` ss rajamouli - chitraloka.com | Kannada Movie News, Reviews | Image

ss rajamouli

  • ರಾಜಮೌಳಿ ಕನ್ನಡದ ಕಥೆ ಕದಿಯುವ ಅವಕಾಶವಾದಿ : ಎಸ್.ವಿ.ರಾಜೇಂದ್ರ ಸಿಂಗ್ ಬಾಬು

    rajendra sing babu fires ss rajamouli

    ರಾಜಮೌಳಿ ತಾನು ಕನ್ನಡದವನು, ರಾಯಚೂರಿನವರು ಎಂದು ಹೇಳಿಕೊಳ್ತಾರೆಯೇ ಹೊರತು, ಅವರಿಂದ ಕನ್ನಡಕ್ಕೆ, ಕರ್ನಾಟಕಕ್ಕೆ ಏನು ಉಪಯೋಗವಾಗಿದೆ..? ಅವರಿಗೆ ಕನ್ನಡದ ನಂಟು ನೆನಪಾಗುವುದು ಅವರ ಸಿನಿಮಾ ಬಿಡುಗಡೆ ವೇಳೆ ಮಾತ್ರ. ಅವರಿಗೆ ಕರ್ನಾಟಕ ಒಂದು ಮಾರುಕಟ್ಟೆ.. ಹೀಗೆ ರಾಜಮೌಳಿ ವಿರುದ್ಧ ಕೆಂಡಕಾರಿರುವುದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.

    ಇತ್ತೀಚೆಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಚಿತ್ರರಂಗಕ್ಕೆ ಒಳ್ಳೆಯ ನೆರವು ಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಾಜಮೌಳಿ, ಆಂಧ್ರ ಸಿಎಂಗೆ ಧನ್ಯವಾದ ತಿಳಿಸಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ಎಸ್‍ವಿಆರ್ ಬಾಬು, ರಾಜಮೌಳಿಯವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

    ರಾಜಮೌಳಿ ಕನ್ನಡದಿಂದಲೇ ಕಥೆ, ಚಿತ್ರಕಥೆ, ದೃಶ್ಯಗಳನ್ನು ಯಥಾವತ್ತು ಎತ್ತಿಕೊಳ್ತಾರೆ. ಡಾ.ರಾಜ್ ಕುಮಾರ್ ಅವರ ರಾಜ ನನ್ನ ರಾಜ, ಮಯೂರ ಚಿತ್ರದ ಕಥೆಗಳನ್ನು ಕದ್ದಿದ್ದೀಯ. ಕನ್ನಡದ ಕಾದಂಬರಿಗಳಿಂದಲೂ ದೃಶ್ಯಗಳನ್ನು ಎತ್ತಿಕೊಂಡಿದ್ದೀಯ. ಎತ್ತಿನ ಕೊಂಬಿಗೆ ಬೆಂಕಿ ಹಚ್ಚಿ ಯುದ್ಧ ಮಾಡುವ, ನೀರಿನೊಳಗೆ ಹೋರಾಡುವ ತಂತ್ರಗಳೆಲ್ಲ ಮದಕರಿ ನಾಯಕನ ಯದ್ಧ ತಂತ್ರಗಳು. ಅನಕೃ ಸೇರಿದಂತೆ ಹಲವು ಕಾದಂಬರಿಗಳಲ್ಲಿವೆ. ಅದನ್ನೂ ಹೇಳಿಕೊಳ್ಳಲ್ಲ. ರಾಜಮೌಳಿ ಒಬ್ಬ ಸ್ವಾರ್ಥಿ, ಅವಕಾಶವಾದಿ ಎಂದಿದ್ದಾರೆ ಎಸ್‍ವಿಆರ್ ಬಾಬು.

