` santhosh anandram, - chitraloka.com | Kannada Movie News, Reviews | Image

santhosh anandram,

  • ಪ್ರಕಾಶ್ ರೈ ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ..

    ಪ್ರಕಾಶ್ ರೈ ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ..

    ಪ್ರಕಾಶ್ ರೈ, ಕರ್ನಾಟಕದ ಎಲ್ಲೆ ಮೀರಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಕನ್ನಡದಿಂದ ಬೆಳೆದ ಪ್ರತಿಭೆ,ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ಎಲ್ಲೆಡೆ ವ್ಯಾಪಿಸಿಕೊಂಡು ಬಿಟ್ಟಿದ್ದಾರೆ. ಅಂತಹವರು ಎದೆಯುಬ್ಬಿಸುವಂತೆ ಮಾಡಿರುವುದು ಯುವರತ್ನ. ಯುವರತ್ನ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಕಾಶ್ ರೈ, ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

    ಬೇರೆ ಭಾಷೆಗಳಲ್ಲಿ ಒಳ್ಳೆಯ , ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಯುವರತ್ನ ನನಗೆ ಎದೆಯುಬ್ಬಿಸಿಕೊಂಡು ಇದು ನನ್ನ ಕನ್ನಡದ ಸಿನಿಮಾ ಎಂದು ಹೇಳಿಕೊಳ್ಳೋ ಹಾಗೆ ಮಾಡಿದೆ. ಇಂತಹ ಆಲೋಚನೆಗಳನ್ನು ನಮ್ಮವರೂ ಮಾಡ್ತಾರೆ. ಅಷ್ಟೇ ಅದ್ಧೂರಿಯಾಗಿ ಮನಮುಟ್ಟುವಂತೆ ಹೇಳ್ತಾರೆ ಎಂದು ಹೇಳಿಕೊಳ್ಳೋ ಹಾಗೆ ಮಾಡಿದೆ ಎಂದು ಖುಷಿಯಿಂದ ಹೇಳಿಕೊಂಡರು ಪ್ರಕಾಶ್ ರೈ.

    ಸಾಮಾನ್ಯವಾಗಿ ತಮ್ಮ ಡಬ್ಬಿಂಗ್ ಚಿತ್ರಗಳಿಗೆ ಪ್ರಕಾಶ್ ರೈ ಡಬ್ಬಿಂಗ್ ಮಾಡೋದಿಲ್ವಂತೆ. ಆದರೆ, ಯವರತ್ನ ಚಿತ್ರಕ್ಕೆ ನಾನೇ ತೆಲುಗಿಗೂ ಡಬ್ ಮಾಡುತ್ತೇನೆ ಎಂದು ಕೇಳಿಕೊಂಡು ಹೋಗಿ ಡಬ್ ಮಾಡಿದೆ. ಇದು ನಮ್ಮ ಕನ್ನಡದ ಸಿನಿಮಾ ಎಂದ ಪ್ರಕಾಶ್ ರೈ, ಇಷ್ಟೆಲ್ಲ ಹೇಳುವಾಗ ಕೊನೆಯವರೆಗೂ ಎದೆಯುಬ್ಬಿಸಿಕೊಂಡೇ ನಿಂತಿದ್ದರು. ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಮತ್ತು ಪುನೀತ್ ಜೊತೆಗಿನ ಯುವರತ್ನ ಚಿತ್ರ ಅವರು ಹಾಗೆ ನಿಲ್ಲುವ ಹಾಗೆ ಮಾಡಿತ್ತು.

  • ಫೆ. 24 ಟ್ರಂಪ್ ಇಂಡಿಯಾಗೆ.. ಯುವರತ್ನ ಯೂರೋಪ್‍ಗೆ..

    yuvaratna movie team geared up for europe shoot

    ಫೆಬ್ರವರಿ 24, ಭಾರತ ಮತ್ತು ಅಮೆರಿಕ ಬಾಂಧವ್ಯಕ್ಕೆ ಮಹತ್ವದ ದಿನ. ಆ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದಾರೆ. ಅದೇ ದಿನ ಯುವರತ್ನ ಚಿತ್ರಕ್ಕೂ ಮಹತ್ವದ ದಿನ. ಚಿತ್ರತಂಡ ಫೆ.24ರಂದು ಯೂರೋಪ್‍ನತ್ತ ಹೊರಟಿದೆ.

    ಯುವರತ್ನ ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗ್‍ಗಾಗಿ ಪುನೀತ್ ರಾಜ್‍ಕುಮಾರ್, ಸಯೇಷಾ ಯೂರೋಪ್‍ಗೆ ತೆರಳಲಿದ್ದಾರೆ. ಹೀರೋ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆಯಂತೆ.

    ಎಜುಕೇಷನ್ ಮಾಫಿಯಾ ಕುರಿತ ಚಿತ್ರದ ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಯುವರತ್ನ ಚಿತ್ರದಲ್ಲಿ ತಾರಾಬಳಗವೇ ತುಂಬಿ ತುಳುಕುತ್ತಿದೆ. ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು.. ರಾಜಕುಮಾರ ಚಿತ್ರದ ನಂತರ ಮತ್ತೆ ಒಂದುಗೂಡಿರುವ ಚಿತ್ರವಿದು.

  • ಬರೆಯಲು ಕುಳಿತರು ರಾಮಾಚಾರಿ, ರಾಜಕುಮಾರ ಸಂತೋಷ್ ಆನಂದ್ ರಾಮ್

    santhosh anandaram image

    ಮೊದಲು ರಾಮಾಚಾರಿ. ಆನಂತರ ರಾಜಕುಮಾರ.. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಹೀಗಾಗಿಯೇ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಅಭಿಮಾನಿಗಳು ಮತ್ತು ಗಾಂಧಿನಗರದಲ್ಲಿ ಅಡ್ಡಾಡುತ್ತಲೇ ಇದೆ. ಮೊದಲು ಶಿವರಾಜ್ ಕುಮಾರ್, ನಂತರ ಸುದೀಪ್ ನಾಯಕತ್ವದ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಯಿತಾದರೂ, ನಂತರ ಅವರೇ ಅದನ್ನು ನಿರಾಕರಿಸಿದರು. ಆದರೆ, ಮುಂದೊಂದು ದಿನ ಇವರೊಂದಿಗೆ ಕೆಲಸ ಮಾಡುದ ಅತಿ ದೊಡ್ಡ ಕನಸಿದೆ ಎನ್ನುವ ಮೂಲಕ ಅಭಿಮಾನಿಗಳಿಗೂ ಬೇಸರ ಮಾಡಲಿಲ್ಲ.

