` dhruva sarja, - chitraloka.com | Kannada Movie News, Reviews | Image

dhruva sarja,

  • ಧ್ರುವ ವೆಡ್ಸ್ ಪ್ರೇರಣಾ : ಮದುವೆ ಮನೆಯ ಅದ್ಧೂರಿ.. ಭರ್ಜರಿ ಒಂದಾ.. ಎರಡಾ..

    interesting elemets at dhruva prerna's wedding

    ಧ್ರುವ ಸರ್ಜಾ, ಪ್ರೇರಣಾ ಈಗ ಜನುಮದ ಜೋಡಿ. ಅದ್ಧೂರಿಯಾಗಿ ನಡೆದ ಬಹದ್ದೂರ್ ಮದುವೆಯಲ್ಲಿ, ಸಡಗರ, ಸಂಭ್ರಮಗಳು ಭರ್ಜರಿಯಾಗಿಯೇ ಇದ್ದವು. ಇಡೀ ಕಲ್ಯಾಣ ಮಂಟಪವನ್ನು ತಿರುಪತಿ ವೆಂಕಟೇಶ್ವರ ಥೀಂನಲ್ಲಿ ಸಿಂಗರಿಸಲಾಗಿತ್ತು.

    ಶಿವ ಪಾರ್ವತಿ, ಗಣಪತಿ ಮೂರ್ತಿಗಳ ಹಿನ್ನೆಲೆಯಲ್ಲಿ ಮತ್ತೊಂದು ಮಂಟಪವಿತ್ತು. ಒಟ್ಟು ೩ ಮಂಟಪಗಳಿದ್ದವು. ಗೋ ಪೂಜೆಗಾಗಿಯೇ ೫ ಹಸುಗಳನ್ನು ತರಿಸಲಾಗಿತ್ತು. ಬೆಳಗ್ಗೆ ೬.೩೦ಕ್ಕೆ ಗೌರಿ ಪೂಜೆ, ೬.೪೦ಕ್ಕೆ ಕಾಶಿಯಾತ್ರೆ ಶಾಸ್ತç ಮುಗಿದು, ೭.೧೫ಕ್ಕೆ ಮುಹೂರ್ತ ಆಯಿತು. ಶಾಸ್ತçಗಳನ್ನು ನೆರವೇರಿಸಲೆಂದೇ ೧೮ ಪುರೋಹಿತರಿದ್ದು.

    ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂಚೆ, ಶರಟು, ಕೇಸರಿ ಶಲ್ಯ ನೀಡಲಾಗಿತ್ತು.

  • ಧ್ರುವ ಸಂಭಾವಣೆ 6 ಕೋಟಿಯಂತೆ..!

    dhruva's remunaration is 6 crores

    ಧ್ರುವ ಸರ್ಜಾ, ಭರ್ಜರಿ ಸಿನಿಮಾಗೆ 6 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಗಾಂಧಿ ನಗರದಲ್ಲಿ ವೈರಲ್ ಆಯ್ತು. ಸ್ವಾರಸ್ಯಕಾರಿ ವಿಷಯ ಏನಂದ್ರೆ, ಧ್ರುವ ಭರ್ಜರಿ ಸಿನಿಮಾದ ಅದರ ಆರ್ಧದಷ್ಟೂ ಸಂಭಾವನೆ ಪಡೆದಿಲ್ಲ. 

    ಸುದ್ದಿ ವೈರಲ್ ಆದ ಮೇಲೆ, ನೋಡೋಣ, ನನಗೂ ಅಷ್ಟು ಕೊಡ್ತಾರಾ ಅಂತಾ ಕೇಳಿದೆ. ಕೊಟ್ಟೇಬಿಟ್ಟರು ಎಂದು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಮುಂದೆ ನನ್ನ ಸಂಭಾವನೆಯನ್ನು ಇನ್ನೂ ಜಾಸ್ತಿ ಜಾಸ್ತಿ ಹೆಚ್ಚಿಸಿ ಸುದ್ದಿ ಮಾಡಿ, ನನಗೂ ಒಳ್ಳೆಯದಾಗುತ್ತೆ ಎಂದು ಮಾಧ್ಯಮಗಳನ್ನು ತಮಾಷೆ ಮಾಡಿದ್ದಾರೆ.

    ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ಧ್ರುವ ಸರ್ಜಾ, ಪೊಗರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮುಗಿದಿದೆ. ಅಂತಿಮ ತಿದ್ದುಪಡಿಗಳೂ ಮುಗಿದಿವೆ. ನಮ್ಮ ಕುಟುಂಬದ ಪ್ರೇಮ ಬರಹ ಚಿತ್ರದ ಆಡಿಯೋ ಬಿಡುಗಡೆ ಮುಗಿದ ಮೇಲೆ ಪೊಗರು ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಧ್ರುವ.

    ಅಂದಹಾಗೆ ಪೊಗರು ಕೂಡಾ ಸ್ವಮೇಕ್ ಸಿನಿಮಾ. ಅದಾದ ನಂತರ ಉದಯ್ ಮೆಹ್ತಾ ಅವರ ನಿರ್ಮಾಣದ ಚಿತ್ರಕ್ಕೆ ಒಪ್ಪಿದ್ದೇನೆ. 2 ವರ್ಷಕ್ಕೆ 3 ಸಿನಿಮಾ ಮಾಡುವುದು ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ ಧ್ರುವ.

  • ಧ್ರುವ ಸರ್ಜಾ ಅಭಿಮಾನಿ ದೇವರುಗಳಿಗಾಗಿ..

    feast to fans by dhruva sarja

    ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದರು. ಸರ್ಜಾ ಫ್ಯಾಮಿಲಿ ಕೂಡಾ ಅದನ್ನೇ ಅನುಸರಿಸುತ್ತಿದೆ. ಹೀಗಾಗಿಯೇ ಧ್ರುವ ಸರ್ಜಾ ಮದುವೆಯಲ್ಲಿ ಅಭಿಮಾನಿಗಳಿಗಾಗಿಯೇ ಸ್ಪೆಷಲ್ ಔತಣಕೂಟ. ಯಾರು ಬೇಕಾದರೂ ಬರಬಹುದು. ಮದುವೆಯಾಗುವ ಅದೇ ಛತ್ರದಲ್ಲಿ ಅಭಿಮಾನಿಗಳಿಗಾಗಿ ಸ್ಪೆಷಲ್ ಭೋಜನದ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 25ರಂದು.

    ಅಭಿಮಾನಿಗಳು ಆ ದಿನ ಧ್ರುವ ಜೊತೆಯಲ್ಲಿರಬಹುದು. ದಂಪತಿ ಸಮೇತರಾಗಿ ಆ ದಿನ ಧ್ರುವ ಅಲ್ಲೇ ಇರುತ್ತಾರೆ ಎಂದು ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ ಮಾಹಿತಿ ಕೊಟ್ಟಿದ್ದಾರೆ.

    ಅಭಿಮಾನಿಗಳೇ ನನ್ನ ಮದುವೆಯಲ್ಲಿ ವಿಐಪಿ. ಬಂದು ಹೊಟ್ಟೆ ತುಂಬ ಊಟ ಮಾಡಿಕೊಂಡು ಹೃದಯದ ತುಂಬಾ ಹರಸಿ ಹೋಗಿ ಎಂದಿದ್ದಾರೆ ಧ್ರುವ. ಮದುವೆ ಆಹ್ವಾನ ಪತ್ರಿಕೆಯಲ್ಲಿ ಬ್ರಹ್ಮಚಾರಿ ಆಂಜನೇಯ ಏಕೆ ಎಂಬ ಪ್ರಶ್ನೆಗೆ ಅದು ನಮ್ಮ ನಂಬಿಕೆ. ಬಿಡೋಕೆ ಆಗಲ್ಲ ಎಂದಿದ್ದಾರೆ.

  • ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.

    ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?

    ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.

    ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.

    ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.

  • ಧ್ರುವ ಸರ್ಜಾ ಎದುರು ಮಯೂರಿ ಪೊಗರು

    mayuri joins pogaru team

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮತ್ತೊಂದು ತಾರೆ ಸೇರಿಕೊಂಡಿದೆ. ಮಯೂರಿ ಚಿತ್ರದ ತಾರಾಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಮಯೂರಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಮಯೂರಿಯದ್ದು ಧ್ರುವ ಸರ್ಜಾ ತಂಗಿ ಪಾತ್ರವಂತೆ. ಈಗಾಗಲೇ ಶಿವಣ್ಣನಿಗೆ ತಂಗಿಯಾಗಿ ನಟಿಸಿರುವ ಮಯೂರಿ, ಈಗ ಧ್ರುವ ಸರ್ಜಾಗೂ ತಂಗಿಯಾಗಿದ್ದಾರೆ.

    ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಜಗಪತಿ ಬಾಬು, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಸ್ಟಾರ್ ಸಿನಿಮಾ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರಿನ ಖದರು ಜೋರಾಗುತ್ತಲೇ ಇದೆ.

  • ಧ್ರುವ ಸರ್ಜಾ ಕಾರು ಅಪಘಾತ

    dhruva sarja meets with an accident

    ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದಾಗ ಧ್ರುವ ಸರ್ಜಾ ಇದ್ದ ಕಾರಿಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯವಾಗಿಲ್ಲ. ಬಳ್ಳಾರಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರದ ಶೂಟಿಂಗ್‌ ಸಲುವಾಗಿ ಚಿತ್ರತಂಡ ಬಳ್ಳಾರಿಯಲ್ಲಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

    ಕಾರಿನ ಹಿಂಭಾಗಕ್ಕೆ ಹಾನಿಯಾಗಿದ್ದು, ಧ್ರುವ ಜೊತೆ ಕೆಲವು ಸ್ನೇಹಿತರಿದ್ದರು. ಆದರೆ, ಎಲ್ಲರೂ ಸೇಫ್ ಆಗಿದ್ದಾರೆ.

  • ಧ್ರುವ ಸರ್ಜಾ ಗಡ್ಡ ಬಿಟ್ಟರು..!

    dhruva sarja in new look for pogaru

    ಧ್ರುವ ಸರ್ಜಾ ಕೂಡಾ ಅಣ್ಣ ಚಿರಂಜೀವಿ ಸರ್ಜಾರಂತೆಯೇ ಗಡ್ಡಧಾರಿ. ಆದರೆ, ಅಣ್ಣನಷ್ಟಲ್ಲ. ಟ್ರಿಮ್ ಗಡ್ಡಧಾರಿ. ಅವರೀಗ ಸನ್ಯಾಸಿಯ ಲೆವೆಲ್ಲಿನಷ್ಟು ಗಡ್ಡ ಬಿಟ್ಟಿದ್ದಾರೆ. ಅದೂ ಪೊಗರು ಚಿತ್ರಕ್ಕಾಗಿ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವಾ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಹುಡುಗನ ವಯಸ್ಸಿನ ಪಾತ್ರಕ್ಕೆ ತೂಕ ಇಳಿಸಿಕೊಂಡಿದ್ದ ಧ್ರುವ, ಆ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಈಗ ಇಷ್ಟು ದೊಡ್ಡ ಗಡ್ಡ ಬಿಟ್ಟು, ನಟಿಸಬೇಕು.

    ಅಕ್ಟೋಬರ್ 1ರಿಂದ ಧ್ರುವ ಹೊಸ ಅವತಾರದಲ್ಲಿನ ಶೂಟಿಂಗ್ ಶುರುವಾಗಲಿದೆ. ಇಷ್ಟೆಲ್ಲ ಇದ್ದರೂ ಚಿತ್ರಕ್ಕಿನ್ನೂ ನಾಯಕಿ ಸಿಕ್ಕಿಲ್ಲ. ಪಾತ್ರಕ್ಕೆ ತಕ್ಕಂತ ನಾಯಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

  • ಧ್ರುವ ಸರ್ಜಾ ಚಿತ್ರಕ್ಕೆ ಬಾಲಿವುಡ್ ಕಥೆಗಾರ

    bollywood writer for dhruva's next

    ಒಂದರ ಹಿಂದೊಂದರಂತೆ ಮೂರು ಹಿಟ್ ನೀಡಿದ ಧ್ರುವ ಸರ್ಜಾ ಹೊಸ ಹೊಸ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. 

