` chikkanna - chitraloka.com | Kannada Movie News, Reviews | Image

chikkanna

  • ಉಪಾಧ್ಯಕ್ಷ ಚಿಕ್ಕಣ್ಣ

    upadakshya chikkanna

    ಕನ್ನಡ ಚಿತ್ರರಂಗದ ಅತೀ ಹೆಚ್ಚು ಬೇಡಿಕೆಯ ಕಾಮಿಡಿ ನಟ ಚಿಕ್ಕಣ್ಣ. ಹೀರೋ ಆಗಿದ್ದಾರಾದರೂ ಕಾಮಿಡಿ ನಟನೆ ಬಿಟ್ಟಿಲ್ಲ. ಈಗ ಅವರು ತಮಗೆ ಖ್ಯಾತಿ ತಂದುಕೊಟ್ಟ ಪಾತ್ರದ ಹೆಸರಿನ ಚಿತ್ರಕ್ಕೆ ಹೀರೋ ಆಗುತ್ತಿದ್ದಾರೆ.

    ಚಿಕ್ಕಣ್ಣಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ ಅಧ್ಯಕ್ಷ ಚಿತ್ರದ ಉಪಾಧ್ಯಕ್ಷ ಪಾತ್ರ. ಈಗ ಉಪಾಧ್ಯಕ್ಷ ಅನ್ನೋ ಟೈಟಲ್ಲಿನ ಸಿನಿಮಾಗೆ ಹೀರೋ ಆಗುತ್ತಿದ್ದಾರೆ ಚಿಕ್ಕಣ್ಣ. ಚಂದ್ರಮೋಹನ್ ಚಿತ್ರದ ಡೈರೆಕ್ಟರ್. ಚಿಕ್ಕಣ್ಣ ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ, ಚಿತ್ರಕಥೆ ಬರೆದಿದ್ದಾರಂತೆ ಚಂದ್ರ ಮೋಹನ್. ಚಿತ್ರದಲ್ಲಿ ರವಿಶಂಕರ್, ರಾಕ್‍ಲೈನ್ ಸುಧಾಕರ್, ಸಾಧು ಕೋಕಿಲಾ ಕೂಡಾ ಇರಲಿದ್ದಾರೆ. ನವೆಂಬರ್‍ನಲ್ಲಿ ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

  • ಉಪಾಧ್ಯಕ್ಷ.. : ಸ್ಟಾರ್`ಗಳ ಸವಾರಿ.. ಹಾಡು ಭರ್ಜರಿ

    ಉಪಾಧ್ಯಕ್ಷ.. : ಸ್ಟಾರ್`ಗಳ ಸವಾರಿ.. ಹಾಡು ಭರ್ಜರಿ

    ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪುನೀತ್ ರಾಜಕುಮಾರ್, ರವಿಚಂದ್ರನ್, ಶಿವಣ್ಣ, ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ಯಶ್.. ಹೀಗೆ ಎಲ್ಲರದ್ದೂ ಒಂದೊಂದು ಡೈಲಾಗ್.. ಮರೆಯಲಾಗದ ಮಾತುಗಳ ಝಲಕ್ಕಿನ ಜೊತೆಯಲ್ಲೇ ಕುಣಿಯತ್ತಾನೆ ಉಪಾಧ್ಯಕ್ಷ. ಡಾ.ರಾಜ್ ಅವರ ಸ್ಮರಣೆಯೊಂದಿಗೆ ಶುರುವಾಗುವ ಹಾಡು ಯಶ್ ಅವರ ದಿಸ್ ಈಸ್ ಜಸ್ಟ್ ಬಿಗಿನಿಂಗ್ ಎಂಬ ಡೈಲಾಗ್ ಜೊತೆ ಮುಗಿಯುತ್ತದೆ.

    ಇದು ಉಪಾಧ್ಯಕ್ಷ ಚಿತ್ರದ ಟೈಟಲ್ ಟ್ರಾಕ್. ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದ ಪ್ರಕಾರವೇ ಎಲ್ಲವೂ ನಡೆದಿದ್ದರೆ ಪುನೀತ್ ರಾಜ್`ಕುಮಾರ್ ಹಾಡು ಹಾಡಬೇಕಿತ್ತು. ಅವರು ಓಕೆ ಎಂದೂ ಇದ್ದರು. ಅಧ್ಯಕ್ಷ ಟೈಟಲ್ ಟ್ರಾಕ್ ಪುನೀತ್ ಅವರ ಧ್ವನಿಯಲ್ಲೇ ಹಿಟ್ ಆಗಿದ್ದ ಕಾರಣ ಚಿತ್ರತಂಡವೂ ಅದನ್ನೇ ಪ್ಲಾನ್ ಮಾಡಿತ್ತು. ಈಗ ಈ ಉಪಾಧ್ಯಕ್ಷ ಟೈಟಲ್ ಟ್ರಾಕ್`ನ್ನು ವ್ಯಾಸರಾಜ್ ಸೋಸಲೆ ಅವರು ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಸಾಹಿತ್ ನೀಡಿರುವುದು ಭರ್ಜರಿ ಚೇತನ್.

    ಚಿತ್ರದಲ್ಲಿ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸಿದ್ದಾರೆ. ಹಾಗಂತ ಬಿಲ್ಡಪ್ ಎಲ್ಲ ಇಲ್ಲ. ಖುದ್ದು ಯಶ್ ಅವರೂ ಕಥೆಯನ್ನೊಮ್ಮೆ ನೋಡಿ ಯೆಸ್ ಎಂದಿದ್ದಾರಂತೆ. ನಿರ್ದೇಶಕ ಅನಿಲ್ ಕುಮಾರ್ ಅವರ ಕಥೆಯಲ್ಲಿ ಕಾಮಿಡಿ ಪಕ್ಕಾ. ಉಮಾಪತಿ ಶ್ರೀನಿವಾಸ್, ಸ್ಮಿತಾ ಉಮಾಪತಿ  ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಎದುರು ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ.

     

  • ಉಮಾಪತಿ ಪ್ರೊಡ್ಯೂಸರ್ : ಚಿಕ್ಕಣ್ಣ ಹೀರೋ : ಮಾಸ್ಟರ್ ಪೀಸ್ ಡೈರೆಕ್ಟರ್

    chikkanna's next is with manju mandavya

    ಕನ್ನಡ ಚಿತ್ರರಂಗದ ಕಾಮಿಡಿ ಸ್ಟಾರ್ ಚಿಕ್ಕಣ್ಣ. ಈಗಾಗಲೇ ಕೆಲವು ಚಿತ್ರಗಳಲ್ಲಿ ಲೀಡ್ ರೋಲ್‍ಗಳಲ್ಲಿ ನಟಿಸಿದ್ದರೂ, ಅಧಿಕೃತವಾಗಿ ಹೀರೋ ಆಗಿ ನಟಿಸಿಲ್ಲ. ಅಂಥಾದ್ದೊಂದು ಸಾಧನೆಗೆ ಹತ್ತಿರವಾಗಿದ್ದಾರೆ ಚಿಕ್ಕಣ್ಣ. ರಾಬರ್ಟ್ ಚಿತ್ರ ನಿರ್ಮಿಸುತ್ತಿರುವ ಉಮಾಪತಿ ನಿರ್ಮಾಣದ ಹೊಸ ಚಿತ್ರಕ್ಕೆ ಚಿಕ್ಕಣ್ಣ ಹೀರೋ. ಮಾಸ್ಟರ್ ಪೀಸ್ ಮತ್ತು ಭರತ ಬಾಹುಬಲಿ ನಿರ್ದೇಶಕ ಮಂಜು ಮಾಂಡವ್ಯ, ಚಿಕ್ಕಣ್ಣ ಹೀರೋ ಆಗುತ್ತಿರುವ ಚಿತ್ರಕ್ಕೆ ನಿರ್ದೇಶಕ.