    ಈಗ ಸಂತೋಷ್ ಅನಂದ್ ರಾಮ್ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೆ ಕುಳಿತಿದ್ದಾರೆ. ಟೀಂ ರೆಡಿಯಾಗಿ ಕುಳಿತು, ಕೆಲಸ ಮಾಡೋಕೆ ಶುರುವಾಗಿದೆ. ಒಂದು ಚಿತ್ರದಲ್ಲಿ ಸ್ಕ್ರಿಪ್ಟ್ ಕೆಲಸ ತುಂಬಾ ಮುಖ್ಯ. ಸ್ಕ್ರಿಪ್ಟ್ ಫೈನಲ್ ಆಗಿಬಿಟ್ಟರೆ, ಡೈರೆಕ್ಟರ್ ನಿರಾಳವಾಗಿಬಿಡ್ತಾರೆ. ಆದರೆ, ಬರೆಯಲು ಕೂತಿರುವುದನ್ನು ಫೋಟೋ ಸಮೇತ ಹೇಳಿರುವ ಸಂತೋಷ್, ಚಿತ್ರದ ಹೀರೋ ಯಾರು ಅನ್ನೋದನ್ನ ಮಾತ್ರ ಸೀಕ್ರೆಟ್ ಆಗಿಟ್ಟಿದ್ದಾರೆ.

  • ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಕನ್ನಡದಲ್ಲಿ ಅತೀ ಹೆಚ್ಚು ಪುಟ್ಟ ಮಕ್ಕಳ ಫ್ಯಾನ್ಸ್ ಹೊಂದಿರೋ ನಟ ಪುನೀತ್ ರಾಜ್‍ಕುಮಾರ್. ಪುನೀತ್ ಅವರ ಡ್ಯಾನ್ಸ್ ಅಂದ್ರೆ ಪುಟ್ಟ ಮಕ್ಕಳಿಗೆ ಪ್ರಾಣ. ಜೊತೆಗೆ ಪುನೀತ್ ಬಾಲನಟನಾಗಿಯೂ ಸ್ಟಾರ್ ಆಗಿದ್ದವರು. ಹೀಗಾಗಿಯೇ ಮಕ್ಕಳು ಪುನೀತ್ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡ್ತಾರೆ.

    ಯುವರತ್ನ ಚಿತ್ರದ ಪ್ರಮೋಷನ್‍ನಲ್ಲಿ ದೊಡ್ಡವರಿಗಿಂತ ದೊಡ್ಡ ಮಟ್ಟದಲ್ಲಿ ಥ್ರಿಲ್ ಆಗಿರೋದು ಮಕ್ಕಳು. ಅಂದಹಾಗೆ ಅಪ್ಪು ಅವರನ್ನು ಕಂಡರೆ ಯಾವ ಮಕ್ಕಳೂ ಸರ್ ಎಂದೋ.. ಅಂಕಲ್ ಎಂದೋ ಕರೆಯಲ್ಲವಂತೆ. ಎಲ್ಲ ಮಕ್ಕಳಿಗೂ ನಾನು ಅಪ್ಪು ಮಾಮ ಆಗಿಬಿಟ್ಟಿದ್ದೇನೆ. ಅಪ್ಪು ಮಾಮ.. ಅಪ್ಪು ಮಾಮ.. ಎಂದೇ ಎಲ್ಲ ಮಕ್ಕಳೂ ಮಾತನಾಡಿಸೋದು ಎಂದು ಹೇಳಿಕೊಳ್ಳೋ ಪುನೀತ್ ಅವರಿಗೆ ಬಹುಶಃ ಅವರ ತಂದೆ ತಾಯಿ ಅವರಿಗೆ ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾಗಳನ್ನು ತೋರಿಸಿರಬೇಕು ಎಂದು ಹೇಳಿಕೊಳ್ತಾರೆ.

  • ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಸಿನಿಮಾವೊಂದು ಇಷ್ಟೆಲ್ಲ ರೀತಿಯಲ್ಲಿ ಸಂಚಲನ ಸೃಷ್ಟಿಸಬಹುದೇ ಎಂಬ ಪ್ರಶ್ನೆ ಹುಟ್ಟಿಸಿರುವುದು ಯುವರತ್ನ. ಸರ್ಕಾರದಿಂದ ಉದ್ಭವವಾದ ಸಡನ್ ಪ್ರಾಬ್ಲಂನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯುವರತ್ನ ಸಿನಿಮಾ, ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈಗ ಮಠಾಧೀಶರ ಸರದಿ.

    ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿವೈಎಸ್‍ಪಿ ಶ್ರೀ ನರಸಿಂಹ ತಾಮ್ರಧ್ವಜ, ಹರಿಹರಿ ಸಿಪಿಐ ಸತೀಶ್, ಪಿಎಸ್‍ಐ ವೀರೇಶ್ ಮೊದಲಾದವರು ಒಟ್ಟಿಗೇ ಹೋಗಿ ಸಿನಿಮಾ ನೋಡಿದ್ದಾರೆ.

    ಸಿನಿಮಾ ನೋಡಿ ಬಂದ ಮೇಲೆ ಸ್ವತಃ ಪುನೀತ್ ಅವರಿಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಹಾರೈಸಿದ್ದಾರೆ. ವಿವಿಧ ಸಮುದಾಯದ ಪ್ರಮುಖ ಸ್ವಾಮೀಜಿಗಳು ಒಟ್ಟಿಗೇ ಸಿನಿಮಾ ನೋಡಿದ್ದೇ ವಿಶೇಷವಾಗಿತ್ತು.

    ಇತ್ತ ಥಿಯೇಟರುಗಳಿಗೆ 50% ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಥಿಯೇಟರುಗಳ ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿರುವ ಸಿನಿಮಾ ಯುವರತ್ನ, ಎಲ್ಲ ಕಡೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ಮೈಸೂರಿನಲ್ಲಿ ಯುವರತ್ನ ದಸರೆಯೂ ಇಲ್ಲ.. ಅಪ್ಪುನೂ ಸಿಕ್ಕಲ್ಲ..!

    ಮೈಸೂರಿನಲ್ಲಿ ಯುವರತ್ನ ದಸರೆಯೂ ಇಲ್ಲ.. ಅಪ್ಪುನೂ ಸಿಕ್ಕಲ್ಲ..!