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಶಿರಾಜ್ ಅಹ್ಮದ್. ಯಾರು ಈ ಶಿರಾಜ್ ಅಹ್ಮದ್ ಎನ್ನಬೇಡಿ. ಆಶಿಕಿ 2, ಹಮಾರಿ ಅಧೂರಿ ಕಹಾನಿ, ಮರ್ಡರ್ 2, ಜಿಸ್ಮ್ 2,  ರೇಸ್ 2, ಒಂದು ತೆಲುಗು ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೇ ಬರೆದಿದ್ದವರು. ಈ ಹೊಸ ಚಿತ್ರಕ್ಕೆ ಜಗ್ಗುದಾದ ಚಿತ್ರ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

    ಆದರೆ, ಈ ಸುದ್ದಿಯನ್ನು ಧ್ರುವ ಸರ್ಜಾ ಇನ್ನೂ ಕನ್‍ಫರ್ಮ್ ಮಾಡಿಲ್ಲ.

  • ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್

    raghavendra rajkumar to act in pogaru

    ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸಿರುವ ಅಮ್ಮನ ಮನೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತ್ರಯಂಬಕಂ ಅನ್ನೋ ಚಿತ್ರದಲ್ಲಿಯೂ ನಟಿಸುತ್ತಿರುವ ರಾಘಣ್ಣ, ಅತಿಥಿ ನಟರಾಗಿ ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಧ್ರುವ-ರಶ್ಮಿಕಾ ಮಂದಣ್ಣ-ನಂದಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು ಚಿತ್ರದಲ್ಲಿ ರಾಘಣ್ಣ ಅವರಿಗಾಗಿಯೇ ವಿಶೇಷ ಪಾತ್ರವಿದೆಯಂತೆ. ಅದಕ್ಕಾಗಿ ರಾಘಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಅಣ್ಣ ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರವನ್ನು ಬಿಟ್ಟರೆ, ಬೇರೆ ಯಾವುದೇ ಚಿತ್ರದಲ್ಲಿ ರಾಘಣ್ಣ ಅತಿಥಿ ನಟರಾಗಿ ನಟಿಸಿಲ್ಲ. ಪೊಗರು ಮೂಲಕ ಮತ್ತೊಮ್ಮೆ ಅತಿಥಿ ನಟರಾಗುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

  • ಧ್ರುವ ಸರ್ಜಾ ತೂಕ 30 ದಿನಗಳಲ್ಲಿ 18 ಕೆಜಿ ಇಳಿಕೆ

    ಧ್ರುವ ಸರ್ಜಾ ತೂಕ 30 ದಿನಗಳಲ್ಲಿ 18 ಕೆಜಿ ಇಳಿಕೆ

    ಚಿತ್ರ ಹಾಗೂ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳೋದು ಮತ್ತು ಇಳಿಸಿಕೊಳ್ಳೋ ಸಂಪ್ರದಾಯ ಶುರುವಾಗಿದ್ದು ನಟ ಕಮಲ್ ಹಾಸನ್ ಅವರಿಂದ. ಅದಾದ ಮೇಲೆ ಘಜನಿ, ದಂಗಲ್ ಚಿತ್ರಗಳಿಗಾಗಿ ಅಮೀರ್ ಖಾನ್, ಐ ಚಿತ್ರಕ್ಕಾಗಿ ವಿಕ್ರಂ, ಬಾಹುಬಲಿಗಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ನಟಿಯರಲ್ಲಿ ಝೀರೋ ಸೈಝ್ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ, ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ ವಿದ್ಯಾ ಬಾಲನ್.. ಹೀಗೆ ಹಲವರು ತೂಕ ಹೆಚ್ಚಿಸಿಕೊಂಡು ನಟಿಸಿದ್ದಾರೆ. ಇದೇ ಅಮೀರ್ ಖಾನ್ ಪಿಕೆ, ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ, ಸುದೀಪ್ ಮುಸ್ಸಂಜೆ ಮಾತು ಚಿತ್ರಕ್ಕಾಗಿ ತೆಳ್ಳಗೂ ಆಗಿದ್ದಾರೆ.