    `ಚಿತ್ರರಂಗಕ್ಕೆ ಬಂದು 10 ವರ್ಷಗಳಾದವು. ವೃತ್ತಿ ಜೀವನದಲ್ಲಿ ಒಂದು ಮೆಟ್ಟಿಲು ಮೇಲೇರಿದ್ದೇನೆ ಎನ್ನುವುದಷ್ಟೇ ಸಮಾಧಾನ. ಮುಂದಿನ ತಿಂಗಳಿಂದ ಶೂಟಿಂಗ್ ಶುರು ಎಂದಿದ್ದಾರೆ ಚಿಕ್ಕಣ್ಣ.

    ಚಿಕ್ಕಣ್ಣ ಹೀರೋ ಆದರೆ, ದ್ವಾರಕೀಶ್, ಜಗ್ಗೇಶ್, ಕೋಮಲ್, ಶರಣ್ ಸಾಲಿಗೆ ಸೇರಲಿದ್ದಾರೆ.

  • ಕಾಮಿಡಿ ಅಲ್ಲ.. ಸೀರಿಯಸ್ ಚಿಕ್ಕಣ್ಣ

    chikkanna in rajahuli

    ಚಿಕ್ಕಣ್ಣ ಎಂದ ಕೂಡಲೇ ಜನರ ಮುಖದಲ್ಲಿ ನಗು ಅರಳುತ್ತೆ. ಮುಖ ನೋಡಿದರೆ ಹಲ್ಲು ಓಪನ್ ಆಗುತ್ತೆ. ಇನ್ನು ಚಿಕ್ಕಣ್ಣ ಡೈಲಾಗ್ ಹೊಡೆಯೋಕೆ ಶುರು ಮಾಡಿದ್ರೆ, ಗಹಗಹಿಸಿ ನಗುವುದಷ್ಟೇ ಬಾಕಿ. ಅದು ಚಿಕ್ಕಣ್ಣ ಕಾಮಿಡಿಗಿರುವ ಸ್ಪೆಷಾಲಿಟಿ.

    ಆದರೆ, ಅಂಥಾ ಚಿಕ್ಕಣ್ಣ ಈಗ ಸೀರಿಯಸ್ ಪಾತ್ರ ಮಾಡಿದ್ದಾರಂತೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದಿದ್ದಾರೆ ಚಿಕ್ಕಣ್ಣ.

    ಆದರೆ, ಟ್ರೇಲರ್‍ನಲ್ಲಿ ಕಾಮಿಡಿಯೇ ಇದ್ಯಲ್ಲ ಅಂದ್ರೆ, ಅದು ಸಿಚುಯೇಷನ್ ಕಾಮಿಡಿ ಅಷ್ಟೆ, ಉಳಿದಂತೆ ಸೀರಿಯಸ್ ಪಾತ್ರ ಅಂತಾರೆ ಚಿಕ್ಕಣ್ಣ.

    ಅಂದಹಾಗೆ ಚಿಕ್ಕಣ್ಣಗೆ ಒಬ್ಬ ನಟನಾಗಿ ಇಮೇಜ್ ಸೃಷ್ಟಿಸಿದ್ದು ರಾಜಾಹುಲಿ. ಆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿಯೇ ಚಿಕ್ಕಣ್ಣ ಹೊಸ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್‍ಲಕ್.

  • ಕಾಮಿಡಿ.. ಹಾಟ್ ಹಾಟ್.. ಸುಮನ್

    double engine movie

    ಸುಮನ್ ರಂಗನಾಥ್... ವಯಸ್ಸು 50ರ ಹತ್ತಿರದಲ್ಲಿದ್ದರೂ, ಗ್ಲ್ಯಾಮರ್ ಬದಲಾಗಿಲ್ಲ. ಮಾಡೆಲಿಂಗ್ ಲೋಕದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಸುಮನ್ ರಂಗನಾಥ್‍ಗೆ, ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಸಿದ್ಲಿಂಗು, ನೀರ್‍ದೋಸೆ, ಮೈನಾ ಚಿತ್ರಗಳ ಪಾತ್ರಗಳು ಸುಮನ್‍ರ ವೃತ್ತಿ ಜೀವನ ಬದಲಿಸಿರುವುದು ಸತ್ಯ. ಇಂತಹ ಸುಮನ್, ಇದೇ ಮೊದಲ ಬಾರಿಗೆ ಕಾಮಿಡಿ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ಎಂಜಿನ್ ಚಿತ್ರದಲ್ಲಿ.

    ಈ ಹಿಂದೆ ಕೆಲವು ಚಿತ್ರಗಳಲ್ಲಿ ಕಾಮಿಡಿ ಮಾಡಿದ್ದರೂ, ಅವುಗಳೆಲ್ಲ ಕೆಲವು ದೃಶ್ಯಗಳಿಗೆ ಸೀಮಿತವಾಗಿತ್ತು. ಸಂಪೂರ್ಣ ಕಾಮಿಡಿ ಪಾತ್ರದಲ್ಲಿ ನಟಿಸಿರೋದು ಇದೇ ಮೊದಲು. ಹಳ್ಳಿ ಹೆಂಗಸು. ಆದರೆ ಗ್ಲ್ಯಾಮರಸ್ ಆಗಿದೆ. ಹಣ ಮಾಡುವ ಆಸೆಗೆ ಹುಡುಗರ ತಂಡದ ಜೊತೆ ಸೇರುವ ಮಹಿಳೆಯಾಗಿ ನಟಿಸಿದ್ದೇನೆ. ಪಾತ್ರ ನನಗಂತೂ ತುಂಬಾನೇ ಹಿಡಿಸಿದೆ ಎಂದು ಖುಷಿಯಾಗಿದ್ದಾರೆ ಸುಮನ್.

    ಚಂದ್ರಮೋಹನ್ ಕಥೆ ಹೇಳಿದ ತಕ್ಷಣ ಇಷ್ಟವಾಗಿ ಚಿತ್ರ ಒಪ್ಪಿಕೊಂಡರಂತೆ. ಎಲ್ಲ ಓಕೆ, ವಾಟ್ ಈಸ್ ಯುವರ್ ಸೌಂಧರ್ಯದ ಗುಟ್ಟು ಅಂದ್ರೆ, ಕೆಲಸದಲ್ಲಿ ಶ್ರದ್ಧೆ, ಕಣ್ತುಂಬಾ ನಿದ್ದೆ. ಹೊಟ್ಟೆ ತುಂಬಾ ಊಟ. ನೋ ಬ್ಯಾಡ್ ಹ್ಯಾಬಿಟ್ಸ್ ಅಂತಾರೆ ಸುಮನ್.

