` santhosh anandram, - chitraloka.com | Kannada Movie News, Reviews | Image

santhosh anandram,

  • ಯುವರತ್ನ ರಿಲೀಸ್ ಸುಳ್ ಸುದ್ದಿ ಹಬ್ಬಿಸಿದ್ದು ಯಾರು..?

    yuvaratna release date clarification

    ಯುವರತ್ನ, ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಾರಣವನ್ನು ಪದೇ ಪದೇ ಹೇಳುವ ಪ್ರಮೇಯವೇ ಇಲ್ಲ. ಪುನೀತ್, ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಫಿಲಂಸ್ ರಾಜಕುಮಾರ ನಂತರ ಮತ್ತೆ ಒಟ್ಟಾಗಿರುವ ಸಿನಿಮಾ ಇದು. ಈಗಾಗಲೇ ಟೀಸರ್ ಸೃಷ್ಟಿಸಿರುವ ಹವಾ ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಹೀಗಿರೋವಾಗ ಇದ್ದಕ್ಕಿದ್ದಂತೆ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋಕೆ ಶುರುವಾಗುತ್ತೆ. ಮೇ 21ಕ್ಕೆ ಯುವರತ್ನ ರಿಲೀಸ್.

    ಅಂದಹಾಗೆ ಇದನ್ನು ಸೃಷ್ಟಿ ಮಾಡಿದವರು ಏಪ್ರಿಲ್ ಫೂಲ್ ಮಾಡೋಕೆ. ಆದರೆ, ಕಾದೂ ಕಾದೂ ಹಸಿದಿರುವ ಅಭಿಮಾನಿಗಳು ಅದು ಸುದ್ದಿಯಾಗಿದ್ದು ಏಪ್ರಿಲ್ 1ರಂದು ಅನ್ನೋದನ್ನೇ ಮರೆತುಬಿಟ್ಟರು. ಕೊನೆಗೆ ಏಪ್ರಿಲ್ ಫೂಲ್ ಸುದ್ದಿಗೆ ಸ್ವತಃ ಸಂತೋಷ್ ಆನಂದ ರಾಮ್ ಪ್ರತಿಕ್ರಿಯೆ ಕೊಟ್ಟರು.

    ಯುವರತ್ನ ಮೇ 21ಕ್ಕೆ ರಿಲೀಸ್ ಆಗುತ್ತಿಲ್ಲ. ಚಿತ್ರದ ಇನ್ನೂ ಕೆಲ ಭಾಗದ ಚಿತ್ರೀಕರಣ ಹಾಗೂ ಹಾಡುಗಳ ಚಿತ್ರೀಕರಣ ಮುಗಿದಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಮೇ 21ಕ್ಕೆ ರಿಲೀಸ್ ಆಗಲ್ಲ.. ಆಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟರು ಸಂತೋಷ್ ಆನಂದ ರಾಮ್.

  • ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಪವರ್ ಆಫ್ ಯೂಥ್ ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಯುವರತ್ನ, ಈಗ ಪ್ರೇಮದ ಮೃದಂಗ ಬಾರಿಸಿದ್ದಾನೆ. ನೀನಾದೆ ನಾ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ನಿಧಾನವಾಗಿ ಪ್ರೇಕ್ಷಕರ ಎದೆಗಿಳಿಯುತ್ತಿದೆ.. ಥೇಟು ಪ್ರೀತಿಯಂತೆ..

    ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಕಾಂಬಿನೇಷನ್ನಿನ 2ನೇ ಸಿನಿಮಾ ಇದು. ಎಸ್. ತಮನ್ ಸಂಗೀತ ನೀಡಿರುವ ಚಿತ್ರದ ಹಾಡು, ಕನ್ನಡ ಮತ್ತು ತೆಲುಗು 2 ಭಾಷೆಗಳಲ್ಲೂ ರಿಲೀಸ್ ಆಗಿದೆ. ಅರ್ಮಾನ್ ಮಲಿಕ್, ತಮನ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಕ್ಲಾಸ್ ಹಾಡಿದು. ಸಾಹಿತ್ಯ ಬರೆದಿರುವುದು ಗೌಸ್ ಪೀರ್. ತೆಲುಗಿನಲ್ಲಿ ಸಾಹಿತ್ಯ ನೀಡಿರುವುದು ರಾಮಜೋಗಯ್ಯ ಶಾಸ್ತ್ರಿ.