    ಕೊರೊನಾ ಮತ್ತೆ ಕೆರಳದೇ ಹೋಗಿದ್ದರೆ ಮಾರ್ಚ್ 20ರಂದು ಮೈಸೂರಿನಲ್ಲಿ ಯುವರತ್ನ ದಸರಾ ನಡೆಯಬೇಕಿತ್ತು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಯುವರತ್ನ ಸಂಭ್ರಮ ರದ್ದಾಗಿದೆ. ಅನುಮತಿಯೂ ಸಿಕ್ಕಿಲ್ಲ ಎನ್ನುವುದು ಮೂಲಗಳು ನೀಡಿರುವ ಮಾಹಿತಿ. ಚಿತ್ರತಂಡವೂ ಇದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೈಸೂರಿನಲ್ಲಿ ಒಂದೇ ಕಡೆ ಸಂಭ್ರಮಾಚರಣೆ ಮಾಡುವ ಬದಲು ಎಲ್ಲ ಜಿಲ್ಲೆಗಳಿಗೂ ಟೂರ್ ಹೋಗಲು ತೀರ್ಮಾನಿಸಿದೆ ಯುವರತ್ನ ಟೀಂ. ಮಾರ್ಚ್ 21ರಿಂದಲೇ ಯುವರತ್ನ ಟೂರ್ ಶುರುವಾಗಲಿದೆ. ಯಾವ ಯಾವ ದಿನ.. ಎಲ್ಲೆಲ್ಲಿ ಯುವ ಸಂಭ್ರಮ ಅನ್ನೋದು ಶೀಘ್ರದಲ್ಲೇ ಅನೌನ್ಸ್ ಆಗಲಿದೆ.

    ಇನ್ನು ಮಾರ್ಚ್ 17ನೇ ತಾರೀಕು ಪುನೀತ್ ಮನೆ ಬಳಿ ಹೋಗಲೇಬೇಡಿ. ಆ ದಿನ ಪುನೀತ್ ಮನೆಯಲ್ಲಿ ಇರಲ್ಲ, ದೇವಸ್ಥಾನಗಳಿಗೆ ಕುಟುಂಬ ಸಮೇತ ಹೋಗಿರುತ್ತಾರೆ. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ ಎಂದು ಪ್ರಾರ್ಥಿಸಿದ್ದಾರೆ ಪುನೀತ್.

  • ಯವರತ್ನನ ತೇರು.. ಅಭಿಮಾನ ಜೋರು..

    ಯವರತ್ನನ ತೇರು.. ಅಭಿಮಾನ ಜೋರು..

    ಯುವರತ್ನ ಚಿತ್ರದ ಪ್ರೀ-ಇವೆಂಟ್ ಕಾರ್ಯಕ್ರಮಕ್ಕೆ ಕೊರೊನಾ ಅಡ್ಡಿಯಾಗುತ್ತಿದೆ. ದೊಡ್ಡ ದೊಡ್ಡ ಸಮಾರಂಭ ಮಾಡುವುದಕ್ಕೂ ಕೊರೊನಾ ರೂಲ್ಸ್ ಅವಕಾಶ ಕೊಡುತ್ತಿಲ್ಲ. ಹೀಗಿರುವಾಗ ಯುವರತ್ನ ಟೀಂ ಆರಿಸಿಕೊಂಡಿದ್ದು ಅಭಿಮಾನಿಗಳ ಬಳಿಗೇ ಹೋಗುವ ಹೆಜ್ಜೆ. ಆಗ ಹೊರಟ ಯುವರತ್ನ ತೇರು ಈಗ 3 ಜಿಲ್ಲೆಗಳನ್ನು ಮುಗಿಸಿದೆ.

    ಕಲಬುರಗಿ, ಧಾರವಾಡ ಮತ್ತು ಬೆಳಗಾವಿಗಳಲ್ಲಿ ಯುವರತ್ನ ಚಿತ್ರದ ಪ್ರಮೋಷನ್ ಮಾಡಲಾಗಿದೆ. ಈ ತೇರಿನ ಮುಂದೆ ಪುನೀತ್ ಇದ್ದರೆ, ಜೊತೆಯಲ್ಲಿ ಡಾಲಿ ಧನಂಜಯ್, ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ರವಿಶಂಕರ್ ಗೌಡ.. ಹೀಗೆ ಯುವರತ್ನ ಚಿತ್ರದ ಅರ್ಧಕ್ಕರ್ಧ ಟೀಂ ಯಾತ್ರೆಗೆ ಹೋಗಿತ್ತು.

    ಸುಡು ಸುಡು ಬಿಸಿಲು.. ಮಟ ಮಟ ಮಧ್ಯಾಹ್ನ.. ಇದರ ನಡುವೆ ತುಂತುರು ತುಂತುತು ಮಳೆ.. ಸೆಕೆ.. ಧಗೆ.. ಯಾವುದೂ ಅಭಿಮಾನಿಗಳಿಗೆ ಅಡ್ಡಿಯಾಗಲಿಲ್ಲ.

    ಅಪ್ಪುಗೆ ಜೈಜೈಕಾರ ಹಾಕುತ್ತಲೇ ಹೋದರು ಫ್ಯಾನ್ಸ್. ಅಭಿಮಾನಿಗಳಿಗಾಗಿ ಹಾಡು ಹಾಡಿ, ಡೈಲಾಗ್ ಹೊಡೆದು ರಂಜಿಸಿದ ಪುನೀತ್, ಸಿನಿಮಾ ನೊಡೋದನ್ನು ಮರೆಯಬೇಡಿ. ಮಾಸ್ಕ್, ಅಂತರ ಕಾಯ್ದುಕೊಂಡು ಸೇಫ್ ಆಗಿರಿ ಎಂದು ಸಂದೇಶ ನೀಡಿದರು.

  • ಯು ವಿಲ್ ರಾಕ್ ಮಗಾ - ಸಂತೋಷ್ ಆನಂದ್‍ರಾಮ್

    santhosh anandram wishes his friends

    ರಾಜ ಲವ್ಸ್ ರಾಧೆ. ಈಗಾಗಲೇ ಚಿತ್ರಮಂದಿರ ತಲುಪಿದೆ. ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾ ನಿರ್ಮಾಪಕರಾಗಿದ್ದ ಹೆಚ್.ಎಲ್.ಎನ್.ರಾಜು, ಆಗಲೇ ಹೊಸ ಚಿತ್ರಕ್ಕೆ ರೆಡಿಯಾಗಿಬಿಟ್ಟಿದ್ದಾರೆ. ಹೆಸರಘಟ್ಟ ರಾಜು ನಿರ್ಮಾಣದ ಹೊಸ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. 