  • ಚಿಕ್ಕಣ್ಣ ಕೂಡಾ ಈಗ ನಿರ್ಮಾಪಕ..!

    chikkanna also a producer for rambo 2

    Rambo ಸಿನಿಮಾ ನೆನಪಿದೆಯಲ್ವಾ..? ಶರಣ್‍ರನ್ನು ಸ್ಟಾರ್ ಆಗಿಸಿದ ಸಿನಿಮಾ ಅದು. ಈಗ Rambo 2 ಬರುತ್ತಿದೆ. ಮತ್ತೊಮ್ಮೆ Rambo ಟೀಂ ಜೊತೆಯಾಗಿದೆ. ಒನ್ಸ್ ಎಗೇಯ್ನ್, ಅದು ತಂತ್ರಜ್ಞರೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಅಂದರೆ, ಚಿತ್ರದ ತಂತ್ರಜ್ಞರೆಲ್ಲರೂ ಚಿತ್ರಕ್ಕೆ ನಿರ್ಮಾಪಕರೇ. ಲಾಭ ಬಂದರೆ, ಪ್ರತಿಯೊಬ್ಬರಿಗೂ ಷೇರ್ ಸಿಗಲಿದೆ. ಅದು ಶರಣ್ ರೂಪಿಸಿರುವ ತತ್ವ.

    ಅಂದಹಾಗೆ ಚಿತ್ರದ ನಿರ್ಮಾಪಕರಲ್ಲಿ ಚಿಕ್ಕಣ್ಣ ಕೂಡಾ ಒಬ್ಬರು. ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರಿಗೆ ಪರಿಚಿತರಾದ ಚಿಕ್ಕಣ್ಣ, ಹುಟ್ಟು ಶ್ರೀಮಂತರೇನಲ್ಲ. ಕೇವಲ ಪ್ರತಿಭೆಯೊಂದನ್ನೇ ಬಂಡವಾಳವನ್ನಾಗಿಸಿಕೊಂಡ ಚಿಕ್ಕಣ್ಣ, Rambo 2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅದು ಚಿಕ್ಕಣ್ಣ ಸಾಧನೆಯಷ್ಟೇ ಅಲ್ಲ, ಶರಣ್ ಔದಾರ್ಯವೂ ಹೌದು.

    ಲಡ್ಡು ಸಿನಿಮಾಸ್ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರಕ್ಕೆ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ ಅಧಿಕೃತ  ನಿರ್ಮಾಪಕರು. ಉಳಿದಂತೆ ಚಿಕ್ಕಣ್ಣ, ಛಾಯಾಗ್ರಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಮ್ಯಾನೇಜರ್ ನರಸಿಂಹ ಹೀಗೆ ಚಿತ್ರದ ತಾಂತ್ರಿಕ ವರ್ಗದವರೆಲ್ಲ ವರ್ಕಿಂಗ್ ಪಾರ್ಟ್‍ನರ್ಸ್. 

     

     

  • ಚಿಕ್ಕಣ್ಣ ವಿಲನ್ ಪಾತ್ರ ಮಾಡಿದರೆ ಹೇಗಿರುತ್ತೆ..?

    chikkanna aspires to do villain roles

    ಚಿಕ್ಕಣ್ಣ ಅನ್ನೋ ಹೆಸರು ಕೇಳಿದ್ರೇನೇ ಮುಗುಳ್ನಗುವ ಜನರಿದ್ದಾರೆ. ಅಷ್ಟರಮಟ್ಟಿಗೆ ಚಿಕ್ಕಣ್ಣ ಕಾಮಿಡಿಗೆ ಫಿಕ್ಸ್. ಬಿಡುವೇ ಇಲ್ಲದ ನಟರಾಗಿರುವ ಚಿಕ್ಕಣ್ಣ, ಡಬಲ್ ಎಂಜಿನ್ ಚಿತ್ರದಲ್ಲಿ ಹೆಚ್ಚೂ ಕಡಿಮೆ ಹೀರೋನೇ. ಸುಮನ್ ರಂಗನಾಥ್ ಜೊತೆ ನಟಿಸಿರುವ ಚಿಕ್ಕಣ್ಣ, ಈ ಚಿತ್ರದಲ್ಲೂ ಕಾಮಿಡಿ ರೋಲ್ ಮಾಡಿದ್ದಾರಂತೆ. 

    ಚಿತ್ರದಲ್ಲಿ ಸಂಭಾಷಣೆಗಳಿಗಿಂತ ಸನ್ನಿವೇಶಗಳೇ ನಗು ತರಿಸುವಂತಿವೆ. ಭಾವುಕ ಸನ್ನಿವೇಶದಲ್ಲೂ ಪ್ರೇಕ್ಷಕ ನಗುತ್ತಾನೆ. ಅದೇ ಈ ಚಿತ್ರದ ಸ್ಟ್ರೆಂಗ್ತ್ ಅಂತಾರೆ ಚಿಕ್ಕಣ್ಣ. ಇಷ್ಟೆಲ್ಲ ಆಗಿ ಚಿಕ್ಕಣ್ಣಂಗಿರೋ ಅತಿ ದೊಡ್ಡ ಆಸೆಯೇನು ಗೊತ್ತಾ..?

    ನಾನು ವಿಲನ್ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನು. ಆದರೆ ಕಾಮಿಡಿಯನ್ ಆಗಿಬಿಟ್ಟೆ. ಈಗ ನಾನು ಮಾಡ್ತೀನಿ ಅಂದ್ರೂ ಯಾರೂ ಅಂತಹ ಸಾಹಸ ಮಾಡೋದಿಲ್ಲ ಬಿಡಿ ಅಂತಾರೆ ಚಿಕ್ಕಣ್ಣ.

    ಚಿಕ್ಕಣ್ಣ ನಿರಾಶರಾಗಬೇಕಾದ ಅಗತ್ಯವೇನಿಲ್ಲ. ಖಳನಟರೆಂದರೆ ಇವರೇ ಎನ್ನುವಂತಿದ್ದ ವಜ್ರಮುನಿ, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ.. ಕಾಮಿಡಿ ಮಾಡಿ ಗೆದ್ದಿದ್ದಾರೆ. ಕಾಮಿಡಿ ಎಂದರೆ ಬಾಲಕೃಷ್ಣ ಎನ್ನುತ್ತಿದ್ದ ಕಾಲದಲ್ಲೇ ಅವರು ವಿಲನ್ ಆಗಿ ಗೆದ್ದಿದ್ದಾರೆ. ಡೋಂಟ್‍ವರಿ

  • ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು?

    ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು?

    ಅಧ್ಯಕ್ಷ ಚಿತ್ರದಲ್ಲಿ ಅಧ್ಯಕ್ಷ ಶರಣ್ ಹೇಗೆ ಫೇಮಸ್ ಆದರೋ, ಹಾಗೆಯೇ ಖ್ಯಾತಿ ಪಡೆದವರು ಉಪಾಧ್ಯಕ್ಷ ಚಿಕ್ಕಣ್ಣ. ಅದೇ ಹೆಸರಿನಲ್ಲಿ ಚಿತ್ರ ಸೆಟ್ಟೇರಿದ್ದು ಗೊತ್ತೇ ಇದೆ. ಉಮಾಪತಿಯಂದ ಸ್ಟಾರ್ ನಿರ್ಮಾಪಕರ ಚಿತ್ರವಿದು. ಅನಿಲ್ ಕುಮಾರ್ ನಿರ್ದೇಶನದ ಉಪಾಧ್ಯಕ್ಷ ಚಿತ್ರದಲ್ಲಿ ಹೊಸ ನಟಿ ಮಲೈಕಾ ಹೀರೋಯಿನ್. ಮ್ಯೂಸಿಕ್ ಡೈರೆಕ್ಷನ್ ಅರ್ಜುನ್ ಜನ್ಯ ಅವರದ್ದು.

    ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕುಂಭಳಕಾಯಿ ಒಡೆಯಲಾಗಿದೆ. ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಕಾಮಿಡಿ ಮಾಡುವುದು ಕಷ್ಟ., ಹೀಗಿದ್ದರೂ ಹೊಸಬರಾದರೂ ಕಡಿಮೆ ಟೇಕ್‍ಗಳಲ್ಲಿ ಮುಗಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಚಿಕ್ಕಣ್ಣ. ಈ ಚಿತ್ರದ ಮೂಲಕ  ನಾನು ಹೀರೋ ಆಗಿ, ಮಲೈಕಾ ಹೀರೋಯಿನ್ ಆಗಿ ಹಾಗೂ ಕೊರಿಯೋಗ್ರಾಫರ್ ಆಗಿ ದರ್ಶಿನಿ ಎಂಬ ಹುಡುಗಿ ಪರಿಚಯವಾಗುತ್ತಿದ್ದೇವೆ. ಎಲ್ಲರನ್ನೂ ಹರಸಿ ಎಂದು ಮನವಿ ಮಾಡಿದರು ಚಿಕ್ಕಣ್ಣ. ತನ್ನಂತ ಒಬ್ಬ ಕಾಮಿಡಿಯನ್‍ನ್ನು ಹೀರೋ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

  • ಚಿಕ್ಕಣ್ಣನ ಹೀರೋಯಿನ್ ಇವರೇ..

    ಚಿಕ್ಕಣ್ಣನ ಹೀರೋಯಿನ್ ಇವರೇ..

    ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ. ಅವರ ಹೊಸ ಚಿತ್ರ ಉಪಾಧ್ಯಕ್ಷ ಚಿತ್ರ ಸೆಟ್ಟೇರಿದ್ದು ಮುಹೂರ್ತವೂ ಸರಳ ಸುಂದರವಾಗಿ ನೆರವೇರಿದೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಹಾಗೂ ಇನ್ನೂ ರಿಲೀಸ್ ಆಗದ ಧೀರನ್ ರಾಮಕುಮಾರ್ ಅಭಿನಯದ ಶಿವ 143 ಚಿತ್ರದ ನಿರ್ದೇಶಕ ಅನಿಲ್ ಡೈರೆಕ್ಟರ್. ಉಮಾಪತಿ ಶ್ರೀನಿವಾಸ್  ನಿರ್ಮಾಪಕರು.

    ಅಧ್ಯಕ್ಷ ಚಿತ್ರದಲ್ಲಿ ಶರಣ್ ಅವರ ಮದುವೆಯಾಗಿ ಹೋಗುತ್ತದೆ. ಆನಂತರ ಉಪಾಧ್ಯಕ್ಷ ಚಿಕ್ಕಣ್ಣನ ಕಥೆ ಏನಾಯ್ತು ಅನ್ನೋದೇ ಚಿತ್ರದ ಕಥೆ. ಅಧ್ಯಕ್ಷ ಚಿತ್ರದ ಸೀಕ್ವೆಲ್ ಎನ್ನಬಹುದು. ಆದರೆ ಸೀಕ್ವೆಲ್ ಅಲ್ಲ, ಯಾಕೆಂದರೆ ಇಲ್ಲಿ ಅಧ್ಯಕ್ಷನ ಕಥೆ ಇರಲ್ಲ. ಅಂದಹಾಗೆ ಚಿಕ್ಕಣ್ಣ ಎದುರು ಹೀರೋಯಿನ್ ಆಗಿ ಆಯ್ಕೆಯಾಗಿರೋದು ಮಲೈಕಾ ವಾಸ್ಪುಲ್.

    ಈಗ ಕಿರುತೆರೆಯಲ್ಲಿ ನಂ.1 ಸ್ಥಾನದಲ್ಲಿರೋ ಝೀ ಟೀವಿ ಸೀರಿಯಲ್ ಹಿಟ್ಲರ್ ಕಲ್ಯಾಣ ಚಿತ್ರದ ನಾಯಕಿ. ರಾಧಿಕಾ ಪಂಡಿತ್, ರಚಿತಾ ರಾಮ್, ಆದಿತಿ ಪ್ರಭುದೇವ ನಂತರ.. ಟಿವಿಯಿಂದ ಸಿನಿಮಾಗೆ ಬರುತ್ತಿರೋ ನಾಯಕಿ.

    ಚಿಕ್ಕಣ್ಣ ಅವರ ಕಾಮಿಡಿ ಟೈಮಿಂಗ್ ಮೇಲೆಯೇ ಚಿತ್ರದ ಕಥೆ ಇದೆ. ಕಂಪ್ಲೀಟ್ ಕಾಮಿಡಿ ಎನ್ನುವ ಅನಿಲ್, ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಚಿತ್ರದಲ್ಲಿದ್ದ ರವಿಶಂಕರ್ ಇಲ್ಲಿಯೂ ಇರುತ್ತಾರೆ. ವೀಣಾ ಸುಂದರ್, ಸಾಧುಕೋಕಿಲ ಇತರರು ನಟಿಸುತ್ತಿರೋ ಚಿತ್ರ ಒಂದೇ ಶೆಡ್ಯೂಲಿನಲ್ಲಿ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಲಿದೆ.

  • ಜೋಗಿ, ಆಪ್ತಮಿತ್ರ ಹಿಟ್ ನೆನಪಲ್ಲಿ ರಾಜ್ ವಿಷ್ಣು

    raj vishnu sweet memory

    ವರಮಹಾಲಕ್ಷ್ಮಿ ಹಬ್ಬ ಕನ್ನಡ ಚಿತ್ರರಂಗಕ್ಕೆ ಶುಭ ತಂದಿರುವುದೇ ಹೆಚ್ಚು. ಅದರಲ್ಲಿಯಂತೂ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಕಾಣುತ್ತಿರುವ ರಾಜ್ ವಿಷ್ಣು ಚಿತ್ರ, ಆಪ್ತಮಿತ್ರ ಮತ್ತು ಜೋಗಿ ಚಿತ್ರಗಳ ನೆನಪಿನ ಗುಂಗಿನಲ್ಲಿದೆ. 

    ಅದಕ್ಕೆ ಕಾರಣ ಇಷ್ಟೆ. ಆ ಎರಡೂ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆಗಿದ್ದವು. ಸೂಪರ್ ಹಿಟ್ ಆಗಿದ್ದವು. ಈಗ ರಾಜ್ ವಿಷ್ಣು ಕೂಡಾ ಹಬ್ಬದ ದಿನವೇ ತೆರೆಕಾಣುತ್ತಿದೆ. ಶರಣ್, ಚಿಕ್ಕಣ್ಣ ಅಭಿನಯದ ಈ ಕಾಮಿಡಿ ಚಿತ್ರ ಈಗಾಗಲೇ ಕ್ರೇಝ್ ಸೃಷ್ಟಿಸಿದೆ. ರಾಮು ನಿರ್ಮಾಣದ ರಾಜ್ ವಿಷ್ಣು ಕೂಡಾ ಜೋಗಿ, ಆಪ್ತಮಿತ್ರದ ಹಾಗೆ ಸೂಪರ್ ಹಿಟ್ ಆಗುತ್ತಾ..? ಅಭಿಮಾನಿಗಳ ನಿರೀಕ್ಷೆಯಂತೂ ಹಾಗೇ ಇದೆ.