  • ಯುವರತ್ನನ ಬೈಕ್ ನಂಬರ್ ಸೀಕ್ರೆಟ್ ಏನ್ ಗೊತ್ತಾ..?

    secret behind yuvaratna's bike number

    ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಕಾಲೇಜು ಹುಡುಗನ ಗೆಟಪ್ಪಲ್ಲಿ ಪುನೀತ್ ಯಂಗ್ ಆಗಿ ಕಾಣುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು ಪುನೀತ್ ಬೈಕ್ ನಂಬರ್.

    ಬೈಕ್ ನಂಬರ್ : KA 01 PS 0029 

    KA  01 ಎಂದರೆ ಕರ್ನಾಟಕ ನಂ.1 ಸ್ಟಾರ್.

    PS  ಅಂದ್ರೆ ಪವರ್ ಸ್ಟಾರ್ ಅಂತೆ. ಇನ್ನು 0029 ಅಂದ್ರೆ, ಅಪ್ಪು ಅಭಿನಯದ 29ನೇ ಸಿನಿಮಾ. 

    ನಂಬರ್ ಪ್ಲೇಟ್ ಅರ್ಥ ಗೊತ್ತಾಗಿದ್ದೇ ತಡ.. ಅಪ್ಪು ಫ್ಯಾನ್ಸ್ ಓಪನ್ ದ ಬಾಟಲ್..ಟಲ್..ಟಲ್.. ಎನ್ನುತ್ತಿದ್ದಾರೆ. 

  • ಯುವರತ್ನನಿಗೆ 2 ವರ್ಷದ ಸಂಭ್ರಮ..!

    ಯುವರತ್ನನಿಗೆ 2 ವರ್ಷದ ಸಂಭ್ರಮ..!

    ಹೆಡ್ಡಿಂಗ್ ರಾಂಗ್ ಇರಬೇಕು. ದಯವಿಟ್ಟು ಬದಲಿಸಿ..

    .ಅಂತಾ ಹೇಳ್ಬೇಕು ಅಂದ್ಕೊಂಡ್ರಾ..? ನಿಮ್ಮ ಲೆಕ್ಕಾಚಾರ ಕರೆಕ್ಟ್. ಯುವರತ್ನ ರಿಲೀಸ್ ಆಗಿಯೇ ಇಲ್ಲ. ಇನ್ನು 2 ವರ್ಷ ಆಗೋದ್ ಎಲ್ಲಿ.. ಅಲ್ವಾ..? ಆದರೆ 2 ವರ್ಷ ಆಗಿರೋದು ಸತ್ಯ. ರಿಲೀಸ್ ಆಗಿ ಅಲ್ಲ, ಮುಹೂರ್ತ ಆಗಿ.

    ಯುವರತ್ನ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು 2018ರ ಡಿ.12ರಂದು. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ, 2020ರ ಫಸ್ಟ್ ಹಾಫ್‍ನಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ರಾಜಕುಮಾರ ಸಕ್ಸಸ್ ಕಾಂಬಿನೇಷನ್ ಇದ್ದ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳೂ ಇದ್ದವು. ಆದರೆ.. ಎಲ್ಲವನ್ನೂ ಕೊರೊನಾ ನುಂಗಿ ಹಾಕಿಬಿಟ್ಟಿತು.

    ಪ್ರಾಬ್ಲಮ್ಮೇನೂ ಇಲ್ಲ ಬಿಡಿ. ಲೇಟ್ ಆದರೂ ಲೇಟೆಸ್ಟ್ ಆಗಿ ಬರ್ತಿರೋ ಯುವರತ್ನ, 2021ರಲ್ಲಿ ರಿಲೀಸ್ ಆಗೋದು ಗ್ಯಾರಂಟಿ. ಅದೂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ. ಪವರ್ ಆಫ್ ಯೂಥ್.. 

