` actor sharan, - chitraloka.com | Kannada Movie News, Reviews | Image

actor sharan,

  • ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

    ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

    ಗುರು ಶಿಷ್ಯರು ರಿಲೀಸ್ ಆದ ಒಂದೇ ವಾರಕ್ಕೆ ರಿಲೀಸ್ ಆಗಿದ್ದು ಕಾಂತಾರ. ಕ್ರಿಕೆಟ್ ಭಾಷೆಯಲ್ಲಿ ಹೇಳೋದಾದರೆ ಕಾಂತಾರದ ಓಟ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗಿನಂತಿದೆ. ಗುರು ಶಿಷ್ಯರ ಓಟ ವಿರಾಟ್ ಕೊಹ್ಲಿ ಬ್ಯಾಟಿಂಗಿನಂತೆ. ಸ್ಟಡಿ ಗೋ. ಆದರೆ ಗುರು ಶಿಷ್ಯರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆಯಲ್ಲಿ ಕಥೆಗಳ ಹುಡುಕಾಟ ಶುರುವಾಗಿರೋದು ವಿಶೇಷ.

    ಜಡೇಶ್ ಕುಮಾರ್ ಹಂಪಿ ಖೋಖೋ ಎಂಬ ಹಳ್ಳಿ ಆಟವನ್ನು ಗುರು ಶಿಷ್ಯರು ಚಿತ್ರದಲ್ಲಿ ಎಲ್ಲ ಕಾಮಿಡಿ, ಮನರಂಜನೆ, ಪ್ರೀತಿಯೊಂದಿಗೆ ಬೆರೆಸಿ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸಿದ್ದರು. ಶರಣ್-ನಿಶ್ವಿಕಾ, 12 ಹುಡುಗರ ಅದ್ಭುತ ಆಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗಲೂ ಚಿತ್ರಮಂದಿರಗಳಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಅತ್ತ ಕಾಂತಾರ ಕೂಡಾ ಕರಾವಳಿ ಕಡೆಯ ಅಪ್ಪಟ ನಂಬಿಕೆ ಆಚರಣೆಗಳ ಕುರಿತು ಬೆಳಕು ಚೆಲ್ಲಿರುವ ಚಿತ್ರ.

    ಈ ಎರಡೂ ಚಿತ್ರಗಳ ಗೆಲುವು ಕನ್ನಡ ಚಿತ್ರರಂಗದವರನ್ನು ಹೊಸ ಹುಡುಕಾಟಕ್ಕೆ ಪ್ರೇರೇಪಿಸಿವೆ. ಎರಡೂ ಕೂಡಾ ದೇಸಿ ಕಥೆಗಳದ್ದು. ಇಲ್ಲಿನ ಮಣ್ಣಿನ ಕಥೆಗಳು. ಇವುಗಳಿಗೆ ಸ್ಥಳೀಯ ಜನಪದಗಳನ್ನು ಕೂಡಾ ಹೊಂದಿಸಿ ಜೋಡಿಸಲಾಗಿದೆ. ಇದು ಹೊಸ ಕ್ರಾಂತಿಗೆ ನಂದಿ ಹಾಡಿದ್ದು ಇಂತಹ ಹಳ್ಳಿ ಸೊಗಡಿನ ಕಥೆಗಳ ಹುಡುಕಾಟ ಈಗ ಶುರುವಾಗಿದೆ. ಬರಲಿ.. ಅಂತಹ ಎಲ್ಲ ಕಥೆಗಳೂ ಸಿನಿಮಾಗಳಾಗಿ ಕನ್ನಡದ ಸಂಸೃತಿ ವಿಜೃಂಭಿಸಲಿ.

  • ಗುರುವನ್ನೂ ಮೀರಿಸಿದ ಶಿಷ್ಯರು

    ಗುರುವನ್ನೂ ಮೀರಿಸಿದ ಶಿಷ್ಯರು

    ಶಾಲಾ ಪಠ್ಯ ವಿವಾದ ಯಾರನ್ನೂ ಬಿಡುತ್ತಿಲ್ಲ. ಜಾತಿ, ಮತ, ಧರ್ಮ, ಪಂಥ.. ಎಲ್ಲವನ್ನೂ ಮೀರಿದ್ದ ನಟ ಡಾ.ರಾಜ್ ಕುಮಾರ್ ಅವರಿಗೂ ಇದರ ಬಿಸಿ ತಟ್ಟಿದೆ. ಪ್ರಸಕ್ತ ವರ್ಷದ ಪಠ್ಯ ಪುಸ್ತಕ ಪರಿಷ್ಕೃತ ಕ್ರಮದಲ್ಲಿ ೭ ಸಾಹಿತಿಗಳ ಕೃತಿಯನ್ನು ವಾಪಸ್ ಪಡೆಯುವಂತೆ ಸರ್ಕಾರ ಸೂಚಿಸಿದೆ. ಅದರಲ್ಲಿ ಡಾ.ರಾಜ್ ಕುಮಾರ್ ಪಠ್ಯವೂ ಸೇರಿರುವುದು ವಿಶೇಷ.

    ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕAಬಳಿ ಅವರ ಹೀಗೊಂದು ಟಾಪ್ ಪ್ರಯಾಣ, ಸತೀಶ್ ಕುಲಕರ್ಣಿ ಅವರ ಕಟ್ಟತೇವು ನಾವು, ಸುಕನ್ಯಾ ಮಾರುತಿ ಅವರ ಏಣಿ ಹಾಗೂ ಎಂ.ರುಕ್ಕೋಜಿ ರಾವ್ ಅವರು ಬರೆದಿದ್ದ ಡಾ.ರಾಜ್ ಕುಮಾರ್ ಗದ್ಯವನ್ನು ವಾಪಸ್ ಪಡೆಯಲಾಗಿದೆ.

    ೬ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಡಾ.ರಾಜಕುಮಾರ್ ಅವರ ಗದ್ಯವನ್ನು ಸೇರಿಸಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೋಮುವಾದೀಕರಣ ಮಾಡುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು ಪಠ್ಯವನ್ನು ವಾಪಸ್ ಪಡೆದಿದ್ದರು. ಅವರಲ್ಲಿ ರುಕ್ಕೋಜಿ ರಾವ್ ಕೂಡಾ ಸೇರಿದ್ದು, ಇದರಿಂದಾಗಿ ಡಾ.ರಾಜ ಕುಮಾರ್ ಪಠ್ಯವನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ.

    ಸಾಮಾನ್ಯವಾಗಿ ಮೊದಲು ಅನುಮತಿ ನೀಡಲಾಗಿರುತ್ತದೆ. ಏಕೆಂದರೆ ಅನುಮತಿಯಿಲ್ಲದೆ ಪಠ್ಯ ಪುಸ್ತಕ ಮುದ್ರಿಸಲು ಬರುವುದಿಲ್ಲ. ಆದರೆ ವಿವಾದದ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣವಾದ ನಂತರ ಅನುಮತಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದ ಪಠ್ಯ ಪರೀಕ್ಷೆಯಲ್ಲಿ ಈ ಕೃತಿಗಳಿಗೆ ಸಂಬAಧಿಸಿದ ಪ್ರಶ್ನೆಗಳೂ ಇರುವುದಿಲ್ಲ. ಶಿಕ್ಷಕರು ಪಾಠವನ್ನೂ ಮಾಡುವುದಿಲ್ಲ. ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಮುದ್ರಣವೂ ಆಗುವುದಿಲ್ಲ.

