` ತಿಥಿ ಬರಹಗಾರನ ಮೇಲೂ ಮೀಟೂ ಬಾಂಬ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
thithi story writer ere gowda image
thithi fame story writer ere gowda

ಮೀಟೂ ಅಭಿಯಾನ ದಿನೇ ದಿನೇ ಒಬ್ಬೊಬ್ಬರನ್ನೇ ಸುಳಿಗೆ ಎಳೆದುಕೊಳ್ಳುತ್ತಿದೆ. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್, ರವಿ ಶ್ರೀವತ್ಸ ವಿರುದ್ಧ ಸಂಜನಾ ಗರ್ಲಾನಿ ಸೇರಿದಂತೆ ಹಲವರು `ನನಗೂ ಕಿರುಕುಳವಾಗಿತ್ತು' ಎಂದು ಹೇಳಿಕೊಳ್ಳುತ್ತಿರುವಾಗ, ತಿಥಿ ಚಿತ್ರದ ಬರಹಗಾರ, ಬಳೆ ಕೆಂಪ ನಿರ್ದೇಶಕರೂ ಆಗಿರುವ ಈರೇಗೌಡರ ಮೇಲೆ ಮೀಟೂ ಆರೋಪ ಕೇಳಿ ಬಂದಿದೆ.

ಈರೇಗೌಡ, ಬ್ಯಾಡರಹಳ್ಳಿಯಲ್ಲಿರೋ ತಮ್ಮ ಗೆಳೆಯನ ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಆ ಮನೆಯಲ್ಲಿದ್ದಾಗ ನನ್ನ ದೇಹದ ಮೇಲೆ ಬಲವಂತವಾಗಿ ಕೈ ಆಡಿಸಿದ್ದರು. ನನ್ನೆದುರೇ, ಹಸ್ತಮೈಥುನ ಮಾಡಿಕೊಂಡಿದ್ದರು. ನನ್ನ ದೇಹದ ಮೇಲೆ ವೀರ್ಯ ಚೆಲ್ಲಿದ್ದರು ಎಂದೆಲ್ಲ ಬರೆದುಕೊಂಡಿದ್ದಾರೆ. 

ಈರೇಗೌಡ, ತಿಥಿ ಚಿತ್ರದ ಕತೆಗಾರ. ಬಳೆ ಕೆಂಪ ಚಿತ್ರದ ನಿರ್ದೇಶಕ. ಅವರ ವಿರುದ್ಧ ಅನಾಮಿಕೆಯೊಬ್ಬರು ಸಿಡಿಸಿದ ಈ ಮೀಟೂ ಬಾಂಬ್‍ನಿಂದಾಗಿ ಅವರ ನಿರ್ದೇಶನದ ಬಳೆಕೆಂಪ ಚಿತ್ರ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಿಂದ ಹೊರಬಿದ್ದಿದೆ. ನವೆಂಬರ್ 1ರಿಂದ ನವೆಂಬರ್ 4ರವರೆಗೆ ಧರ್ಮಶಾಲಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಆ ಉತ್ಸವದಲ್ಲಿ ಬಳೆ ಕೆಂಪ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈಗ ಮೀಟೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರೋತ್ಸವದಿಂದ ಹೊರಗಿಡಲಾಗಿದೆ.

ಅನಾಮಿಕೆಯೊಬ್ಬರ ಈ ಪತ್ರವನ್ನು ಶೃತಿ ಹರಿಹರನ್ ಶೇರ್ ಮಾಡಿದ್ದು, ಟೈಮ್ಸ್ ಆಫ್ ಈರೇಗೌಡ ಎಂದು ಬರೆದುಕೊಂಡಿದ್ದಾರೆ.