  • ಡಬಲ್ ಎಂಜಿನ್ ಅಂದ್ರೆ ಎರಡು ತಲೆ ಹಾವಂತೆ.. ಗೊತ್ತಾ..?

    double engine meaning

    ಡಬಲ್ ಎಂಜಿನ್.. ಈ ಪದ ಜನಸಾಮಾನ್ಯರಿಗೆ ಹೊಸದಾಗಿ ಕೇಳಿಸಬಹುದು. ಆದರೆ, ಅದೃಷ್ಟದ ಚೊಂಬು (ರೈಸ್ ಬೌಲ್), ನಕ್ಷತ್ರದ ಆಮೆ, ಎರಡು ತಲೆಯ ಹಾವು (ಡಬಲ್ ಎಂಜಿನ್) ದಂಧೆ ಮಾಡೋವ್ರಿಗೆ ಇದು ಚಿರಪರಿಚಿತ ಪದ. ಎರಡು ತಲೆ ಹಾವು ಇಲ್ಲ. ಆದರೆ, ಹಾಗಂತ ಮೋಸ ಮೋಡೋವ್ರಿಗೇನೂ ಕಮ್ಮಿ ಇಲ್ಲ. ಅವರು ಎರಡು ತಲೆ ಹಾವನ್ನ ಡಬಲ್ ಎಂಜಿನ್ ಅಂತಾರೆ. ಆದರೆ, ಈಗ ಡಬಲ್ ಎಂಜಿನ್ ಇದೆ. ಇದೇ ಶುಕ್ರವಾರ ನೀವದನ್ನ ತೆರೆ ಮೇಲೆ ನೋಡಬಹುದು. 

    ಇದು ಡಬಲ್ ಎಂಜಿನ್ ಸಿನಿಮಾ ಕಥೆ. ಮೂವರು ಹುಡುಗರ ಗ್ಯಾಂಗು, ಅದು ಪಡುವ ಪಡಿಪಾಟಲಿನ ಕಥೆ. ಕ್ರೈಂ, ಥ್ರಿಲ್ಲರ್ ಕಾಮಿಡಿ ಜೊತೆ ಜೊತೆಯಾಗಿ ಸಾಗುತ್ತೆ. ಕಚಗುಳಿ ಇಡೋ ಸಂಭಾಷಣೆಗಳಿವೆ. ಕಣ್ಣು ಖುಷಿಪಡಿಸೋಕೆ ಸುಮನ್ ರಂಗನಾಥ್, ಕಿವಿ ತೃಪ್ತಿ ಪಡಿಸೋಕೆ ಚಿಕ್ಕಣ್ಣನ ಮಾತು.. ಪಂಚೇಂದ್ರಿಯಗಳಲ್ಲೂ ಆಹ್ಲಾದ ಹೊರಡಿಸೋಕೆ ಇಡೀ ಸಿನಿಮಾ.

    ಇದು ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಕರ ಹೊಸ ಸಿನ್ಮಾ. ಇಷ್ಟೆಲ್ಲದರ ಜೊತೆಗೆ ಕೃಷಿಯಲ್ಲೂ ಲಾಭವಿದೆ ಅನ್ನೋ ಸಂದೇಶವಿದೆಯಂತೆ. 

  • ಮೀನಿಂಗ್ ಡಬ್ಬಲ್ಲು.. ಸಿನಿಮಾ ಸಿಂಗಲ್ಲು..

    double engine's double meaning creates craze

    ಡಬಲ್ ಎಂಜಿನ್.. ಹೆಸರು ಕೇಳಿದ್ರೇನೇ ಏನೋ ಒಂಥರ ಇದ್ಯಲ್ಲ ಅನ್ನಿಸಬಹುದು. ಬಾಂಬೆ ಮಿಠಾಯಿ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ ಚಂದ್ರಮೋಹನ್ ಅವರ 2ನೇ ಸಿನಿಮಾ ಇದು. ಕಾಮಿಡಿಯೇ ಕಥೆ. ಚಿಕ್ಕಣ್ಣ, ಸುಮನ್ ರಂಗನಾಥ್, ಪ್ರಭು, ಅಶೋಕ್ ನಟಿಸಿರುವ ಸಿನಿಮಾ.

    ಚಿಕ್ಕಣ್ಣಂಗೂ, ಸುಮನ್‍ಗೂ ಮ್ಯಾಚಿಂಗ್ ಇರೋದೇನು.. ಸುಮನ್‍ದೂ ಗುಂಗುರು... ಚಿಕ್ಕಣ್ಣಂದೂ ಗುಂಗುರು.. ಕೂದಲು..!

    ಹುಡುಗಿಯನ್ನ ಹುಡುಗ ನೋಡಿ ಇಷ್ಟಪಟ್ಟ. ಏನ್ ನೋಡಿ ಇಷ್ಟ ಪಟ್ಟ.. ಸ್ಸಾರಿ.. ಅವನ್ನೆಲ್ಲ ಹೇಳೊಕಾಗಲ್ಲ..

    ರೀಮೋಟ್ ತುಂಬಾ ಹಳೇದು ಅನ್ಸುತ್ತೆ.. ಟಿವಿ ಕೂಡಾ ತುಂಬಾ ಹಳೇದೇ..

    ರೂಮ್‍ಗೆ ಹೋಗಿ ಸೋಪ್ ಹಾಕಿ.. ಈಸಿಯಾಗಿ ಬಂದ್‍ಬಿಡುತ್ತೆ..

    ಇದರಲ್ಲಿ ಡಬಲ್ ಮೀನಿಂಗ್ ಎಲ್ಲಿದೆ ಅನ್ನೋವ್ರು ಒಂದ್ಸಲ ಕಿವಿ ತೆರೆದುಕೊಂಡು ಡಬಲ್ ಎಂಜಿನ್ ಟ್ರೇಲರ್ ನೋಡಬೇಕು. ಆಮೇಲೆ.. ನೀವು ಸಿನಿಮಾ ನೋಡೇ ನೋಡ್ತೀರಿ ಬಿಡಿ. 

    ಹಾಗಂತ ಸಿನಿಮಾ ಕಂಪ್ಲೀಟ್ ಅದೇ ಇರಲ್ಲ. ಒಂದು ಸೀರಿಯಸ್ಸಾದ ಕ್ರೈಂ ಥ್ರಿಲ್ಲರ್ ಕಥೆಯೂ ಇದೆ. ಕಚಗುಳಿ ಇಡುವ ಸಂಭಾಷಣೆ. ನೆನಪಿಸಿಕೊಂಡು ಮುಗುಳ್ನಗುವಂಥಾ ಡೈಲಾಗುಗಳು. ಡಬಲ್ ಎಂಜಿನ್ ಗೆಲ್ಲಿಸೋಕೆ ಇಷ್ಟು ಸಾಕಾ..?

  • ಯಮಧರ್ಮರಾಯ ಚಿಕ್ಕಣ್ಣ

    chikkanna as yamadharmaraa in his next film bllgates

    ಕಾಮಿಡಿ ಸ್ಟಾರ್ ಚಿಕ್ಕಣ್ಣ ಯಮಧರ್ಮನಾಗುತ್ತಿದ್ದಾರೆ. ಛೆ.. ಛೆ.. ಹಿಂಗ್ಯಾಕಾಯ್ತು ಅಂದ್ಕೋಬೇಡಿ.. ಚಿಕ್ಕಣ್ಣ ಬಿಲ್‍ಗೇಟ್ಸ್ ಅನ್ನೋ ಹೆಸರಿನ ಚಿತ್ರಕ್ಕೆ ಹೀರೋ. ಈ ಚಿತ್ರದಲ್ಲಿ ಅವರು ಯಮಧರ್ಮರಾಯನ ಗೆಟಪ್ಪಿನಲ್ಲಿ ಕಂಗೊಳಿಸಿದ್ದಾರೆ.