  • ಘೋಸ್ಟ್ ಹಂಟರ್ಸ್ ಶರಣ್ ಗ್ಯಾಂಗ್.. ಛೂಮಂತರ್

    ಘೋಸ್ಟ್ ಹಂಟರ್ಸ್ ಶರಣ್ ಗ್ಯಾಂಗ್.. ಛೂಮಂತರ್

    ಕಾಮಿಡಿ ಮಾಡುವ ಶರಣ್ ದೆವ್ವಗಳ ಬೇಟೆಗೆ ಹುಡುಕಾಟಕ್ಕೆ ನಿಂತರೆ ಹೇಗಿರುತ್ತೆ. ಮುದ್ದು ಮುದ್ದಾದ ನಗುವಿನ ಒಡತಿ ಆದಿತಿ ಪ್ರಭುದೇವ ದೆವ್ವಗಳ ಜೊತೆ ಮಾತನಾಡುತ್ತಿದ್ದರೆ.. ಪೆದ್ದು ಪೆದ್ದು ನಗೆಯ ಮೂಲಕವೇ ನಗಿಸುವ ಚಿಕ್ಕಣ್ಣ ಕೂಡಾ ಹ್ರಾಂ..ಕ್ರೀಂ.. ಎನ್ನುತ್ತಿದ್ದರೆ.. ನಿರ್ದೇಶಕ ನವನೀತ್ ಛೂಮಂತರ್ ಎನ್ನುತ್ತಾರೆ. ಮೈತುಂಬಾ ಭಸ್ಮ..ಬೂದಿ.. ರುದ್ರಾಕ್ಷಿ.. ಮಣಿಸರ.. ತಲೆಗೆ ಕಲರ್ ಕಲರ್ ರುಮಾಲು.. ಚೈನುಗಳು.. ನೋಡೋದಕ್ಕೇ ಸಖತ್ ಆಗಿ ಕಾಣುವ ಇವರು ಘೋಸ್ಟ್ ಹಂಟರ್ಸ್. ದೆವ್ವಗಳ ಬೇಟೆಯೇ ಇವರ ಕಾಯಕ. ಸ್ವಲ್ಪ ಅಪ್‍ಡೇಟ್ ಆಗಿರುವ ಟೆಕ್ನಾಲಜಿಯೂ ಗೊತ್ತಿರೋ ಘೋಸ್ಟ್ ಹಂಟರ್ಸ್. ಇವರು ಛೂಮಂತರ್ ಎಂದರೆ ದೆವ್ವಗಳು ಪ್ರತ್ಯಕ್ಷವಾಗ್ತವೆ. ಛೂಮಂತರ್ ಎಂದರೆ ಅದೇ ಪ್ರತ್ಯಕ್ಷವಾದ ದೆವ್ವಗಳು ಓಡಿ ಹೋಗುತ್ತವೆ. ಹೀಗೆ ದೆವ್ವಗಳನ್ನೇ ಬೇಟೆಯಾಡುವ ಗ್ಯಾಂಗ್‍ನ ಲೀಡರ್ ಶರಣ್. ಆ ಗ್ಯಾಂಗ್‍ನ ನಾಯಕಿ ಅದಿತಿ ಪ್ರಭುದೇವ. ಅವರ ಜೊತೆಯಲ್ಲಿರೋ ವ್ಯಕ್ತಿ ಚಿಕ್ಕಣ್ಣ.

    ಛೂಮಂತರ್ ಅನ್ನೋದು ಸಿನಿಮಾ ಹೆಸರು. ಆಕ್ಷನ್ ಕಟ್ ಹೇಳುತ್ತಿರೋದ ಕರ್ವ ಖ್ಯಾತಿಯ ನವನೀತ್. ಕರ್ವದಲ್ಲಿ ಬೇಜಾನ್ ಭಯ ಸೃಷ್ಟಿಸಿದ್ದ ನವನೀತ್ ಈ ಬಾರಿ ಘೋಸ್ಟ್ ಹಂಟರ್ ಸ್ಟೋರಿ ಕೈಗೆತ್ತಿಕೊಂಡಿದ್ದಾರೆ. ನಾವೆಲ್ಲ ಸಾಧಾರಣವಾಗಿ ಮಕ್ಕಳನ್ನು ಭಯ ಪಡಿಸಲು ಛೂಮಂತರ್ ಎಂದು ಹೇಳುತ್ತೇವೆ. ನೆಗೆಟಿವ್ ಎನರ್ಜಿಯನ್ನು ಪ್ರಮೋಟ್ ಮಾಡುವ ಪದವದು. ನಮ್ಮ ಛೂಮಂತರ್ ಸಿನಿಮಾದಲ್ಲಿ ಶರಣ್, ಆದಿತಿ ಹಾಗೂ ಚಿಕ್ಕಣ್ಣ ಮಾಡರ್ನ್ ಘೋಸ್ಟ್ ಹಂಟರುಗಳಾಗಿ ನಟಿಸಿದ್ದಾರೆ. ಈ ಘೋಸ್ಟ್ ಹಂಟರ್ ಟೆಕ್ಕಿ ಸೇವಿಗಳು. ಪ್ರೊಫೆಷನಲ್ಲಾಗಿ ಅಪ್ರೋಚ್ ಮಾಡುತ್ತಾರೆ ಎನ್ನುತ್ತಾರೆ ನವನೀತ್. ಶರಣ್, ಆದಿತಿ, ಚಿಕ್ಕಣ್ಣ  ಜೊತೆ ಎನ್‍ಆರ್‍ಐ ದಂಪತಿಗಳಾಗಿ ಮೇಘನಾ ಗಾಂವ್ಕರ್ ಹಾಗೂ ಪ್ರಭು ಮುಂಡ್ಕರ್ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಈಗಾಗಲೇ ಲಂಡನ್, ಉತ್ತರಾಖಂಡ್, ಮೈಸೂರು, ಬೆಂಗಳೂರುಗಳಲ್ಲಿ ನಡೆದಿದೆಯಂತೆ.

  • ಚುಟುಚುಟು ಅಂತಾನೇ ಸಕ್ಸಸ್ 50..

    rambo 2 completes 50days

    ರ್ಯಾಂಬೋ 2. ಈ ವರ್ಷದ ಮತ್ತೊಂದು ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ, ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಟಗರು ನಂತರ ಈ ವರ್ಷ ದೊಡ್ಡಮಟ್ಟದ ಸಕ್ಸಸ್ ಕಂಡ ಸಿನಿಮಾ ರ್ಯಾಂಬೋ2. ವಿದೇಶಗಳಲ್ಲಿಯೂ ಯಶಸ್ವಿಯಾಗಿರುವ ಸಿನಿಮಾ, ಶತದಿನೋತ್ಸವ ಪೂರೈಸಿದರೂ ಅಚ್ಚರಿಯಿಲ್ಲ.