    ಬಾಬು ಸಿಟ್ಟಿಗೆ ಕಾರಣವೂ ಇದೆ. ಬಾಬು ಈ ಹಿಂದೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸೆಮಿನಾರ್‍ವೊಂದಕ್ಕೆ ಕರೆದರಂತೆ.  ಪ್ರಖ್ಯಾತ ನಿರ್ದೇಶಕರಾದ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ, ಓಂಪ್ರಕಾಶ್ ಮೆಹ್ರ ಅಂತಹವರು ಬಂದರೂ, ರಾಜಮೌಳಿ ಬರಲಿಲ್ಲ. ತಾತ್ಸಾರವಾಗಿ ನೋಡಿದರು. ಈತನಿಗೆ ಕನ್ನಡದ ಮಾರುಕಟ್ಟೆ ಬೇಕೇ ಹೊರತು, ಕನ್ನಡಿಗರು, ಕರ್ನಾಟಕ ಬೇಕಿಲ್ಲ. ಕರ್ನಾಟಕದಿಂದ ಕೋಟಿ ಕೋಟಿ ಬಾಚಿರುವ ಈತ ಕರ್ನಾಟಕದ ಯಾವ ಸಂಕಷ್ಟಕ್ಕೆ ನೆರವಾಗಿದ್ದಾರೆ. ಪ್ರವಾಹದಲ್ಲಾಗಲೀ, ಕೊರೊನಾ ಕಷ್ಟದಲ್ಲಾಗಲೀ.. ಇವರು ಆಂಧ್ರ, ತೆಲಂಗಾಣಕ್ಕೆ ನೆರವು ನೀಡುತ್ತಾರೆಯೇ ಹೊರತು, ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿದ್ದಾರೆಯೇ.. ಎಂದು ಪ್ರಶ್ನಿಸಿದ್ದಾರೆ ಬಾಬು.

  • Not in Rajamouli film says Yash

    not in rajamouli film says yash

    Yash has denied rumors running around in the last two days that the Baahubali director SS Rajamouli has contacted him and offered him a role in his new film. Rajamouli started shooting for his new film starring Junior NTR and Ramcharan just two days ago.

    The rumours started at the same time. Denying the rumours, Yash has said that dragging the name of Rajamouli does not befit anyone and it was wrong to make such wild rumous. He has also said that his concentration is now only on KGF and nothing else.

    KGF is releasing on December 21 and Yash wants all focus on it. So he is not talking about his other future projects in Kannada also. So the rumour has rightly caught him off guard requiring him to issue a denial.

     

  • Rajamouli Releases the First Look of Sudeep in Bahubali

    Bahubali image

    Ace director S S Rajamouli whose forthcoming film 'Bahubali' which is creating a lot of hype among the public has silently released the first look of actor Sudeep in the film.

    Sudeep has played the role of a Persian noble called Aslam Khan and Rajamouli on Saturday released the first look of Sudeep in the film. Apart from releasing the first look, Rajamouli has also thanked the actor for playing a small role in the film. 'On my request, Kiccha Sudeep did a small guest appearance in Baahubali - The Beginning. Thank you so much!!' says Rajamouli in his Face Book message.

    Rajamouli has also announced that the trailer of the film is all set to be launched on the 31st of May.

  • Sudeep Not Part Of Baahubali 2?

    actor sudeep image

    It seems Sudeep will not be part of the Telugu film Baahubali's second part. Sudeep himself has replied to a fan that if he was part of it, he should have heard from the film maker by now.

    SS Rajamouli the director had cast Sudeep in his earlier Telugu film Eega. Sudeep made a cameo role in Baahubali part 1 and there were hints in it that his character would continue. The first promo of the second part is expected to be released for actor Prabhas' birthday next month. The first part had become the highest grossing Indian film.