  • ಯುವರತ್ನನಿಗೆ ಸಾಹೋ ಪವರ್

    saho stunt master directs yuvaratna

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಯುವರತ್ನ ಚಿತ್ರ, ಶೂಟಿಂಗ್ ಹಂತದಲ್ಲೇ ಅಬ್ಬಾ ಎನ್ನಿಸುವಷ್ಟು ಕುತೂಹಲ ಹುಟ್ಟಿಸುತ್ತಿದೆ. ಒಂದರ ಹಿಂದೊಂದು ವಿಶೇಷಗಳನ್ನು ಸೇರಿಸಿಕೊಳ್ತಿರೋ ಯುವರತ್ನ ಚಿತ್ರಕ್ಕೆ ಈಗ ಸಾಹೋ ಪವರ್ ಸಿಕ್ಕಿದೆ.

    ಅರ್ಥಾತ್, ಸಾಹೋ, ಧೀರನ್, ಥೆರಿ, ವಿಶ್ವಾಸಂ.. ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಮೈನವಿರೇಳಿಸುವ ಸ್ಟಂಟ್ ಆಯೋಜಿಸಿದ್ದ ಸ್ಟಂಟ್ ಮಾಸ್ಟರ್ ದಿಲೀಪ್ ಸುಬ್ರಹ್ಮಣ್ಯನ್ ಯುವರತ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

    ಪವರ್ ಸ್ಟಾರ್ ಪವರ್‍ಗೆ ತಕ್ಕಂತೆ ಸಾಹಸ ಸಂಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಸಂತೋಷ್ ಆನಂದ್‍ರಾಮ್, ಅಭಿಮಾನಿಗಳು ಇನ್ನಷ್ಟು ಥ್ರಿಲ್ಲಾಗಿ ಕಾಯುವಂತೆ ಮಾಡಿದ್ದಾರೆ.

  • ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

    ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

    ಯುವರತ್ನ, ಏಪ್ರಿಲ್ 1ರಂದು ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಾದಿಯಲ್ಲಿದ್ದ ಸಿನಿಮಾ. ಈ ಸಿನಿಮಾಗೆ ಇದ್ದಕ್ಕಿದ್ದಂತೆ 50% ನಿರ್ಬಂಧ ಹೇರಿದ್ದು ರಾಜ್ಯ ಸರ್ಕಾರ. ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರರಂಗವೇ ಕೈಮುಗಿದು ಕೇಳಿಕೊಂಡಿತು. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಿ ಎಂದು ಬೇಡಿಕೊಂಡಿತು. ಈ ಹಾದಿಯಲ್ಲಿ ಯುವರತ್ನ ಚಿತ್ರತಂಡಕ್ಕೆ ಸಿಕ್ಕ ಬೆಂಬಲವಂತೂ ಅಮೋಘವಾಗಿತ್ತು.

    ಕಿಚ್ಚ ಸುದೀಪ್, ಶಿವಣ್ಣ, ಯಶ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಶರಣ್, ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ದಿನಕರ್ ತೂಗುದೀಪ್, ಪವನ್ ಒಡೆಯರ್, ಎ.ಪಿ.ಅರ್ಜುನ್. ಹೇಮಂತ್ ರಾವ್, ಶೈಲಜಾ ನಾಗ್, ಕೆ.ಪಿ.ಶ್ರೀಕಾಂತ್, ಚೇತನ್ ಕುಮಾರ್, ಸ್ವಪ್ನಾ ಕೃಷ್ಣ, ಪೃಥ್ವಿ ಅಂಬರ್, ವಿ.ನಾಗೇಂದ್ರ ಪ್ರಸಾದ್, ರವಿಶಂಕರ್ ಗೌಡ….. ಹೀಗೆ ಚಿತ್ರತಂಡದ ಸದಸ್ಯರಷ್ಟೇ ಅಲ್ಲದೆ ಇಡೀ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕರು ಯುವರತ್ನ ಬೆಂಬಲಕ್ಕೆ ನಿಂತರು.

