ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ. ಅಲ್ಲಲ್ಲ.. ಅದು ಮುನಿರತ್ನ ಕುರುಕ್ಷೇತ್ರ. ಚಿತ್ರದ ಮುಹೂರ್ತಕ್ಕೆ ಆಗಸ್ಟ್ 6ನೇ ತಾರೀಕು ಡೇಟ್ ಫ{ಇಕ್ಸ್ ಆಗಿರುವುದು ನಿಜವಾದರೂ, ಮುನಿರತ್ನಗೆ ಒಂದು ವಿಚಿತ್ರ ತಲೆನೋವು ಶುರುವಾಗಿದೆ. ಅದು ಡಿಕೆ ತಲೆನೋವು
ಇನ್ನೇನಿಲ್ಲ, ಮುನಿರತ್ನ ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬರು. ಹೀಗಾಗಿಯೇ ಸಿನಿಮಾ ಮುಹೂರ್ತದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಇಬ್ಬರ ಹೆಸರೂ ಇದೆ. ಆದರೆ ಈಗ ಕಂಪ್ಲೀಟ್ ಐಟಿ ಟೆನ್ಷನ್ನಲ್ಲಿರುವ ಡಿಕೆ ಬ್ರದರ್ಸ್, ಮುಹೂರ್ತ ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ತನಿಖೆ ಮುಗಿಯಲೇ ಇಲ್ಲದವಾದರೆ ಬರಲು ಆಗುವುದೂ ಇಲ್ಲ.
ಈ ಮಧ್ಯೆ ಐಟಿಯವರು ಬೆಂಡೆತ್ತಿರುವಾಗಲೇ ಮುನಿರತ್ನ ಹೋಗಿ ಡಿಕೆ ಸುರೇಶ್ ಅವರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಒಟ್ಟಿನಲ್ಲಿ ಮುನಿರತ್ನ ಕುರುಕ್ಷೇತ್ರದ ದಿನ ಏನೇ ಸಂಭ್ರಮವಿದ್ದರೂ, ಡಿಕೆ ತಲೆನೋವು ಎಲ್ಲರಿಗೂ ಕಾಡಲಿದೆ.
Related Articles :-
ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?
ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್ ಕುಮಾರ್
ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!
ದುರ್ಯೋಧನ ದರ್ಶನ್ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?
Kurukshetra To be Launched on July 30th
ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು
ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!
Haripriya Confirmed For Kurukshetra