    ಶರಣ್, ಆಶಿಕಾ ರಂಗನಾಥ್, ರವಿಶಂಕರ್, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾಗೆ ಅನಿಲ್ ಕುಮಾರ್ ನಿರ್ದೇಶನವಿತ್ತು. ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದರು. ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ ಭರ್ಜರಿಯಾಗಿ ಗೆದ್ದಿದೆ.

    ಚಿತ್ರಲೋಕ ಡಾಟ್ ಕಾಮ್ ಮೂಲಕ ಅಭಿಮಾನಿಗಳ ಜೊತೆ ನೇರವಾಗಿ ಮಾತನಾಡಿದ ಚಿತ್ರದ ನಾಯಕ ಶರಣ್, ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

  • ಜೋಗಿ, ಆಪ್ತಮಿತ್ರ ಹಿಟ್ ನೆನಪಲ್ಲಿ ರಾಜ್ ವಿಷ್ಣು

    raj vishnu sweet memory

    ವರಮಹಾಲಕ್ಷ್ಮಿ ಹಬ್ಬ ಕನ್ನಡ ಚಿತ್ರರಂಗಕ್ಕೆ ಶುಭ ತಂದಿರುವುದೇ ಹೆಚ್ಚು. ಅದರಲ್ಲಿಯಂತೂ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಕಾಣುತ್ತಿರುವ ರಾಜ್ ವಿಷ್ಣು ಚಿತ್ರ, ಆಪ್ತಮಿತ್ರ ಮತ್ತು ಜೋಗಿ ಚಿತ್ರಗಳ ನೆನಪಿನ ಗುಂಗಿನಲ್ಲಿದೆ. 

    ಅದಕ್ಕೆ ಕಾರಣ ಇಷ್ಟೆ. ಆ ಎರಡೂ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆಗಿದ್ದವು. ಸೂಪರ್ ಹಿಟ್ ಆಗಿದ್ದವು. ಈಗ ರಾಜ್ ವಿಷ್ಣು ಕೂಡಾ ಹಬ್ಬದ ದಿನವೇ ತೆರೆಕಾಣುತ್ತಿದೆ. ಶರಣ್, ಚಿಕ್ಕಣ್ಣ ಅಭಿನಯದ ಈ ಕಾಮಿಡಿ ಚಿತ್ರ ಈಗಾಗಲೇ ಕ್ರೇಝ್ ಸೃಷ್ಟಿಸಿದೆ. ರಾಮು ನಿರ್ಮಾಣದ ರಾಜ್ ವಿಷ್ಣು ಕೂಡಾ ಜೋಗಿ, ಆಪ್ತಮಿತ್ರದ ಹಾಗೆ ಸೂಪರ್ ಹಿಟ್ ಆಗುತ್ತಾ..? ಅಭಿಮಾನಿಗಳ ನಿರೀಕ್ಷೆಯಂತೂ ಹಾಗೇ ಇದೆ.

  • ಡಿ.21ಕ್ಕೆ ಲಡ್ಡು ಬಂದು ಬಾಯಿಗ್ ಬೀಳುತ್ತೆ..!

    Sharan And Tharun Sudhir To Join Hands Again

    ಡಿಸೆಂಬರ್ 21ಕ್ಕೆ ಅಭಿಮಾನಿಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬೀಳುತ್ತೆ. ಲಡ್ಡು ಬಂದು ಬಾಯಿಗ್ ಬಿತ್ತಾ ಜಾಹೀರಾತು ಕಲ್ಪನೆ ಮಾಡಿಕೊಂಡು ಏನೇನೋ ಕನಸು ಕಾಣಬೇಡಿ. ಡಿಸೆಂಬರ್ 21ಕ್ಕೆ ಲಡ್ಡು ಸಿನಿಮಾ ಹೌಸ್, ತಮ್ಮ ಹೊಸ ಚಿತ್ರದ ಟೈಟಲ್‍ನ್ನು ತೋರಿಸುತ್ತೆ, ಅಷ್ಟೆ.

    ಕಾಮಿಡಿ ಅಧ್ಯಕ್ಷ ಶರಣ್, ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಸೇರಿ ನಿರ್ಮಿಸುತ್ತಿರೋ ಹೊಸ ಚಿತ್ರ ಇದು. ಒಂದು ದೊಡ್ಡ ವಿಜಲ್ ಮತ್ತದರ ಮೇಲೆ ಮೇಡ್ ಇನ್ ಕರ್ನಾಟಕ 1995 ಎಂದು ಬರೆಯಲಾಗಿದೆ. ಶರಣ್ ಇರೋದ್ರಿಂದ ಕಾಮಿಡಿ ಬೇಸ್ಡ್ ಸಬ್ಜೆಕ್ಟ್ ಇರಬಹುದು ಎಂದು ಊಹಿಸಿಕೊಳ್ಳಬಹುದು. ಆದರೆ, ಶರಣ್ ಆಗಲೀ, ತರುಣ್ ಸುಧೀರ್ ಆಗಲೀ.. ಪ್ರಯೋಗಗಳಿಗೆ ಒಡ್ಡಿಕೊಳ್ಳುವವರು. ಹೀಗಾಗಿ.. ಡಿ.21ರಂದು ರಿಲೀಸ್ ಆಗೋ ಟೈಟಲ್ ನೋಡುವವರೆಗೂ ಲಡ್ಡು ಟೇಸ್ಟ್ ಬಗ್ಗೆ ಕುತೂಹಲ ಮಾತ್ರ ಇಟ್ಟುಕೊಳ್ಳಿ.

  • ದರ್ಶನ್ ಹಾದಿಯಲ್ಲಿ ಶರಣ್

    sharan on darshan's way

    ಶರಣ್ ಅಭಿನಯದ ಚಿಕ್ಕಣ್ಣ ಜೋಡಿಯ ರಾಜ್-ವಿಷ್ಣು ಆಗಸ್ಟ್ 4ಕ್ಕೆ ಬಿಡುಗಡೆಯಾಗ್ತಾ ಇದೆ. ಅದು ಮುಗಿದ ನಂತರ ಸತ್ಯ ಹರಿಶ್ಚಂದ್ರ ಚಿತ್ರ ವೇಗ ಪಡೆದುಕೊಳ್ಳುತ್ತೆ.

    ಇದರ ಮಧ್ಯೆ ಶರಣ್ ಹೊಸ ಚಿತ್ರವೊಂದಕೆಕ ಸಜ್ಜಾಗುತ್ತಿದ್ದಾರೆ. ಶರಣ್ ಲಡ್ಡೂ ಬ್ಯಾನರ್‍ನಲ್ಲೇ ಹೊಸ ಚಿತ್ರ ಸೆಟ್ಟೇರಲಿದೆ. ಆ ಚಿತ್ರ ನಿರ್ಮಿಸಿದ್ದ ಅಟ್ಲಾಂಟಾ ನಾಗೇಂದ್ರ ಚಿತ್ರದ ನಿರ್ಮಾಪಕರು. ಅವರಷ್ಟೇ ಅಲ್ಲ, ಚಿತ್ರದ ತಂತ್ರಜ್ಞರೂ ಆ ಚಿತ್ರಕ್ಕೆ ನಿರ್ಮಾಪಕರಾಗುತ್ತಿದ್ದಾರೆ.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್, ಇವರೆಲ್ಲ ವರ್ಕಿಂಗ್ ಪಾರ್ಟ್‍ನರ್‍ಗಳಾಗುತ್ತಿದ್ದಾರೆ. ಚಿತ್ರದ ಲಾಭದಲ್ಲಿ ಅವರಿಗೂ ಶೇರು ಸಿಗಲಿದೆ.