    ಧ್ರುವ ಸರ್ಜಾ ಕೂಡಾ ಪೊಗರು ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಬೈಸಪ್ಸ್ ಎಗರೆಗರಿ ಬೀಳುವಂತೆ ಕಟ್ಟುಮಸ್ತಾಗಿಸಿದ್ದರು. ಅದೇ ಚಿತ್ರದಲ್ಲಿ ತೂಕ ಇಳಿಸಿಕೊಂಡು ಸಣ್ಣದಾಗಿಯೂ ನಟಿಸಿದ್ದರು.  ಮಾರ್ಟಿನ್ ಚಿತ್ರದ ಪಾತ್ರಕ್ಕೆ ಅದೇ ದೇಹವನ್ನು ತುಸು ಇಳಿಸಿಕೊಂಡಿದ್ದರು. ಇದೀಗ ಮತ್ತೆ ಕೆಡಿ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಅದೂ 30 ದಿನಗಳಲ್ಲಿ 18 ಕೆಜಿ ಇಳಿಸಿಕೊಂಡಿದ್ದಾರೆ.

    30 ದಿನಗಳಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳೋದು ಸುಮ್ಮನೆ ಮಾತಲ್ಲ. ಆದರೆ ಇದು ಹೆಮ್ಮೆ ಪಡುವ ವಿಷಯವಂತೂ ಖಂಡಿತಾ ಅಲ್ಲ. ಸೈಡ್ ಎಫೆಕ್ಟ್ ಜಾಸ್ತಿ. ಡೆಡಿಕೇಷನ್ ಮೆಚ್ಚಬಹುದಾದರೂ ದೇಹದ ಮೇಲೆ ವಿಪರೀತ ಒತ್ತಡ ಹಾಕುವುದು ಯಾವತ್ತಿಗೂ ಅಪಾಯ. ಏನೇ ಫಿಟ್‍ನೆಸ್ ಇದ್ದರೂ, ಪ್ರತಿದಿನ ಕಸರತ್ತು ಮಾಡಿದರೂ ದೇಹ ಎಲ್ಲವನ್ನೂ ತಡೆದುಕೊಳ್ಳಲ್ಲ. ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡೆ ಎಂದು ಎಂದು ಪೋಸ್ಟ್ ಹಾಕಿದ್ದೇ ತಡ, ಅಭಿಮಾನಿಗಳು ಮೆಚ್ಚುಗೆಯ ಜೊತೆ ಜೊತೆಗೆ ಎಚ್ಚರಿಕೆ ಮಾತನ್ನೂ ಹೇಳಿದ್ದಾರೆ. ಪ್ರೀತಿ ಜೊತೆ ಕಾಳಜಿ ತೋರಿಸಿದ್ದಾರೆ. ಅಭಿಮಾನಿಗಳ ಆತಂಕ ಏಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

    ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡಿರೋದು ಕೆಡಿ ಚಿತ್ರಕ್ಕಾಗಿ. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಚಿತ್ರವಿದು.

  • ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೇಳಿದ್ದಿದು. ಟ್ರೇಲರ್ ರಿಲೀಸ್‍ಗಾಗಿಯೇ ಬಂದಿದ್ದ ಧ್ರುವ ತಮ್ಮ ಮತ್ತು ಪ್ರೇರಣಾ ಅವರೇ ಡೇಟಿಂಗ್ ಡೇಸ್ ಸೀಕ್ರೆಟ್ ಹೇಳಿದರು.

    ಶರಣ್ ಸಿನಿಮಾ ಎಂದೊಡನೆ ನನಗೆ ನೆನಪಾಗೋದು ಪ್ರೇರಣಾ. ನಾವು ಡೇಟಿಂಗ್‍ನಲ್ಲಿದ್ದಾಗ ಪ್ರೇರಣಾ ಶರಣ್ ಚಿತ್ರಗಳನ್ನು ಮಾತ್ರ ತಪ್ಪಿಸುತ್ತಲೇ ಇರಲಿಲ್ಲ. ನಾನು ಬ್ಯುಸಿ ಇದ್ದರೂ ಶರಣ್ ಸರ್ ಚಿತ್ರಗಳನ್ನು ಮಿಸ್ ಮಾಡದೇ ನೋಡುತ್ತಿದ್ದೆವು. ಅಧ್ಯಕ್ಷ, ವಿಕ್ಟರಿ.. ಹೀಗೆ ಯಾವುದೇ ಚಿತ್ರಗಳನ್ನು ನಾವು ಮಿಸ್ ಮಾಡಿಕೊಂಡಿಲ್ಲ. ನನ್ನ ಪತ್ನಿ ಪ್ರೇರಣಾ ಶರಣ್ ಫ್ಯಾನ್ ಎಂದರು ಧ್ರುವ ಸರ್ಜಾ.

    ಎಲ್ಲ ನಟರ ಅಭಿಮಾನಿಗಳೂ ಎಲ್ಲ ನಟರ ಸಿನಿಮಾಗಳನ್ನೂ ನೋಡಬೇಕು ಎಂದರು ಧ್ರುವ ಸರ್ಜಾ. ನಾನು ನನ್ನ ಜೀವನದಲ್ಲಿ ದೇವರೇ.. ಈ ಚಿತ್ರಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದೆ. ಅದರಲ್ಲಿ ಒಂದು ಉಳಿದವರು ಕಂಡಂತೆ. ಇನ್ನೊಂದು ಅವತಾರ ಪುರುಷ. ಪುಷ್ಕರ್ ಅವರಂತಹ ನಿರ್ಮಾಪಕರಿಗಾಗಿ ಈ ಸಿನಿಮಾ ಗೆಲ್ಲಬೇಕು ಎಂದವರು ಸಿಂಪಲ್ ಸುನಿ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಧ್ರುವ ಸರ್ಜಾ ಪೊಗರಿಗೆ ಜಗಪತಿ ಖದರು

    jagapathi babu in dhruva sarja's pogaru

    ಪೊಗರು ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗು  ಚಿತ್ರರಂಗದ ಸ್ಟಾರ್ ವಿಲನ್ ಜಗಪತಿ ಬಾಬು ಧ್ರುವ ಸರ್ಜಾ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಜಗಪತಿ ಬಾಬು, ಸದ್ಯಕ್ಕೆ ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ನಟಿಸುತ್ತಿರುವ ಸೂಪರ್ ಸ್ಟಾರ್ ವಿಲನ್. ತೆಲುಗು, ತಮಿಳು, ಮಲಯಾಳಂನ ಎಲ್ಲ ಸ್ಟಾರ್ ನಟರೂ ಜಗಪತಿ ಬಾಬು ವಿಲನ್ ಆಗಲಿ ಎಂದು ಬಯಸುತ್ತಿರುವ ನಟ. ಕನ್ನಡದಲ್ಲಿಯೂ ಈಗಾಗಲೇ ಸುದೀಪ್ ಬಚ್ಚನ್ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು, ಪೊಗರು ಚಿತ್ರದಲ್ಲಿ ಧ್ರುವ ಎದುರು ವಿಲನ್ ಆಗುತ್ತಿದ್ದಾರೆ.

    ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾರ ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಕೂಡಾ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ. ನಂದಕಿಶೋರ್ ನಿರ್ದೇಶನದ ಸಿನಿಮಾದ ಶೂಟಿಂಗ್ 2ನೇ ಹಂತದಲ್ಲಿದೆ.

  • ಧ್ರುವ ಸರ್ಜಾ ಪೊಗರಿಗೆ ಜೊತೆಯಾದ ಶೃತಿಹಾಸನ್

    shruthi hassan in pogaru

    ಭಾರತೀಯ ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕನ್ನಡ ಬರುತ್ತಾರೆ ಎನ್ನುವ ಸುದ್ದಿ ಸುಮಾರು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಈಗದು ನಿಜವಾಗಿದೆ. ಶೃತಿ ಹಾಸನ್ ಕನ್ನಡಕ್ಕೆ ಪೊಗರು ತೋರಿಸಲು ಬರುತ್ತಿದ್ದಾರೆ. ಅರ್ಥಾತ್, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ.

    ಎಲ್ಲವೂ ಮೊದಲಿನ ಯೋಜನೆಯಂತೆಯೇ ಆಗಿದ್ದರೆ, ಧ್ರುವ ಸರ್ಜಾ ಹಯಗ್ರೀವ ಚಿತ್ರದಲ್ಲಿ ನಟಿಸಬೇಕಿತ್ತು. ನಂದ ಕಿಶೋರ್ ನಿರ್ದೇಶಿಸಬೇಕಿತ್ತು. ಆದರೆ ಈಗ ಧ್ರುವ ಸರ್ಜಾರ 4ನೇ ಚಿತ್ರದ ಟೈಟಲ್ ಮತ್ತು ಕಥೆ ಬದಲಾಗಿದೆ. ನಿರ್ದೇಶಕ ಮಾತ್ರ ಅದೇ ನಂದಕಿಶೋರ್.