    ಅಂದಹಾಗೆ ಈ ಚಿತ್ರದ ನಿರ್ದೇಸಕ ವಿಜಯ್ ನಾಗೇಂದ್ರ. ಇವರು ರಾಜಕುಮಾರ ಮತ್ತು ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರಗಳಿಗೆ ಅಸಿಸ್ಟೆಂಟ್ ನಿರ್ದೇಶಕರಾಗಿದ್ದವರು. ಅಂದ್ರೆ, ನಿರ್ದೇಶಕ ಸಂತೋಷ್ ಆನಂದ್‍ರಾಮ್ ಗೆಳೆಯ.

    ತಮ್ಮ ಗೆಳೆಯನ ಮೊದಲ ಸಿನಿಮಾ ಸೂಪರ್ ಸಕ್ಸಸ್ ಆಗಲಿ ಎಂದು ಶುಭ ಹಾರೈಸಿದ್ದಾರೆ ನಿರ್ದಶಕ ಸಂತೋಷ್ ಆನಂದ್‍ರಾಮ್. ತಮ್ಮ ಗೆಳೆಯನಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಮತ್ತು ಅವಕಾಶ ನೀಡಿದ ಗಣೇಶ್‍ಗೆ ಧನ್ಯವಾದ ಹೇಳಿದ್ದಾರೆ ಸಂತೋಷ್. 

    ಯು ವಿಲ್ ರಾಕ್ ಮಗಾ.. ಅದು ಸಂತೋಷ್ ಆನಂದ್‍ರಾಮ್ ಹಾರೈಕೆ.

  • ಯುವ ಘರ್ಜನೆ ಶುರು

    ಯುವ ಘರ್ಜನೆ ಶುರು

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಚಿತ್ರದ ಘರ್ಜನೆ ಶುರುವಾಗಿದೆ. ಬೆಳಗ್ಗೆಯಿಂದಲೇ ಜೋಶ್ ಎಲ್ಲೆಲ್ಲೂ ಕಂಡುಬಂದಿದೆ. ಪುನೀತ್ ಫ್ಯಾನ್ಸ್ ಕ್ರೇಜ್ ಗೊತ್ತಿದ್ದ ಪೊಲೀಸರು, ರಾತ್ರಿಯೇ ಸೆಕ್ಯುರಿಟಿ ಟೈಟ್ ಮಾಡಿದ್ದ ಕಾರಣ ಎಲ್ಲಿಯೂ ಗದ್ದಲ, ಗಲಾಟೆಗಳಾಗಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಿವೆ.

    ಪವರ್ ಆಫ್ ಯೂಥ್ ಹಾಡು ಬರುತ್ತಿದ್ದಂತೆ ಸ್ಕ್ರೀನ್ ಎದುರೇ ಕುಣಿದು ಕುಪ್ಪಳಿಸಿದ್ದಾರೆ. ಸಿನಿಮಾ ಶುರುವಾಗೋಕೂ ಮುನ್ನ ಪೂಜೆ ಮಾಡಿ, ಈಡುಗಾಯಿ ಹೊಡೆದು ಶುಭ ಕೋರಿದ್ದಾರೆ. ನೂರಾರು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳೂ ನಡೆದಿವೆ. ಪಟಾಕಿಗಳು ಪಟಪಟನೆ ಸಿಡಿದಿವೆ.

  • ಯುವ ರಾಜಕುಮಾರ್ ಅಡಿಷನ್ ಶುರು

    ಯುವ ರಾಜಕುಮಾರ್ ಅಡಿಷನ್ ಶುರು

    ಅಪ್ಪು ಇಲ್ಲ. ಇನ್ನು ನೀವೇ ನಮಗೆ ಪವರ್ ಸ್ಟಾರ್ ಎಂದು ಅಭಿಮಾನಿಗಳು ಆಗಲೇ  ಯುವ ರಾಜಕುಮಾರ್ಗೆ ಜ್ಯೂ.ಪವರ್ ಸ್ಟಾರ್ ಕೊಟ್ಟಿದ್ದಾಗಿದೆ. ಹೊಂಬಾಳೆ ಸಂಸ್ಥೆಯೇ ಯುವರಾಜ್ನನ್ನು ಲಾಂಚ್ ಮಾಡುತ್ತಿದ್ದು, ಪುನೀತ್ ವೃತ್ತಿ ಜೀವನದ ಶ್ರೇಷ್ಟ ಚಿತ್ರ ಕೊಟ್ಟ ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.

    ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅಭಿನಯಿಸೋ ಮೊದಲ ಸಿನಿಮಾದ ಮೇಲೆ ಅಪ್ಪು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸದ್ಯದಲ್ಲೇ ಅಪ್ಡೇಟ್ ಕೊಡುತ್ತೇನೆ ಎಂದು ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್,  ಇದೀಗ ಆ ಸಿನಿಮಾದಲ್ಲಿ ನಟಿಸೋ ಕಲಾವಿದರಿಗೆ ಅಡಿಷನ್ ಕರೆದಿದ್ದಾರೆ.

    ಜ್ಯೂ. ಪವರ್ ಸ್ಟಾರ್ ಜೊತೆ ನಟಿಸೋಕೆ ಕಲಾವಿದರಿಗಾಗಿ ಆಡಿಷನ್ ಕರೆಯಲಾಗಿದೆ. 16 ರಿಂದ 25 ವರ್ಷದೊಳಗಿನ ಕಲಾವಿದರು ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರೋ ಆಡಿಷನ್ನಲ್ಲಿ ಭಾಗವಹಿಸಸಬಹುದು. ಇನ್ನು ತಂತ್ರಜ್ಞರ ಆಯ್ಕೆ ಫೈನಲ್ ಆಗಿಲ್ಲ. ಈ ಅಡಿಷನ್ ಮುಗಿದ ಮೇಲೆ ಸೂಕ್ತ ಸಮಯದಲ್ಲಿ ಚಿತ್ರದ ಮುಹೂರ್ತ, ಶೂಟಿಂಗ್ ಶುರುವಾಗುವ ಸಮಯ ಇತ್ಯಾದಿಗಳನ್ನು ಘೋಷಿಸುವ ಸಾಧ್ಯತೆ ಇದೆ.

  • ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

    ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

    ಯಾವಾಗ..? ಯಾವಾಗ..? ಯಾವಾಗ..?

