` dhruva sarja, - chitraloka.com | Kannada Movie News, Reviews | Image

dhruva sarja,

  • ಅದ್ಧೂರಿ ಅರ್ಜುನ್ ಜೊತೆ ಮತ್ತೆ ಧ್ರುವ ಸರ್ಜಾ?

    ಅದ್ಧೂರಿ ಅರ್ಜುನ್ ಜೊತೆ ಮತ್ತೆ ಧ್ರುವ ಸರ್ಜಾ?

    ಪೊಗರು ಚಿತ್ರದ ನಂತರ ಧ್ರುವ ಸರ್ಜಾ ದುಬಾರಿ ಚಿತ್ರ ಮಾಡಬೇಕಿತ್ತು. ಆದರೆ ಚಿತ್ರಕ್ಕೆ ಬ್ರೇಕ್ ಹಾಕಲಾಗಿದೆ. ನಂದ ಕಿಶೋರ್ ಪ್ರಕಾರ ಚಿತ್ರದ ಶೇ.60ರಷ್ಟು ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಇನ್ನೊಂದು ಮೂಲದ ಪ್ರಕಾರ ಪೊಗರು ಚಿತ್ರ, ನಿರೀಕ್ಷಿಸಿದ ಲೆವೆಲ್ಲಿಗೆ ಹಿಟ್ ಆಗದಿರುವುದೇ ದುಬಾರಿಗೆ ಬ್ರೇಕ್ ಬೀಳಲು ಕಾರಣ ಎನ್ನಲಾಗುತ್ತಿದೆ. ಈ ನಡುವೆ ಧ್ರುವ ಸರ್ಜಾ ಅದ್ಧೂರಿ ಅರ್ಜುನ್ ಜೊತೆ ಸಿನಿಮಾ ಮಾಡುವ ಉತ್ಸುಕತೆ ತೋರಿಸಿದ್ದಾರಂತೆ.

    ಧ್ರುವ ಸರ್ಜಾ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದು ಎ.ಪಿ.ಅರ್ಜುನ್. ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಧ್ರುವ ಸತತ ಹಿಟ್ ಕೊಟ್ಟಿದ್ದಾರೆ. ಈಗ ಮತ್ತೊಮ್ಮೆ ಧ್ರುವ, ಅರ್ಜುನ್ ಅವರ ಬಳಿಯೇ ಇನ್ನೊಂದು ಸಿನಿಮಾ ಮಾಡೋಕೆ ರೆಡಿಯಾಗಿದ್ದು, ಕಥೆ ಓಕೆ ಆಗಿದೆ ಎನ್ನಲಾಗುತ್ತಿದೆ. ಅಫ್‍ಕೋರ್ಸ್, ನಿರ್ಮಾಪಕರಾಗಿ ಉದಯ್ ಕೆ.ಮೆಹ್ತಾ ಅವರೇ ಇರಲಿದ್ದಾರೆ. ಇನ್ನು ದುಬಾರಿ ಚಿತ್ರಕ್ಕೆ ನಾಯಕಿಯಾಗಿದ್ದ ಶ್ರೀಲೀಲಾ ಕೂಡಾ ಅರ್ಜುನ್ ಪರಿಚಯಿಸಿದ ನಾಯಕಿಯೇ. ನಾಯಕ, ನಾಯಕಿಯ ಬದಲಾವಣೆ ಮಾಡದೇ ಕಥೆ ಮತ್ತು ನಿರ್ದೇಶಕರನ್ನು ಚೇಂಜ್ ಮಾಡಿ ಹೊಸ ಸಿನಿಮಾ ರೆಡಿ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಧಿಕೃತ ಸುದ್ದಿ ಹೊರಬೀಳಬೇಕಿದೆ.

  • ಅದ್ಧೂರಿ ಟೀಂ ಬ್ಯಾಂಕ್ : ಮಾರ್ಟಿನ್

    ಅದ್ಧೂರಿ ಟೀಂ ಬ್ಯಾಂಕ್ : ಮಾರ್ಟಿನ್

    ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟವರು. ಆಗ ಧ್ರುವ ಅವರನ್ನು ಪರಿಚಯಿಸಿದ್ದ ಎ.ಪಿ.ಅರ್ಜುನ್, ಈಗ ಮತ್ತೊಮ್ಮೆ ಧ್ರುವ ಅವರ ಜೊತೆ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ದಾರೆ.

    ಮಾರ್ಟಿನ್ ಅನ್ನೋದು ಚಿತ್ರದ ಹೀರೋ ಹೆಸರು. ಚಿತ್ರದಲ್ಲಿ ಆತ ಸ್ಟೂಡೆಂಟ್. ಗ್ಯಾಂಗ್‍ಸ್ಟರ್. ದೇಶಪ್ರೇಮಿ. ಲವರ್ ಬಾಯ್. ಎಲ್ಲವೂ ಆಗಿರುತ್ತಾನೆ. ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಎಂದಿದ್ದಾರೆ ಧ್ರುವ ಸರ್ಜಾ.

    ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ಒಂದಿಷ್ಟು ಬೀಗ ಹಾಕುತ್ತಿದ್ದಾರಂತೆ, ಅರ್ಜುನ್. ಮಾರ್ಟಿನ್ ಸ್ವಲ್ಪ ಸೈಲೆಂಟ್ ಅಂತೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದ್ಧೂರಿ ಟೀಂ, ಅದ್ಧೂರಿಯಾಗಿಯೇ ವಾಪಸ್ ಆಗಿದೆ.

    ಅಂದಹಾಗೆ ಇದು ಪ್ಯಾನ್ ಇಂಡಿಯಾ ಸಿನಿಮಾ. ಪೊಗರು ತೆಲುಗು, ತಮಿಳಿನಲ್ಲಿ ರಿಲೀಸ್ ಆದರೂ, ಚಿತ್ರ ರೆಡಿಯಾದ ಮೇಲೆ ಮಾಡಿದ್ದ ಪ್ಲಾನ್ ಅದು. ಆದರೆ, ಮಾರ್ಟಿನ್ ಹಾಗಲ್ಲ, ಎಲ್ಲ ಭಾಷೆಗಳಿಗೂ ತಲುಪುವ ಟೈಟಲ್, ಕಥೆ ಇಟ್ಟುಕೊಂಡು ಬಂದಿರೋ ಎ.ಪಿ.ಅರ್ಜುನ್, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ.

  • ಅಪ್ಪ ಮಗನ ಬೈಸೆಪ್ಸ್ ನೋಡಿದ್ರಾ..?

