ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಈ ವರ್ಷದ ದೀಪಾವಳಿ ಸಂಭ್ರಮ ಬಹಳ ದೊಡ್ಡದು. ದರ್ಶನ್ ಅವರ ದೀಪಾವಳಿ ಸಡಗರವನ್ನು ಇಮ್ಮಡಿಗೊಳಿಸಿರುವುದು ಬ್ರಿಟನ್ ಪಾರ್ಲಿಮೆಂಟ್. ಕನ್ನಡ ಚಿತ್ರರಂಗಕ್ಕೆ ದರ್ಶನ್ ನೀಡಿರುವ ಕೊಡುಗೆ, ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಪರಿಗಣಿಸಿ ಈ ಗೌರವವನ್ನು ಪರಿಗಣಿಸಿ ಈ ಗೌರವ ನೀಡಿದೆ.
ಇಡೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಸಿದ್ದು, ಯುಕೆ ಕರ್ನಾಟಕ ಬ್ಯುಸಿನೆಸ್ ಚೇಂಬರ್ನ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ. ದರ್ಶನ್ ಅವರನ್ನು ಸ್ವಾಗತಿಸಿ ಸನ್ಮಾನಿದವರು ಬ್ರಿಟನ್ನ ಸಂಸದ ವೀರೇಂದ್ರ ಶರ್ಮಾ. ದರ್ಶನ್ ಅವರಿಗೆ ಈ ಗೌರವ ನೀಡಿದಗ ಸಮಸ್ತ ಕನ್ನಡಿಗರ ಪರವಾಗಿ ಚಿತ್ರಲೋಕದಿಂದ ಧನ್ಯವಾದಗಳು.