` dhruva sarja, - chitraloka.com | Kannada Movie News, Reviews | Image

dhruva sarja,

  • ಪೊಗರು ಸೆಟ್ಟಿನಲ್ಲಿ ಬೆಂಕಿ ; ಸುದ್ದಿ ನಿಜಾನಾ..? ಸುಳ್ಳಾ..?

    news behind pogaru set on fire

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಚಿತ್ರೀಕರಣ ಸೆಟ್ಟಿನಲ್ಲಿ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಲ್ಲಿ ಧ್ರುವ ಸರ್ಜಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿದೆ. ಪೊಗರು ಶೂಟಿಂಗ್ ಹೈದರಾಬಾದ್‍ನಲ್ಲಿ ನಡೆಯುತ್ತಿದ್ದು, ಕ್ಲೈಮಾಕ್ಸ್ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ನಂದಕಿಶೋರ್.

    ಚಿತ್ರದ ಬಗ್ಗೆ ಹಬ್ಬಿದ ಈ ಸುದ್ದಿಯೆಲ್ಲ ಸುಳ್ಳು ಎಂದು ಸ್ಪ್ಟಪಡಿಸಿದೆ ಚಿತ್ರತಂಡ. ಹರಿದಾಡುತ್ತಿರುವ ಫೋಟೋ ಕೂಡಾ ಶೂಟಿಂಗ್‍ನದ್ದೇ. ಸೀನ್‍ನಲ್ಲಿ ಬಾಂಬ್ ಸ್ಫೋಟಿಸುವ ದೃಶ್ಯದ ಫೋಟೋ. ಅಷ್ಟೇ ಹೊರತು ಚಿತ್ರೀಕರಣದಲ್ಲಿ ಯಾವುದೇ ಅನಾಹುತ, ಅವಘಡ, ಆಕಸ್ಮಿಕ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ ಪೊಗರು ಟೀಂ.

  • ಪೊಗರು.. ಅದೇನ್ ಖದರ್ ಗುರೂ..

    pogaru dialogue trailer is super hit

    ಇವತ್ತು.. ನಾಳೆ.. ನಾಳಿದ್ದು.. ಎಂದೆಲ್ಲ ನಿರೀಕ್ಷೆ ಹುಟ್ಟಿಸಿಯೇ ವರ್ಷ ಕಳೆದಿದ್ದ ಪೊಗರು ಚಿತ್ರದ ಭರ್ಜರಿ ಟ್ರೇಲರ್ ಹೊರಬಿದ್ದಿದೆ. ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಪೊಗರು ಟ್ರೇಲರಿನಲ್ಲಿ ಡೈಲಾಗುಗಳ ಸುರಿಮಳೆಯೇ ಇದೆ. ಪಂಚು, ಪವರ್ರು ಮಿಸ್ಸಾಗಿಲ್ಲ.

    ಅಡ್ರೆಸ್ ತಿಳ್ಕೊಂಡು ಹೋಗಿ ಸರ್ವಿಸ್ ಮಾಡೋಕೆ ಕೊರಿಯರ್ ಬಾಯ್ ಅಂದ್ಕೊಂಡ್ಯಾ.. ಫೈಟರ್.. ಹೊಡೆದ್ರೆ ಯಾವನೂ ಅಡ್ರೆಸ್ ಇರಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು...

    ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೇ ಸೀರಿಯಸ್ ಆಗಿದ್ದೀರ. ಸೀರಿಯಸ್ಸಾಗಿ ಹೊಡೆದ್ರೆ ಸೀದಾ ಸುಡುಗಾಡೇ..

    ವ್ಹೋ... ಇಂಗ್ಲಿಷಾ.. ಮಾತೃಭಾಷೆ ಬಿಟ್ಟೋರೂ.. ಮೂರೂ ಬಿಟ್ಟೋರು..

    ಹೀಗೆ.. ಒಂದೊಂದು ಡೈಲಾಗಿನಲ್ಲೂ ಒಂದೊಂದು ಅವತಾರ ತೋರಿಸಿದ್ದಾರೆ ಧ್ರುವಾ. ಉದ್ದನೆಯ ಕೂದಲು, ಗಡ್ಡದಲ್ಲಿ ಲುಕ್ಕು ರಗಡ್ಡಾಗಿದೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿಯಲ್ಲಿ ದಪ್ಪನೆಯ ಕನ್ನಡಕದಲ್ಲಿ ಗಮನ ಸೆಳೆದಿದ್ದ ರಶ್ಮಿಕಾ, ಇಲ್ಲಿ ಮತ್ತೊಮ್ಮೆ ಕನ್ನಡಕಧಾರಿಣಿ.

    ಬಿ.ಕೆ.ಗಂಗಾಧರ್ ನಿರ್ಮಾಪಕರಾಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತವಿದೆ.

  • ಪೊಗರು'ನ ಕರಾಬು ಹಾಡಿಗೆ ಕೊರೋನಾ ಬ್ರೇಕ್

    pogaru's khabaru song release postponed

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ. ಅರೆ.. ಹಾಡು ರಿಲೀಸ್ ಆಗೋದು ಯೂಟ್ಯೂಬ್ ಚಾನೆಲ್ಲಲ್ಲಿ, ಅದಕ್ಕೇಕೆ ಬ್ರೇಕ್ ಹಾಕಬೇಕು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟಿರುವ ಉತ್ತರ ಅಷ್ಟೇ ಸಿಂಪಲ್.

    ಎಲ್ಲರೂ ಆತಂಕದಲ್ಲಿದ್ದಾರೆ. ಯುಗಾದಿಯ ಸಂಭ್ರಮವೂ ಇಲ್ಲ. ಎಲ್ಲರೂ ಆತಂಕದಲ್ಲಿರೋವಾಗ ನಮಗೆ ಸಂಭ್ರಮ ಬೇಕಾ ಅನ್ನೋದು ಧ್ರುವ ಸರ್ಜಾ ವಾದ.