    ಸಂತೋಷ್ ಆನಂದರಾಮ್ ಹೋದಲ್ಲಿ ಬಂದಲ್ಲಿ..

    ವಿಜಯ್ ಕಿರಂಗದೂರು ಕಣ್ಣಿಗೆ ಕಂಡಲ್ಲೆಲ್ಲ ಎದುರಾಗುತ್ತಿದ್ದ ಪ್ರಶ್ನೆ ಇದು. ಯುವರಾಜಕುಮಾರ್ ಸಿನಿಮಾ ಅನೌನ್ಸ್ ಮಾಡಿದ್ದೀರಿ, ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತೀರಿ ಅನ್ನೋ ಪ್ರಶ್ನೆಯನ್ನು ಎಲ್ಲರೂ ಕೇಳಿದ್ದವರೇ. ಪುನೀತ್ ಬಿಟ್ಟು ಹೋಗಿರುವ ಶೂನ್ಯವನ್ನ ಯುವ ತುಂಬಬಹುದು ಅನ್ನೋ ಆಸೆ ಅಭಿಮಾನಿ ದೇವರುಗಳದ್ದು. ಈಗ ಆ ಪ್ರಶ್ನೆಗೆ ಖುದ್ದು ಸಂತೋಷ್ ಆನಂದರಾಮ್ ಅವರೇ ಉತ್ತರ ಕೊಟ್ಟಿದ್ದಾರೆ.

    ಅಕ್ಟೋಬರ್‍ನಿಂದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಸಂತೋಷ್ ಆನಂದರಾಮ್. ಸದ್ಯಕ್ಕೆ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್ ನೋಡಬೇಕು. ಪ್ರಚಾರದತ್ತ ಗಮನ ಹರಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ಆ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಈ ಹೊಸ ಸಿನಿಮಾ ಶುರುವಾಗಲಿದೆ.

    ಅಂದಹಾಗೆ.. ಇನ್ನೊಂದು ವಿಷಯ. ಇತ್ತೀಚೆಗೆ ಯುವ ರಾಜಕುಮಾರ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಾಣಿಸಿಕೊಳ್ಳುತ್ತಿಲ್ಲ. ಯುವ ರಾಜಕುಮಾರ್ ಲುಕ್‍ನ್ನು ಅಷ್ಟು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ ಸಂತೋಷ್. ಅಕ್ಟೋಬರ್‍ನಲ್ಲಿ ಸಿನಿಮಾಗೆ ಮುಹೂರ್ತವಾದಾಗ ಹೇಗೂ ನೋಡಿಯೇ ನೋಡ್ತೀವಲ್ಲ. ವೇಯ್ಟ್.

  • ಯುವ ರಾಜಕುಮಾರ್ ಚಿತ್ರದ ಬ್ರೇಕಿಂಗ್ ನ್ಯೂಸ್

    ಯುವ ರಾಜಕುಮಾರ್ ಚಿತ್ರದ ಬ್ರೇಕಿಂಗ್ ನ್ಯೂಸ್

    ಯುವ ರಾಜಕುಮಾರ್ ಚಿತ್ರರಂಗಕ್ಕೆ ಬರುವುದು ಗುಟ್ಟಲ್ಲ. ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆ. ಯುವ ರಣಧೀರ ಕಂಠೀರವದ ಮೂಲಕ ಬರಬೇಕಿದ್ದ ಯುವರಾಜನ ಪಟ್ಟಾಭಿಷೇಕಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅಪ್ಪು ದೂರವಾದ ಮೇಲಂತೂ ಯುವ ಮೇಲಿನ ನಿರೀಕ್ಷೆ ಜೋರಾಗಿದೆ. ಚಿತ್ರವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ.. ಯಾವಾಗ... ಈ ನಿರೀಕ್ಷೆಗೆ ಈಗ ಉತ್ತರವೂ ಸಿಕ್ಕಿದೆ.

    ಅನೌನ್ಸ್ಮೆಂಟ್ ನಂತರ ಚಿತ್ರದ ಬಗ್ಗೆ ಏನು ಅಪ್ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್ಗೆ ನಿರ್ದೇಶಕ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ. ನನ್ನ ಸಹೋದರ ಸಮಾನರಾದ ಎಲ್ಲಾ ಅಭಿಮಾನಿಗಳಿಗೆ ಅತೀ ಶೀಘ್ರದಲ್ಲಿ ನನ್ನ ಮತ್ತು ಯುವರಾಜ್ಕುಮಾರ್ ಕಾಂಬಿನೇಷನ್ ಚಿತ್ರದ ಎಲ್ಲಾ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಚಿತ್ರದ ಅಪ್ಡೇಟ್ ಸಿಗಲಿದೆ ಎಂದು ಸೂಚನೆ ನೀಡಿದ್ದಾರೆ.

    ಹೊಂಬಾಳೆಯನ್ನು ತಮ್ಮದೇ ಸಂಸ್ಥೆ ಎಂಬಂತೆ ಪ್ರೀತಿಸಿದ್ದರು ಪುನೀತ್ ರಾಜಕುಮಾರ್. ಈಗ ಅದೇ ಸಂಸ್ಥೆಯ ಮೂಲಕ ಯುವರಾಜಕುಮಾರ್ ಎಂಟ್ರಿ ಕೊಡುತ್ತಿದ್ದಾರೆ.ಸಂತೋಷ್ ಆನಂದರಾಮ್ ಹಾಕಿರುವ ಫೋಟೋದಲ್ಲಿರುವವರೆಲ್ಲ ಯುವ ಫಸ್ಟ್ ಸಿನಿಮಾ ಟೀಂನಲ್ಲೂ ಇರುತ್ತಾರಾ? ನಿರೀಕ್ಷೆಯಂತೂ ಇದೆ. ಬ್ರೇಕಿಂಗ್ ನ್ಯೂಸ್ ಯಾವಾಗ ಹೊರಬೀಳಲಿದೆ.. ಕಾಯುತ್ತಿದ್ದಾರೆ ದೊಡ್ಮನೆ ಫ್ಯಾನ್ಸ್.

  • ಯುವರತ್ನ : ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು

    ಯುವರತ್ನ : ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು

    ಯುವರತ್ನ ರಿಲೀಸ್ ಆಗಿದೆ. ಸರ್ಕಾರ ಒಂದಿಷ್ಟು ನಷ್ಟವನ್ನು ಮಾಡಿತಾದರೂ ಅಭಿಮಾನಿ ದೇವರುಗಳು ಅದನ್ನೂ ಮೀರಿ ನಿಂತಿದ್ದಾರೆ. ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು ಒಂದೆರಡಲ್ಲ.