    ಚಿತ್ರದ ಶೂಟಿಂಗ್ ಇದೇ ತಿಂಗಳ ಕೊನೆಯಲ್ಲಿ ಶುರುವಾಗಲಿದ್ದು, ಶೃತಿ ಹಾಸನ್ ಚಿತ್ರೀಕರಣಕ್ಕೆ ಬರಲಿದ್ದಾರೆ. ಚಿತ್ರದಲ್ಲಿ ನಾಯಕನ ಪ್ರಾಮಾಣಿಕತೆಯೇ ಅವನ ಪೊಗರು. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎಂದಿದ್ದಾರೆ ನಂದಕಿಶೋರ್. ಅಂದ ಹಾಗೆ ಇದು ರೀಮೇಕ್ ಅಲ್ಲ. ಸ್ವಮೇಕ್.

  • ಧ್ರುವ ಸರ್ಜಾ ಪೊಗರಿಳಿಸೋಕೆ ಡಬಲ್ ಬ್ಯೂಟಿ ಕ್ವೀನ್ಸ್..!

    dhuva's double pogaru

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

    ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ. 

     

     

  • ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮವೋ ಸಂಭ್ರಮ

    ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮವೋ ಸಂಭ್ರಮ

    ಧ್ರುವ ಸರ್ಜಾ ಅವರ ಮನೆಗೀಗ ಮುದ್ದು ಮಗನೂ ಬಂದಿದ್ದಾನೆ. ದೊಡ್ಡವಳು ಮಗಳು. ಅವಳಗೀಗ ಪುಟ್ಟ ತಮ್ಮ. ಧ್ರುವ ಸರ್ಜಾ ಮನೆಯಲ್ಲೀಗ ಸಂಭ್ರಮ ಮನೆ ಮಾಡಿದೆ.

    ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯ. ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಇದು ಮೂರನೇ ಮಗು. ರಾಯನ್ ನನ್ನ ಮೊದಲ ಮಗ. ಆ ಬಳಿಕ ಹೆಣ್ಣು ಮಗು ಹುಟ್ಟಿತು. ಅವಳಿಗೆ ಇನ್ನೂ ಹೆಸರು ಇಟ್ಟಿಲ್ಲ. ಈಗ ಮತ್ತೊಂದು ಮಗು ಆಗಿದೆ. ಮನೆಯಲ್ಲಿ ಈಗ ಮೂರು ಮಕ್ಕಳಿದ್ದಾರೆ. ಸದ್ಯ ಪ್ರೇರಣಾ, ಮಗ ಆರೋಗ್ಯವಾಗಿದ್ದಾರೆ ಎಂದಿರೋ ಧ್ರುವ, ಅಣ್ಣ ಚಿರು-ಮೇಘನಾ ಮಗನನ್ನು ನನ್ನ ಮೊದಲ ಮಗು ಎಂದಿರುವುದು ಮತ್ತೊಮ್ಮೆ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.

    ಮಗು ಯಾವಾಗಲಾದರೂ ಹುಟ್ಟಲಿ, ಅದು ಒಳ್ಳೆಯ ದಿನವೇ. ಅದರಲ್ಲೂ ಸೆ.18 ಲೆಜೆಂಡರಿಗಳು ಹುಟ್ಟಿದ ದಿನ ಎನ್ನುವ ಮೂಲಕ, ಉಪೇಂದ್ರ, ವಿಷ್ಣುವರ್ಧನ್ ಮತ್ತು ಶೃತಿ ಅವರ ಜನ್ಮದಿನದಂದೇ ನನ್ನ ಮಗ ಹುಟ್ಟಿದ್ದಾನೆ ಅನ್ನೋದನ್ನೂ ಹೇಳಿದ್ದಾರೆ.