    ಈ ಹಿಂದೆ ಇಂಥಾದ್ದೊಂದು ಪ್ರಯತ್ನ ಮಾಡಿದ್ದವರು ನಟ ದರ್ಶನ್. ತಮ್ಮ ಬುಲ್‍ಬುಲ್ ಚಿತ್ರಕ್ಕೆ ತಂತ್ರಜ್ಞರನ್ನೆಲ್ಲ ನಿರ್ಮಾಪಕರನ್ನಾಗಿಸಿದ್ದರು. ಲಾಭದಲ್ಲಿ ಪಾಲನ್ನೂ ಹಂಚಿದ್ದರು. ಅದೇ ಹಾದಿಯಲ್ಲಿ ಈಗ ಶರಣ್ ಹೆಜ್ಜೆಯಿಡುತ್ತಿದ್ದಾರೆ. ಶುಭವಾಗಲಿ.

    Related Articles:-

    Atlanta Nagendra Movie With Sharan

  • ದಸರಾಗೆ ಅಮೆರಿಕ ಅಧ್ಯಕ್ಷನ ಪಯಣ

    adhyakashya in america to release for dasara

    2014ರಲ್ಲಿ ತೆರೆ ಕಂಡಿದ್ದ ಅಧ್ಯಕ್ಷನಿಗೂ, ಈ ಅಮೆರಿಕದಲ್ಲಿರೋ ಅಧ್ಯಕ್ಷನಿಗೂ ಸಂಬಂಧವಿಲ್ಲ. ಈ ಅಧ್ಯಕ್ಷ ಇನ್ ಅಮೆರಿಕ ಬರ್ತಾ ಇರೋದು ದಸರಾಗೆ. ಅಕ್ಟೋಬರ್ 4ಕ್ಕೆ ಪ್ರತ್ಯಕ್ಷವಾಗೋ ಅಧ್ಯಕ್ಷ ನಗೆಯ ಹಬ್ಬದೂಟವನ್ನೇ ಬಡಿಸಲಿದ್ದಾನೆ.

    ಶರಣ್ ಜೊತೆಗೆ ತುಪ್ಪದ ಹುಡುಗಿ ರಾಗಿಣಿ ಇದ್ದಾರೆ. ದಿಶಾಪಾಂಡೆ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ತಬಲಾನಾಣಿ.. ಹೀಗೆ ಕಾಮಿಡಿ ಕಿಲಾಡಿಗಳ ದಂಡೇ ಚಿತ್ರದಲ್ಲಿದೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ವಿಶ್ವಪ್ರಸಾದ್, ವಿವೇಕ್ ಕುಚಿಬೊಟ್ಲ ಚಿತ್ರದ ನಿರ್ಮಾಪಕರು.

     

  • ದೇಖೋ ದೇಖೋ ಖೋಖೋ ಖೋಖೋ : ಗುರುಶಿಷ್ಯರು ಗೆದ್ದ ಸಂಭ್ರಮದಲ್ಲಿ..

    ದೇಖೋ ದೇಖೋ ಖೋಖೋ ಖೋಖೋ : ಗುರುಶಿಷ್ಯರು ಗೆದ್ದ ಸಂಭ್ರಮದಲ್ಲಿ..

    ಗುರು ಶಿಷ್ಯರು ಸಿನಿಮಾ ಕ್ರೇಜ್ ಜೋರಾಗಿಯೇ ಇದೆ. ಕನ್ನಡಿಗರಿಗೆ ಅಪರೂಪದ ಕ್ರೀಡಾ ಸಿನಿಮಾ ಸಿಕ್ಕಿದೆ. ಅದೂ ನಮ್ಮದೇ ನೆಲದ ಖೋಖೋ. ಅದನ್ನು ಚೆಂದದ ಕಥೆ, ಚಿತ್ರಕಥೆಯೊಂದಿಗೆ.. ಅದ್ಭುತ ಮೇಕಿಂಗ್ ಜೊತೆ.. ಹೇಳಿರೋದು ಜಡೇಶ್ ಕುಮಾರ್ ಹಂಪಿ.

    ನಾನು, ನಿಶ್ವಿಕಾ, ತರುಣ್ ಅಲ್ಲ. ಚಿತ್ರದ ಹೀರೋಗಳು ನಮ್ಮ ಹುಡುಗರು. 12 ಹುಡುಗರ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಶರಣ್. ಚಿತ್ರದ ನಿರ್ದೇಶಕ ಜಡೇಶ್ ಅವರನ್ನು ಸ್ಪೆಷಲ್ಲಾಗಿಯೇ ಹೊಗಳಿದ್ದಾರೆ.

    ಥಿಯೇಟರಿಗೆ ರಿಯಾಕ್ಷನ್ ನೋಡೋಕೆ ಬಂದ ಶರಣ್, ನಿಶ್ವಿಕಾಗೆ ಅಭಿಮಾನಿಗಳು ಸೇಮ್ ಶಿಷ್ಯರು ಗುರುಗಳ ಕಾಲೆಳೆಯುವಂತೆಯೇ ಕಾಲೆಳೆದದ್ದು ವಿಶೇಷವಾಗಿತ್ತು. ಶರಣ್ ಕಕ್ಕಾಬಿಕ್ಕಿಯಾಗಿ.. ಒಳಗೊಳಗೇ ಖುಷಿಯಾಗಿದ್ದರು.

    ಇದು ಕನ್ನಡಕ್ಕೆ ಮತ್ತು ಖೋಖೋಗೆ ಸಿಕ್ಕ ಗೆಲುವು ಎನ್ನುವುದು ಜಡೇಶ್ ಕುಮಾರ್ ಮಾತು. ಕನ್ನಡದಲ್ಲಿ ಇದು ಹೊಸ ಟ್ರೆಂಡ್ ಸೃಷ್ಟಿಸುತ್ತೆ ಎಂಬ ಮಾತೇ ಥ್ರಿಲ್ ಕೊಟ್ಟಿದೆ ಎಂದಿದ್ದಾರೆ.

  • ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೇಳಿದ್ದಿದು. ಟ್ರೇಲರ್ ರಿಲೀಸ್‍ಗಾಗಿಯೇ ಬಂದಿದ್ದ ಧ್ರುವ ತಮ್ಮ ಮತ್ತು ಪ್ರೇರಣಾ ಅವರೇ ಡೇಟಿಂಗ್ ಡೇಸ್ ಸೀಕ್ರೆಟ್ ಹೇಳಿದರು.