    ಸರ್ಕಾರ ದಿಢೀರ್ 50% ಎಂದಾಗ ಎಲ್ಲರಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಪುಟ್ಟ ಪುಟಾಣಿ ಅಭಿಮಾನಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು. ಅದರ ಜೊತೆಯಲ್ಲೇ ಅದಾಗಲೇ ಸಿನಿಮಾ ನೋಡಿದ್ದ ಗೃಹಿಣಿಯರು, ಹಿರಿಯರು.. ಅದರಲ್ಲೂ ವಿಶೇಷವಾಗಿ ಶಿಕ್ಷಕರು ಚಿತ್ರದ ಬಗ್ಗೆ ಸ್ವತಃ ಮಾತನಾಡುತ್ತಾ ಹೋದರು.

    ಇದರ ಮಧ್ಯೆ ಕೆಲವೆಡೆ ಹಳ್ಳಿಗಳಿಂದ ಜನ ಟ್ರ್ಯಾಕ್ಟರ್‍ನಲ್ಲಿ ಬಂದು ಸಿನಿಮಾ ನೋಡುತ್ತಿದ್ದಾರೆ. ಇದು ರಾಜ್, ವಿಷ್ಣು ಕಾಲದ ಚಿತ್ರೋದ್ಯಮನವನ್ನು ನೆನಪಿಸಿದೆ. ಮತ್ತೊಂದೆಡೆ ಮೈಸೂರಿನಲ್ಲಿ ಪುನೀತ್ ಅಭಿಮಾನಿಯಾಗಿದ್ದು ಮೃತಪಟ್ಟ ಹುಡುಗನ ಫೋಟೋ ಇಟ್ಟುಕೊಂಡು ಸಿನಿಮಾ ನೋಡಿದ್ದು, ಪ್ರತಿಯೊಬ್ಬರಲ್ಲೂ ಕಣ್ಣೀರು ತರಿಸಿದೆ.

    ಹುಬ್ಬಳ್ಳಿಯಲ್ಲಿ ಜೈ ರಾಜವಂಶ ಅಭಿಮಾನಿ ಸಂಘದ ಸದಸ್ಯರು 15 ಅಂಗವಿಕಲರಿಗೆ ಕೃತಕ ಕಾಲು ಜೋಡಿಸಿ, ಯುವರತ್ನಕ್ಕೆ ಶುಭ ಕೋರಿದ್ದಾರೆ. ಅಭಿಮಾನಿಗಳಿಗಾಗಿ ಸ್ವತಃ 100 ಟಿಕೆಟ್ ಖರೀದಿಸಿ ವಿತರಿಸಿದ್ದಾರೆ.

    ಒಂದು ಸಿನಿಮಾ ಹಿಟ್ ಆಗಬೇಕು ಎಂದರೆ ಕುಟುಂಬದವರೆಲ್ಲ ಚಿತ್ರಮಂದಿರಕ್ಕೆ ಬರಬೇಕು. ಯುವರತ್ನ ಚಿತ್ರ ಅದನ್ನು ಮಾಡಿದೆ.

  • ಯುವರತ್ನ ಅಪ್ ಡೇಟ್

    yuvaratna dubbng resumes

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಅಪ್‍ಡೇಟ್ ಕೊಡಿ ಎಂದು ಅಪ್ಪು ಫ್ಯಾನ್ಸ್ ನಿರ್ದೇಶಕ ಸಂತೋಷ್ ಆನಂದ ರಾಮ್ ಬೆನ್ನು ಹತ್ತಿದ್ದಾರೆ. ರಾಜಕುಮಾರ ನಂತರ ಜೊತೆಯಾಗಿರೋ ತ್ರಿಮೂರ್ತಿಗಳ ಕಾಂಬಿನೇಷನ್ ಸಿನಿಮಾ ಅದು. ನಿರೀಕ್ಷೆ ಸಹಜವೇ.

    ಈಗ ಚಿತ್ರದ 2ನೇ ಹಂತದ ಡಬ್ಬಿಂಗ್ ಶುರುವಾಗಿದೆಯಂತೆ. ಇದು ಸದ್ಯದ ಅಪ್‍ಡೇಟ್. ಪುನೀತ್ ಜೊತೆ ಸೋಷಿಯಲ್ ಡಿಸ್ಟೆನ್ಸ್‍ನಲ್ಲಿರೋ ಫೋಟೋ ಶೇರ್ ಮಾಡಿರುವ ಸಂತೋಷ್, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ. ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, ಸಂತೋಷ್ ಆನಂದ್‍ರಾಮ್ ಮತ್ತೆ ಜೊತೆಯಾಗಿರುವ ಚಿತ್ರ ಯುವರತ್ನ.

     

  • ಯುವರತ್ನ ಕ್ರೇಜ್ : ಥಿಯೇಟರೇ ಕಾಣ್ತಿಲ್ಲ..!

    ಯುವರತ್ನ ಕ್ರೇಜ್ : ಥಿಯೇಟರೇ ಕಾಣ್ತಿಲ್ಲ..!

    ಸ್ಟಾರ್ ನಟರ ಚಿತ್ರವನ್ನು ಅಭಿಮಾನಿಗಳು ಹಬ್ಬದಂತೆಯೇ ಸ್ವಾಗತಿಸುತ್ತಾರೆ. ಇನ್ನು ಈಗ ಬರುತ್ತಿರೋದು ಪುನೀತ್ ರಾಜ್‍ಕುಮಾರ್ ಸಿನಿಮಾ. ಪುನೀತ್ ಅವರನ್ನು ಸ್ಟಾರ್ ನಟ, ಡಾ.ರಾಜ್ ಪುತ್ರ, ಶಿವಣ್ಣನ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಮನೆಮಗನಂತೆ ಕಾಣುವವರ ಸಂಖ್ಯೆ ಹೆಚ್ಚು. ಹೀಗಾಗಿಯೇ ಈ ಬಾರಿ ಯುವರತ್ನನ ಕ್ರೇಜ್ ಬೇರೆಯೇ ಲೆವೆಲ್‍ನಲ್ಲಿದೆ.