    ಫಿಲಂ ಚೇಂಬರ್ ಒಗ್ಗಟ್ಟಾಗಿ ನಿಂತು ಸರ್ಕಾರದ ವಿರುದ್ಧ ಗುಡುಗಿತು. ರಾಜ್ಯ ಸರ್ಕಾರವೇ ಯುವರತ್ನ ಚಿತ್ರವನ್ನು ಕೊಂದು ಹಾಕಿತು ಎಂದು ನೇರವಾಗಿಯೇ ಗುಡುಗಿದರು ಸಾ.ರಾ.ಗೋವಿಂದು. ಇದರ ಹಿಂದೆ ಪಿತೂರಿಯೇ ನಡೆಯುತ್ತಿದೆ ಎಂಬ ಅನುಮಾನವನ್ನೂ ಹಲವು ಚೇಂಬರ್ನ ಹಲವು ಸದಸ್ಯರು ಹೇಳಿದರು. ಸಂಜೆಯ ಹೊತ್ತಿಗೆ ಫಿಲಂ ಚೇಂಬರ್ ಸಂಪೂರ್ಣ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೋರಿ ಖುದ್ದು ಯಡಿಯೂರಪ್ಪನವರಿಗೇ ಮನವಿ ಸಲ್ಲಿಸಿತು.ಸರ್ಕಾರವೂ ಈಗ 100% ಪ್ರೇಕ್ಷಕರ ಭರ್ತಿಗೆ ಓಕೆ ಎಂದಿದೆ. ಅದೂ ಕೇವಲ 4 ದಿನ.

    ಇದೆಲ್ಲವೂ ಚಿತ್ರರಂಗದ ಮಾತಾದರೆ, ಅಭಿಮಾನಿ ದೇವರುಗಳ ರಿಯಾಕ್ಷನ್ ಬೇರೆಯೇ ಇತ್ತು. ಅವರು ನೇರವಾಗಿ ಚಿತ್ರಮಂದಿರಕ್ಕೆ ಹೋದರು. ಅಭಿಮಾನಿ ಸಂಘಟನೆ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆಗಿಳಿದರು. ಚಿತ್ರ ನೋಡಿದ್ದ ಪ್ರೇಕ್ಷಕರೇ ಪುಟ್ಟ ಪುಟ್ಟ ವಿಡಿಯೋ ಮಾಡಿ ಯುವರತ್ನ ಚಿತ್ರವನ್ನು ನೋಡಲು ಮತ್ತೊಬ್ಬರಿಗೆ ಕರೆ ಕೊಟ್ಟರು. ನೋಡ ನೋಡುತ್ತಲೇ ಯುವರತ್ನ ಚಿತ್ರವೀಗ ಕನ್ನಡಿಗರು ನೋಡಲೇಬೇಕಾದ ಚಿತ್ರವಾಗಿ ಹೋಗಿದೆ. ಯುವರತ್ನ ಗೆಲ್ಲಲಿ.

  • ಯುವರಾಣಿಯ ಜೊತೆ ಯುವರತ್ನನ ಫಾರಿನ್ ಟೂರ್

    yuvaratna song sequence shooting in australia and slovenia

    ಯುವರತ್ನ ಚಿತ್ರದ ದೃಶ್ಯಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಬಾಕಿ ಉಳಿದಿದ್ದದ್ದು ಹಾಡುಗಳ ಚಿತ್ರೀಕರಣ ಮಾತ್ರ. ಈಗ ಹಾಡುಗಳ ಚಿತ್ರೀಕರಣವೂ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಮತ್ತು ಸಯ್ಯೇಷಾ ವಿದೇಶಕ್ಕೆ ಹೊರಟಿದ್ದಾರೆ. ಯುವರತ್ನ ಟೀಂ ಹೋಗುತ್ತಿರುವುದು ಆಸ್ಟ್ರಿಯಾ ಮತ್ತು ಸ್ಲೊವೇನಿಯಾಗೆ.

    ಸ್ಲೊವೇನಿಯಾ ಮತ್ತು ಆಸ್ಟ್ರಿಯಾ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರೋದೇ ಅಪರೂಪ. ಇಲ್ಲವೇ ಇಲ್ಲ ಎನ್ನಬಹುದು. ಈ ದೇಶಗಳ ಅದ್ಭುತ ಪ್ರದೇಶಗಳನ್ನು ಸೆರೆಹಿಡಿಯಲು ಹೊರಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

    ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು 2ನೇ ಬಾರಿ ಜೊತೆಯಾಗಿರುವ ಸಿನಿಮಾ ಯುವರತ್ನ ಚಿತ್ರ, 2020ರ ಸೆನ್ಸೇಷನ್ ಚಿತ್ರ. ವೇಯ್ಟಿಂಗ್ ವೇಯ್ಟಿಂಗ್ ವೇಯ್ಟಿಂಗ್..