    ಸ್ಸೋ.. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದ ಹಾಡು ಇವತ್ತಿಲ್ಲ. ಮುಂದೆ.. ಕಾದು ನೊಡೋಣ.

  • ಪ್ರಥಮ್ ಕಾಟಕ್ಕೆ ಒಟ್ಟಿಗೇ ಬಂದ್ರು ಧ್ರುವ-ಪ್ರೇರಣಾ

    olle hudga pratham meets dhruva sarja and his fiancee

    ಒಳ್ಳೆಯ ಹುಡುಗ ಪ್ರಥಮ್ ಕಾಟ ಕೊಡೋದ್ರಲ್ಲಿ ಫೇಮಸ್. ಆದರೆ, ಅದ್ಯಾವತ್ತೂ ಪ್ರೀತಿಯಿಂದ ಆಗೋದ್ರಿಂದ ಎಂಥವರೂ ಕರಗುತ್ತಾರೆ. ಹಾಗೆ ಕರಗಿದವರಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಯೂ ಇದೆ. ಧ್ರುವ-ಪ್ರೇರಣಾ ಲವ್ ಸ್ಟೋರಿ ಕೇಳಿದ ಮೇಲೆ ಪ್ರಥಮ್ ಸ್ವತಃ ಧ್ರುವ ಮನೆಗೆ ಹೋಗಿದ್ದಾರೆ. ಅವರನ್ನು ಪ್ರೀತಿಯಿಂದ ಒತ್ತಾಯ ಮಾಡಿ ಪ್ರೇರಣಾ ಮನೆಗೆ ಕರೆದುಕೊಂಡು ಹೋಗಿದ್ದಾರೆ.

    ಧ್ರುವ ಸರ್ಜಾ ಅವರನ್ನು ಮದುವೆಯಾಗುತ್ತಿರುವ ಪ್ರೇರಣಾ ಅಷ್ಟೇ ಅದೃಷ್ಟವಂತೆಯಲ್ಲ, ಅವರನ್ನು ಮದುವೆಯಾಗುತ್ತಿರುವ ಧ್ರುವಾ ಕೂಡಾ ಅದೃಷ್ಟವಂತ. ಮೀಡಿಯಾಗಳಿಂದ, ಪಬ್ಲಿಸಿಟಿಯಿಂದ ದೂರ ಇರುವ ಪ್ರೇರಣಾ, ನಿಜಕ್ಕೂ ಧ್ರುವ ಸರ್ಜಾಗೆ ಒಳ್ಳೆಯ ಸಂಗಾತಿ ಎಂದಿದ್ದಾರೆ. 

    ಪ್ರೇರಣಾ ಅವರ ಕುಟುಂಬಕ್ಕೆ ಧ್ರುವ ಬಗ್ಗೆ ಹೆಮ್ಮೆಯಿದೆ. ಅವರು ಅಳಿಯ ಅನ್ನೋದಕ್ಕಿಂತ ಹೆಚ್ಚಾಗಿ ಗೆಳೆಯರಂತಿದ್ದಾರೆ. ಇನ್ನು ಪ್ರೇರಣಾ ಅವರ ತಂದೆ, ಅರ್ಜುನ್ ಸರ್ಜಾರ ಬೆಸ್ಟ್ ಫ್ರೆಂಡ್ ಎಂದು ಪ್ರೀತಿಯಿಂದ ವಿಷಯ ತಿಳಿಸಿದ್ದಾರೆ.

  • ಪ್ರೀತಿಯ ಪತ್ನಿಗೆ ಧ್ರುವ ಕೊಟ್ಟ ಮೊದಲ ಉಡುಗೊರೆ

    dhruva sarja's first gift post wedding

    ಮದುವೆಯಾಗಿ ಕೆಲವೇ ದಿನಗಳಾಗಿವೆ. ಆದರೆ, ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದೆ. ಸಿನಿಮಾದಲ್ಲಿ ಹೀರೋಯಿನ್ನಿಗೆ ಅಂಗೈಯಲ್ಲೇ ಆಕಾಶ ತೋರಿಸುವ ನಟ, ರಿಯಲ್ ಲೈಫಲ್ಲಿ ಒಂದೊಳ್ಳೆ ಗಿಫ್ಟ್ ಕೊಡದಿದ್ರೆ ಹೇಗೆ..? ಈ ಬಾರಿ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಒಂದು ಚೆಂದದ ಉಡುಗೊರೆ ತಂದಿದ್ದಾರೆ. ಅದು ಕಪ್ಪು ಬಣ್ಣದ ಪೋರ್ಷೆ ಕಾರ್.

    ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ. ಮೊದಲಿಗೆ ಇಷ್ಟ ದೇವರು ಹನುಮಜಯಂತಿ. ನನ್ನೆಲ್ಲ ಹಿತೈಷಿ, ಕನ್ನಡ ಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ. ಇಂದಿಗೆ ನಾವು ನಿಶ್ಚಿತಾರ್ಥವಾಗಿ 1 ವರ್ಷ. ಜೊತೆಗೆ ಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ. ಆಂಜನೇಯನ ಆಶೀರ್ವಾದ, ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ ಜೈ ಆಂಜನೇಯ.

    ಮದುವೆಯಾಗಿ ಬ್ರಹ್ಮಚರ್ಯ ಬಿಟ್ಟರೂ, ಈ ಆಂಜನೇಯನ ಭಕ್ತ ಆಂಜನೇಯನನ್ನು ಬಿಟ್ಟಿಲ್ಲ. ಧ್ರುವ ಪ್ರೇರಣಾ ದಂಪತಿಯ ಸಂಭ್ರಮ ಹೀಗೆಯೇ ನೂರ್ಕಾಲ ಇರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

  • ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಧ್ರುವ ಸರ್ಜಾ ಅಪ್ಪನಾಗುತ್ತಿದ್ದಾರೆ. ಇತ್ತೀಚೆಗೆ ಪ್ರೇರಣಾ ಅವರ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಧ್ರುವ, ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎನ್ನುವುದನ್ನು ಸಾರಿದ್ದರು. ಈಗ ಪ್ರೇರಣಾ ಸರ್ಜಾ ಅವರ ಸೀಮಂತ ಶಾಸ್ತ್ರವನ್ನೂ ಮುಗಿಸಿದ್ದಾರೆ.