  • ಆರ್.ಆರ್.ಆರ್. ಆಸ್ಕರ್ ಕ್ಯಾಂಪೇನ್ : ರಾಜಮೌಳಿಯನ್ನು ಟೀಕಿಸಿದ ನಿರ್ದೇಶಕ

    ಆರ್.ಆರ್.ಆರ್. ಆಸ್ಕರ್ ಕ್ಯಾಂಪೇನ್ : ರಾಜಮೌಳಿಯನ್ನು ಟೀಕಿಸಿದ ನಿರ್ದೇಶಕ

    ಆಸ್ಕರ್ ಪ್ರಶಸ್ತಿ ಘೋಷಣೆಯ ದಿನ ಹತ್ತಿರವಾಗುತ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಇಡೀ ಆರ್.ಆರ್.ಆರ್. ತಂಡ ಈಗ ಅಮೆರಿಕದಲ್ಲಿದೆ. ಆರ್.ಆರ್.ಆರ್. ಚಿತ್ರದ ನಾಟು ನಾಟು.. ಹಾಡು ಪ್ರಶಸ್ತಿ ರೇಸ್‍ನಲ್ಲಿರುವುದೇ ಇದಕ್ಕೆ ಕಾರಣ. ಆರ್.ಆರ್.ಆರ್. ಮತ್ತು ಆಸ್ಕರ್ ರೇಸ್ ಎರಡರ ನಡುವೆ ಕಥೆ ಇದೆ. ಕೇವಲ ಪ್ರಶಸ್ತಿ ಸುತ್ತಿಗೆ ಹೋಗುವುದಲ್ಲ, ಚಿತ್ರವನ್ನು ಕ್ಯಾಂಪೇನ್ ಮಾಡಬೇಕು. ಆ ನಿಟ್ಟಿನಲ್ಲಿ ಆರ್.ಆರ್.ಆರ್. ತಂಡ ಶ್ರಮವಹಿಸಿದೆ. ಹಾಗಂತ ಅದು ಸುಮ್ಮನೆ ಆಗುವ ಮಾತಲ್ಲ, ಖರ್ಚಾಗುತ್ತೆ. ಅದು ಕೋಟಿ ಕೋಟಿಗಳಲ್ಲಿಯೇ ಇರುತ್ತೆ. ಆರ್.ಆರ್.ಆರ್. ತಂಡ ಖರ್ಚನ್ನೂ ಮಾಡಿದೆ. ಆದರೆ ಆ ಖರ್ಚು ಕೆಲವರ ಕೆಂಗಣ್ಣಿಗೂ ಗುರಿಯಾಗಿದೆ.

    ಆಸ್ಕರ್ ಕ್ಯಾಂಪೇನ್‌ಗಾಗಿ ಆರ್‌ಆರ್‌ಆರ್ ಸಿನಿಮಾ ತಂಡವು 80 ಕೋಟಿ ರೂ. ಖರ್ಚು ಮಾಡಿದೆ. ಆ 80 ಕೋಟಿ ರೂ.ಗಳನ್ನು ಕೊಟ್ಟರೆ 8 ಸಿನಿಮಾ ಮಾಡುತ್ತೇವೆ.

    ಇಂತಾದ್ದೊಂದು ಮಾತು ಹೇಳಿರುವ ನಿರ್ದೇಶಕನ ಹೆಸರು ತಮ್ಮಾರೆಡ್ಡಿ ಭಾರದ್ವಾಜ್. ಈತ ನಿರ್ಮಾಪಕನೂ ಹೌದು. ಇತ್ತೀಚೆಗೆ ರವೀಂದ್ರ ಭಾರತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಿರಿಯ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ ನಡೆದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ ತಮ್ಮಾರೆಡ್ಡಿ. ತಮ್ಮಾರೆಡ್ಡಿ 90ರ ದಶಕದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ. ಶಿವ ಶಕ್ತಿ, ಪಚನಿ ಸಂಸಾರಂ, ಊರ್ಮಿಳಾ, ವೇಟಗಾಡು, ಸ್ವರ್ಣಮುಖಿ, ಎಂಥಾ ಬಾಗುಂದೋ, ಪೋತೆ ಪೋನಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರತಿಘಟನ ಅವರ ನಿರ್ದೇಶನದ ಕೊನೇ ಸಿನಿಮಾ.