    ಶರಣ್ ಸಿನಿಮಾ ಎಂದೊಡನೆ ನನಗೆ ನೆನಪಾಗೋದು ಪ್ರೇರಣಾ. ನಾವು ಡೇಟಿಂಗ್‍ನಲ್ಲಿದ್ದಾಗ ಪ್ರೇರಣಾ ಶರಣ್ ಚಿತ್ರಗಳನ್ನು ಮಾತ್ರ ತಪ್ಪಿಸುತ್ತಲೇ ಇರಲಿಲ್ಲ. ನಾನು ಬ್ಯುಸಿ ಇದ್ದರೂ ಶರಣ್ ಸರ್ ಚಿತ್ರಗಳನ್ನು ಮಿಸ್ ಮಾಡದೇ ನೋಡುತ್ತಿದ್ದೆವು. ಅಧ್ಯಕ್ಷ, ವಿಕ್ಟರಿ.. ಹೀಗೆ ಯಾವುದೇ ಚಿತ್ರಗಳನ್ನು ನಾವು ಮಿಸ್ ಮಾಡಿಕೊಂಡಿಲ್ಲ. ನನ್ನ ಪತ್ನಿ ಪ್ರೇರಣಾ ಶರಣ್ ಫ್ಯಾನ್ ಎಂದರು ಧ್ರುವ ಸರ್ಜಾ.

    ಎಲ್ಲ ನಟರ ಅಭಿಮಾನಿಗಳೂ ಎಲ್ಲ ನಟರ ಸಿನಿಮಾಗಳನ್ನೂ ನೋಡಬೇಕು ಎಂದರು ಧ್ರುವ ಸರ್ಜಾ. ನಾನು ನನ್ನ ಜೀವನದಲ್ಲಿ ದೇವರೇ.. ಈ ಚಿತ್ರಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದೆ. ಅದರಲ್ಲಿ ಒಂದು ಉಳಿದವರು ಕಂಡಂತೆ. ಇನ್ನೊಂದು ಅವತಾರ ಪುರುಷ. ಪುಷ್ಕರ್ ಅವರಂತಹ ನಿರ್ಮಾಪಕರಿಗಾಗಿ ಈ ಸಿನಿಮಾ ಗೆಲ್ಲಬೇಕು ಎಂದವರು ಸಿಂಪಲ್ ಸುನಿ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ನಗಿಸೋದು ಶರಣ್ ಒಬ್ಬರೇ ಅಲ್ಲ.. ಮರಿ ಅಧ್ಯಕ್ಷರ ದಂಡೇ ಇದೆ..!

    adhyakasha in america movie speciality

    ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲ ಶಕ್ತಿಯೇ ಕಾಮಿಡಿ. ಇಡೀ ಚಿತ್ರ ನಡೆಯುವುದೇ ಹಾಸ್ಯದ ಮೇಲೆ. ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್ ಇದು. ಅಧ್ಯಕ್ಷರಾಗಿರೋದು ಶರಣ್. ಅವರಿಗೆ ಜೋಡಿಯಾಗಿರೋದು ರಾಗಿಣಿ ದ್ವಿವೇದಿ. ಹಾಗಂತ ಯೋಗಾನಂದ್ ಮುದ್ದಾನ್ ಶರಣ್-ರಾಗಿಣಿ ಜೋಡಿಗಷ್ಟೇ ಸೀಮಿತವಾಗಿಲ್ಲ. ಇಡೀ ಚಿತ್ರದಲ್ಲಿ ಮರಿ ಅಧ್ಯಕ್ಷರ ದಂಡೇ ಇದೆ.

    ಸ್ವತಃ ಯೋಗಾನಂದ್ ಮುದ್ದಾನ್ ಕಾಮಿಡಿ ಚಿತ್ರಗಳಿಗೆ ಸಂಭಾಷಣೆ ಬರೆಯುವುದಕ್ಕೆ ಹೆಸರುವಾಸಿಯಾಗಿದ್ದವರು. ಇವರ ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ ಕೂಡಾ ಇದ್ದಾರೆ. ಒಬ್ಬೊಬ್ಬರೂ ನಕ್ಕು ನಗಿಸೋಕೇ ಫೇಮಸ್.

    ಇಷ್ಟೆಲ್ಲಾ ಆಗಿಯೂ ಚಿತ್ರದಲ್ಲಿರೋದು ಡೈಲಾಗ್ ಕಾಮಿಡಿಗಿಂತ ಸಿಚುಯೇಷನ್ ಕಾಮಿಡಿ. ಸೀನ್ ನೋಡ್ತಾ ನೋಡ್ತಾನೇ ನಗ್ತಾ ಇರ್ತೀರಿ ಅನ್ನೋದು ಶರಣ್ ಕಾನ್ಫಿಡೆನ್ಸಿನ ಮಾತು. ಜಸ್ಟ್ ಎಂಜಾಯ್ ದಿಸ್ ವೀಕ್.

  • ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. : ಶಿಷ್ಯರಿಗೆ ಗುರುವಿನ ಪಾಠ

    ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. : ಶಿಷ್ಯರಿಗೆ ಗುರುವಿನ ಪಾಠ

    ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..

    ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..

    ಈ ಪದ್ಯವನ್ನು ಬರೆದವರು ಕುವೆಂಪು. ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಬ್ರಿಟಿಷರ ಸೆರೆಯಲ್ಲಿ ಸಾವನ್ನಪ್ಪಿದರು. 1929 ಸೆಪ್ಟೆಂಬರ್ 13. ಸತತ 2 ತಿಂಗಳು ಉಪವಾಸ ಸತ್ಯಾಗ್ರಹ ಮಾಡಿ ಜತೀಂದ್ರನಾಥರು ಮೃತಪಟ್ಟ ದಿನ. ಆಗ ಕುವೆಂಪು ಯುವಜನತೆಗೆ ಸ್ಫೂರ್ತಿ ನೀಡಲು ಬರೆದಿದ್ದ ಕವಿತೆ

    ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..

    ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..

    ಈ ಕವಿತೆಯನ್ನು 1969ರಲ್ಲಿ ಮಾರ್ಗದರ್ಶಿ ಅನ್ನೋ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ರಾಜಕುಮಾರ್, ಚಂದ್ರಕಲಾ ನಟಿಸಿದ್ದ ಚಿತ್ರದ ಹಾಡಿಗೆ ಸಂಗೀತ ನೀಡಿದ್ದವರು ಎಂ.ರಂಗರಾವ್. ಹಾಡಿದ್ದವನು ಪಿ.ಬಿ.ಶ್ರೀನಿವಾಸ್. ಇತಿಹಾಸ ಪ್ರಸಿದ್ಧವಾದ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳೋಕೆ ಕಾರಣವಿದೆ. ಈ ಹಾಡಿನ ಅದ್ಭುತ ಸಾಲುಗಳನ್ನಷ್ಟೇ ಹೆಕ್ಕಿಕೊಂಡು ಮತ್ತೊಂದು ಸ್ಫೂರ್ತಿಯ ಗೀತೆ ಹೊರತಂದಿದ್ದಾರೆ ಗುರು ಶಿಷ್ಯರು.