    Dhruva Sarja Biceps with his father image

    ಈ ಫೋಟೋ ಒಂದ್ಸಲ ನೋಡ್ಕೊಂಡ್ ಬಿಡಿ. ಈ ಫೋಟೋದಲ್ಲಿರೋ ವಯಸ್ಸಾಗಿರುವ ವ್ಯಕ್ತಿ ವಿಜಯ್ ಕುಮಾರ್. ಇನ್ನೊಬ್ಬರು ಡೌಟೇ ಇಲ್ಲ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ವಿಜಯ್ ಕುಮಾರ್‍ಗೆ ವಯಸ್ಸು 50 ದಾಟಿದೆ. ಆದರೆ ಹುಟ್ಟಾ ಗರಡಿಮನೆ, ಜಿಮ್ ಅಡಿಕ್ಟ್ ಆಗಿದ್ದ ವಿಜಯ್ ಕುಮಾರ್ ಇವತ್ತಿಗೂ ಕಟ್ಟುಮಸ್ತು ದೇಹ ಹೊಂದಿದ್ದಾರೆ.

    you_tube_chitraloka1.gif

    ಹಿರಿಯ ಮಗನನ್ನು ಕಳೆದುಕೊಂಡ ದುಃಖದಲ್ಲಿರೋ ವಿಜಯ್ ಕುಮಾರ್, ಈಗ ಮಗ ಧ್ರುವನಲ್ಲಿಯೇ ಇಬ್ಬರನ್ನೂ ಕಾಣುತ್ತಿದ್ದಾರೆ. ತಂದೆಯ ಜೊತೆಗೆ ಇನ್ನಷ್ಟು ಹತ್ತಿರವಾಗಿರುವ ಧ್ರುವಾ, ತಂದೆಯೊಂದಿಗೆ ಬೈಸೆಪ್ಸ್ ಶೋ ಅಪ್ ಕೊಟ್ಟಿದ್ದಾರೆ. ಈ ಕುಟುಂಬದ ನಗು ಸದಾಕಾಲ ಹೀಗೆಯೇ ಇರಲಿ.

     

  • ಅಬ್ಬಬ್ಬಾ.. ಮಾರ್ಟಿನ್ ವರ್ಕೌಟ್..!

    ಅಬ್ಬಬ್ಬಾ.. ಮಾರ್ಟಿನ್ ವರ್ಕೌಟ್..!

    ಪೊಗರು ನಂತರ ಧ್ರುವ ಸರ್ಜಾ ತೆರೆ ಮೇಲೆ ಬರಲಿರೋದು ಮಾರ್ಟಿನ್ ಅವತಾರದಲ್ಲಿ. ಇದೂ ಕೂಡಾ ಆ್ಯಕ್ಷನ್ ಥ್ರಿಲ್ಲರ್. ಹೀಗಾಗಿ ಧ್ರುವ ಈ ಬಾರಿಯೂ ಬಾಡಿ ಬಿಲ್ಡಪ್ ಮೊರೆ ಹೋಗಿದ್ದಾರೆ.ಚಿತ್ರಕ್ಕಾಗಿ ಇನ್ನಷ್ಟು ಇನ್ನಷ್ಟು ತಯಾರಾಗುತ್ತಿರೋ ಧ್ರುವ ಸರ್ಜಾ ಅವರ ವರ್ಕೌಟ್ ವಿಡಿಯೋ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ.

    ಪೊಗರು ವೇಳೆ ಧ್ರುವ ಸರ್ಜಾ ಅವರ ತೋಳಿನ ಸುತ್ತಳತೆ 19 ಸೆಂ.ಮೀ. ಇತ್ತು. ಈಗ ಇನ್ನಷ್ಟು ಹೆಚ್ಚಾಗಿರಬಹುದೇನೋ.. ಏಕೆಂದರೆ ವರ್ಕೌಟ್ ಹಾಗಿದೆ. ಚಿತ್ರದಲ್ಲಿ ದೈತ್ಯಾಕಾರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ.

    ಅದ್ಧೂರಿ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಧ್ರುವ ನಟಿಸುತ್ತಿರೋ 2ನೇ ಸಿನಿಮಾ ಮಾರ್ಟಿನ್. ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕರ ಜೊತೆ ಮತ್ತೊಮ್ಮೆ ಜೊತೆಗೂಡಿದ್ದಾರೆ ಧ್ರುವ. ರಾಜ್ ವಿಷ್ಣು, ಗಾಳಿಪಟ 2 ಚಿತ್ರದ ಹೀರೋಯಿನ್ ವೈಭವಿ ಶಾಂಡಿಲ್ಯ ಚಿತ್ರಕ್ಕೆ ನಾಯಕಿ. ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬರುತ್ತಿರೋ ಚಿತ್ರದ ಚಿತ್ರೀಕರಣ ಜನವರಿ ಹೊತ್ತಿಗೆ ಕಂಪ್ಲೀಟ್ ಆಗುವ ನಿರೀಕ್ಷೆ ಇದೆ.

  • ಅಬ್ಬಾ.. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ತು. ಪೊಗರು ಯಾವಾಗ..?

    pogaru to release on makara sankranthi

    ಪೊಗರು ರಿಲೀಸ್ ಯಾವಾಗ..? ಈ ಪ್ರಶ್ನೆ ಪೊಗರು ಶುರುವಾದಾಗಿನಿಂದಲೂ ಇತ್ತು. ಈಗಲೂ ಇದೆ. ಪೊಗರು ಶುರುವಾದ ಕೂಡಲೇ ಅಭಿಮಾನಿಗಳು ಧ್ರುವ ಸರ್ಜಾಗೆ ಒಂದು ಷರತ್ತು ಹಾಕಿದ್ದರು. ವಿಳಂಬ ಮಾಡಬೇಡಿ ಎಂದು ಪ್ರೀತಿಯಿಂದ ಒತ್ತಾಯಿಸಿದ್ದರು. ಖಂಡಿತಾ ಎಂದು ಮಾತು ಕೊಟ್ಟಿದ್ದ ಧ್ರುವ, ಅದನ್ನು ಈಡೇರಿಸಲಿಲ್ಲ. ಈಗ ರಿಲೀಸ್ ಆಗೋಕೆ ಸಮಯ ಕೂಡಿ ಬಂದಿದೆ.

    ಧ್ರುವ ಸರ್ಜಾ ಮದುವೆ ಸಂಭ್ರಮದ ನಡುವೆಯೇ ಪೊಗರು ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಏನೆಂದರೆ ಸಿನಿಮಾ ಡಿಸೆಂಬರಿನಲ್ಲೂ ಬರಲ್ಲ. ಬರೋದು ಜನವರಿಗೆ. ಅದೂ ಸಂಕ್ರಾAತಿಗೆ.

    ಡಿಸೆAಬರ್‌ನಲ್ಲಿ ಆಡಿಯೋ ರಿಲೀಸ್ ನಡೆಯಲಿದ್ದು, ಸಂಕ್ರಾAತಿ ಕಾಣಿಕೆಯಾಗಿ ಸಿನಿಮಾ ತೆರೆ ಕಾಣಲಿದೆ. ಸ್ವತಃ ನಿರ್ದೇಶಕ ನಂದ ಕಿಶೋರ್ ಈ ಮಾತು ಹೇಳಿರೋದ್ರಿಂತ ನಂಬಿಕೆ ಇಡಬಹುದು.