  • ರಾಜಕುಮಾರನಿಗೆ ರಾಜಕುಮಾರಿ ಜೊತೆಯಾದಾಗ..

    santhosh anandram weds surabhi

    ಮಿಸ್ಟರ್ & ಮಿಸಸ್ ರಾಮಾಚಾರಿ, ರಾಜಕುಮಾರದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್‍ರಾಮ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷವಷ್ಟೇ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದ ಆನಂದ್‍ರಾಮ್, ಸುರಭಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವಿವಾಹ ಸಮಾರಂಭಕ್ಕೆ, ಡಾ.ರಾಜ್ ಫ್ಯಾಮಿಲಿಯ ಎಲ್ಲ ಸದಸ್ಯರೂ ಭಾಗಿಯಾಗಿ ಹರಿಸಿದ್ದು ವಿಶೇಷವಾಗಿತ್ತು. ಅಂಬರೀಷ್, ಸುಮಲತಾ, ತಾರಾ, ರಶ್ಮಿಕಾ ಮಂದಣ್ಣ, ಶ್ರೀಮುರಳಿ, ಗುರುಕಿರಣ್, ಶರತ್ ಕುಮಾರ್, ತಾರಾ.. ಸೇರಿದಂತೆ ಬಹುತೇಕ ಇಡೀ ಚಿತ್ರರಂಗ ಆಗಮಿಸಿ ಶುಭ ಹಾರೈಸಿತು.

  • ರಾಜಕುಮಾರನಿಗೆ ರಾಜಕುಮಾರಿ ಸಿಕ್ಕಿದ್ಲು..!

    rajakumara director santhosh anandram

    ರಾಜಕುಮಾರನೆಂದರೆ, ಅಭಿಮಾನಿಗಳಿಗೆ ತಕ್ಷಣ ನೆನಪಾಗೋದು ಪುನೀತ್ ರಾಜ್‍ಕುಮಾರ್. ಆ ರಾಜಕುಮಾರ ಎಂಬ ಚಿತ್ರದ ಹಿಂದಿನ ಮಾಸ್ಟರ್ ನಿರ್ದೇಶಕ ಸಂತೋಷ್ ಆನಂದರಾಮ್. ಅವರಿಗೀಗ ರಾಜಕುಮಾರಿ ಸಿಕ್ಕಿದ್ದಾರೆ. ತಾವೀಗ ಎಂಗೇಜ್ ಎಂಬ ವಿಷಯವನ್ನು ಸ್ವತಃ ಸಂತೋಷ್ ಆನಂದ್‍ರಾಮ್ ಹೇಳಿಕೊಂಡಿದ್ದಾರೆ.

    ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸುರಭಿ. ಬಳ್ಳಾರಿಯಲ್ಲಿ ಇದೇ ತಿಂಗಳ 26ರಂದು ನಿಶ್ಚಿತಾರ್ಥ ನಡೆಯಲಿದೆ. ಸುರಭಿ, ಸಂತೋಷ್ ಆನಂದ್‍ರಾಮ್ ಅವರ ಫ್ಯಾಮಿಲಿ ಫ್ರೆಂಡ್. ಬಿಇ ಮಾಡಿ ಎಂಟೆಕ್ ಮಾಡಿರುವ ಸುರಭಿ, ಶ್ರೀನಿವಾಸ್ ಹಾಗೂ ಭಾವನಾ ಹತ್ವಾರ್ ಅವರ ಏಕೈಕ ಪುತ್ರಿ. 

    ಸದ್ಯಕ್ಕೆ ಸಂತೋಷ್ ಬಾಯ್ಬಿಟ್ಟಿರುವ ಸತ್ಯ ಇಷ್ಟೆ. ಇದು ಲವ್ ಮ್ಯಾರೇಜಾ..? ಅರೇಂಜ್ ಮ್ಯಾರೇಜಾ..? ಗೊತ್ತಿಲ್ಲ. ಮೂಲತಃ ಬಳ್ಳಾರಿಯವರಾದರೂ ಸುರಭಿ ಇರುವುದು ಬೆಂಗಳೂರಿನಲ್ಲಿ. ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಸಂತೋಷ್‍ಗೆ ಶುಭ ಹಾರೈಸೋಣ.