    ಆಣೆ ಮಾಡಿ ಹೇಳುತೀನಿ, ಗುರುಗಳು ನಮ್ಮ ಗುರುಗಳು ಎಂಬ ಎರಡು ಹಾಡುಗಳನ್ನು ಹೊರತಂದಿದ್ದ ಗುರು ಶಿಷ್ಯರು ಈಗ ನಡೆ ಮುಂದೆ ನಡೆ ಮುಂದೆ.. ಹಾಡನ್ನು ಹೊರತಂದಿದ್ದಾರೆ. ಚಿತ್ರದಲ್ಲಿ ಖೋಖೋ ಆಟ ಪ್ರಧಾನ ನಾಯಕನಾಗಿದ್ದು ಖೋಖೋ ಮಾಸ್ಟರ್ ಆಗಿ ಶರಣ್ ನಟಿಸಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವಂತೆ ಮಾಡುವ ಈ ಹಾಡು ಪವರ್‍ಫುಲ್ ಆಗಿದೆ. ಕುವೆಂಪು ಸಾಹಿತ್ಯವನ್ನು ಅದೇ ರೀತಿ ಬಳಸಿಕೊಳ್ಳಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ಕೈಲಾಶ್ ಖೇರ್ ಧ್ವನಿ ತುಂಬಿದ್ದಾರೆ.

    ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಜಡೇಶ್ ಕೆ ಹಂಪಿ ನಿರ್ದೇಶನವಿದೆ. ತರುಣ್ ಸುಧೀರ್ ಮತ್ತು ಶರಣ್ ಸ್ವತಃ ನಿರ್ಮಾಪಕರಾಗಿರೋ ಚಿತ್ರ ಸೆ.27ಕ್ಕೆ ಬಿಡುಗಡೆಯಾಗುತ್ತಿದೆ. 

  • ನಿಮಗೆ ಈ ಮಂಡಿಸ್ಟಾರ್ ಗೊತ್ತಾ..?

    sharan is now mandi star

    ರೆಬಲ್‍ಸ್ಟಾರ್ ಅಂದ್ರೆ ಅಂಬಿ, ಪವರ್ ಸ್ಟಾರ್ ಅಂದ್ರೆ ಪುನೀತ್, ಚಾಲೆಂಜಿಂಗ್ ಸ್ಟಾರ್ ಅಂದ್ರೆ ದರ್ಶನ್, ರೋರಿಂಗ್ ಸ್ಟಾರ್ ಅಂದ್ರೆ ಶ್ರೀಮುರಳಿ, ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್.. ಆದ್ರೆ ಈ ಮಂಡಿ ಸ್ಟಾರ್ ಅಂದ್ರೆ ಏನ್ರಿ..? ಈ ಪ್ರಶ್ನೆಗೆ ಉತ್ತರ ಕಾಮಿಡಿ ಸ್ಟಾರ್ ಶರಣ್.

    ಇದು ಶರಣ್‍ಗೆ ಅವರ ಸಿನಿಮಾ ತಂಡದವರೆಲ್ಲ ಸೇರಿ ಕರೀತಿರೋ ಹೆಸರು. ಅದಕ್ಕೆ ಕಾರಣ, ಬೇರೇನಲ್ಲ. ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಒಂದಲ್ಲ ಒಂದು ಹಾಡಿನಲ್ಲಿ ಮಂಡಿ ಮೇಲೆ ಡ್ಯಾನ್ಸ್ ಮಾಡುವ ಸ್ಟೆಪ್ಸ್ ಇದ್ದೇ ಇರುತ್ತೆ. ಹೀಗಾಗಿ ಅವರನ್ನು ಮಂಡಿಸ್ಟಾರ್ ಎಂದು ಚಿತ್ರತಂಡದವರು ರೇಗಿಸ್ತಾ ಇರ್ತಾರಂತೆ.

    ರೇಗಿಸಿದಾಗ ಸಂಕೋಚವಾಗುತ್ತೆ. ಆದರೆ ಮಂಡಿ ಮೇಲೆ ಡ್ಯಾನ್ಸ್ ಮಾಡಿ ಮುಗಿಸಿದ ಮೇಲೆ ಮಂಡಿಚಿಪ್ಪು ಅಯ್ಯೋ ಅಂತಿರುತ್ತೆ. ಇಷ್ಟೆಲ್ಲ ಆಗಿ ಡ್ಯಾನ್ಸ್ ನೋಡಿದವರು ಸೂಪರ್ ಎಂದಾಗ ಎಲ್ಲ ನೋವು ಮರೆಯಾಗಿಬಿಡುತ್ತೆ ಅಂತಾರೆ ಶರಣ್.

    ಈ ವಾರ ರಿಲೀಸ್ ಆಗ್ತಿರೋ ವಿಕ್ಟರಿ 2ನ ಕುಟ್ಟಪ್ಪ ಸಾಂಗ್‍ನಲ್ಲೂ ಮಂಡಿ ಡ್ಯಾನ್ಸ್ ಇದೆ. ಅದು ಚುಟು ಚುಟು ಹಾಡಿನಂತೆಯೇ ಹಿಟ್ ಆಗಿದೆ.

    ಮಂಡಿಸ್ಟಾರ್ ಶರಣ್‍ಗೆ ಮತ್ತೊಂದು ವಿಕ್ಟರಿ 2 ಮತ್ತೊಂದು ಸಕ್ಸಸ್ ಕೊಡುವ ಎಲ್ಲ ಸೂಚನೆಗಳೂ ಸಿಗುತ್ತಿವೆ.

  • ಬಂತೈ ಬಂತೈ ವಿಕ್ಟರಿ 2 ಟ್ರೈಲರ್ 

    victory 2 trailer released

    ಒಬ್ಬ ಅಮಾಯಕ ಯುವಕ, ಭಯ ಹುಟ್ಟಿಸುವ ಹೆಂಡತಿ, ಅಸಹಾಯಕ ಪ್ರೇಮಿ, ಅವರಿಬ್ಬರ ಮಧ್ಯೆ ಒಂದು ಹಾಟ್ ಕೇಕ್‍ನಂತಾ ಹುಡುಗಿ,  ಒಬ್ಬ ಡಮ್ಮಿ ಡಾನ್, ಸೀಡ್‍ಲೆಸ್ ಸಿಂಗಂನಂತಾ ಪೊಲೀಸ್, ಒಬ್ಬ ಸಿಕ್ಕಾಪಟ್ಟೆ ಸೀರಿಯಸ್ ಬಫೂನ್, ಡಬಲ್ ಆಕ್ಟಿಂಗ್, ಡಬಲ್ ತಮಾಷಾ.. ಇದು ವಿಕ್ಟರಿ 2 ಟ್ರೈಲರ್.

    ವಿಕ್ಟರಿ 2ನ ಟ್ರೈಲರ್ ರಿಲೀಸ್ ಆಗಿದೆ. ಅತ್ತ ಡಬಲ್ ಮೀನಿಂಗ್ ಅಲ್ಲದ, ಇತ್ತ ಸಿಂಗಲ್ ಮೀನಿಂಗೂ ಅಲ್ಲದ ಡೈಲಾಗುಗಳು ಕಚಗುಳಿ ಇಡುತ್ತಿವೆ. ಶರಣ್, ರವಿಶಂಕರ್, ಸಾಧು ಕೋಕಿಲ, ತಬಲಾ ನಾಣಿ, ಅಸ್ಮಿತಾ ಸೂದ್, ಅಪೂರ್ವ.. ಹೀಗೆ ತಾರಾಗಣದ ಪಟ್ಟಿ ದೊಡ್ಡದು.

    ತರುಣ್ ಶಿವಪ್ಪ ನಿರ್ಮಾಣದ ಸಿನಿಮಾಗೆ ಹರಿ ಸಂತು ನಿರ್ದೇಶನವಿದೆ. ಗೆಟ್ ರೆಡಿ ಟು ನಗೋಣ.