  • ಅರೆರೆ.. ಏನಿದು.. ಒಂದೇ ಕಡೆ ಕಿಚ್ಚ, ಶ್ರೀಮುರಳಿ, ಧ್ರುವ, ಮಹೇಶ್ ಬಾಬು, ಸುನಿಲ್ ಶೆಟ್ಟಿ..!

    stars come under one roof

    ಕಿಚ್ಚ ಸುದೀಪ್ ಜೊತೆ ಶ್ರೀಮುರಳಿ, ತಾರಾ, ಸುನಿಲ್ ಶೆಟ್ಟಿ ಜೊತೆ ಶ್ರೀಮುರಳಿ, ಧ್ರುವ ಸರ್ಜಾ ಜೊತೆ ರೋರಿಂಗ್ ಸ್ಟಾರ್, ಮಹೇಶ್ ಬಾಬು ಜೊತೆ, ಸುನಿಲ್ ಶೆಟ್ಟಿ ಜೊತೆ.. ಎಲ್ಲೆಲ್ಲೂ ಕನ್ನಡ ಸ್ಟಾರುಗಳೇ..

    ಏನಿದು.. ಇವರೆಲ್ಲ ಏನು ಒಟ್ಟಿಗೇ ಸಿನಿಮಾ ಮಾಡ್ತಿದ್ದಾರಾ.. ಅಂದ್ಕೋಬೇಡಿ. 

    ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡ ಸ್ಟಾರ್ಸ್ ಸಮಾಗಮವಾಗಿದೆ. ಸುದೀಪ್ ಅಭಿನಯದ ಪೈಲ್ವಾನ್, ಶ್ರೀಮುರಳಿಯ ಭರಾಟೆ, ಧ್ರುವ ಸರ್ಜಾರ ಪೊಗರು, ಮಹೇಶ್ ಬಾಬುರ ಮಹರ್ಷಿ ಚಿತ್ರಗಳು ಅಕ್ಕ ಪಕ್ಕದಲ್ಲಿಯೇ ಶೂಟಿಂಗ್ ಆಗುತ್ತಿವೆ. ಅವರ ಬಳಿ ಇವರು, ಇವರ ಬಳಿ ಅವರು ಅಪ್ಪಟ ಗೆಳೆಯರಂತೆ ಒಡನಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 

  • ಅರ್ಜುನ್, ಚಿರಂಜೀವಿ & ಧ್ರುವ ಸರ್ಜಾ ಜೊತೆ ದರ್ಶನ್

    darshan and sarja's team up

    ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ. 

    darshan_sarjas_1prema_barah.jpgಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.

    ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.

  • ಅಲ್ಲಿರೋ ಧ್ರುವ ನಾನಲ್ಲ..!

    dhruva sarja's important message to fans

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅಭಿಮಾನಿಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಅಭಿಮಾನಿಗಳನ್ನು ಇಷ್ಟಪಡುವ ಅವರಿಗೆ, ಯಾರೋ ಒಬ್ಬ ಅಭಿಮಾನಿ ಸೃಷ್ಟಿಸಿರುವ ಖಾತೆ ಟೆನ್ಷನ್ ಸೃಷ್ಟಿಸಿದೆ. ಧ್ರುವ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿದ್ದರೂ, ಅಷ್ಟೇನೂ ಆಕ್ಟಿವ್ ಅಲ್ಲ. ಟ್ವಿಟರ್‍ನಲ್ಲಿ ಮಾತ್ರ ಇದ್ದಾರೆ

    ಆದರೆ, ಇನ್‍ಸ್ಟಾಗ್ರಾಂನಲ್ಲಿ ಧ್ರುವ ಸರ್ಜಾ ಹೆಸರಲ್ಲೊಂದು ಖಾತೆ ಶುರುವಾಗಿದೆ. ಫೇಸ್‍ಬುಕ್‍ನಲ್ಲೂ ಶುರುವಾಗಿದೆ. ಆ ಖಾತೆಯಿಂದ ಕೆಲವರಿಗೆ ಅಶ್ಲೀಲ ಮೆಸೇಜ್‍ಗಳೂ ರವಾನೆಯಾಗಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಧ್ರುವ ಸರ್ಜಾ, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ನಾನಿಲ್ಲ. ಆ ಖಾತೆಗಳನ್ನು ನಂಬಿ ಮೋಸಹೋಗಬೇಡಿ. ಅಶ್ಲೀಲ ಮೆಸೇಜ್‍ಗಳು ಬಂದರೆ ಸೈಬರ್ ಕ್ರೈಂಗೆ ದೂರು ಕೊಡಿ. ಅನ್‍ಫಾಲೋ ಮಾಡಿ ಎಂದು ಅಭಿಮಾನಿಗಳಲ್ಲಿ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ  ವಿಡಿಯೋ ಸಂದೇಶ ನೀಡಿರುವ ಅಭಿಮಾನಿಗಳಿಗೆ ಧ್ರುವ ಸರ್ಜಾ, ಮೋಸ ಹೋಗದಂತೆ ಎಚ್ಚರಿಕೆ ನೀಡಿದ್ಧಾರೆ.

  • ಅವರು ಮೊದಲು ಬಂದರೆ.. ಪೊಗರು ಆಮೇಲೆ

    if they come first, i will come later

    ಏಪ್ರಿಲ್ ತಿಂಗಳು ಸ್ಯಾಂಡಲ್‍ವುಡ್‍ನ್ನು ರಂಗೇರಿಸಲಿದೆ. ಕಾರಣ ಇಷ್ಟೆ.. ಏಪ್ರಿಲ್ ತಿಂಗಳಲ್ಲಿ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗೋಕೆ ಕ್ಯೂನಲ್ಲಿ ನಿಂತಿವೆ. ಏಕೆಂದರೆ ಅದು ಬೇಸಗೆ ರಜದ ಆರಂಭ. ಈಗ ಅದೇ ಏಪ್ರಿಲ್ ತಿಂಗಳಲ್ಲಿ ಧ್ರುವ ಸರ್ಜಾ ಕೂಡಾ ಬರಲಿದ್ದಾರೆ.

    ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಸ್ಟೇಜ್‍ನಲ್ಲಿದೆ. ಏಪ್ರಿಲ್‍ನಲ್ಲಿ ತೆರೆಗೆ ಬರಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಧ್ರುವ ಸರ್ಜಾ.

    ಅದೇ ವೇಳೆ ಕ್ಯೂನಲ್ಲಿರೋದು ಸುದೀಪ್ ಅಭಿನಯದ ಕೋಟಿಗೊಬ್ಬ 3, ದರ್ಶನ್ ಅಭಿನಯದ ರಾಬರ್ಟ್, ಪುನೀತ್ ಅಭಿನಯದ ಯುವರತ್ನ.. ಹೀಗೆ ದೊಡ್ಡ ಲಿಸ್ಟ್ ಇದೆ. ದೊಡ್ಡ ಸ್ಟಾರ್ ನಟರ ಚಿತ್ರಗಳೇನಾದರೂ ಬಂದರೆ,  ನಮ್ಮ ಚಿತ್ರ ಸ್ವಲ್ಪ ಗ್ಯಾಪ್ ನಂತರ ಬರಲಿದೆ ಎಂದಿದ್ದಾರೆ ಧ್ರುವ ಸರ್ಜಾ.

    ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು ಪೊಗರು. ಏಕೆಂದರೆ ಧ್ರುವ ಸರ್ಜಾ ಸಿನಿಮಾ ರಿಲೀಸ್ ಆಗಿ ಆಗಲೇ 2 ವರ್ಷ ಕಳೆದೋಯ್ತು.

  • ಆ..ಅ..ಅಮ್ಮಾಟೆ.. ಧ್ರುವ ಸರ್ಜಾ ಅದ್ಧೂರಿಗೆ 10 ವರ್ಷ..

    ಆ..ಅ..ಅಮ್ಮಾಟೆ.. ಧ್ರುವ ಸರ್ಜಾ ಅದ್ಧೂರಿಗೆ 10 ವರ್ಷ..

    2012. ಜೂನ್ 15. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಸ್ಟಾರ್ ಧ್ರುವ ಸರ್ಜಾ. ಎ.ಪಿ.ಅರ್ಜುನ್ ಅವರ ಅದ್ಧೂರಿ ಚಿತ್ರ ತೆರೆ ಕಂಡ ದಿನವದು. ಆ ಚಿತ್ರದ ನಂತರ ಭರ್ಜರಿಯಾಗಿ ಬಹದ್ದೂರ್ನಂತೆ ಹ್ಯಾಟ್ರಿಕ್ ಗೆಲುವು ಸಾಧಿಸಿದರು ಧ್ರುವ ಸರ್ಜಾ. ಕೀರ್ತಿ ಸ್ವಾಮಿ ಮತ್ತು ಶಂಕರ್ ರೆಡ್ಡಿ ನಿರ್ಮಾಣದ ಚಿತ್ರ ಅದ್ಧೂರಿಯಾಗಿ ಶತದಿನೋತ್ಸವ ಆಚರಿಸಿತ್ತು. ಧ್ರುವ ಸರ್ಜಾ ಎದುರು ನಾಯಕಿಯಾಗಿ ನಟಿಸಿದ್ದವರು ಅಜ್ಜು ರಚ್ಚು ಲವ್ ಸ್ಟೋರಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು.

    ಹಲವು ಅಡೆತಡೆಗಳ ಮಧ್ಯೆ ಸುಮಾರು 2 ವರ್ಷ ಚಿತ್ರೀಕರಣಗೊಂಡಿದ್ದ ಚಿತ್ರಕ್ಕೆ ಆಗಿನ ಕಾಲಕ್ಕೆ 4 ಕೋಟಿ ಖರ್ಚಾಗಿತ್ತು. 14ರಿಂದ 16 ಕೋಟಿ ಬಿಸಿನೆಸ್ ಮಾಡಿತ್ತು. ಹರಿಕೃಷ್ಣ ನಿರ್ದೇಶನದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಆ ಸಿನಿಮಾ ನಂತರ ಅಭಿಮಾನಿಗಳು ಧ್ರುವ ಸರ್ಜಾರನ್ನು ಪ್ರೀತಿಯಿಂದ ಌಕ್ಷನ್ ಪ್ರಿನ್ಸ್ ಎಂದು ಕರೆದಿದ್ದರು. ರಾಧಿಕಾ ಪಂಡಿತ್ ಸಿಂಡ್ರೆಲಾ ಆಗಿದ್ದರು. ಎ.ಪಿ.ಅರ್ಜುನ್ ಸಕ್ಸಸ್ ಫುಲ್ ಡೈರೆಕ್ಟರ್ ಎನಿಸಿಕೊಂಡಿದ್ದರು.

    ಈಗ ಮತ್ತೊಮ್ಮೆ ಅರ್ಜುನ್ ಮತ್ತು ಧ್ರುವ ಮಾರ್ಟಿನ್ ಚಿತ್ರಕ್ಕೆ ಜೊತೆಯಾಗಿದ್ದಾರೆ. ಈ ನಡುವೆಯೇ ಧ್ರುವ ಸರ್ಜಾ ತಮ್ಮ ಸಿನಿಮಾ ಎಂಟ್ರಿಯ 10ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಈ 10 ವರ್ಷದಲ್ಲಿ ಧ್ರುವ ಸರ್ಜಾ ಮಾಡಿದ್ದು 4 ಸಿನಿಮಾ. ಎಲ್ಲ ಅದ್ಧೂರಿ. ಭರ್ಜರಿ. ಬಹದ್ದೂರ್ ಮತ್ತು ಪೊಗರು.ಎಲ್ಲ ಸಿನಿಮಾಗಳೂ ಹಿಟ್ ಎನ್ನುವುದು ವಿಶೇಷ. ಸದ್ಯಕ್ಕೆ ಮಾರ್ಟಿನ್ ಹೊರತುಪಡಿಸಿ ಜೋಗಿ ಪ್ರೇಮ್ ಜೊತೆ ಇನ್ನೊಂದು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅದ್ಧೂರಿ ರಿಲೀಸ್ ಆದಾಗ ಸಿಂಗಲ್ ಆಗಿದ್ದವರು ಈಗ ಪ್ರೇರಣಾಗೆ ಶರಣಾಗಿದ್ದಾರೆ.

  • ಆ್ಯಕ್ಷನ್ ಪ್ರಿನ್ಸ್‍ಗೂ.. ಕಿಸ್ ಕ್ವೀನ್‍ಗೂ ದುಬಾರಿ ಲವ್..!

    Sreeleela To Pair Opposite Dhruva Sarja

    ಇವರು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಸತತ 3 ಹಿಟ್ ಕೊಟ್ಟು, ಹ್ಯಾಟ್ರಿಕ್ ಪ್ರಿನ್ಸ್ ಆಗಿರೋ ಧ್ರುವ ಸರ್ಜಾ, ಪೊಗರು ತೋರಿಸೋಕೆ ರೆಡಿಯಾಗಿದ್ದಾರೆ. ಪೊಗರು ದರ್ಶನದ ಮೊದಲೇ ದುಬಾರಿ ಚಿತ್ರ ಒಪ್ಪಿಕೊಂಡಿರೋ ಧ್ರುವಾಗೆ ಹೀರೋಯಿನ್ ಯಾರು ಎಂಬ ಸಸ್ಪೆನ್ಸ್‍ಗೆ ಉತ್ತರ ಸಿಕ್ಕಿದೆ.

    ಕಿಸ್, ಭರಾಟೆ ಖ್ಯಾತಿಯ ಶ್ರೀಲೀಲಾ ದುಬಾರಿಯಲ್ಲಿ ಧ್ರುವಾಗೆ ಹೀರೋಯಿನ್. ಉದಯ್ ಮೆಹ್ತಾ ನಿರ್ಮಾಣದ ಚಿತ್ರ ದುಬಾರಿ, ಶ್ರೀಲೀಲಾ ಪಾಲಿಗೆ 3ನೇ ಸಿನಿಮಾ.