    ಕನ್ನಡದಲ್ಲಿ ಯಮ ಅಂದಕೂಡ್ಲೇ ನೆನಪಾಗೋದು ದೊಡ್ಡಣ್ಣ.. ಮತ್ತವರ ಯಮಹೋ.. ಯಮಹ ಅನ್ನೋ ಡೈಲಾಗು. ಈಗ ಆ ಗೆಟಪ್ಪಿನಲ್ಲಿ ಬರ್ತಿರೋದು ಚಿಕ್ಕಣ್ಣ. ವಸಂತ್ ಕುಮಾರ್, ಶ್ರೀನಿವಾಸ್ ಎಂಬುವವರು ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಶ್ರೀನಿವಾಸ್ ನಿರ್ದೇಶಕ. ಚಿಕ್ಕಣ್ಣ ಜೊತೆ ಶಿಶಿರ, ರೋಜಾ, ಅಕ್ಷತ್ ರೆಡ್ಡಿ ನಟಿಸುತ್ತಿದ್ದಾರೆ.

  • ರಾಜಾಹುಲಿ ಲುಕ್‍ನಲ್ಲಿ ಚಿಕ್ಕಣ್ಣನ ಸಂಹಾರ

    chikkanna in rajahuli style

    ಸಂಹಾರ. ಫೆಬ್ರವರಿ 9ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಹೀರೋ ಚಿರಂಜೀವಿ ಸರ್ಜಾ. ನಾಯಕಿಯರಾಗಿ ಹರಿಪ್ರಿಯಾ ಮತ್ತು ಕಾವ್ಯಾಶೆಟ್ಟಿ ಇದ್ದಾರೆ. ನಿರ್ದೇಶಕ ಗುರು ದೇಶ್‍ಪಾಂಡೆ. 

    ಗುರು ದೇಶಪಾಂಡೆ ತಮ್ಮ ರಾಜಾಹುಲಿ ಚಿತ್ರದ ನೆನಪನ್ನು ಇಲ್ಲಿ ಚಿಕ್ಕಣ್ಣನ ಮೂಲಕ ನೆನಪಿಸಿದ್ದಾರೆ. ರಾಜಾಹುಲಿಯಲ್ಲಿ ಯಶ್ ಗೆಳೆಯನಾಗಿ ಮಿಂಚಿದ್ದ ಚಿಕ್ಕಣ್ಣ ಅವರದ್ದು ಇದರಲ್ಲಿ ಪ್ರಮುಖ ಪಾತ್ರ. ಕಾನ್‍ಸ್ಟೇಬಲ್ ಪಾತ್ರದಲ್ಲಿ ನಟಿಸಿರುವ ಚಿಕ್ಕಣ್ಣ ಅವರಿಗೆ ರಾಜಾಹುಲಿ ಸ್ಟೈಲ್‍ನಲ್ಲೇ ಒಂದು ಡೈಲಾಗ್ ಕೂಡಾ ಇದೆ.

    ಹುಲಿ ಬೇಟೆ ಆಡೋವಾಗ ಡಿಸ್ಟರ್ಬ್ ಮಾಡಿದ್ರೆ, ನೀನೇ ಬೇಟೆ ಆಗಿಹೋಗ್ತೀಯ. ರಾಜಾಹುಲಿ ಬೇಟೆ ಆಡೋವಾಗ ಡಿಸ್ಟರ್ಬ್ ಮಾಡಿದ್ರೆ.. ಅನ್ನೋ ಫನ್ನಿ ಡೈಲಾಗು ಚಿಕ್ಕಣ್ಣಗಿದೆ. ಅದೂ ರಾಜಾಹುಲಿ ಮೀಸೆಯ ಜೊತೆ ಜೊತೆಗೇ.

    ಚಿತ್ರದ ಹೀರೋ, ಹೀರೋಯಿನ್‍ಗಳಷ್ಟೇ ಪ್ರಮುಖ ಪಾತ್ರ ಚಿಕ್ಕಣ್ಣ ಅವರಿಗೂ ಇದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ.

  • ರ್ಒಂಭತ್ತನೇ ದಿಕ್ಕಿಗೆ ದರ್ಶನ್ ಧ್ವನಿ

    darshan's voice for ombattane dikku

    ಒಂಭತ್ತನೇ ದಿಕ್ಕು, ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರವಿದು. ಲೂಸ್ ಮಾದ ಯೋಗಿ ಮತ್ತು ಆದಿತಿ ಪ್ರಭುದೇವ ನಟಿಸಿರುವ ಕ್ರೈಂ ಥ್ರಿಲ್ಲರ್. ಸತತ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಗೆಲ್ಲುತ್ತಿರುವ ದಯಾಳ್, ಮತ್ತೊಮ್ಮೆ ಅಂತಹುದೇ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರಿಗೆ ಚಾಲೆಂಜಿಂಗ್ ಸ್ಟಾರ್ ಸಪೋರ್ಟ್ ಸಿಕ್ಕಿದೆ.

    ಚಿತ್ರಕ್ಕೆ ದರ್ಶನ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಆರಂಭ ಮತ್ತು ಅಂತ್ಯ, ಎರಡನ್ನೂ ವಿವರಿಸುವುದು ದರ್ಶನ್. ಸ್ಟಾರ್ ನಟ ಕೊಟ್ಟ ಬೆಂಬಲಕ್ಕೆ ದಯಾಳ್ ಪದ್ಮನಾಭನ್ ಧನ್ಯವಾದ ಅರ್ಪಿಸಿದ್ದಾರೆ. ಒಂಭತ್ತನೇ ದಿಕ್ಕು ಚಿತ್ರದ ಟೀಸರ್ ಜನವರಿ 15ರಂದು ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ.

  • ವೀಕೆಂಡ್ ವಿತ್ ರಮೇಶ್ ನೋಡುಗರಿಗೆ ಚಿಕ್ಕಣ್ಣ ಕೊಟ್ಟ ಶಾಕ್..!

    comedy star chikkanna talks about his life story

    ಚಿಕ್ಕಣ್ಣ, ಸದ್ಯಕ್ಕೆ ಕನ್ನಡದಲ್ಲಿ ಭರ್ಜರಿ ಡಿಮ್ಯಾಂಡಿನಲ್ಲಿರೋ ಕಾಮಿಡಿ ಸ್ಟಾರ್. ಬಡತನದಿಂದ ಅರಳಿದ ಪ್ರತಿಭೆ ಅನ್ನೊದು ಗೊತ್ತಿದ್ದರೂ, ವೀಕೆಂಡ್ ವಿತ್ ರಮೇಶ್ ನೋಡುವಾಗ ಚಿಕ್ಕಣ್ಣ ತಮ್ಮ ಜೀವನದ ಕಹಿ ಸತ್ಯವನ್ನು, ನಡೆದು ಬಂದ ದಾರಿಯನ್ನು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡರು.

    ಚಿಕ್ಕಣ್ಣ ಮೊದಲು ಮಾಡುತ್ತಿದ್ದುದು ಗಾರೆ ಕೆಲಸ. ಗಾರೆ ಕೆಲಸ ಮಾಡಿಕೊಂಡೇ ರಂಗಭೂಮಿಯಲ್ಲಿ ನಟಿಸುತ್ತಿದ್ದ ಚಿಕ್ಕಣ್ಣ, ಕಾಮಿಡಿ ಕಿಲಾಡಿಗಳು ಮಾಡುತ್ತಿರುವಾಗಲೂ ಗಾರೆ ಕೆಲಸ ಬಿಟ್ಟಿರಲಿಲ್ಲ. ಏಕೆಂದರೆ, ಕಾಮಿಡಿ ಕಿಲಾಡಿಗಳಿಂದ ಬರುತ್ತಿದ್ದ ದುಡ್ಡು, ಜೀವನಕ್ಕೆ ಸಾಲುತ್ತಿರಲಿಲ್ಲ.