  • ಬ್ಲಾಕ್ ಮ್ಯಾಜಿಕ್ `ಅವತಾರ ಪುರುಷ' ಕೇರಳದಲ್ಲಿ

    avatar purusha in kerala

    ಚುಟುಚುಟು ಕಾಂಬಿನೇಷನ್ ಶರಣ್-ಅಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ ಪುರುಷ ಸಿನಿಮಾದ ಶೂಟಿಂಗ್ ಕೇರಳದ ಪಾಲಕ್ಕಾಡ್‍ನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ, ಶೂಟಿಂಗ್ ನಡೀತಿರೋದು 300 ವರ್ಷ ಹಳೆಯ ಪುರಾತನ ಬಂಗಲೆಯಲ್ಲಿ. ಅದು ಬಂಗಲೆಯಷ್ಟೇ ಅಲ್ಲ, ಅಲ್ಲಿ ತುಂಬಾ ಕಟ್ಟುನಿಟ್ಟಾಗಿರಬೇಕು.

    ಆ ಶೂಟಿಂಗ್ ಸ್ಪಾಟ್‍ನಲ್ಲಿ ಬಂಗಲೆ ಒಳಗೆ ಹೋಗುವವರು ಶೂ, ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಮಾಂಸ ತಿನ್ನುವಂತಿಲ್ಲ. ಕೆಲವು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏಕೆಂದರೆ, ಬಂಗಲೆಯ ಒಳಗೆ ಪುಟ್ಟದೊಂದು ದೇವಸ್ಥಾನವೂ ಇದೆ. ನಾವು ಅವುಗಳನ್ನೆಲ್ಲ ಶಿಸ್ತುಬದ್ಧವಾಗಿ ಪಾಲಿಸುತ್ತಲೇ ಶೂಟಿಂಗ್ ಮಾಡಿದ್ದೇವೆ ಎಂದಿದ್ದಾರೆ ಪುಷ್ಕರ್.

    ಸಿಂಪಲ್ ಸುನಿ ಈ ಚಿತ್ರದಲ್ಲಿ ಶರಣ್‍ರನ್ನು ಜೂನಿಯರ್ ಆರ್ಟಿಸ್ಟ್ ಮಾಡಿದ್ದಾರೆ. ಚಿತ್ರ ವಿಚಿತ್ರ ವೇಷಗಳನ್ನು ತೊಡಿಸಿ ಅವತಾರ ಪುರುಷನನ್ನಾಗಿಸಿದ್ದಾರೆ. ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆ ಇದೆಯಂತೆ. ಹಾಗಾದರೆ, ಇದು ಮಾಟಮಂತ್ರ ಚಿತ್ರವಾ..? ಹಾರರ್ ಚಿತ್ರವಾ..? ದೆವ್ವದ ಚಿತ್ರವಾ..? ಥ್ರಿಲ್ಲರ್ ಸಿನಿಮಾನಾ..? ವೇಯ್ಟ್ ಮಾಡಿ ನೋಡಿ.

  • ಮಂಜುನಾಥನ ಸನ್ನಿಧಿಯಲ್ಲಿ ಅಮೆರಿಕದ ಅಧ್ಯಕ್ಷ ಸಿಕ್ಕಿಬಿಟ್ಟ..!

    adhyaksha in america

    ಅಧ್ಯಕ್ಷ ಇನ್ ಅಮೆರಿಕ. ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನಿರ್ದೇಶಕ ಯೋಗಾನಂದ್. ಚಿತ್ರರಂಗಕ್ಕೆ ಹೊಸಬರೇನಲ್ಲ. ಸ್ಟೈಲಿಷ್ ನಿರ್ದೇಶಕ ಹರ್ಷ ಜೊತೆ ಎಲ್ಲ ಚಿತ್ರಗಳಿಗೂ ಕೆಲಸ ಮಾಡಿರುವ ಯೋಗಾನಂದ್‍ಗೆ ಈ ಚಿತ್ರದ ಆಫರ್ ಸಿಕ್ಕಿದ್ದು ಧರ್ಮಸ್ಥಳದಲ್ಲಂತೆ. ಮಂಜುನಾಥನ ಸನ್ನಿಧಿಯಲ್ಲಿ ದರ್ಶನಕ್ಕೆ ನಿಂತಿದ್ದಾಗ ಫೋನ್ ಬಂತು. ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂಬ ಆಫರ್ ಇತ್ತು. ಮಂಜುನಾಥ ಕಣ್ತೆರೆದಿದ್ದ ಎನ್ನುತ್ತಾರೆ ಯೋಗಾನಂದ್.

    ಶರಣ್ ಅಧ್ಯಕ್ಷನಾಗಿದ್ದರೆ, ಜೋಡಿಯಾಗಿರುವುದು ರಾಗಿಣಿ ದ್ವಿವೇದಿ. ಈ ಹಿಂದೆ ಶರಣ್‍ರ ಎರಡು ಚಿತ್ರಗಳಲ್ಲಿ ಸ್ಪೆಷಲ್ ಸಾಂಗುಗಳಿಗೆ ಕುಣಿದು ಕುಪ್ಪಳಿಸಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್‍ಗೇ ಹೀರೋಯಿನ್. 

    ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರಂತೆ ರಾಗಿಣಿ. ಶರಣ್ ಮತ್ತು ರಾಗಿಣಿ ಡ್ಯಾನ್ಸ್ ಕೂಡಾ ಬೊಂಬಾಟ್ ಆಗಿವೆಯಂತೆ. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಗೋಕೆ ನೀವು ರೆಡಿಯಾಗಿ.

  • ಮತ್ತೆ ಗೆದ್ದೇ ಗೆಲ್ತೀನಿ - ಶರಣ್

    satya harishchandra

    ಶರಣ್. ಅಧ್ಯಕ್ಷ ನಂತರ ಅದೇಕೋ ಏನೋ.. ಶರಣ್‍ಗೆ ಬಿಗ್ ಹಿಟ್ ಎನ್ನುವುದು ಸಿಕ್ಕಿಲ್ಲ. ಹಾಗೆಂದು ಶರಣ್ ಚಿತ್ರಗಳು ಸೋತಿವೆ ಎನ್ನುವ ಹಾಗೂ ಇಲ್ಲ. ಒಂದು ಆ್ಯವರೇಜ್ ಮಟ್ಟಕ್ಕೆ ಮುಟ್ಟಿವೆ. ಶರಣ್ ಚಿತ್ರಗಳು ನಿರ್ಮಾಪಕರನ್ನು ನಷ್ಟಕ್ಕೆ ದೂಡಿಲ್ಲ ಎನ್ನುವುದು ಇನ್ನೊಂದು ಪ್ಲಸ್. ಆದರೆ, ಒಂದು ದೊಡ್ಡ ಹಿಟ್ ಸಿಕ್ಕಿಲ್ಲ ಎನ್ನುವ ಬೇಸರ ಶರಣ್‍ಗೂ ಇದೆ.