    ಧ್ರುವ ಸರ್ಜಾ ಎದುರು ಹೊಸ ಮುಖಕ್ಕಾಗಿ ಹುಡುಕುತ್ತಿದ್ದೆವು. ಪರಿಚಿತ ಮುಖವೂ ಆಗಿರಬೇಕು, ಧ್ರುವ ಸರ್ಜಾ ಜೊತೆ ಹೊಸ ಪೇರ್ ಆಗಿರಬೇಕು ಎಂಬ ಉದ್ದೇಶದಿಂದ ನೋಡಿದಾಗ ಶ್ರೀಲೀಲಾ ಒಳ್ಳೆಯ ಆಯ್ಕೆ ಎನಿಸಿತು ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್.

  • ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಮೇಘನಾ ರಾಜ್, ಧ್ರುವ ಸರ್ಜಾ ಕೊಟ್ಟ ಉತ್ತರ

    meghana raj, dhruva sarja upsset over allegantons by indrajith lankesh

    ಇತ್ತೀಚೆಗೆ ಮೃತಪಟ್ಟ ಯುವ ನಟನೊಬ್ಬನ ಪೋಸ್ಟ್ ಮಾರ್ಟಂ ಏಕೆ ಆಗಲಿಲ್ಲ..? ಆತನಿಗೂ ಡ್ರಗ್ಸ್ ವ್ಯಸನವಿತ್ತು ಎಂಬರ್ಥದ ಹೇಳಿಕೆಗಳನ್ನು ನೀಡಿದ್ದ ಇಂದ್ರಜಿತ್ ಲಂಕೇಶ್, ಚಿರು ಸರ್ಜಾ ಮೇಲೆ ಅನುಮಾನದ ಬೊಟ್ಟು ಮೂಡುವಂತೆ ಮಾಡಿದ್ದರು. ಹೆಸರನ್ನೇ ಹೇಳದೆ ಚಿರು ಹೆಸರು ಚರ್ಚೆಯಾಗುವಂತೆ ಮಾಡಿದ್ದರು. ಅವರು ಹೇಳ್ತಿರೋದು ಚಿರಂಜೀವಿ ಸರ್ಜಾ ಬಗ್ಗೆಯೇ ಅನ್ನೋದ್ರಲ್ಲಿ ಅನುಮಾನವೇನೂ ಇರಲಿಲ್ಲ. ಇದರ ಬಗ್ಗೆ ಬೇಸರಗೊಂಡಿದ್ದು ಸರ್ಜಾ ಕುಟುಂಬ.

    ಚಿರು ಪತ್ನಿ ಮೇಘನಾ ರಾಜ್ ಅವರಂತೂ ಕಣ್ಣೀರು ಹಾಕಿದ್ದಾರೆ. ಅವರೀಗ ಗರ್ಭಿಣಿ. ಇಂತಹ ಹೊತ್ತಿನಲ್ಲಿ ಇದೆಲ್ಲ ಬೇಕಾ ಎಂದು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ಅವರಿಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈಗ ಚಿರು ಇಲ್ಲ. ಅವರ ಫೋಟೋ ನೋಡಿದರೂ ಕಣ್ಣೀರು ಬರುತ್ತೆ. ನಿಮ್ಮ ಆರೋಪಗಳಿಗೆ ಉತ್ತರ ಕೊಡೋಕೂ ಅವರಿಲ್ಲ. ಇಲ್ಲದೇ ಇರುವ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬೇಕಿತ್ತಾ..? ಇದು ಮೇಘನಾ ರಾಜ್ ಪ್ರಶ್ನೆ.

    ಚಿರಂಜೀವಿ ಸರ್ಜಾ ಪರ ನಿಂತು ವಾದ ಮಾಡಿದ ಪ್ರಶಾಂತ್ ಸಂಬರಗಿ ಮತ್ತು ಶಿವಾರ್ಜುನ್ ಅವರಿಗೆ ಧ್ರುವ ಸರ್ಜಾ ಧನ್ಯವಾದ ಹೇಳಿದ್ದಾರೆ. ತಮ್ಮ ಅಣ್ಣ ಅಂತಹವರಲ್ಲ ಅನ್ನೋದು ಧ್ರುವ ಸರ್ಜಾ ಮಾತು.

    ಗೊತ್ತಿದ್ರೆ ಹೇಳಿ, ಸುಮ್ಮನೆ ಟ್ರೇಲರ್ ಕೊಡಬೇಡಿ ಅನ್ನೋ ರೀತಿಯಲ್ಲಿ ಉತ್ತರ ಕೊಟ್ಟಿರೋದು ನಟ ನವೀನ್ ಕೃಷ್ಣ.

  • ಈಗ ಅಧಿಕೃತ : ಮತ್ತೊಮ್ಮೆ ಅದ್ಧೂರಿ ಜೋಡಿ

    ಈಗ ಅಧಿಕೃತ : ಮತ್ತೊಮ್ಮೆ ಅದ್ಧೂರಿ ಜೋಡಿ

    ಧ್ರುವ ಸರ್ಜಾರ ದುಬಾರಿ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಎ.ಪಿ.ಅರ್ಜುನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಸುದ್ದಿಯ ಬಗ್ಗೆ ಧ್ರುವ ಸರ್ಜಾ ಆಗಲೀ, ಎ.ಪಿ.ಅರ್ಜುನ್ ಆಗಲೀ ಅಥವಾ ನಿರ್ಮಾಪಕ ಉದಯ್ ಮೆಹ್ತಾ ಆಗಲೀ.. ಖಚಿತವಾಗಿ ಒಪ್ಪಿಕೊಂಡಿರಲಿಲ್ಲ. ಈಗದು ಅಧಿಕೃತವಾಗಿದೆ.

    ಗವಿಪುರಂನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಧ್ರುವ ಸರ್ಜಾರನ್ನು ಹೀರೋ ಆಗಿ ಪರಿಚಯಿಸಿದ ಅದ್ಧೂರಿ ಅರ್ಜುನ್ ಡೈರೆಕ್ಟರ್. ನಿರ್ಮಾಪಕರಾಗಿ ಉದಯ್ ಮೆಹ್ತಾ ಅವರೇ ಇರುತ್ತಾರೆ.