    ಇದಕ್ಕೆ ಪರ ವಿರೋಧ ಹೇಳಿಕೆಗಳೂ ವ್ಯಕ್ತವಾಗುತ್ತಿವೆ. ಆಸ್ಕರ್ ಪ್ರಶಸ್ತಿಗಾಗಿ ಖರ್ಚು ಮಾಡುವುದರಲ್ಲಿ ತಪ್ಪೇನಿದೆ.. ಭಾರತೀಯ ಸಿನಿಮಾ ಪ್ರಮೋಟ್ ಮಾಡಿದರೆ ಭಾರತೀಯ ಸಿನಿಮಾಗಳಿಗೆ ಲಾಭವೇ ತಾನೇ.. ಅವರ ದುಡ್ಡು.. ಅವರ ಜಾತ್ರೆ.. ಮಧ್ಯೆ ನಿಮ್ಮದೇನು.. ಎನ್ನುವವರಿಗೇನು ಕೊರತೆಯಿಲ್ಲ. ಹೌದು..ಹೌದು. ಅವರು ಹೇಳ್ತಿರೋದು ಸರಿ. ಇಷ್ಟಕ್ಕೂ ನಮ್ಮ ಭಾರತೀಯ ಸಿನಿಮಾಗೆ ಫಾರಿನ್ನಿವರ ಮೆಚ್ಚುಗೆ ಕಟ್ಟಿಕೊಂಡು ನಮಗೇನಾಗಬೇಕು. ಹಾಲಿವುಡ್ ಮಂದಿ ಮೆಚ್ಚಿದರಷ್ಟೇ ಒಳ್ಳೆಯ ಸಿನಿಮಾ ಎಂಬ ಭಾವನೆ ಬಿಡಬೇಕು. ಅಷ್ಟು ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿ, ಪ್ರಶಸ್ತಿಗೂ ಕೋಟಿ ಕೋಟಿ ಸುರಿಯಬೇಕಾ ಅನ್ನೋವ್ರೂ ಇದ್ದಾರೆ. ಇದೆಲ್ಲದರ ಮಧ್ಯೆ ಮಾರ್ಚ್ 17ರಂದು ಆಸ್ಕರ್ ಘೋಷಣೆಯಾಗಲಿದೆ.

  • ಉಪ್ಪಿ ಐ ಲವ್ ಯೂ ಹಾಡು ಬಿಡುಗಡೆಗೆ ರಾಜಮೌಳಿ

    rajamouli to release i love you songs

    ಉಪೇಂದ್ರ-ಆರ್.ಚಂದ್ರು-ರಚಿತಾ ರಾಮ್ ಕಾಂಬಿನೇಷನ್‍ನ ಐ ಲವ್ ಯೂ ಸಿನಿಮಾದ ಆಡಿಯೋ ಲಾಂಚ್‍ಗೆ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಬರುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಐ ಲವ್ ಯೂ ಚಿತ್ರದ ಆಡಿಯೋ ಲಾಂಚ್‍ನ್ನೇ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ ಚಂದ್ರು. ಜನವರಿ 12ರಂದು, ದಾವಣಗೆರೆಯಲ್ಲಿ ಆಡಿಯೋ ಲಾಂಚ್ ಆಗಲಿದೆ. 

    `ರಾಜಮೌಳಿ ಅವರನ್ನು ನಾನೇ ಕೇಳಿಕೊಂಡೆ. ಅವರು ಬಳ್ಳಾರಿಯಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ನಾನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದಾಗ ಓಕೆ ಎಂದು ಒಪ್ಪಿಕೊಂಡರು' ಎಂದು ವಿವರ ನೀಡಿದ್ದಾರೆ ಆರ್.ಚಂದ್ರು.