    ಗೆಲುವಿನ ಸೂತ್ರ ಇದೇ ಎಂದು ಗೊತ್ತಿದ್ದರೆ, ನಾವೆಲ್ಲ ದೇವರಾಗಿಬಿಡುತ್ತಿದ್ದೆವು. ಪ್ರಯತ್ನವಷ್ಟೇ ನಮ್ಮದು. ಆ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದಿದ್ದಾರೆ ಶರಣ್. ಹಿಂದಿನ ತಪ್ಪುಗಳ ಬಗ್ಗೆ ವಿಷಾದವಿಲ್ಲ ಎನ್ನವ ಶರಣ್‍ಗೆ ಜೈಲಲಿತಾ ಚಿತ್ರದ ಸ್ತ್ರೀ ಪಾತ್ರಕ್ಕೆ ಸಿಕ್ಕಿರುವ ಮೆಚ್ಚುಗೆ ಖುಷಿ ಕೊಟ್ಟಿದೆ.

    ಈಗ ಶರಣ್ ಸತ್ಯ ಹರಿಶ್ಚಂದ್ರನನ್ನು ಎದುರು ನೋಡುತ್ತಿದ್ದಾರೆ. ಅದು ದೊಡ್ಡ ಮಟ್ಟದ ಹಿಟ್ ಆಗುತ್ತೆ ಎನ್ನುವ ನಂಬಿಕೆ ಶರಣ್‍ದು. ಕಾಮಿಡಿಯೇ ನನ್ನ ಟ್ರಂಪ್ ಕಾರ್ಡ್. ಅದನ್ನು ಬಿಟ್ಟಂತೂ ಸಿನಿಮಾ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರನಲ್ಲೂ ಕಾಮಿಡಿಗೆ ಕೊರತೆಯಿಲ್ಲ ಎನ್ನುತ್ತಾರೆ ಶರಣ್. 

    ಸತ್ಯ ಹರಿಶ್ಚಂದ್ರ, ಇದೇ ತಿಂಗಳು 20ಕ್ಕೆ ತೆರೆ ಕಾಣುತ್ತಿದೆ.

  • ಮತ್ತೆ ಹೆಣ್ಣಾದರು ಶರಣ್.. ಜೊತೆಗೆ ಅವರಿಬ್ಬರು..!

    sharan in women's avatar

    ಕಾಮಿಡಿ ಕಿಂಗ್ ಮತ್ತೊಮ್ಮೆ ಹೆಣ್ಣಾಗಿದ್ದಾರೆ. ಈ ಮೊದಲು ಜೈಲಲಿತಾ ಚಿತ್ರದಲ್ಲಿ ಹೆಣ್ಣಿನ ವೇಷ ತೊಟ್ಟಿದ್ದ ಶರಣ್, ಹಂಗಾಮಾ ಸೃಷ್ಟಿಸಿದ್ದರು. ಈ ಬಾರಿ ಅಧ್ಯಕ್ಷ-2 ಚಿತ್ರದಲ್ಲಿ ಐಯ್ಯಂಗಾರಿ ಮಹಿಳೆಯ ವೇಷ ತೊಟ್ಟಿದ್ದಾರೆ. ಇನ್ನೂ ಒಂದು ವಿಶೇಷ ಇದೆ. ಈ ಹೆಣ್ಣಿನ ವೇಷದಲ್ಲಿ ಈ ಬಾರಿ ಶರಣ್ ಒಬ್ಬರೇ ಅಲ್ಲ, ಅವರ ಜೊತೆ ಆರ್ಮುಗಂ ರವಿಶಂಕರ್ ಹಾಗೂ ಸಾಧುಕೋಕಿಲ ಕೂಡಾ ಇರ್ತಾರೆ. ಸಿನಿಮಾದಲ್ಲಿ ಸುಮಾರು 40 ನಿಮಿಷಗಳ ಕಾಲ ರವಿಶಂಕರ್ ಮತ್ತು ಶರಣ್ ಇಬ್ಬರೂ ಹೆಣ್ಣಿನ ವೇಷದಲ್ಲೇ ಇರ್ತಾರಂತೆ.

    ಆ ಪಾತ್ರಗಳಿಗಾಗಿ ಮೇಕಪ್ ಮಾಡೋಕೇ 3 ಗಂಟೆ ಬೇಕಾಗುತ್ತಿತ್ತು. ಶರಣ್, ಸಾಧು ಮತ್ತು ರವಿಶಂಕರ್ ಡೆಡಿಕೇಷನ್‍ನ್ನು ಮೆಚ್ಚಲೇಬೇಕು. ಸ್ವಲ್ಪವೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಇಡೀ ದಿನ ಮೇಕಪ್ ಹಾಳಾಗದಂತೆ ನೋಡಿಕೊಳ್ಳುತ್ತಿದ್ದರು. ಮೇಕಪ್ ತೆಗೆಯೋಕೇ 1 ಗಂಟೆ ಬೇಕಾಗುತ್ತಿತ್ತು ಎಂದು ಶೂಟಿಂಗ್ ಕತೆ ಹೇಳಿದ್ದಾರೆ ನಿರ್ದೇಶಕ ಹರಿ ಸಂತೋಷ್. ವಿದೇಶದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸ್ವದೇಶಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಬೇಕಿದೆ.

  • ಮತ್ತೊಮ್ಮೆ ಥೈಯ್ಯಕುದಾ..ತಕಥೈಯ್ಯೇ ಕುದಾ..!

    satya harishchandra

    ಡಾ. ರಾಜ್‌ಕುಮಾರ್‌ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾದ ಎವರಗ್ರೀನ್‌ ಹಾಡು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ'. ಈ ಹಳೆಯ ಹಾಡು ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಹಾಟ್ ಫೇವರಿಟ್. ಹಾಡಿನ ಮ್ಯೂಸಿಕ್ ಶುರುವಾದೊಡನೆ ಹೆಜ್ಜೆ ಹಾಕುವವರಿಗೆ ಕಡಿಮೆಯಿಲ್ಲ. ಈಗ ಈ ಹಾಡು ಮತ್ತೊಮ್ಮೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಮಾಡರ್ನ್​ ಸ್ವರೂಪದಲ್ಲಿ ಬಂದಿದೆ.

    ಸ್ಯಾಂಡಲ್‌ವುಡ್‌ ಅಧ್ಯಕ್ಷ ಶರಣ್‌ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ವಿಡಿಯೋ ಸಾಂಗ್​ನಲ್ಲಿ ಸತ್ಯ ಹರಿಶ್ಚಂದ್ರ ದೃಶ್ಯಗಳನ್ನು ಮರುಸೃಷ್ಟಿಸಲಾಗಿದೆ. ಹಾಡಿನ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿರುವುದು ವಿಜಯ್‌ ಪ್ರಕಾಶ್‌ ಅವರ ಧ್ವನಿ. ಅರ್ಜುನ್‌ ಜನ್ಯ ಮೂಲ ಸಂಗೀತದಲ್ಲಿ ತುಂಬಾ ಬದಲಾವಣೆ ಮಾಡಿಲ್ಲ. ಬಿಟ್ಸ್​ಗಳಷ್ಟೇ ಹೊಸದು. ಶರಣ್ ಅವರ ಎನರ್ಜಿ ಖುಷಿ ಕೊಡುತ್ತೆ. ದಯಾಳ್‌ ಪದ್ಮನಾಭ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

  • ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

    ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

    ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

    ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

    ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

    ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

    ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.