  • ಉದಯ್ ಬದುಕಿರಬೇಕಿತ್ತು - ಗೆಳೆಯನ ನೆನಪಲ್ಲಿ ಧ್ರುವ

    uday, dhruva image

    ಮಾಸ್ತಿಗುಡಿ ದುರಂತದಲ್ಲಿ ಮೃತರಾದ ಅನಿಲ್ ಮತ್ತು ಉದಯ್ ಭರ್ಜರಿ ಚಿತ್ರದಲ್ಲೂ ನಟಿಸಿದ್ದಾರೆ. ಈ ಇಬ್ಬರಲ್ಲಿ ಉದಯ್, ಧ್ರುವ ಸರ್ಜಾಗೆ ಬಾಲ್ಯದ ಗೆಳೆಯ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಇಬ್ಬರೂ ಚಡ್ಡಿ ದೋಸ್ತುಗಳು. ಧ್ರುವ ಮನೆಯ ಮುಂದಿನ ರಸ್ತೆಯಲ್ಲೇ ಉದಯ್ ಮನೆಯಿತ್ತು. ಮಾಸ್ತಿಗುಡಿ ಚಿತ್ರೀಕರಣಕ್ಕೆ ಹೋಗುವ ಹಿಂದಿನ ದಿನ ಚಿತ್ರದ ಚಿತ್ರೀಕರಣ ಮುಗಿಸಿದ್ದರಂತೆ ಉದಯ್.

    ಅವನಿಗೆ ತುಂಬಾ ಕನಸುಗಳಿದ್ದವು. ಅದಕ್ಕೆ ತಕ್ಕಂತೆ ಶ್ರಮವಹಿಸುತ್ತಿದ್ದ. ಶೂಟಿಂಗ್ ಕೊನೆಯ ದಿನ ತುಂಬಾನೇ ಮಾತನಾಡಿದ್ದೆವು. ದೀಪಾವಳಿಯ ದಿನ ಶೂಟಿಂಗ್ ಮುಗಿದಿತ್ತು. ಅದಾದ ನಂತರ ಮಾಸ್ತಿಗುಡಿ ಶೂಟಿಂಗ್​ಗೆ ಹೋದ. ಬರಲೇ ಇಲ್ಲ. ಅವನೊಬ್ಬ ನನ್ನ ಜೊತೆಯಲ್ಲಿರಬೇಕಿತ್ತು ಎಂದು ಭಾವುಕರಾಗುತ್ತಾರೆ ಧ್ರುವ.

  • ಏನಮ್ಮಿ.. ಏನಮ್ಮಿ.. ಧ್ರುವ ಸರ್ಜಾರಿಂದ..

    dhruva sarja to release ayogya songs

    ಅಯೋಗ್ಯ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ರಿಲೀಸ್‍ಗೂ ಮೊದಲೇ ಖುಷಿಯಾಗೋಕೆ ಕಾರಣ, ಚಿತ್ರದ ಆಡಿಯೋ ರೈಟ್ಸ್ ಒಳ್ಳೆಯ ರೇಟ್‍ಗೆ ಸೇಲ್ ಅಗಿರೋದು. ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಆನಂದ್ ಆಡಿಯೋದವರು ಒಳ್ಳೆಯ ಮೊತ್ತಕ್ಕೆ ಖರೀದಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಹಾಡುಗಳು ಮಾಸ್ ಮತ್ತು ಕ್ಲಾಸ್‍ಗೆ ಇಷ್ಟವಾಗುವಂತಿವೆ.

    ಚಿತ್ರದ ಮೊದಲ ಹಾಡು ರಿಲೀಸ್ ಮಾಡುತ್ತಿರುವುದು ಧ್ರುವ ಸರ್ಜಾ. ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿರೋ ಏನಮ್ಮಿ.. ಏನಮ್ಮಿ.. ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಪಲಕ್ ಮುಚಾಲ್ ಹಾಡಿರುವ ಹಾಡು, ಸತೀಶ್ ಮತ್ತು ರಚಿತಾ ಮೇಲೆ ಚಿತ್ರೀಕರಿಸಿರುವ ಹಾಡು.

    ಚಮಕ್ ನಂತರ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಿಸಿರುವ ಸಿನಿಮಾ ಅಯೋಗ್. ಅವರು ಮತ್ತೊಂದು ಹಿಟ್ ಎದುರು ನೋಡುತ್ತಿದ್ದಾರೆ.

  • ಒಟ್ಟಿಗೇ ಖಾಕಿ ನೋಡಿದ ಸರ್ಜಾ ಬ್ರದರ್ಸ್

    sarja brothers watched khakii movie in theater

    ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖಾಕಿ ಚಿತ್ರಕ್ಕೆ ಅಣ್ಣ ತಮ್ಮ ಇಬ್ಬರೂ ಒಟ್ಟೊಟ್ಟಿಗೇ  ನೋಡಿದ್ದಾರೆ. ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಶಿವಮಣಿ, ಛಾಯಾಸಿಂಗ್ ನಟಿಸಿರುವ ಖಾಕಿ ಚಿತ್ರ ಸಾಮಾನ್ಯ ಜನರೆಲ್ಲ ಒಟ್ಟಾಗಿ ಅನ್ಯಾಯವನ್ನು ಎದುರಿಸಿ ನಿಲ್ಲುವ ಕಥೆ ಹೊಂದಿದೆ. ನವೀನ್ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ, ಮಾನಸ ತರುಣ್ ನಿರ್ಮಾಪಕರು. ಈ ಚಿತ್ರವನ್ನೀಗ ಸರ್ಜಾ ಸೋದರರು ಒಟ್ಟಿಗೇ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದ್ದಾರೆ.

    ನರ್ತಕಿಯಲ್ಲಿ ಚಿರಂಜೀವಿ ಸರ್ಜಾ ತಮ್ಮ ತಮ್ಮ ಧ್ರುವ ಸರ್ಜಾರ ಜೊತೆ ಬಂದು ವೀಕ್ಷಿಸಿದ್ದು ವಿಶೇಷ. ಅಣ್ಣನ ಆ್ಯಕ್ಷನ್, ಶಿವಮಣಿಯವರ ಘರ್ಜನೆ ಮೆಚ್ಚಿಕೊಂಡ ಧ್ರುವಾ ಚಿತ್ರವನ್ನು ನೋಡಿ, ಹರಸಿ ಹಾರೈಸಿ ಎಂದು ಮನವಿ ಮಾಡಿಕೊಂಡರು.

  • ಕನ್ನಡದಲ್ಲಿ ನಟಿಸುತ್ತಿಲ್ಲ - ಶೃತಿ ಹಾಸನ್

    shruthi hassan not acting in kannada

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಶೃತಿ ಹಾಸನ್ ನಾಯಕಿ. ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಶೃತಿ ನಟಿಸಲಿದ್ದಾರೆ ಎಂದು ನಿರ್ದೇಶಕ ನಂದ ಕಿಶೋರ್ ಅವರೇ ತಿಳಿಸಿದ್ದರು. ಸಿನಿಮಾದ ಕಥೆ ಹೇಳಿ ಶೃತಿ ಇಷ್ಟಪಟ್ಟಿದ್ದಾರೆ. ಅತ್ಯುತ್ತಮ ನೃತ್ಯಗಾರ್ತಿಯೂ ಆದ ಶೃತಿ ಅವರಿಗೆ ಚಿತ್ರದಲ್ಲಿ ಅದ್ಭುತವಾದ ಪಾತ್ರವಿದೆ. ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದರು. 