    ಸರ್ಜಾ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶುಭ ಕಾರ್ಯವಿದು. ಸಾಲು ಸಾಲು ನೋವುಗಳಲ್ಲೇ ಮುಳುಗಿದ್ದ ಕುಟುಂಬದಲ್ಲಿ ಪ್ರೇರಣಾ-ಧ್ರುವ ದಂಪತಿಯ ಮಡಿಲಲ್ಲಿ ಅರಳುತ್ತಿರುವ ಕೂಸು ಹೊಸ ಸಂಭ್ರಮ ತರಲಿದೆ.

  • ಫೆ.19ಕ್ಕೆ ಪೊಗರು ಕನ್‍ಫರ್ಮ್

    ಫೆ.19ಕ್ಕೆ ಪೊಗರು ಕನ್‍ಫರ್ಮ್

    ಲಾಕ್ ಡೌನ್ ಮುಗಿದು, ಥಿಯೇಟರ್ ಓಪನ್ ಆದ ನಂತರ ಯಾವ ಸ್ಟಾರ್ ಸಿನಿಮಾ ಮೊದಲು ರಿಲೀಸ್ ಆಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಫಸ್ಟ್ ಮೂವಿಯಾಗಿ ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರ, ರಿಲೀಸ್ ಆಗೋಕೆ ಹೆಚ್ಚೂ ಕಡಿಮೆ 4 ವರ್ಷ ತೆಗೆದುಕೊಂಡಿದೆ. ನಿರೀಕ್ಷೆ ಇಟ್ಟುಕೊಂಡೇ ಬಂದು ಸಿನಿಮಾ ನೋಡಿ ಎಂದಿರುವ ಧ್ರುವ ಸರ್ಜಾ, ಇದು ಕೇವಲ ಆ್ಯಕ್ಷನ್ ಸಿನಿಮಾ ಅಲ್ಲ, ಭಾವನಾತ್ಮಕ ದೃಶ್ಯಗಳೂ ಇವೆ ಎಂದಿದ್ದಾರೆ.

    ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಚಂದನ್ ಶೆಟ್ಟಿ ನಿರ್ದೇಶನದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಸಾಲಿಗೆ ಸೇರಿವೆ.

  • ಬಚ್ಚನ್ ಫ್ಯಾಮಿಲಿ ಹಾದಿಯಲ್ಲಿ ಧ್ರುವ ಸರ್ಜಾ ಫ್ಯಾಮಿಲಿ

    dhruva sarja and his wife prerna tests positive for corona

    ಬಾಲಿವುಡ್‍ನಲ್ಲಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ಸೋಂಕು ತಲ್ಲಣವನ್ನೇ ಸೃಷ್ಟಿಸಿದೆ. ಹಿಂದಿ ಚಿತ್ರರಂಗದ ದೊಡ್ಡಮನೆಯಲ್ಲಿ ಅಮಿತಾಭ್, ಅಭಿಷೇಕ್, ಐಶ್ವರ್ಯಾ ರೈ, ಆರಾಧ್ಯ ಬಚ್ಚನ್ ಎಲ್ಲರಿಗೂ ಕೋವಿಡ್ 19 ಸೋಂಕು ತಗುಲಿದೆ. ಚೈನೀಸ್ ವೈರಸ್ ತಟ್ಟದೆ ಬಚಾವ್ ಆಗಿರುವುದು ಜಯಾ ಬಚ್ಚನ್ ಮಾತ್ರ. ಈಗ ಇದೇ ಆತಂಕ ಸರ್ಜಾ ಫ್ಯಾಮಿಲಿಗೆ ಕಾಡ್ತಿದೆ.

    ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸರ್ಜಾ ಇಬ್ಬರಿಗೂ ಕೋವಿಡ್ 19 ಪಾಸಿಟಿವ್ ರಿಪೋರ್ಟ್ ಬಂದಿದೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಐಸೋಲೇಷನ್‍ನಲ್ಲಿ ಇರಿಸಲಾಗುತ್ತಿದೆ. ನಮ್ಮೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಧ್ರುವ ಸರ್ಜಾ ಮನವಿ ಮಾಡಿಕೊಂಡಿದ್ದಾರೆ. ಗುಣಮುಖರಾಗಿ ಬನ್ನಿ ಧ್ರುವ ಮತ್ತು ಪ್ರೇರಣಾ. ಇದು ಚಿತ್ರಲೋಕದ ಹಾರೈಕೆ.  

  • ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ರಶ್ಮಿಕಾ ಮಂದಣ್ಣಗೆ ಕನ್ನಡದ ಪೊಗರು ಚಿತ್ರದ ಬಗ್ಗೆ ಇಂಟ್ರೆಸ್ಟ್ ಇಲ್ಲ. ಅವರ್ಯಾಕೆ ಪೊಗರು ಬಗ್ಗೆ ಪ್ರಮೋಟ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಈಗ ಚಿತ್ರತಂಡವೇ ಉತ್ತರ ಕೊಟ್ಟಿದೆ.