    ಆಡಿಯೋ ಲಾಂಚ್‍ಗೆ ರಜನಿಕಾಂತ್ ಅವರನ್ನೂ ಆಹ್ವಾನಿಸಲು ಚಿಂತನೆ ನಡೆದಿದೆ. ಉಪೇಂದ್ರ ಅವರು ರಜನಿ ಸಂಪರ್ಕದಲ್ಲಿದ್ದಾರೆ. ಅದೇ ದಿನ ರಜನಿಕಾಂತ್‍ರ ಪೆಟ್ಟಾ ರಿಲೀಸ್ ಇದೆ. ಬರುತ್ತಾರೋ.. ಇಲ್ಲವೋ.. ಕನ್‍ಫರ್ಮ್ ಇಲ್ಲ ಎಂದಿದ್ದಾರೆ ಚಂದ್ರು. ಚಿತ್ರವನ್ನು ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧಗೊಂಡಿದೆ.

  • ಕೆಜಿಎಫ್‍ನ್ನು ಹಿಂದಿಗೆ ಕಳಿಸಿದ್ದೇ ರಾಜಮೌಳಿ

    is rajamouli the reason for kgf to go pan india

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಿಂದಿಯಲ್ಲೂ ಭರ್ಜರಿ ಸದ್ದು ಮಾಡ್ತಿದೆ. ಹಿಂದಿಯಲ್ಲಿ ರಿಲೀಸ್ ಮಾಡ್ತಿರೋದು ಫರ್ಹಾನ್ ಅಖ್ತರ್ ಮತ್ತು ಅನಿಲ್ ತಡಾನಿ. ತೆಲುಗಿನಲ್ಲಿ ರಿಲೀಸ್ ಮಾಡ್ತಿರೋದು ರಾಜಮೌಳಿ ಅವರ ಆಪ್ತಮಿತ್ರರೂ ಆಗಿರುವ ಶೋಭು ಯಾರ್ಲಗಡ್ಡ ಮತ್ತು ಸಾಯಿ. ಇದಕ್ಕೆ ಕಾರಣ ಯಾರು ಎಂದರೆ, ಅದು ಒನ್ & ಓನ್ಲಿ ರಾಜಮೌಳಿ.

    ರಾಜಮೌಳಿ ತಮ್ಮ ಹೊಸ ಸಿನಿಮಾ ಆರ್‍ಆರ್‍ಆರ್ ಕಥೆಯ ಡಿಸ್ಕಷನ್‍ಗಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿದ್ದರಂತೆ. ಆಗ ಅದೇ ಹೋಟೆಲ್‍ನಲ್ಲಿದ್ದ ಯಶ್, ಕೆಜಿಎಫ್ ಚಿತ್ರದ ರಷಸ್‍ಗಳನ್ನು ತೋರಿಸಿದ್ರಂತೆ. ಆ ರಷಸ್‍ಗಳು ರಾಜಮೌಳಿಯವರನ್ನು ಇಂಪ್ರೆಸ್ ಮಾಡಿಬಿಟ್ಟವು. ಇದು ಯುನಿವರ್ಸಲ್ ಸಿನಿಮಾ ಎಂದು ಪರಿಗಣಿಸಿದ ರಾಜಮೌಳಿ, ತಕ್ಷಣವೇ ಅನಿಲ್ ತಡಾನಿ, ಶೋಭಾ ಯಾರ್ಲಗುಡ್ಡ, ಸಾಯಿ ಅವರಿಗೆಲ್ಲ ಫೋನ್ ಮಾಡಿ ಹೇಳಿದರು. ಹೀಗಾಗಿ ಕನ್ನಡ ಸಿನಿಮಾ.. ತೆಲುಗು, ಹಿಂದಿಗೂ ಹೋಯ್ತು.

    ಇದು ಸ್ವತಃ ರಾಜಮೌಳಿ ಹೇಳಿರುವ ಕಥೆ. ತೆಲುಗಿನಲ್ಲಿ ಕೆಜಿಎಫ್ ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ರಾಜಮೌಳಿ ಇದಿಷ್ಟೂ ವಿಷಯ ಹೇಳಿದ್ದಾರೆ.