  • ರಾಜಕುಮಾರರ ಸಿನಿಮಾ ಟೈಟಲ್ ಏನು..? ರಾಜ್ಯೋತ್ಸವಕ್ಕೆ ಕಾಯಬೇಕು..!

    rajakumara team will reveal movie title on nov 1st

    ರಾಜಕುಮಾರ ನಂತರ ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಆನಂದ್‍ರಾಮ್ ಮತ್ತೊಮ್ಮೆ ಪುನೀತ್ ರಾಜ್‍ಕುಮಾರ್ ಜೊತೆ ಸೇರಿರುವ ಸಿನಿಮಾದ ಬಗ್ಗೆ ಅಕ್ಟೋಬರ್ 10ಕ್ಕೆ ಗುಡ್‍ನ್ಯೂಸ್ ಎಂದಿದ್ದ ಚಿತ್ರತಂಡ, ಈಗ ನವೆಂಬರ್ 1ರ ರಾಜ್ಯೋತ್ಸವದ ದಿನ ಗುಡ್‍ನ್ಯೂಸ್ ಎಂದಿದೆ. ನವೆಂಬರ್ 1ನೇ ತಾರೀಕು, ಅಭಿಮಾನಿ ದೇವರಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆ.

    ಅಕ್ಟೋಬರ್ 10ರಂದೇ ಟೈಟಲ್ ಗೊತ್ತಾಗಲಿದೆ ಎಂದು ಕಾಯುತ್ತಿದ್ದವರಿಗೆ ಚಿತ್ರತಂಡ ಇನ್ನೂ ಒಂದು ತಿಂಗಳು ಕಾಯುವಿಕೆಯ ಮುಹೂರ್ತವಿಟ್ಟಿದೆ. ಆ ದಿನ ಅಭಿಮಾನಿಗಳಿಂದ.. ಅಭಿಮಾನದಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆಯಂತೆ. ಕ್ಲೂ ಸಿಕ್ತಾ..?

  • ರಾಮಾಚಾರಿ, ರಾಜಕುಮಾರ ಚಿತ್ರದ ನಿರ್ದೇಶಕರ ಮುಂದಿನ ಹೀರೋ ಸುದೀಪ್..?

    santosh anand ram new movie with sudeep?

    ನಿರ್ದೇಶಕ ಸಂತೋಷ್ ಆನಂದ ರಾಮ್ ಹೊಸ ಚಿತ್ರ ಯಾವುದು..? ಹೀರೋ ಯಾರು..? ಈ ಪ್ರಶ್ನೆ ರಾಜಕುಮಾರ ಹಿಟ್ ಆದ ದಿನದಿಂದ ಗಾಂಧಿನಗರದಲ್ಲಿ ಕೇಳಿಸುತ್ತಲೇ ಇದೆ. ಸಂತೋಷ್ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈಗ ಸುದ್ದಿಯೊಂದು ಹೊರಬೀಳುತ್ತಿದೆ. ಸಂತೋಷ್‍ರ ಮುಂದಿನ ಚಿತ್ರದ ಹೀರೋ ಸುದೀಪ್ ಎಂಬ ಸುದ್ದಿಯ ಗಾಳಿ ಜೋರಾಗಿ ಬೀಸುತ್ತಿದೆ. ಚಿತ್ರದ ನಿರ್ಮಾಪಕರು ಒನ್ಸ್ ಎಗೇಯ್ನ್ ಹೊಂಬಾಳೆ ಕ್ರಿಯೇಷನ್ಸ್‍ನ ವಿಜಯ್ ಕಿರಗಂದೂರು. 

    ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರ ಹೆಸರು ಹೇಳಲು ಹೊರಟರೆ ಸಿಗುವುದೇ ಕಡಿಮೆ ಹೆಸರುಗಳು. ಅಂತಹ ಸ್ಟಾರ್ ನಿರ್ದೇಶಕರ ಸಾಲು ಸೇರುತ್ತಿದ್ದಾರೆ ಸಂತೋಷ್ ಆನಂದ್‍ರಾಮ್. ಏಕೆಂದರೆ, ಅವರು ಇದುವರೆಗೆ ನಿದೇಶಿಸಿದ್ದು ಎರಡೇ ಸಿನಿಮಾ. ಅದರಲ್ಲಿ ರಾಮಾಚಾರಿ, ಯಶ್ ಚಿತ್ರ ಜೀವನ ಮೆಗಾ ಬ್ಲಾಕ್ ಬಸ್ಟರ್ ಆದರೆ, ರಾಜಕುಮಾರ್ ಪುನೀತ್ ಚಿತ್ರದ ಅತಿದೊಡ್ಡ ಬ್ಲಾಕ್‍ಬಸ್ಟರ್ ಆಗಿದ್ದು ವಿಶೇಷ. 