    ಈಗ ನೋಡಿದರೆ, ಶೃತಿ ಹಾಸನ್, ಕನ್ನಡದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ. ಅಚ್ಚರಿ ಮೂಡಿಸಿರುವ ವಿಚಾರವೆಂದರೆ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿರುವುದು. ಏಕೆಂದರೆ, ನಂದ ಕಿಶೋರ್, ಚಿತ್ರದ ಬಗ್ಗೆ ಶೃತಿ ಮಾತನಾಡಿದ್ದೇನೆ ಎಂದಿದ್ದರು. ಈಗ ಶೃತಿ ಕನ್ನಡದಲ್ಲಿ ನಟಿಸುವುದು ಹಾಗಿರಲಿ, ಯಾರೂ ನನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದಿದ್ದಾರೆ.

    Related Articles :-

    ಧ್ರುವ ಸರ್ಜಾ ಪೊಗರಿಗೆ ಜೊತೆಯಾದ ಶೃತಿಹಾಸನ್

  • ಕಾಶ್ಮೀರದಲ್ಲಿ ಮಾರ್ಟಿನ್

    ಕಾಶ್ಮೀರದಲ್ಲಿ ಮಾರ್ಟಿನ್

    ಸದ್ಯಕ್ಕೆ ದೇಶಾದ್ಯಂತ ಸುದ್ದಿಯಲ್ಲಿರೋದು ಕಾಶ್ಮೀರ. ಆ ಕಾಶ್ಮೀರದಲ್ಲೀಗ ಮಾರ್ಟಿನ್ ಇದ್ದಾರೆ. ಇದು ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್`ನ ಮಾರ್ಟಿನ್ ಸ್ಟೋರಿ.

    ಕಾಶ್ಮೀರದಲ್ಲೀಗ 7 ಡಿಗ್ರಿಯಷ್ಟೇ ತಾಪಮಾನ. ದೇಹದೊಳಗಿನ ನರನರಗಳನ್ನೂ ಐಸ್ ಮಾಡುವಷ್ಟು ಕೂಲ್ ಪ್ರದೇಶವದು. ಅಲ್ಲಿ ಬೈಕ್ ಚೇಸಿಂಗ್ ಸೀಕ್ವೆನ್ಸ್ ಶೂಟಿಂಗ್ ಮಾಡುತ್ತಿದೆ ಮಾರ್ಟಿನ್ ಟೀಂ.

    ಒಟ್ಟು 7 ದಿನದ ಶೂಟಿಂಗ್. ಇದಕ್ಕಾಗಿ ಸ್ನೋಬೈಕ್‍ಗಳನ್ನೇ ಬಳಸುತ್ತಿದ್ದೇವೆ. ಅದರ ಬೆಲೆಯೇ ಒಂದೂವರೆ ಕೋಟಿ. ಶೂಟಿಂಗ್ ನಡುವೆ ನಮಗೆ ಸೈನಿಕರೂ ಕೂಡಾ ಆಹ್ವಾನ ಕೊಟ್ಟರು. ಸೈನಿಕರೊಂದಿಗೆ ಸಮಯ ಕಳೆದದದ್ದು ಮರೆಯಲಾಗದ ಅನುಭವ ಎಂದಿದ್ದಾರೆ ಡೈರೆಕ್ಟರ್ ಅರ್ಜುನ್.

    ಉದಯ್ ಕೆ.ಮೆಹ್ತಾ ನಿರ್ಮಾಣದ ಶೇ.30ರಷ್ಟು ಶೂಟಿಂಗ್ ಮುಗಿದಿದೆ. ಏಪ್ರಿಲ್ ಹೊತ್ತಿಗೆ ಮಾರ್ಟಿನ್ ಕಂಪ್ಲೀಟ್ ಮಾಡೋ ಪ್ಲಾನ್‍ನಲ್ಲಿದೆ ಮಾರ್ಟಿನ್ ಟೀಂ. 

  • ಕಾಳಿದಾಸನಿಗೆ ಜ್ಯೂ.ಕನಸಿನ ರಾಣಿ ಜೋಡಿ..?

    ಕಾಳಿದಾಸನಿಗೆ ಜ್ಯೂ.ಕನಸಿನ ರಾಣಿ ಜೋಡಿ..?

    ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಇದೇ ಮೊದಲ ಬಾರಿ ಜೊತೆಯಾಗಿರುವ ಸಿನಿಮಾ ಕೆಡಿ. ಇತ್ತೀಚೆಗಷ್ಟೆ ಕೆಡಿ ಸಿನಿಮಾದ ಟೈಟಲ್ ಟೀಸರ್ ರಿವೀಲ್ ಆಗಿತ್ತು. ಕೆಡಿಗೆ ಹೀರೋಯಿನ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಉತ್ತರ ಜ್ಯೂ.ಕನಸಿನ ರಾಣಿ ಅರ್ಥಾತ್ ಮಾಲಾಶ್ರೀ ಪುತ್ರಿ ಎನ್ನುವ ಸುದ್ದಿ ಹೊರಬಿದ್ದಿದೆ.

    ನೀಳಕಾಯ ದೇಹದ ಕೋಲು ಮುಖದ ಕೆಂಡಸಂಪಿಗೆಯಂತಹ ಹುಡುಗಿ ರಾಧನಾ ರಾಮ್ ಧ್ರುವ ಸರ್ಜಾಗೆ ಹೀರೋಯಿನ್ ಆಗುತ್ತಿದ್ದಾರೆ.

    ರಾಧನಾ ರಾ್ ಪಕ್ಕಾ ಹೀರೋಯಿನ್ ಲುಕ್ ಇರೋ ಚೆಲುವೆ. ಮುದ್ದಾದ ಹುಡುಗಿ. ಅಲ್ಲದೆ ಆಕೆಯ ಕಣ್ಣುಗಳಲ್ಲಿರೋ ತುಂಟತನ ಪ್ರೇಮ್ ಅವರಿಗೆ ಇಷ್ಟವಾಗಿದೆಯಂತೆ. ಆ ಕಾರಣಕ್ಕೆ ರಾಧನಾ ಅವರೇ ಧ್ರುವ ಸರ್ಜಾಗೆ ಹೀರೋಯಿನ್ ಆದ್ರೆ ಬೆಟರ್ ಅನ್ನೋ ಕಾರಣಕ್ಕೆ ಮಾಲಾಶ್ರೀ ರಾಮು ಅವರಿಗೆ ಪ್ರಪೋಸಲ್ ಕಳಿಸಿದ್ದಾರಂತೆ. ಆದರೆ ಇದನ್ನು ಖುದ್ದು ಮಾಲಾಶ್ರೀ ಅಥವಾ ಪ್ರೇಮ್ ಅಥವಾ ಕೆವಿಎನ್ ಪ್ರೊಡಕ್ಷನ್ಸ್ನವರು ಅನೌನ್ಸ್ ಮಾಡುವವರೆಗೂ ಇದು ಅಧಿಕೃತವಲ್ಲ.

