನಗೆ ಕೆರೆಯಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜುವುದೇ ಇಷ್ಟ ಎಂಬ ಅಭಿಪ್ರಾಯ ಅವರ ಸ್ಟೇಟಸ್​ನಲ್ಲಿದೆ. ಹಾಗಾದರೆ, ಜೆಕೆ, ಕೆರೆ ಎಂದು ಹೇಳಿದ್ದು ಸ್ಯಾಂಡಲ್​ವುಡ್​ಗಾ..? ಬಾಲಿವುಡ್ ಸಮುದ್ರಾನಾ..? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಅದರ ಜೊತೆ ಪೌರಾಣಿಕ ಚಿತ್ರದ ಪಾತ್ರಕ್ಕೆ ಜೆಕೆಯನ್ನು ತಿರಸ್ಕರಿಸಿದ್ದು ಯಾರು ಎಂಬ ಬಗ್ಗೆಯೂ ಪ್ರಶ್ನೆಗಳೇಳುತ್ತಿವೆ.

Related Articles :-

JK Says He Is Hurt