  • ರಾಯರನ್ನು ನೆನೆದ ಯುವರತ್ನ ಟೀಂ

    ರಾಯರನ್ನು ನೆನೆದ ಯುವರತ್ನ ಟೀಂ

    ಭರ್ಜರಿ ಓಪನಿಂಗ್ ಕಂಡು, ಕಣ್ಣಿಗೆ ಕಾಣದ ತಂತ್ರಗಳಿಗೆ ಅಡೆತಡೆಯನ್ನೂ ಎದುರಿಸಿ, ಅಭಿಮಾನಿ ಮತ್ತು ಅಭಿಮಾನದಿಂದ ಗೆದ್ದು ಬೀಗುತ್ತಿರುವ ಯುವರತ್ನ ಚಿತ್ರತಂಡ ಮಂತ್ರಾಲಯದಲ್ಲಿ ಗುರು ರಾಯರ ಆಶೀರ್ವಾದ ಪಡೆದುಕೊಂಡಿದೆ.

    ಪುನೀತ್ ರಾಜ್‍ಕುಮಾರ್ ಜೊತೆ ನಿರ್ಮಾಪಕರಾದ ಕಾರ್ತಿಕ್ ಗೌಡ, ಡೈರೆಕ್ಟರ್ ನಂದಕಿಶೋರ್ ಹಾಗೂ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಮಂತ್ರಾಲಯ ಮಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳು ಪುನೀತ್ ಅವರಿಗೆ ಆಶೀರ್ವಚನ ನೀಡಿದರು.

  • ವಿಕ್ರಮ ಬೇತಾಳನನ್ನು ನೆನಪಿಸಿದ ಯುವರತ್ನ ಪುನೀತ್

    yuvaratna poster remonds of tales from vikram betal

    ವಿಕ್ರಮ ಬೇತಾಳ ಕಥೆಗಳನ್ನು ಓದಿರುವವರಿಗೆ ತಕ್ಷಣ ಆ ಕಥೆಯ ಚಿತ್ರ ನೆನಪಾದರೂ ಅಚ್ಚರಿಯಿಲ್ಲ. ಬೇತಾಳವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ವಿಕ್ರಮನ ಫೋಟೋ ಚಂದಮಾಮ ಮ್ಯಾಗಜಿನ್‍ನ ಆಕರ್ಷಣೆಯಾಗಿತ್ತು. ಈಗ ಸ್ವಲ್ಪ ಅದನ್ನು ನೆನಪಿಸುವ ಪೋಸ್ಟರ್ ಹೊರಬಂದಿದೆ.

    ಅಸ್ಥಿಪಂಜರ ಹೊತ್ತು ನಿಂತಿರುವ ಪುನೀತ್, ಅದರ ಹಿಂದೆ ಡೈನೋಸಾರ್ ಸ್ಕೆಲಟಿನ್. ನೋಡಿದವರ ತಲೆಯಲ್ಲಿ ಹುಳ ಫಿಕ್ಸ್. ಏಕೆಂದರೆ ಯುವರತ್ನ, ಕಾಲೇಜ್ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯುವ ಸ್ಪೋಟ್ರ್ಸ್ ಕಥೆ ಎಂದುಕೊಂಡಿದ್ದವರಿಗೆ ಇದೇನು ಎಂಬ ಪ್ರಶ್ನೆ ಹುಟ್ಟುಹಾಕಿದ್ದರೆ ಅಚ್ಚರಿಯಿಲ್ಲ. ನಿರ್ದೇಶಕ ಸಂತೋಷ್ ಆನಂದರಾಮ್ ನಿರೀಕ್ಷೆಯೂ ಅದೇ ಆಗಿತ್ತೇನೋ.. ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳುತ್ತಿರುವುದೂ ಇದೇ ಪ್ರಶ್ನೆಯನ್ನು.