    ಯಶ್ ಕೃಪೆಯಿಂದ ಕಿರಾತಕ ಚಿತ್ರದಲ್ಲಿ ಚಾನ್ಸ್ ಪಡೆದ ಚಿಕ್ಕಣ್ಣ, ಆ ಚಿತ್ರ ರಿಲೀಸ್ ಆದ ಮೇಲೆ ಚಾಮುಂಡಿ ಬೆಟ್ಟಕ್ಕೆ ಹತ್ತಿದ್ದರಂತೆ. ದೇವಿಯ ಎದುರು ಬೇಡಿಕೊಂಡಿದ್ದರಂತೆ. ಇನ್ನಾದರೂ ನನ್ನ ಜೀವನದಲ್ಲಿ ಒಳ್ಳೆಯ ದಿನ ಬರಲಿ ಎಂದು ಕೇಳಿಕೊಂಡಿದ್ದರಂತೆ. 

    ಕಿರಾತಕ ರಿಲೀಸ್ ಆಗುವ ಮೊದಲು ಕೂಡಾ ಗಾರೆ ಕೆಲಸ ಮಾಡಿದ್ದ ಚಿಕ್ಕಣ್ಣ, ನಂತರ ಹಿಂದಿರುಗಿ ನೋಡಿಲ್ಲ... ಈಗ.. ಚಿಕ್ಕಣ್ಣ ಬಳಿ ಹಣವೂ ಇದೆ. ಅಕ್ಕ ತಂಗಿಯರನ್ನೆಲ್ಲ ಪ್ರೀತಿಯಿಂದ ನೋಡಿಕೊಳ್ಳುವ ಚಿಕ್ಕಣ್ಣ, ತಮ್ಮಂತೆಯೇ ಕಷ್ಟದಲ್ಲಿರುವ ಬೇರೆ ಕಲಾವಿದರಿಗೂ ಸಹಾಯ ನೀಡುವಷ್ಟು ಶ್ರೀಮಂತರಾಗಿದ್ದಾರೆ. ಹೃದಯ ಶ್ರೀಮಂತಿಕೆಯೂ ಇದೆ. 

    ಆದರೆ, ಇದಾವುದೂ ಗೊತ್ತಿಲ್ಲದ, ಗೊತ್ತಿದ್ದರೂ.. ಇರಲಿಕ್ಕಿಲ್ಲ ಬಿಡ್ರಿ ಎನ್ನುತ್ತಿದ್ದವರಿಗೆ ವೀಕೆಂಡ್ ವಿತ್ ರಮೇಶ್ ನೋಡಿದಾಗ ಶಾಕ್ ಆಗಿರುವುದಂತೂ ನಿಜ.

  • ಶರಣ್ ಸಿನಿಮಾಗಳಲ್ಲೇ ಅತಿ ದೊಡ್ಡ ರಿಲೀಸ್ ರಾಜ್ ವಿಷ್ಣು

    raj vishnu

    ಶರಣ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಆವರೇಜ್ ಲೆವೆಲ್‍ನಲ್ಲಿ ಗೆದ್ದಿವೆ. ಫ್ಲಾಪ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಶರಣ್ ಚಿತ್ರಗಳಿಗೆ ಹೋದರೆ ಆರಾಮವಾಗಿ ನಕ್ಕು ಬರಬಹುದು ಎಂಬ ನಿರೀಕ್ಷೆ ಪ್ರೇಕ್ಷಕರದ್ದು. ಹೀಗಿದ್ದರೂ ಶರಣ್ ನಾಯಕತ್ವದ ಯಾವ ಚಿತ್ರಕ್ಕೂ, ರಾಜ್ ವಿಷ್ಣು ಚಿತ್ರಕ್ಕೆ ಸಿಗುತ್ತಿರುವಂತದ ದೊಡ್ಡ ಮಟ್ಟದ ಹೈಪ್ ಸಿಕ್ಕಿರಲಿಲ್ಲ.

    ರಾಜ್ ವಿಷ್ಣು ಚಿತ್ರ ಏಕಕಾಲದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶರಣ್ ಚಿತ್ರಜೀವನದಲ್ಲಿಯೇ ಇದು ಅತಿದೊಡ್ಡ ಮಟ್ಟದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿರುವ ಚಿತ್ರ. ಕೋಟಿ ರಾಮು ಎಂದೇ ಫೇಮಸ್ ಆಗಿರುವ ರಾಮು ಬ್ಯಾನರ್‍ನ 37ನೇ ಚಿತ್ರ ರಾಜ್ ವಿಷ್ಣು.

    ದುಡ್ಡು ಕೊಟ್ಟು ಬರುವ ಯಾವೊಬ್ಬ ಪ್ರೇಕ್ಷಕನಿಗೂ ಮೋಸವಾಗಲ್ಲ. ಎರಡು ಗಂಟೆ ಕಾಲ ನಗಬಹುದು. ಬಾಂಧವ್ಯಗಳ ಕಥೆಯನ್ನೂ ನೋಡಬಹುದು ಎಂದಿದ್ದಾರೆ ರಾಮು.

    3 ವರ್ಷಗಳ ನಂತರ ಮತ್ತೆ ಜೊತೆಯಾಗಿರುವ ಶರಣ್-ಚಿಕ್ಕಣ್ಣ ಕಾಂಬಿನೇಷನ್, ಅವರಿಬ್ಬರ ನಗೆಯೂಟದ ಮಧ್ಯೆ ಉಪ್ಪಿನಕಾಯಿಯಂತೆ ಕಾಣುತ್ತಿರುವ ಸಾಧುಕೋಕಿಲ, ಹಿಟ್ ಆಗಿರುವ ಹಾಡುಗಳು.. ಎಲ್ಲವೂ ನಿರೀಕ್ಷೆಯನ್ನು ಭರ್ಜರಿಯಾಗಿಯೇ ಹೆಚ್ಚಿಸಿವೆ.

  • ಶ್ರವಣಬೆಳಗೊಳಕ್ಕೆ ಬಾಹುಬಲಿ ಮೂರ್ತಿ ರಹಸ್ಯ ಭರತ ಬಾಹುಬಲಿಯಲ್ಲಿ..

    bharatha baahubali has unique story

    ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಕಥೆ ಗೊತ್ತಲ್ಲ, ಅದನ್ನು ಕಟ್ಟಿಸಿದ್ದು ಚಾವುಂಡರಾಯ. ಅದು ಭರತನ ತಮ್ಮ ಬಾಹುಬಲಿಯ ವಿಗ್ರಹ. ಜೈನ ಧರ್ಮ ಉಚ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಎಲ್ಲವನ್ನೂ ತ್ಯಜಿಸಿ ಶ್ರವಣಬೆಳಗೊಳಕ್ಕೆ ಬಂದು ಸನ್ಯಾಸಿಯಾಗಿರುತ್ತಾನೆ.. ಇವೆಲ್ಲ ಕಥೆ ಇತಿಹಾಸ ಓದಿದವರಿಗೆ ಗೊತ್ತಿರುವಂಥದ್ದೇ. ಆದರೆ, ಭರತ ಬಾಹುಬಲಿಯಲ್ಲಿ ಇನ್ನೂ ಒಂದು ಕಥೆಯಿದೆ.