    ಚಾಮರಾಜನಗರದಲ್ಲಂತೂ ಥಿಯೇಟರೇ ಕಾಣಿಸದಂತೆ ಥಿಯೇಟರ್‍ನ್ನು ಪೋಸ್ಟರ್, ಕಟೌಟುಗಳಿಂದ ಅಭಿಮಾನಿಗಳು ಮುಚ್ಚಿಬಿಟ್ಟಿದ್ದಾರೆ. ಹಾಸನ, ಬಳ್ಳಾರಿಗಳಲ್ಲೂ ಇದೇ ಪರಿಸ್ಥಿತಿ.

    ಕಟೌಟ್‍ಗಳನ್ನು ನಿರ್ಮಾಪಕರೇ ಹಾಕಬೇಕೆಂದೇನೂ ಇಲ್ಲ. ಅಭಿಮಾನಿಗಳೂ ನಿಲ್ಲಿಸಿದ್ದಾರೆ. ಇನ್ನು ಮಲ್ಟಿಪ್ಲೆಕ್ಸುಗಳಲ್ಲಿ ಮಕ್ಕಳು, ಯುವರತ್ನನ ಸ್ಟಾಂಡೀ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಯುವರತ್ನ ಚಿತ್ರದ ಯಶಸ್ಸಿಗೆ ಪೂಜೆ, ಪುನಸ್ಕಾರಗಳೂ ನಡೆಯುತ್ತಿವೆ. ಪವರ್ ಆಫ್ ಯೂಥ್.. ಅಷ್ಟೆ..

  • ಯುವರತ್ನ ಚಿತ್ರದ ಕಥೆಯ ಗುಟ್ಟು ರಟ್ಟಾಯ್ತು..!

    what is yuvaratna story

    ಯುವರತ್ನ ಚಿತ್ರಕ್ಕೆ ಅಭಿಮಾನಿಗಳು ಅದೆಷ್ಟು ಕಾತರದಿಮದ ಕಾಯುತ್ತಿದ್ದಾರೆಂದರೆ, ನಿರ್ದೇಶಕರಿಗೇ ಟೆನ್ಷನ್ ಶುರುವಾಗಿದೆ. ಅಭಿಮಾನಿಗಳೇ ಒಂದು ರಿಲೀಸ್ ಡೇಟ್ ಫಿಕ್ಸ್ ಮಾಡಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಿಟ್ಟಿನಲ್ಲಿ ನಿರ್ದೇಶಕರಿಗೇ ಮೆಸೇಜ್ ಮಾಡುತ್ತಿದ್ದಾರೆ. ಹಾಗೆಲ್ಲ ಮಾಡಬೇಡಿ, ಒಳ್ಳೆಯ ಸಿನಿಮಾ ಬರಲಿದೆ ಎಂದು ಹೇಳಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಥೆಯ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.

    ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ, ವೃದ್ಧಾಶ್ರಮದ ಕಥೆಯಿತ್ತು. ಯುವರತ್ನ ಚಿತ್ರದಲ್ಲಿ ಎಜುಕೇಷನ್ ಮಾಫಿಯಾ ಹಾಗೂ ಅದರ ವಿರುದ್ಧ ನಾಯಕ ಹೇಗೆಲ್ಲ ಹೋರಾಡುತ್ತಾನೆ ಎನ್ನುವ ಕಥೆಯಿದೆ. ಈ ಮಾಫಿಯಾದಿಂದಾಗಿಯೇ ಹೈಯರ್ ಎಜುಕೇಷನ್ ಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ಕಥೆಯನ್ನು ಕಟ್ಟಿಕೊಟ್ಟಿದ್ದೇವೆ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

    ಹೀರೋ ಪುನೀತ್, ಡೈರೆಕ್ಟರ್ ಸಂತೋಷ್ ಮತ್ತು ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ರಾಜಕುಮಾರ ನಂತರ ಜೊತೆಯಾಗಿರುವ ತ್ರಿಮೂರ್ತಿಗಳ ಜೋಡಿ. ಜೊತೆಗೆ ಅತಿ ದೊಡ್ಡ ತಾರಾಬಳಗ. ದಸರಾಗೆ ಟೀಸರ್ ಬಿಡುತ್ತಿರುವ ಚಿತ್ರತಂಡ, ರಿಲೀಸ್ ಡೇಟ್‍ನ್ನು ಇನ್ನೂ ಅನೌನ್ಸ್ ಮಾಡಿಲ್ಲ.

  • ಯುವರತ್ನ ಟೀಂಗೆ ಇನ್ನೊಬ್ಬರು ಸ್ಟಾರ್ ಎಂಟ್ರಿ..!

    yuvaratna completes 3rd schedule

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್‍ಗಳೇ ಇದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಈಗ ಯಾವ ಸ್ಟಾರ್‍ಗಳಿಗೂ ಕಡಿಮೆಯೇನಲ್ಲ. ಜೊತೆಗೆ ರಾಧಿಕಾ ಶರತ್‍ಕುಮಾರ್, ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಸಯೇಷಾ ಸೈಗಲ್ ನಾಯಕಿ.

    ಇಷ್ಟೆಲ್ಲ ಸ್ಟಾರ್‍ಗಳ ಜೊತೆ ಇನ್ನೊಬ್ಬರು ಖ್ಯಾತ ಕಲಾವಿದರು ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಅವರ್ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. 

    ಅಂದಹಾಗೆ ಯುವರತ್ನ ಚಿತ್ರಕ್ಕೆ 10 ಶೆಡ್ಯೂಲ್‍ಗಳಲ್ಲಿ ಒಟ್ಟು 100 ದಿನ ಶೂಟಿಂಗ್ ನಡೆಯಲಿದೆ. ಸದ್ಯಕ್ಕೆ 3 ಹಂತದ ಶೂಟಿಂಗ್ ಮುಗಿದಿದೆ. ಕ್ರಿಸ್‍ಮಸ್‍ಗೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.

  • ಯುವರತ್ನ ಟೀಂಗೆ ಸಾಯಿಕುಮಾರ್, ರಂಗಾಯಣ ರಘು

    saikumar joins yuvaratna movie cast

    ಯುವರತ್ನ ಚಿತ್ರದ ತಾರಾಬಳಗ ದೊಡ್ಡದು..ದೊಡ್ಡದು.. ಇನ್ನೂ ದೊಡ್ಡದಾಗುತ್ತಿದೆ. ಪುನೀತ್ ರಾಜ್‍ಕುಮಾರ್‍ಗೆ ಸಯೇಷಾ ಜೋಡಿ. ಇನ್ನು ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ, ವಸಿಷ್ಠ ಸಿಂಹ, ತ್ರಿವೇಣಿ ರಾವ್.. ಹೀಗೆ ದೊಡ್ಡ ತಾರಾಬಳಗವೇ ಇದೆ.