  • ಯುವ ರಾಜಕುಮಾರನ ಬೆನ್ನು ತಟ್ಟಿದ ರಾಜಮೌಳಿ

    Rajamouli Appreciates Yuva Rajkumar

    ಯುವ ರಣಧೀರ ಕಂಠೀರವ ಚಿತ್ರದ ಟ್ರೇಲರ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಯುವ ರಾಜ್‍ಕುಮಾರ್, ಅಭಿಮಾನಿಗಳ ಪ್ರೀತಿಯನ್ನಷ್ಟೇ ಅಲ್ಲ, ಚಿತ್ರರಂಗದ ದಿಗ್ಗಜರ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

    ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣರಂತಹ ಸೀನಿಯರ್ ನಟರು ಮೆಚ್ಚಿದ ಟೀಸರ್‍ನ್ನು, ಈಗ ರಾಜಮೌಳಿ ಕೂಡಾ ಮೆಚ್ಚಿ ಕೊಂಡಾಡಿದ್ದಾರೆ.

    ಆರ್‍ಆರ್‍ಆರ್ ಸಿನಿಮಾ ಸೆಟ್‍ನಲ್ಲಿ ರಾಜಮೌಳಿಯನ್ನು ಭೇಟಿ ಮಾಡಿರುವ ಯುವರಾಜ್ ಕುಮಾರ್, ಸಿನಿಮಾ ಟೀಸರ್‍ನ್ನು ತೋರಿಸಿದ್ದಾರೆ. ಟೀಸರ್ ನೋಡಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದರಂತೆ ರಾಜಮೌಳಿ. ಸಿನಿಮಾದ ನಿರ್ದೇಶಕ ರುದ್ರನಾಗ್ ಅವರ ಕೌಶಲ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಜಮೌಳಿ.

  • ರಾಜಕುಮಾರ ನಿರ್ಮಾಪಕನ ಜೊತೆ ರಾಜಮೌಳಿ

    raajkumara producer withrakamouli

    ರಾಜಕುಮಾರ ಶತದಿನೋತ್ಸವದತ್ತ ಮುನ್ನುಗ್ಗುತ್ತಿರುವಾಗಲೇ, ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ, ರಾಜಮೌಳಿಯನ್ನು ಭೇಟಿಯಾಗಿ ಬಂದಿದ್ದಾರೆ. ರಾಜಕುಮಾರನ ಶತದಿನೋತ್ಸವ ಸಂಭ್ರಮಕ್ಕೆ ರಾಜಮೌಳಿ ಬರಲಿದ್ದಾರೆ ಎನ್ನುವ ನಿರೀಕ್ಷೆ, ಸ್ಯಾಂಡಲ್​ವುಡ್​ನಲ್ಲಿದೆ.

    ಕನ್ನಡದ ಬಾಕ್ಸಾಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿದ ಪುನೀತ್ ರಾಜಕುಮಾರನ ಸಂಭ್ರಮಕ್ಕೆ ರಾಜಮೌಳಿ ವಿಶೇಷ ಅತಿಥಿಯಾಗುತ್ತಾರಾ..? ಅದು ಒಂದು ನಿರೀಕ್ಷೆಯಾದರೆ, ಇನ್ನೊಂದು ನಿರೀಕ್ಷೆ, ರಾಜಮೌಳಿ ಕನ್ನಡದಲ್ಲಿ ಸಿನಿಮಾ ಮಾಡ್ತಾರಾ ಅನ್ನೋದು. ನಿರೀಕ್ಷೆಗಳು ಗರಿಗೆದರಿವೆ.