    ಶ್ರವಣಬೆಳಗೊಳಕ್ಕೆ ಬಾಹುಬಲಿ ವಿಗ್ರಹ ಬಂದಿದ್ದು ಹೇಗೆ ಅನ್ನೋ ಕಥೆ ಹೇಳಿದ್ದಾರೆ ಮಂಜು ಮಾಂಡವ್ಯ. ಇಡೀ ಚಿತ್ರವನ್ನು ಥಿಯೇಟರಿನಲ್ಲಿ ಆರಂಭದಿಂದಲೇ ನೋಡಿ. ಇಲ್ಲದೇ ಹೋದರೆ ಲಿಂಕ್ ಮಿಸ್ ಆಗುತ್ತೆ. ಹೊಸ ಸ್ಟೈಲ್‍ನಲ್ಲಿ ಚಿತ್ರಕಥೆ ಹೇಳಲಾಗಿದೆ ಎನ್ನುವ ಮಂಜು ಮಾಂಡವ್ಯಗೆ, ಚಿತ್ರವನ್ನು ಜನ ಸ್ವೀಕರಿಸಿದ ಬಗ್ಗೆ ಖುಷಿಯಿದೆ.

    ಶಿವಪ್ರಕಾಶ್ ನಿರ್ಮಾಣದ ಚಿತ್ರದಲ್ಲಿ ಮಂಜು ಮಾಂಡವ್ಯ ಜೊತೆ ಚಿಕ್ಕಣ್ಣ, ಶ್ರೀನಿವಾಸ ಮೂರ್ತಿ ನಟಿಸಿದ್ದಾರೆ

  • ಸಾಧು, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಮತ್ತು ಶೃತಿ ಹರಿಹರನ್ ಕಾಮಿಡಿ

    sruthi, chikkana in horror comedy

    ರಘುಪತಿ ರಾಘವ ರಾಜಾರಾಮ್. ಇದು ಹೀರೋಗಳ ಹೆಸರು ಅಷ್ಟೇ ಅಲ್ಲ, ಚಿತ್ರದ ಹೆಸರೂ ಹೌದು. ಚಿತ್ರಕ್ಕೆ ನಾಲ್ವರು ಹೀರೋಗಳು. ಸಾಧುಕೋಕಿಲ ಮಹಾನ್ ಮಹಾನ್ ಕುಡುಕ ಪೂಜಾರಿಯಾಗಿ, ಚಿಕ್ಕಣ್ಣ ಬಾರ್ ಸರ್ವರ್ ಆಗಿ, ರವಿಶಂಕರ್ ಗೌಡ ಎಟಿಎಂ ವಾಚ್‍ಮನ್ ಆಗಿ ಹಾಗೂ ಕುರಿ ಪ್ರತಾಪ್ ಹೇರ್ ಕಟಿಂಗ್ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಲ್ವರಿಗೂ ಒಬ್ಬಳೇ ನಾಯಕಿ ಶೃತಿ ಹರಿಹರನ್.

    ಶ್ರೀಕಂಠ ಹಾಗೂ ಪಟಾಕಿ ಚಿತ್ರಗಳ ನಂತರ ಮಂಜು ಸ್ವರಾಜ್ ನಿರ್ದೇಶಿಸುತ್ತಿರುವ ಹಾರರ್ ಕಾಮಿಡಿ ಚಿತ್ರವಿದು. ಎಸ್.ವಿ.ಬಾಬು ನಿರ್ಮಾಣದ ಚಿತ್ರ ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿದೆ. ಭಯ ಬೀಳಿಸುತ್ತಲೇ ನಕ್ಕು ನಲಿಸುವ ಕಥೆ ಚಿತ್ರದಲ್ಲಿದೆಯಂತೆ. 

  • ಸಾಲ ಕೊಟ್ಟವನಿಗೆ ಸುಪಾರಿ - ಚಿಕ್ಕಣ್ಣ ನಟಿಸಿದ್ದ ಸಿನಿಮಾ ನಿರ್ದೇಶಕ ಅರೆಸ್ಟ್

    chikkana, supari director harish image

    ಇತ್ತೀಚೆಗೆ ‘ಸ್ಟೈಲ್​ ರಾಜ’ ಎಂಬ ಸಿನಿಮಾ ಬಂದಿತ್ತು. ಆ ಚಿತ್ರದ ನಿರ್ದೇಶಕ ಹರೀಶ್ ಎಂಬ ಹೊಸ ಹುಡುಗ. ಈಗ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಅರೆಸ್ಟ್ ಆಗಿರುವುದು ಆತನೇ. 

    ಚಿತ್ರ ನಿರ್ದೇಶಕರಾದ ಹರೀಶ್ ಜೊತೆ  ರಾಜಶೇಖರ್​, ಸತೀಶ್​, ಸುರೇಶ್ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಎಂಬುವವರ ಅತ್ತೆಯ ಮಗಳು ಈತನಿಗೆ ಎರಡೂವರೆ ಲಕ್ಷ ಕೊಟ್ಟಿದ್ದರಂತೆ. ಆ ಹಣವನ್ನು ವಾಪಸ್ ಪಡೆಯಲು ಅಶೋಕ್ ಹರೀಶ್​ನನ್ನು ಕೇಳಿದ್ದರು. ಎಷ್ಟು ಬಾರಿ ಕೇಳಿದರೂ ಒಂದಿಲ್ಲಾ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಹರೀಶ್, ವಿನೋದ್ ಪ್ರಭಾಕರ್​ಗೆ ಒಂದು ಚಿತ್ರ ಮಾಡುತ್ತೇನೆ. ನಂತರ ನಿಮ್ಮ ಸಾಲ ವಾಪಸ್ ಕೊಡುತ್ತೇನೆ ಎನ್ನುತ್ತಿದ್ದ.

    ಈಗ ಹಣವನ್ನೂ ಕೊಡದೆ, ಅಶೋಕ್​ನನ್ನೇ ಮುಗಿಸಲು ಸುಪಾರಿ ಕೊಟ್ಟು ಸಿಕ್ಕಿಬಿದ್ದಿದ್ದಾನೆ. ಇತ್ತೀಚೆಗೆ ರೌಡಿ ಸತೀಶ್ & ಟೀಂ, ಅಶೋಕ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದರು. ಅದು ಕೇಸ್ ಆಗಿತ್ತು. ತನಿಖೆಯ ವೇಳೆ ನಿರ್ದೇಶಕ ಹರೀಶ್, ಅಶೋಕ್ ಕೊಲೆಗೆ ಸುಪಾರಿ ಕೊಟ್ಟಿದ್ದು ಬೆಳಕಿಗೆ ಬಂದಿದೆ.

    ಸ್ಟೈಲ್ ರಾಜ, ಇದೇ ವರ್ಷ ರಿಲೀಸ್ ಆಗಿದ್ದ ಚಿತ್ರ. ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿದ್ದರು. ನಾಯಕನ ಸ್ನೇಹಿತನ ಪಾತ್ರವಾಗಿದ್ದರೂ, ಚಿತ್ರದ ಪ್ರಮೋಷನ್​ಗೆ ಚಿಕ್ಕಣ್ಣನವರನ್ನೇ ಹೈಲೈಟ್ ಮಾಡಲಾಗಿತ್ತು. ಆದರೆ, ಚಿತ್ರ ಬಾಕ್ಸಾಫೀಸ್​ನಲ್ಲಿ ಸೋತಿತ್ತು.