    ಇವರೆಲ್ಲರ ಜೊತೆಯಲ್ಲೀಗ ಸಾಯಿ ಕುಮಾರ್ ಸೇರಿಕೊಂಡಿದ್ದಾರೆ. ಪುನೀತ್ ಚಿತ್ರದಲ್ಲಿ ಸಾಯಿಕುಮಾರ್ ನಟಿಸುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲ, ರಂಗಾಯಣ ರಘು ಕೂಡಾ ಯುವರತ್ನ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ.

    ಸಂತೋಷ್ ಆನಂದ್‍ರಾಮ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು ಮತ್ತು ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಸಿನಿಮಾದ ಕ್ಯಾನ್‍ವಾಸ್ ದೊಡ್ಡದಾಗುತ್ತಲೇ ಇದೆ.

  • ಯುವರತ್ನ ತೆಲುಗು ರೈಟ್ಸ್ ಯಾರಿಗೆ ಸಿಕ್ತು..? 

    ಯುವರತ್ನ ತೆಲುಗು ರೈಟ್ಸ್ ಯಾರಿಗೆ ಸಿಕ್ತು..? 

    ಯುವರತ್ನ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ತೆಲುಗು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ, ಅಫ್ಕೋರ್ಸ್, ಪುನೀತ್ ಅವರ ಹಲವು ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ಆದರೂ, ಥಿಯೇಟರಿಗೆ ಎಂಟ್ರಿ ಕೊಡ್ತಿರೋ ಫಸ್ಟ್ ಮೂವಿ ಯುವರತ್ನ. ಯುವರತ್ನ ಚಿತ್ರತಂಡಕ್ಕೀಗ ಗುಡ್ ನ್ಯೂಸ್ ಸಿಕ್ಕಿದೆ. ಯುವರತ್ನ ಚಿತ್ರದ ತೆಲುಗು ಡಿಸ್ಟ್ರಿಬ್ಯೂಷನ್ ಹಕ್ಕನ್ನು ವಾರಾಹಿ ಸಂಸ್ಥೆ ಖರೀದಿಸಿದೆ ಎಂಬ ಸುದ್ದಿ ಬಂದಿದೆ.

    ವಾರಾಹಿ ಸಂಸ್ಥೆಗೂ, ಹೊಂಬಾಳೆ ಫಿಲಂಸ್ಗೂ ಅವಿನಾಭಾವ ಸಂಬಂಧವಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡಿದ್ದುದು ಇದೇ ಸಂಸ್ಥೆ. ಬಾಹುಬಲಿಯಂತಾ ಸಿನಿಮಾ ಮಾಡಿದ ವಾರಾಹಿ, ತೆಲುಗು ಮಾರ್ಕೆಟ್ನಲ್ಲಿ ದೊಡ್ಡ ಹೆಸರು ಹೊಂದಿದೆ.

    ಯುವರತ್ನ ಚಿತ್ರದ ಪ್ರಮೋಷನ್ ಶುರುವಾಗಿದ್ದು, ವೈಜಾಗ್ನಲ್ಲಿ ವಾರಾಹಿ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ನಿಜಾಮ್‌ ಜಿಲ್ಲೆಯಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ನೆಲ್ಲೂರು ಜೆಪಿಆರ್ ಫಿಲಂಸ್, ಗುಂಟೂರು ಧನುಶ್ರೀ ಫಿಲಂಸ್, ಕೃಷ್ಣ ಅನ್ನಪೂರ್ಣ ಸ್ಟುಡಿಯೋಸ್ ಲಿಮಿಟೆಡ್, ಪಶ್ಚಿಮ ಗೋವಾದರಿ ಇಶ್ನಾ ಎಂಟರ್‌ಪ್ರೈಸಸ್ ಹಾಗೂ ಪೂರ್ವ ಗೋವಾದರಿ ಮಹಿಕಾ ಮೂವಿಸ್ ಸಂಸ್ಥೆ ಯುವರತ್ನ ಚಿತ್ರವನ್ನು ರಿಲೀಸ್ ಮಾಡಲಿವೆ. ಯುವರತ್ನ ತೆಲುಗು ವಿತರಣೆ ಹಕ್ಕನ್ನು ತೆಲುಗಿನ ಖ್ಯಾತ ಸಂಸ್ಥೆಗಳು ಖರೀದಿಸಿವೆ.

    ಕರ್ನಾಟಕದಲ್ಲಿ ಎಂದಿನಂತೆ ಕಾರ್ತಿಕ್ ಗೌಡ ಅವರ ಕೆಆರ್ಜಿ ಸ್ಟುಡಿಯೋ ಸಿನಿಮಾ ರಿಲೀಸ್ ಮಾಡುತ್ತಿದೆ.

  • ಯುವರತ್ನ ಬುಕ್ಕಿಂಗ್ ಭಲೇ ಜೋರು

    ಯುವರತ್ನ ಬುಕ್ಕಿಂಗ್ ಭಲೇ ಜೋರು

    ಯುವರತ್ನ ರಿಲೀಸ್ ಆಗುತ್ತಿರೋದು ಏಪ್ರಿಲ 1ಕ್ಕೆ. ಅಲ್ಲಿಯವರೆಗೂ ಕಾಯೋಕೆ ಸಿದ್ಧವಿರುವ  ಅಭಿಮಾನಿಗಳು, ಆ ದಿನ ಸಿನಿಮಾ ನೋಡೋದನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾದ ಮರುಕ್ಷಣದಿಂದಲೇ ಟಿಕೆಟ್ ಖರೀದಿ ಜೋರಾಗಿದೆ.

    ಬಹುತೇಕ ಮಲ್ಟಿಪ್ಲೆಕ್ಸ್, ಥಿಯೇಟರುಗಳು ಹೌಸ್‍ಫುಲ್. ಆ ದಿನ ಬೆಳಗ್ಗೆ 6 ಗಂಟೆಗೇ ಕೆಲವೆಡೆ ಶೋ ಶುರುವಾಗಲಿದೆ. ನಟಸಾರ್ವಭೌಮ ನಂತರ ಇದೇ ಮೊದಲ ಬಾರಿಗೆ ತೆರೆಗೆ ಬರುತ್ತಿದ್ದಾರೆ ಪುನೀತ್. ರಾಜಕುಮಾರ ನಂತರ ಸಂತೋಷ್-ಪುನೀತ್-ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.