    ಅಂತಹುದ್ದೇನಿಲ್ಲ. ರಶ್ಮಿಕಾ ಖಂಡಿತಾ ಪೊಗರು ಚಿತ್ರದ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು, ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಮುನ್ನ ಒಂದಿಡೀ ತಿಂಗಳು ಚಿತ್ರದ ಪ್ರಚಾರವನ್ನು ಹೈ ಲೆವೆಲ್ಲಿನಲ್ಲಿಡಲು ಚಿತ್ರತಂಡ ಪ್ಲಾನ್ ಮಾಡಿದೆ. ಪೊಗರು ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ ನಾಯಕರಾಗಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.

  • ಬಹದ್ದೂರ್ ಗಂಡು ಧ್ರುವ, ಲೆಕ್ಚರರ್ ಪ್ರೇರಣಾ ಲವ್ ಸ್ಟೋರಿ

    dhruva sarja prerna's 10 year old love story

    ಅದ್ಧೂರಿ, ಬಹದ್ದೂರ್, ಭರ್ಜರಿ ಮೂಲಕ ಹ್ಯಾಟ್ರಿಕ್ ಹಿಟ್ ನೀಡಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲವ್ವಲ್ಲಿ ಬಿದ್ದಿದ್ದರು ಅನ್ನೋದು ಗುಟ್ಟಾಗಿಯೇನೂ ಇರಲಿಲ್ಲ. ತಾನು ಮದುವೆಯಾಗುವುದಾದರೆ ಪ್ರೀತಿಸಿಯೇ ಮದುವೆಯಾಗುತ್ತೇನೆ ಎಂದಿದ್ದ ಧ್ರುವ, ಈಗ ತಮ್ಮ ಹೃದಯ ಕದ್ದ ಹುಡುಗಿಯ ಜೊತೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.

    ಧ್ರುವ ಸರ್ಜಾ ಅವರ ಸಂಗಾತಿಯ ಹೆಸರು ಪ್ರೇರಣಾ. ಪಕ್ಕದ್ಮನೆ ಹುಡುಗಿ. ಪ್ರೀತಿ ಇವತ್ತು ನಿನ್ನೆಯದ್ದಲ್ಲ. ಇದು 16 ವರ್ಷಗಳ ಪ್ರೀತಿ. ಲವ್ ಶುರುವಾಗುವಾಗ ಧ್ರುವ ಸರ್ಜಾ ಹೀರೋ ಆಗಿರಲಿಲ್ಲ. ಸ್ಟಾರ್ ಆಗಿರಲಿಲ್ಲ. ಈಗ ಸ್ಟಾರ್ ಆದ ಮೇಲೂ ಪ್ರೀತಿ ಹಾಗೆಯೇ ಇದೆ. ಇಬ್ಬರ ಮದುವೆಗೆ ಹಿರಿಯರು ಒಪ್ಪಿದ್ದಾರೆ.

    ಚಿತ್ರರಂಗಕ್ಕೆ ಬರುವ ಮುನ್ನವೇ ಪ್ರೇರಣಾರನ್ನು ಪ್ರೀತಿಸಿದ್ದೆ. ನಮ್ಮ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಡಿಸೆಂಬರ್ 9ರಂದು ನಿಶ್ಚಿತಾರ್ಥ ಎಂದಿದ್ದಾರೆ ಧ್ರುವ ಸರ್ಜಾ.

    ಬೆಂಗಳೂರಿನ ಬನಶಂಕರಿಯಲ್ಲಿರುವ ವೀರಾಂಜೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 9ರಂದು ನಿಶ್ಚಿತಾರ್ಥ ನೆರವೇರಲಿದೆ. ನಂತರ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥದ ವಿಶೇಷ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.

  • ಬಹಾದ್ದೂರ್‍ನ ಭರ್ಜರಿಯೂ ಸೆಂಚುರಿ.. ಸಂಭ್ರಮ ಅದ್ಧೂರಿ

    bharjari completes 100 days

    ಧ್ರುವ ಸರ್ಜಾ ಅವರ ಭರ್ಜರಿ ಚಿತ್ರ ಭರ್ಜರಿ ಯಶಸ್ಸನ್ನೇ ಕಂಡಿದೆ. ಚಿತ್ರ ಹಿಟ್ ಎಂಬ ಸೂಚನೆ ಸಿಕ್ಕ ದಿನದಿಂದಲೂ ಚಿತ್ರತಂಡ, ಸಿನಿಮಾದ ಪ್ರತಿ ಮೈಲುಗಲ್ಲನ್ನೂ ಸಂಭ್ರಮಿಸುತ್ತಾ ಬಂದಿತ್ತು. 25 ದಿನ, 50 ದಿನ & 75ನೇ ದಿನದ ಸಂಭ್ರಮವನ್ನು ಥಿಯೇಟರುಗಳಲ್ಲಿ ಆಚರಿಸಿತ್ತು. ಧ್ರುವ ಸರ್ಜಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.

    ಇಂದು ಚಿತ್ರಕ್ಕೆ 100 ದಿನ. ಶತದಿನೋತ್ಸವದ ಸಂಭ್ರಮವೂ ಜೋರಾಗಿಯೇ ನಡೆಯಲಿದೆ. ಇಂದು ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಮೈಸೂರು ಬ್ಯಾಂಕ್ ಸರ್ಕಲ್‍ನಿಂದ ನರ್ತಕಿ ಚಿತ್ರಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಕೇರಳ ಚಂಡೆ, ಕೀಲುಗೊಂಬೆ, ತಮಟೆ.. ಎಲ್ಲ ವಾದ್ಯಗಳ ಮೇಳವೂ ಇರಲಿದೆ.

    ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಹೂವಿನ ಅಭಿಷೇಕ, ಪಟಾಕಿಗಳ ಮೊರೆತ ಇರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‍ಗೆ ಅಭಿಷೇಕವೂ ನಡೆಯಲಿದೆ. 101 ಕೆಜಿಯ ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಭರ್ಜರಿ ಶತದಿನೋತ್ಸವ.. ಸಿನಿಮಾದವರೇ ಹೋಗಲ್ಲ..!

    bharjari to celebrate 100 days function

    ಭರ್ಜರಿ. ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. ಧ್ರುವ, ರಚಿತಾ ರಾಮ್, ಹರಿಪ್ರಿಯಾ ನಟಿಸಿರುವ ಚಿತ್ರ ಸೂಪರ್ ಹಿಟ್ ಆಗಿ, ಶತದಿನೋತ್ಸವ ಆಚರಿಸಿತ್ತು. ಆದರೆ, ಚಿತ್ರದ ಬಿಡುಗಡೆಗೂ ಮೊದಲಿನಿಂದ ಚಿತ್ರತಂಡ ಹಾಗೂ ನಿರ್ಮಾಪಕರ ಮಧ್ಯೆ ತಿಕ್ಕಾಟ ನಡೆದೇ ಇತ್ತು. ಚಿತ್ರತಂಡ, ಭರ್ಜರಿ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿದೆ ಎಂದಿದ್ದರೆ, ನಿರ್ಮಾಪಕ ಶ್ರೀನಿವಾಸ್.. ಅದೆಲ್ಲ ಸುಳ್ಳು. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಸುಳ್ಳು ಹೇಳ್ತಿದ್ದಾರೆ ಎಂದಿದ್ದರು.

    ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್, ಭರ್ಜರಿ ಚಿತ್ರದ ಶತದಿನ ಸಮಾರಂಭ ಏರ್ಪಡಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಆರ್.ವಿ.ದೇವರಾಜ್, ವಿತರಕ ಭಾಷಾ ಮೊದಲಾದವರು ಬರುತ್ತಿದ್ದಾರೆ. ಮಾರ್ಚ್ 30ನೇ ತಾರೀಕು ಕನಕಪುರ ರಸ್ತೆಯ ಮುನೇಶ್ವರ ದೇವಸ್ಥಾನದ ಬಳಿ ಶತದಿನೋತ್ಸವ ಕಾರ್ಯಕ್ರಮ ನಡೆಯಲಿದೆ.

    ಆದರೆ, ಆ ಕಾರ್ಯಕ್ರಮಕ್ಕೆ ಚಿತ್ರತಂಡದವರೇ ಹೋಗುತ್ತಿಲ್ಲ. ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡದ ಎಲ್ಲ ಸದಸ್ಯರೂ ಈ ಸಮಾರಂಭದಿಂದ ದೂರವೇ ಉಳಿದಿದ್ದಾರೆ. ನಿರ್ಮಾಪಕರು ಅಷ್ಟರಮಟ್ಟಿಗೆ ಚಿತ್ರತಂಡದವರ ಜೊತೆ ಬಾಂಧವ್ಯ ಕೆಡಿಸಿಕೊಂಡಿದ್ದಾರಾ..? ಚಿತ್ರತಂಡದವರನ್ನು ಕೇಳಿದರೆ ಒಬ್ಬೊಬ್ಬರ ಬಳಿಯೂ ಮೈಲುದ್ದದ ದೂರುಗಳಿವೆ. ಸಿನಿಮಾ ಸದಸ್ಯರೇ ಇಲ್ಲದೆ ಸಿನಿಮಾ ಶತದಿನೋತ್ಸವ ನಡೆಯುತ್ತಾ..? ವೇಯ್ಟ್ ಮಾಡಿ.

  • ಭರ್ಜರಿ.. ಭರ್ಜರಿ ಹಿಟ್.. ಆದರೆ, ಸಂಭಾವನೆ ಕಟ್

    bharjari hit

    ಭರ್ಜರಿ. ಧ್ರುವ ಸರ್ಜಾ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. 100 ದಿನ ಪೂರೈಸಿರುವ ಚಿತ್ರದ ಕಲಾವಿರದರು, ತಂತ್ರಜ್ಞರು ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದರೂ, ಆ ಸಂಭ್ರಮ ಅವರ ಮುಖದಲ್ಲಿಲ್ಲ. ಕಾರಣ, ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್. ನಿರ್ಮಾಪಕರು ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಸರಿಯಾಗಿ ಸಂಭಾವನೆ ಕೊಟ್ಟಿಲ್ಲ.

    ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಅನ್ನೋಕೆ ಕಾರಣವೂ ಇದೆ. ಇದೇ ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೂ ನಿರ್ಮಾಪಕರಾಗಿದ್ದವರು. ಆ ಚಿತ್ರವೂ ಹಿಟ್ ಆಗಿತ್ತು. ಆ ಚಿತ್ರದ ನಿರ್ದೇಶಕ, ತಂತ್ರಜ್ಞರಿಗೂ ಶ್ರೀನಿವಾಸ್ ಸಂಭಾವನೆ ಕೊಟ್ಟಿರಲಿಲ್ಲ. ಭರ್ಜರಿ ಚಿತ್ರದ ಬಿಡುಗಡೆ ವೇಳೆ ಕೋರ್ಟ್ ಮೆಟ್ಟಿಲೇರುವ ಸೂಚನೆ ನಿಡಿದ್ದ ನಿರ್ದೇಶಕ ಯೋಗರಾಜ್ ಭಟ್, ಭರ್ಜರಿ ಸಿನಿಮಾ ಬಿಡುಗಡೆಗೆ ತೊಡಕಾಗದಿರಲಿ ಎಂದು ಸುಮ್ಮನಾಗಿದ್ದರು.  ಶ್ರೀನಿವಾಸ್ ಕೂಡಾ ಮತ್ತೊಮ್ಮೆ ಸಂಭಾವನೆ ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಮತ್ತೊಮ್ಮೆ ಸುಳ್ಳಾಗಿತ್ತು. ಯೋಗರಾಜ್ ಭಟ್ಟರಿಗೆ ಕೊಟ್ಟಿದ್ದ ಚೆಕ್ಕು, ಮತ್ತೊಮ್ಮೆ ಬೌನ್ಸ್ ಆಗಿತ್ತು. ಹೀಗಾಗಿ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗ ಮತ್ತೊಮ್ಮೆ ಅದೇ ನಿರ್ಮಾಪಕರ ವಿರುದ್ಧ ಭರ್ಜರಿ ಚಿತ್ರತಂಡದ ಕಲಾವಿದರು ತಂತ್ರಜ್ಞರಿಂದಲೂ ಆರೋಪ ಕೇಳಿಬಂದಿದೆ. ಸ್ವತಃ ಧ್ರುವ ಸರ್ಜಾ ಇದನ್ನು ಒಪ್ಪಿಕೊಂಡಿದ್ದಾರೆ. ನಾವೇನೋ ರಾಜಿಗೆ ಬರಬಹುದು. ಸುಮ್ಮನಾಗಬಹುದು. ಆದರೆ, ನಿರ್ಮಾಪಕರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗೆ ಕೆಲಸ ಮಾಡಿದವರಿಗೆ ಕೊಡಬೇಕಾದ ಸಂಭಾವನೆ ಕೊಡುವುದು ಮುಖ್ಯ ಎಂದಿದ್ದಾರೆ ಧ್ರುವ ಸರ್ಜಾ.

