ನಾನು ಇಲ್ಲಿ ಬರೆಯುತ್ತಿರುವುದಕ್ಕೆ ಕಾರಣ ನಾನು, 2008 ರಿಂದ 2010ರ ವರೆಗೆ ಮತ್ತು 2012 ರಿಂದ 2016ರ ವರೆಗೆ ಸುಮಾರು ಆರು ವರ್ಷಗಳು ಇದೇ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯನಾಗಿದ್ದೆ. ಈ ಆರು ವರ್ಷಗಳಲ್ಲಿ ಮೂರು ಉತ್ತಮ ಅಧಿಕಾರಿಗಳನ್ನು ಕಂಡ ನನಗೆ ಈ ನತಾಷಾ ವಿಚಿತ್ರ ಅಧಿಕಾರಿಯಾಗಿ ಗೊಚರಿಸಿದ್ದು ಅದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.
ಅರ್ಧಮರ್ಧ ಜ್ನಾನ, ಹಗುರವಾಗಿ ತೆಗೆದುಕೊಂಡ ವೃತ್ತಿ, ಮೇಲಧಿಕಾರಿಗಳ ಬೆಂಬಲ, ಒಬ್ಬ ಅಧಿಕಾರಿಯನ್ನು ಪಬ್ಲಿಕ್ಕಿನಲ್ಲಿ ಹೇಗೆ ಅವಮಾನಕ್ಕೀಡು ಮಾಡುತ್ತದೆ ಎಂಬುದಕ್ಕೆ ಸಾಕ್ಷಿಯೇ ಇತ್ತೀಚೆಗೆ ಬಂದ ಸೆನ್ಸಾರ್ ಅಧಿಕಾರಿ ನತಾಶಾ ಡಿಸೋಜಾ. ಇದೀಗ ನತಾಶಾ ಸೆನ್ಸಾರ್ ಮಂಡಳಿಯ ಹಲವು ಸ್ವಾರ್ಥ ಅರೆಫಿರಂಗಿ ಸದಸ್ಯರ ಕೈಗೊಂಬೆಯಾಗಿದ್ದು ಅದರ ಪರಿಣಾಮ ಅವರ ವೃತ್ತಿ ಮತ್ತು ಅಧಿಕಾರ ಫುಟ್ಬಾಲಿನಂತಾಗಿದೆ, ಪ್ರೇಕ್ಷಕರ, ನಿರ್ಮಾಪಕರ ಮತ್ತು ಮಂಡಳಿಯ ಸದಸ್ಯರ ಕಾಲಿಗೆ ತುತ್ತಾಗಿ ಅತ್ತಿಂದಿತ್ತ ಜಿಗಿದಾಡುತ್ತಿದೆ. ಇವರ ಮಧ್ಯ ಅದೇ ಸೆನ್ಸಾರ್ ಬೋರ್ಡ ಕಚೇರಿಯ ಗುಮಾಸ್ತ ಕುಟ್ಟಿಯೊಬ್ಬ ಅಲ್ಲಲ್ಲಿ ಕಾಲು ತೂರಸಿ ಕೊಡುತ್ತಿರುವ ಒದೆ ಸಹಿಸಿಕೊಳ್ಳಲಾಗದೆ ‘ಮೇಡಂ’ ಈಗ ‘ಢಂ’ ಎನ್ನುವ ಸ್ಥಿತಿ ತಲುಪಿದ್ದು ವಿಶೇಷ.
ಸಿನಿಮಾ ಪ್ರಭಾವಶಾಲಿ ಮಾಧ್ಯಮವಾದ್ದರಿಂದ ಜನಸಾಮಾನ್ಯರ ಮಾನಸಿಕ ಸ್ವಾಸ್ಥ್ಯ ಕೆಡೆಸುವುದಾಗಲಿ, ಯಾವುದೇ ವ್ಯಕ್ತಿಗೆ, ಸಮುದಾಯಕ್ಕೆ, ಹೆಣ್ಣು ಮಕ್ಕಳಿಗೆ ಅವಮಾನಿಸುವುದಾಗಲಿ, ಹಾಗೆಯೇ ಮಕ್ಕಳ ಮನಸ್ಸಿನ ಮೇಲೆ ದುಶ್ಪರಿಣಾಮ ಬೀರುವಂಥದ್ದಾಗಲಿ ಮಾಡಬಾರದೆಂಬ ಕಾರಣಕ್ಕೆ ಸರಕಾರ ಸೆನ್ಸಾರ್ ಬೋರ್ಡ ಸಂಸ್ಥೆಯನ್ನು ಹುಟ್ಟು ಹಾಕಿದೆ, [ಇದೀಗ ಅದನ್ನು ಸಿ.ಬಿ.ಎಫ್.ಸಿ ಅಂದರೆ ಸೆಂಟ್ರಲ್ ಬೋರ್ಡ ಆಫ್ ಫಿಲಂ ಸರ್ಟಿಫಿಕೇಶನ್ ಎಂದು ಕರೆಯಲ್ಪಡುತ್ತದೆ] ಒಬ್ಬ ಜವಾಬ್ದಾರಿಯುತ ಅಧಿಕಾರಿ, ಮತ್ತು ಸಾಮಾಜಿಕ ಕಳಕಳಿ ಇರುವ ಇಬ್ಬರು ಮಹಿಳೆಯರು ಮತ್ತಿಬ್ಬರು ಪುರುಷರು ಚಿತ್ರ ವೀಕ್ಷಿಸಿ ಪ್ರಮಾಣ ಪತ್ರ ನೀಡಬೇಕು, ಹಿಂದೆ ಇದರ ಕುರಿತು ಇದೆ ಚಿತ್ರಲೋಕದಲ್ಲಿ ಮಾಹಿತಿ ಕೊಟ್ಟ ಹಾಗೆ ವಯಸ್ಕರು ಮಾತ್ರ ನೊಡುವ ಚಿತ್ರಗಳಿಗೆ ಮಾತ್ರ ಎ, ಮತ್ತು ವಯಸ್ಕರ ಒಪ್ಪಿಗೆ ಪಡೆದು ಮಕ್ಕಳು ನೋಡಬಹುದಾದ ಚಿತ್ರಕ್ಕೆ ಯೂಎ, ಮತ್ತು ಎಲ್ಲರೂ ನೋಡುವಂಥಾ ಚಿತ್ರಕ್ಕೆ ಯೂ ಸರ್ಟಿಫಿಕೇಟು [ಪ್ರಮಾಣ ಪತ್ರ] ನೀಡಬೇಕು. ಇನ್ನುಳಿದಂತೆ ಚಿತ್ರಕ್ಕೆ ಸಂಬಂಧ ಪಟ್ಟ ಕೆಲವು ಜನ ಮಾತ್ರ ವೀಕ್ಷಿಸಬಹುದಾದ ಚಿತ್ರಕ್ಕೆ ಎಸ್ ಸರ್ಟೀಫಿಕೇಟನ್ನು ನೀಡಲಾಗುತ್ತದೆ. [ಉದಾಹರಣೆ ಹೆರಿಗೆಯ ಬಗ್ಗೆ ವಿವರವಾಗಿ ಚಿತ್ರಿಸಿದ ಚಿತ್ರ ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ನೋಡಬೇಕು.. ಇತ್ಯಾದಿ]
ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ಮಂತ್ರಿಗಳಿಂದ ನೇಮಿಸಲ್ಪಡುವ ಈ ಸೆನ್ಸಾರ್ ಮಂಡಳಿಯ ಸದಸ್ಯರುಗಳು ಚಿತ್ರ ವೀಕ್ಷಿಸಿದ ನಂತರ ತಾವು ತಾವೇ ಚರ್ಚಿಸಿ ಚಿತ್ರಕ್ಕೆ ಪ್ರಮಾಣ ಪತ್ರ ನಿರ್ಧರಿಸುತ್ತಾರೆ, ಈ ಹಂತದಲ್ಲಿ ಚಿತ್ರದ ಹಲವು ವಿವಾದಾಸ್ಪದ ದೃಷ್ಯ ಮತ್ತು ಸಂಭಾಷಣೆಗಳನ್ನು ತೆಗೆದು ಹಾಕುವಂತೆ ಸೂಚಿಸುತ್ತಾರೆ. ಇದನ್ನೇ ಕತ್ತರಿ ಪ್ರಯೊಗ ಎಂದು ಹೇಳುತ್ತೇವೆ. ಈ ಕತ್ತರಿ ಪ್ರಯೋಗ ಪ್ರಮಾಣ ಪತ್ರಕ್ಕೆ ಅನುಸಾರವಾಗಿ ಬದಲಾಗುತ್ತದೆ.
ಪ್ರಾದೇಶಿಕ ಅಧಿಕಾರಿ ಎಂದು ಕರೆಸಿಕೊಳ್ಳುವ ಈ ಹುದ್ದೆಗೆ ಪ್ರಾದೇಶಿಕ ಭಾಷೆಯ ಜ್ನಾನ ಮತ್ತು ಬಾಷೆಯ ಮೇಲೆ ಸ್ಪಷ್ಟವಾದ ಹಿಡಿತ ಇರಬೇಕು.
(To be Continued)
Pls Note
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.
Also See
Censor Chief Walks Out of Chamber
Kiragooru moves to KFCC on Monday
Protest Against Censor over Kiragoorina Mutes
Kiragoorina Gayyaligalu Movie Review - 4/5
We Never Asked for Apology - Censor RO
Did Censor Seek RGV's Apology? - Exclusive
Revising Committee clears 3Bittawaru Oorige Doddawaru
Anti Superstition Film Denied Censor Certificate - Exclusive
Mumbai Censor Doors Closed For Kannada - Exclusive