    ಕೆಡಿ 1980ರ ದಶಕದ ಸ್ಟೋರಿ ಕೆಡಿ ಸಿನಿಮಾ. ಈ ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಸ್ ಅಭಿನಯಿಸುತ್ತಿದ್ದಾರೆ. ಧ್ರುವ ಸರ್ಜಾ ಕಾಳಿದಾಸ ಅಲಿಯಾಸ್ ಕಾಳಿಯಾಗಿ ಅಬ್ಬರಿಸಲಿದ್ದಾರೆ.

    ಹೀಗಿರುವಾಗಲೇ ಸ್ಯಾಂಡಲ್ವುಡ್ನ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಮಗಳು ಎಂಟ್ರಿ ಆಗುತ್ತಿದ್ದಾರೆ ಅನ್ನೋದು ಮತ್ತೊಂದು ಸೆನ್ಸೇಷನ್ ಸೃಷ್ಟಿಸಿದೆ.

  • ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 6ನೇ ಸಿನಿಮಾ ಶುರುವಾಗಿದೆ. ಕೆಡಿ. ಒಂದು ಸಿನಿಮಾ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಸೆಟ್ಟೇರಿರುವುದು ಧ್ರುವ ಸರ್ಜಾ ರೆಕಾರ್ಡ್. ಅತ್ತ ಮಾರ್ಟಿನ್ ತಯಾರಾಗುತ್ತಿರುವಾಗಲೇ ಇತ್ತ ಕೆಡಿ ಸೆಟ್ಟೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರೋ ಸಿನಿಮಾ ಕೆಡಿ. ಸಂಜಯ್ ದತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಟೈಟಲ್ ಲಾಂಚ್ ಟೀಸರ್ ರಿಲೀಸ್ ಆಗಿದೆ. ರಾಮಾಯಣ ಹೆಣ್ಣಿಗಾಗಿ.. ಮಹಾಭಾರತ ಮಣ್ಣಿಗಾಗಿ..

    ಈಗ ರಕ್ತಕ್ಕಾಗಿ ಯುದ್ಧ ನಡೆಯುತ್ತೆ ಎನ್ನುವ ಖಡಕ್ ಡೈಲಾಗ್.. ಜೈಲಿಂದ ರಿಲೀಸ್ ಆಗಿ ಬರುವ ಧ್ರುವ ಸರ್ಜಾ.. ಧ್ರುವನನ್ನು ಎತ್ತೋಕೆ ಸಾವಿರ ಜನ.. ಸ್ವಾಗತ ಮಾಡೋಕೆ ಲಕ್ಷ ಜನ.. ಬೆಂಕಿ ಶೂಗಳಲ್ಲಿ ಹೆಜ್ಜೆ ಹೆಜ್ಜೆಯಿಟ್ಟು ಹೋಗುವ ಧ್ರುವ ರೌಡಿಯೊಬ್ಬನನ್ನು ಮೂಟೆಯಲ್ಲಿ ಹಾಕಿಕೊಂಡು ಹೊರಡುವ ದೃಶ್ಯದ ಟೀಸರ್.. ಎಂದಿನಂತೆ ಪ್ರೇಮ್ ಸಖತ್ತಾಗಿಯೇ ಮಾಡಿದ್ದಾರೆ. ಧುವ ಸರ್ಜಾ ಖಡಕ್ ವಾಯ್ಸ್ ಇದೆ.

    ಈ ಸಿನಿಮಾಗಾಗಿ ಪ್ರೇಮ್ ಹಳೇ ಬೆಂಗಳೂರನ್ನು ಮರುಸೃಷ್ಟಿ ಮಾಡಲಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಒಂದನ್ನು ನಿರ್ಮಾಣ ಮಾಡಲಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿರುವ ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಕಥೆ ಬರೆಯಲಾಗಿದ್ದು, ಪ್ರೇಮ್ ಅವರ ಕರಿಯರ್ನಲ್ಲಿ ಬಹಳ ದೊಡ್ಡ ಸಿನಿಮಾ ಇದು ಎನ್ನಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಮ್ ಈಗಾಗಲೇ ಮೋಹನ್ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ ಸೇರಿದಂತೆ ಹಲವು ಕಲಾವಿದರನ್ನು ಭೇಟಿ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ 6 ನನ್ನ ಲಕ್ಕಿ ನಂಬರ್. ಇದು ನನ್ನ 6ನೇ ಸಿನಿಮಾ. ನನ್ನ ಜನ್ಮದಿನವೂ ಆರು. ಅಲ್ಲದೆ ಇನ್ನು ನನ್ನ ಮಗಳು ಹುಟ್ಟಿದ ನಂತರ ಸೆಟ್ಟೇರುತ್ತಿರುವ ಸಿನಿಮಾ. ಕೆವಿಎನ್ ಮತ್ತು ಪ್ರೇಮ್ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ನನ್ನ ಕೆರಿಯರ್‍ನಲ್ಲೇ ಇದು ಅದ್ಧೂರಿ ಚಿತ್ರವಾಗಲಿದೆ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗಾಗಿ ನಾನು ಎಷ್ಟು ಸಮಯ ಬೇಕಾದ್ರೂ ಕೊಡುತ್ತೇನೆ ಎಂದವರು ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ.

    ಸಂಜಯ್ ದತ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೌಥ್ ಸಿನಿಮಾದಲ್ಲಿ ಎನರ್ಜಿ ಇರುತ್ತೆ. ಪ್ರೇಮ್ ಅವರ ತಲೆಯಲ್ಲಿ ಏನಿದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಹೊಸದೇನನ್ನೋ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಇದೆ. ಪ್ರೇಮ್ ಹೇಳಿದಂತೆ ನಟಿಸುತ್ತೇನೆ ಎಂದರು ಸಂಜಯ್ ದತ್. ಧ್ರುವ ಸರ್ಜಾ ಸಂಜಯ್ ದತ್ ಕಾಲುಮುಟ್ಟಿ ಆಶೀರ್ವಾದ ಪಡೆದರು.

    ಅಂದಹಾಗೆ ಎಲ್ಲ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದ್ದು ಒಂದೊಂದು ಭಾಷೆಯ ಟೀಸರ್‍ಗೂ ಒಬ್ಬೊಬ್ಬ ಸ್ಟಾರ್ ವಾಯ್ಸ್ ಕೊಟ್ಟಿದ್ಧಾರೆ. ತಮಿಳಿಗೆ ವಿಜಯ್ ಸೇತುಪತಿ, ಮಲಯಾಳಂಗೆ ಮೋಹನ್ ಲಾಲ್, ಹಿಂದಿಗೆ ಸಂಜಯ್ ದತ್ ವಾಯ್ಸ್ ಕೊಟ್ಟಿದ್ದಾರೆ.