    ಹೀಗಾಗಿ ಸಿನಿಮಾ ಶತದಿನೋತ್ಸವ ಆಚರಿಸಿದ್ದರೂ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರತಂಡ ಇಲ್ಲ. ಕನಕಪುರ ಶ್ರೀನಿವಾಸ್ ಹೀಗೇಕೆ ಮಾಡ್ತಾರೋ ಅರ್ಥವಾಗಲ್ಲ. 

     

  • ಭರ್ಜರಿ' ಬಾಕ್ಸಾಫೀಸ್ ರಿಯಲ್ ಕಲೆಕ್ಷನ್ ಎಷ್ಟು..?

    bharjari's real box office collection ad per producer

    ಭರ್ಜರಿ, ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ನೀಡಿದ ಚಿತ್ರ. ರಚಿತಾ ರಾಮ್, ಹರಿಪ್ರಿಯಾ ನಟಿಸಿದ್ದ ಚಿತ್ರ, ಶತದಿನೋತ್ಸವವನ್ನಾಚರಿಸಿತ್ತು. ಆಗ ಕೇಳಿಬಂದಿದ್ದ ಸುದ್ದಿಯೇನೆಂದರೆ, ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿದೆ ಅನ್ನೋದು. ಈ ಕುರಿತು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಾಯ್ಬಿಟ್ಟಿದ್ದಾರೆ.

    ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿಲ್ಲ. ಚಿತ್ರಕ್ಕೆ 17 ಕೋಟಿ ಖರ್ಚು ಮಾಡಿದ್ದೆ. 21 ಕೋಟಿ ಬಂತು. ಲಾಭ ಎಂದು ನನಗೆ ಸಿಕ್ಕಿದ್ದು 3 ಕೋಟಿ ಮಾತ್ರ ಎಂದಿದ್ದಾರೆ ಶ್ರೀನಿವಾಸ್.

    ಕೋಟಿ ಕೋಟಿ ಕಲೆಕ್ಷನ್ ಆಯ್ತು ಎಂದು ಮಾತನಾಡಿಬಿಟ್ಟರೆ, ಸಂಭಾವನೆ ಹೆಚ್ಚುತ್ತೆ ಅನ್ನೋದು ಕಾರಣ ಇರಬಹುದೇನೋ ಎಂದು ಧ್ರುವ ಸರ್ಜಾರತ್ತಲೇ ಬ್ಯಾಟು ಬೀಸಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಬೋಗಸ್ ಫಿಗರ್ ಕೊಡಬಾರದು. ಹಾಗೆ ಹೇಳಿದವರಿಗೆ ಉಗೀರಿ ಎಂದಿದ್ದಾರೆ ಕನಕಪುರ ಶ್ರೀನಿವಾಸ್.

  • ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ

    ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ

    ಧ್ರುವ ಸರ್ಜಾ ಅವರ ಜೊತೆ ಕೆಡಿ ಚಿತ್ರ ರೆಡಿ ಮಾಡುತ್ತಿರುವ ಜೋಗಿ ಪ್ರೇಮ್, ಏಕ್ ಲವ್ ಯಾದ ಮುದ್ದು ಮುದ್ದು ಅನಿತಾರನ್ನು ಮಚ್ ಲಕ್ಷ್ಮಿಯನ್ನಾಗಿ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಅವರ ಪಾತ್ರದ ಹೆಸರೇ ಮಚ್ ಲಕ್ಷ್ಮಿ. ರೀಷ್ಮಾನಾಣಯ್ಯ ಹುಟ್ಟುಹಬ್ಬಕ್ಕೆ ಮಚ್ ಲಕ್ಷ್ಮಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

    ಇದೊಂದು ಪಾತ್ರ ಮತ್ತು ಅವರ ಲುಕ್ಕಿಗಾಗಿ ಸತತ 4 ತಿಂಗಳು ವರ್ಕೌಟ್ ಮಾಡಿದ್ದೇವೆ.ಬೇರೆ ಬೇರೆ ಡಿಸೈನ್ ಡ್ರೆಸ್, ಮ್ಯಾನರಿಸಂ ರೂಪಿಸಲು ಶ್ರಮ ಪಟ್ಟಿದ್ದೇವೆ. ಈ ಚಿತ್ರದಲ್ಲಿನ ಮ್ಯಾನರಿಸಂ ಮಾಡುವುದಕ್ಕೆ 70ರ ದಶಕದ ನಾಯಕಿಯರ ಮ್ಯಾನರಿಸಂ ಫಾಲೋ ಮಾಡೋಕೆ ಹೇಳಿದ್ದೆ. ಹಲವು ಮ್ಯಾನರಿಸಂಗಳನ್ನು ರೀಷ್ಮಾ ನಾಣಯ್ಯ ವರ್ಕೌಟ್ ಮಾಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ಬೆರಗು ಹುಟ್ಟಿಸುತ್ತಾರೆ ಎನ್ನುತ್ತಾರೆ ಪ್ರೇಮ್.