    ಎಜುಕೇಷನ್ ಸಿಸ್ಟಂ ಸುತ್ತ ಇರುವ ಕಥೆಯಲ್ಲಿ ಪುನೀತ್ ಹೀರೋ. ರಾಜಕುಮಾರ ನಂತರ ಹೊಂಬಾಳೆ ಫಿಲಂಸ್, ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಮತ್ತೊಮ್ಮೆ ಜೊತೆಯಾಗಿರುವ ಯುವರತ್ನ, ಹಲವು ಕಾರಣಗಳಿಗೆ ನಿರೀಕ್ಷೆ ಹುಟ್ಟುಹಾಕಿದೆ.

  • ಶುರುವಾಯ್ತು ಯುವ ಶೂಟಿಂಗ್

    ಶುರುವಾಯ್ತು ಯುವ ಶೂಟಿಂಗ್

    ಯುವ ಸಿನಿಮಾ ಸೆಟ್ಟೇರಿ ಆಗಿತ್ತು. ಟೀಸರ್ ಕೂಡಾ ಬಂದಿತ್ತು. ರಿಲೀಸ್ ಡೇಟ್ ಕೂಡಾ ಘೋಷಣೆಯಾಗಿದೆ. ಆದರೆ ಸಿನಿಮಾ ಶೂಟಿಂಗ್ ಅಪ್ಡೇಟ್ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ. ಯುವರಾಜ್ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಏ.9ರಂದು ಶುರುವಾಗಿದೆ.

    yuva_shooting_02.jpgಬೆಂಗಳೂರಿನ ಹೆಚ್ಎಂಟಿ ಅಂಗಳದಲ್ಲಿ ಅದ್ದೂರಿ ಸೆಟ್ ಹಾಕಿ ಫಸ್ಟ್ ಡೇ ಶೂಟಿಂಗ್ ಶುರು ಮಾಡಲಾಗಿದೆ. ಯುವಗೆ ಸ್ವತಃ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ಕ್ಲಾಪ್ ಮಾಡಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ ಹೌಸ್ನಿಂದ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಯುವ ರಾಜ್ ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿ. ಸಿನಿಮಾಗಾಗಿ ಯುವ ಡ್ಯಾನ್ಸ್, ಫೈಟ್, ಜಿಮ್ನಲ್ಲಿ ವರ್ಕೌಟ್ ಅಂತಾ ಬ್ಯುಸಿಯಾಗಿದ್ದರು. ಬಳಿಕ ‘ಯುವ’ ಸಿನಿಮಾದ ವರ್ಕ್ಶಾಪ್ ಪೂರೈಸಿಯೇ ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಡಾ.ರಾಜ್, ಶಿವಣ್ಣ, ರಾಘವೇಂದ್ರ, ಪುನೀತ್, ವಿನಯ್ ನಂತರ ದೊಡ್ಮನೆಯಿಂದ ಬರುತ್ತಿರುವ ಹೊಸ ಹೀರೋ ಯುವ ರಾಜ್ ಕುಮಾರ್.

  • ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

    ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

    ಯುವರತ್ನ ಮೂಲಕ ಸೆನ್ಸೇಷನ್ ಸೃಷ್ಟಿಸಲು ಸಿದ್ಧರಾಗಿರೋ ಪುನೀತ್, ಚಿತ್ರದ ಬಿಡಗಡೆಗೆ ಮುನ್ನ ಶಿರಡಿ ಮತ್ತು ಕೊಲ್ಹಾಪುರ ಯಾತ್ರ ಕೈಗೊಂಡಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

    ವಿಜಯ್ ಕಿರಗಂದೂರು ಅವರಿಗೆ ಈ ದೇವಸ್ಥಾನಗಳ ಮೇಲೆ ಅಪಾರ ನಂಬಿಕೆ. ಕೆಜಿಎಫ್ ಬಿಡುಗಡೆಗೂ ಮುನ್ನ ಕೂಡ ಇದೇ ರೀತಿ ದೇವರ ಆಶೀರ್ವಾದ ಬೇಡಿದ್ದರು. ಈಗ ಪುನೀತ್, ಸಂತೋಷ್ ಜೊತೆ ಕೊಲ್ಹಾಪುರದ ಮಹಾಲಕ್ಷ್ಮಿ ಮತ್ತು ಶಿರಡಿ ಸಾಯಿಬಾಬಾ ಮಂದಿರಗಳಿಗೆ ಭೇಟಿ ಕೊಟ್ಟು, ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.