  • ರಾಜಮೌಳಿ ಚಿತ್ರದಲ್ಲಿ ಕಿಚ್ಚ : ಸುದೀಪ್ ರಿಯಾಕ್ಷನ್

    kichcha sudeep image

    ಕಿಚ್ಚ ಸುದೀಪ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯ ಗೊತ್ತಿರುವಂಥದ್ದೇ. ಸುದೀಪ್ ವೃತ್ತಿ ಜೀವನದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟವರು ರಾಜಮೌಳಿ. ಈಗದ ನಂತರ ಬಾಹುಬಲಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸುದೀಪ್. ಅದು ಸ್ನೇಹಪೂರ್ವಕವಾಗಿ. ಈ ಸ್ನೇಹದ ಕಾರಣಕ್ಕೇ ಅದೊಂದು ಸುದ್ದಿ ಹಬ್ಬಿತ್ತು.

    ಸದ್ಯಕ್ಕೆ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‍ಆರ್‍ಆರ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಆಫರ್‍ಗಾಗಿ ಸುದೀಪ್ ತಮ್ಮ ಡೇಟ್ಸ್ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಎಂದೆಲ್ಲ ಸುದ್ದಿಗಳು ಹಬ್ಬಿದ್ದವು. ಈಗ ಆ ಎಲ್ಲ ಸುದ್ದಿಗಳಿಗೆ ಸ್ವತಃ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಆರ್‍ಆರ್‍ಆರ್ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಎಂಬ ಸುದ್ದಿಗೆ ಎಕ್ಸೈಟ್ ಆದವರಿಗೆಲ್ಲ ಒಂದು ಮಾತು. ನನ್ನನ್ನು ಆರ್‍ಆರ್‍ಆರ್ ಚಿತ್ರಕ್ಕಾಗಿ ರಾಜಮೌಳಿ ಸಂಪರ್ಕಿಸಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಆ ಚಿತ್ರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  • ರಾಜಮೌಳಿ ಜೊತೆ ಪ್ರಿಯಾಮಣಿ - 12-12-12ಕ್ಕೆ ಕಾಯಿರಿ..!

    will priyamani act in rajamoul's movie

    ಪ್ರಿಯಾಮಣಿ ಮತ್ತೊಮ್ಮೆ ರಾಜಮೌಳಿ ಚಿತ್ರದಲ್ಲಿ ನಟಿಸುತ್ತಿದ್ದಾರಾ..? ಇಂಥಾದ್ದೊಂದು ಸುದ್ದಿಗೆ ಪ್ರಿಯಾಮಣಿ ಹೇಳಿರೋದಿಷ್ಟು. ``ರಾಜಮೌಳಿ ಚಿತ್ರದಲ್ಲಿ ನಾನಿರುತ್ತೇನೋ ಇಲ್ವೋ ಗೊತ್ತಿಲ್ಲ. ಅವರು ಅವಕಾಶ ಕೊಟ್ಟರೆ ನಾನು ರೆಡಿ. ಸದ್ಯಕ್ಕಂತೂ ಯಾವುದೂ ಫೈನಲ್ ಆಗಿಲ್ಲ''. 

    ಪ್ರಿಯಾಮಣಿ ಈ ಹಿಂದೆ ರಾಜಮೌಳಿಯವರ ಯಮದೊಂಗ ಚಿತ್ರದಲ್ಲಿ ನಟಿಸಿದ್ದರು. ಜ್ಯೂ.ಎನ್‍ಟಿಆರ್‍ಗೆ ನಾಯಕಿಯಾಗಿದ್ದರು. ಮತ್ತೊಮ್ಮೆ ಅವಕಾಶ ಸಿಕ್ಕರೆ ಬಿಡೋದಿಲ್ಲ ಎಂದಿದ್ದಾರೆ ಪ್ರಿಯಾಮಣಿ.

    ಇದು ಕನ್‍ಫರ್ಮ್ ಆಗೋದು ಇದೇ ಡಿಸೆಂಬರ್ 12ಕ್ಕೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮಾಹಿತಿಯನ್ನೆಲ್ಲ ಹೇಳಲಿದ್ದಾರಂತೆ ರಾಜಮೌಳಿ. ವೇಯ್ಟಿಂಗ್.