    ಪೋಸ್ಟರ್ ಕೂಡಾ ಹಾಗೆಯೇ ಇದೆ. ಮೊಳಕಾಲಿನವರೆಗೆ ಎತ್ತಿ ಕಟ್ಟಿರುವ ಸೀರೆ, ಒಂದು ಕೈತುಂಬಾ ಕರಿಬಳೆ, ಉದ್ದ ಜಡೆ, ಬಿಸಿ ಬಿಸಿ ಮುದ್ದೆ ಇಟ್ಟಿರುವ ತಟ್ಟೆ, ಮೂಳೆ ಕಡಿಯುತ್ತಿರುವ ಮಚ್ ಲಕ್ಷ್ಮಿ ಲುಕ್ ಅಂತೂ ರಗಡ್ ಆಗಿದೆ. ಧ್ರುವ ಸರ್ಜಾ ಎದುರು ಚಿತ್ರದಲ್ಲಿ ವಿ.ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನಲ್ಲಿ ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗುತ್ತಿದೆ.

  • ಮತ್ತೊಮ್ಮೆ ಅಪ್ಪನಾಗುತ್ತಿದ್ದಾರೆ ಧ್ರುವ ಸರ್ಜಾ

    ಮತ್ತೊಮ್ಮೆ ಅಪ್ಪನಾಗುತ್ತಿದ್ದಾರೆ ಧ್ರುವ ಸರ್ಜಾ

    ನಟ ಧ್ರುವ ಸರ್ಜಾ ಎರಡನೇ ಮಗುವಿನ ತಂದೆಯಾಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ಮತ್ತೊಂದು ಮಗುವಿನ ತಂದೆಯಾಗುತ್ತಿರುವ ಶುಭ ಸುದ್ದಿ ಕೊಟ್ಟಿದ್ದಾರೆ. 2022ರ ಅಕ್ಟೋಬರ್ 2ರಂದು ಮೊದಲ ಮಗುವಿನ ತಂದೆಯಾಗಿದ್ದರು. ಇದೀಗ 2ನೇ ಮಗುವಿಗೆ ಸ್ವಾಗತ ಕೋರಲು ಸಜ್ಜಾಗುತ್ತಿದ್ದಾರೆ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ದಂಪತಿ.

    ದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ತಂದೆಯಾಗುವ ಬಗ್ಗೆ ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಕೈಯಲ್ಲಿ ಮೊದಲ ಮಗುವನ್ನು ಹಿಡಿದುಕೊಂಡು, ಜೊತೆಗೆ ಮಡದಿ ಪ್ರೇರಣಾ ಶಂಕರ್ ಜೊತೆಗೆ ಪ್ಯಾರಾಚೂಟ್ನಲ್ಲಿ ಹಾರಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ‘ನಮ್ಮ ಸಂತೋಷಕ್ಕೆ ಮತ್ತೊಂದು ಸಣ್ಣ ಕಾಲ್ಬೆರಳು ಬರಲಿದೆ’ ಎಂದು ಬರೆದುಕೊಂಡಿದ್ದಾರೆ.

    ಸೆಪ್ಟೆಂಬರ್ ಎರಡನೇ ಅಥವಾ ಮೂರನೇ ವಾರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಡೀ ಕುಟುಂಬ ಮನೆಗೆ ತಮ್ಮ ಕುಡಿಯನ್ನು ಆಗಮನ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

  • ಮದುವೆ ಸಮಯದಲ್ಲೂ ಧ್ರುವ ಸರ್ಜಾ ಗಡ್ಡಕ್ಕಿಲ್ಲ ಮುಕ್ತಿ..?

    dhruva sarja to retain his beard for wedding

    ಧ್ರುವ ಸರ್ಜಾ ಮದುವೆಗೆ ರೆಡಿಯಾಗಿದ್ದಾರೆ. ಪ್ರೇರಣಾ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆಯಲ್ಲೂ ಹೀಗೇ ಇರೋಕಾಗುತ್ತಾ..? ಶೇವ್ ಮಾಡಿಕೊಂಡು ಸ್ಮಾರ್ಟ್ ಆಗಿರುತ್ತೇನೆ ಎಂದಿದ್ದರು ಧ್ರುವ. ಅದಕ್ಕೆ ತಕ್ಕಂತೆ ಪೊಗರು ಶೂಟಿಂಗ್ ಮುಗೀತಂತೆ ಅನ್ನೋ ಸುದ್ದಿಯೂ ಬಂದಿತ್ತು. ಆದರೆ, ಈಗಿನ ಅಪ್‌ಡೇಟ್ ಬೇರೆ. ಮದುವೆ ನವೆಂಬರ್ 24ಕ್ಕೆ. ನವೆಂಬರ್ 25ರ ನಂತರ ಮತ್ತೆ ಪೊಗರು ಶೂಟಿಂಗ್ ಇದೆ ಎಂದಿದ್ದಾರೆ ಧ್ರುವಾ.

    ಹಾಗಾದರೆ, ಪೊಗರು ಗೆಟಪ್ ಕಂಟಿನ್ಯೂ ಆಗುತ್ತಾ..? ಗೊತ್ತಿಲ್ಲ. ಅಥವಾ ಇನ್ನೂ ಒಂದು ಮಾತಿದೆ. ಪೊಗರುನಲ್ಲಿ ಗಡ್ಡದ ಗೆಟಪ್ ಶೂಟಿಂಗ್ ಮುಗಿದಿದ್ದರೆ, ಗಡ್ಡಕ್ಕೆ ಮುಕ್ತಿ ಸಿಗಲಿದೆ. ಸದ್ಯಕ್ಕೆ ಧ್ರುವ ಸರ್ಜಾ ಪೊಗರು ಹೀಗೇ ಇರಲಿದೆ. ಅದ್ಧೂರಿ, ಭರ್ಜರಿ ಧ್ರುವ ಸದ್ಯಕ್ಕಿಲ್ಲ.

  • ಮಾ.27ಕ್ಕೆ ಪೊಗರುನ ಕರಾಬ್ ಸಾಂಗ್

    khabaru song on marcha 27th

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ನಂದ ಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು. ಟ್ರೇಲರಿನ ಪೊಗರು ನೋಡಿಯೇ ಥ್ರಿಲ್ಲಾಗಿರುವ ಫ್ಯಾನ್ಸ್‍ಗೆ ಮಾರ್ಚ್ 27ಕ್ಕೆ ಕರಾಬು ಸಾಂಗ್ ಮೂಲಕ ಮತ್ತೊಂದು ಥ್ರಿಲ್ ಕೊಡೋಕೆ ರೆಡಿಯಾಗಿದೆ ಪೊಗರು ಟೀಂ.

    ಮಾ.27ರಂದು ಆನಂದ್ ಆಡಿಯೋನಲ್ಲಿ ಪೊಗರು ಚಿತ್ರದ ಕರಾಬ್.. ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. 

  • ಮಾರ್ಚ್ ಅಂತ್ಯಕ್ಕೆ ಪೊಗರು

    pogaru to release in march

    ಧ್ರುವ ಸರ್ಜಾ ಅಭಿನಯದ ಪೊಗರು ಯಾವಾಗ ರಿಲೀಸ್ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರದ ಶೂಟಿಂಗ್ ಮುಗಿಸಿದ್ದು, ಮೊದಲನೇ ಹಂತದ ಡಬ್ಬಿಂಗ್ ಕೂಡಾ ಮುಗಿದಿದೆಯಂತೆ.

    ದ್ವಿತಿಯಾರ್ಧದ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದೆ. ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಧ್ರುವ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್‌ಗಳಾದ ಮೋರ್ಗನ್‌ ಆಸ್ಟೆ, ಕೈಗ್ರೀನ್‌ , ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಧ್ರುವ ಜೊತೆ ಫೈಟ್ ಮಾಡಿದ್ದು, ಚಿತ್ರಕ್ಕೆ ಸಹಜವಾಗಿಯೇ ದೊಡ್ಡ ಮಟ್ಟದ ಹೈಪ್ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ ಮೇಲೆ ಧ್ರುವ ಅವರಿಗಾಗಿಯೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ. ಪೊಗರು ರಿಲೀಸ್ ಆದ ಮೇಲೆ ಆ ಚಿತ್ರದ ಬಗ್ಗೆ ಹೇಳುತ್ತಾರಂತೆ ನಂದಕಿಶೋರ್.

  • ಮಾರ್ಟಿನ್ : ಇನ್ನೂ 15 ದಿನ ಶೂಟಿಂಗ್ ಬಾಕಿ

    ಮಾರ್ಟಿನ್ : ಇನ್ನೂ 15 ದಿನ ಶೂಟಿಂಗ್ ಬಾಕಿ

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ಸಿನಿಮಾ ಮಾರ್ಟಿನ್. ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಅದ್ಧೂರಿ ನಂತರ ಅರ್ಜುನ್ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿರೋ ಸಿನಿಮಾ ಮಾರ್ಟಿನ್. ಧ್ರುವ ಸರ್ಜಾರನ್ನು ಲಾಂಚ್ ಮಾಡಿದ್ದವರು ಕೂಡಾ ಅರ್ಜುನ್. ಇವರಿಬ್ಬರೂ ಮತ್ತೊಮ್ಮೆ ಒಂದಾಗಿರೋ ಸಿನಿಮಾ ಮಾರ್ಟಿನ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ರೂಪುಗೊಳ್ಳುತ್ತಿದೆ.

    ಚಿತ್ರದಲ್ಲಿನ ಎರಡು ಫೈಟಿಂಗ್ ಮತ್ತು ಚೇಸಿಂಗ್ ಸೀನ್ ಬ್ಯಾಲೆನ್ಸ್ ಇದೆ. ಎರಡು ಹಾಡುಗಳ ಶೂಟಿಂಗ್ ಆಗಬೇಕಿದೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಒಂದು ಫೈಟ್ ಸೀಕ್ವೆನ್ಸ್‍ನ್ನ ರಾಮ್-ಲಕ್ಷ್ಮಣ್ ಕಂಪೋಸ್ ಮಾಡುತ್ತಿದ್ದಾರೆ. ಮತ್ತೊಂದು ಸೀಕ್ವೆನ್ಸ್‍ನ ರವಿವರ್ಮ ಮಾಸ್ಟರ್ ಮಾಡಲಿದ್ದಾರೆ ಎಂದು ಮಾಹಿತಿ ಕೊಟ್ಟಿರೋದು ಎ.ಪಿ.ಅರ್ಜುನ್.

    ವೈಭವಿ ಶಾಂಡಿಲ್ಯ ನಾಯಕಿಯಾಗಿರೋ ಚಿತ್ರ ಸೆಪ್ಟೆಂಬರ್‍ನಲ್ಲಿ ರಿಲೀಸ್ ಡೇಟ್ ಘೋಷಿಸಿತ್ತು. ರಿಲೀಸ್ ಡೇಟ್ ಮುಂದೆ ಹೋಗಲಿದೆ ಎಂಬ ಸುದ್ದಿಯಿದೆ. ಆದರೆ ಅದನ್ನು ಮಾರ್ಟಿನ್ ತಂಡ ಅಧಿಕೃತವಾಗಿ ಹೇಳಿಲ್ಲ.