    ಮಗು ಮನೆ ಬೆಳಗಿದ ಘಳಿಗೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಧ್ರುವ ಸರ್ಜಾ, ಅಭಿಮಾನಿಗಳಿಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ 2019ರಲ್ಲಿ ಧ್ರುವ-ಪ್ರೇರಣಾ ಮದುವೆಯಾಗಿತ್ತು. 2022ರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಮಗಳು ಹುಟ್ಟಿದ್ದಳು. ಇದೀಗ ಗೌರಿ-ಗಣೇಶ ಹಬ್ಬದ ದಿನ ಮಗ ಹುಟ್ಟಿದ್ದಾನೆ. ಜೊತೆಗೆ ಸೆ.18, ಕನ್ನಡ ಚಿತ್ರರಂಗದ ದಿಗ್ಗಜರು ಜನಿಸಿದ ದಿನವೂ ಬೇರೆ.

  • ಧ್ರುವ ಸರ್ಜಾ ಮುಂದಿನ ಚಿತ್ರ ರೀಮೇಕ್..?

    dhruva sarja's nxt film is likely be a remake

    ನಟ ಧ್ರುವ ಸರ್ಜಾ ಪೊಗರು ಚಿತ್ರವನ್ನು ಹೆಚ್ಚೂ ಕಡಿಮೆ ಮುಗಿಸಿದ್ದಾರೆ. ಮುಂದಿನ ಚಿತ್ರವೂ ಫಿಕ್ಸ್ ಆಗಿದೆ. ಒನ್ಸ್ ಎಗೇಯ್ನ್ ನಂದ ಕಿಶೋರ್ ಜೊತೆ. ಮುಂದಿನ ಚಿತ್ರಕ್ಕೆ ನಿರ್ಮಾಪಕ ಉದಯ್ ಮೆಹ್ತಾ ಅನ್ನೋದು ಕೂಡ ಪಕ್ಕಾ ಆಗಿದೆ. ಇದರ ನಡುವೆಯೇ ಹೊರಬಂದಿರೋ ಸುದ್ದಿ ಇದು. ಧ್ರುವ ಮುಂದಿನ ಚಿತ್ರ ತೆಲುಗು ರೀಮೇಕ್ ಎಂಬ ಸುದ್ದಿ.

    ಕಾರಣ ಇಷ್ಟೆ, ಧ್ರುವ ಸರ್ಜಾ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೆ ಕಾಲ್‍ಶೀಟ್ ಕೊಟ್ಟಿದ್ದಾರೆ. ಅಧ್ಯಕ್ಷ ಇನ್ ಅಮೆರಿಕ ಚಿತ್ರವನ್ನು ನಿರ್ಮಿಸಿದ್ದ ಸಂಸ್ಥೆ ಅದು. ತೆಲುಗಿನಲ್ಲಿ ಅದೇ ಸಂಸ್ಥೆ ನಿನ್ನು ಕೋರಿ ಅನ್ನೋ ಸಿನಿಮಾ ನಿರ್ಮಾಣ ಮಾಡಿತ್ತು. ನಾನಿ ಅಭಿನಯದ ಆ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಅದೇ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಿದೆ ಎಂಬ ಸುದ್ದಿ ದೊಡ್ಡದಾಗಿ ಕೇಳಿ ಬರುತ್ತಿದೆ.

    ಅಂದಹಾಗೆ ಧ್ರುವ ಇದುವರೆಗೆ ನಟಿಸಿರುವ 3 ಚಿತ್ರಗಳೂ ಸ್ವಮೇಕ್. ಪೊಗರು ಕೂಡಾ ಸ್ವಮೇಕ್.  ತಮ್ಮ ಸ್ವಮೇಕ್ ಕಮಿಟ್‍ಮೆಂಟ್‍ನ್ನು ಧ್ರುವ ಮುರಿಯುತ್ತಾರಾ.. ಕಾದು ನೋಡಬೇಕಿದೆ

  • ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರಾಜಮಾರ್ತಾಂಡ

    ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರಾಜಮಾರ್ತಾಂಡ

    ಚಿರಂಜೀವಿ ಸರ್ಜಾ ಮೃತಪಟ್ಟ 3 ವರ್ಷಗಳ ನಂತರ ಅವರ ಅಭಿನಯದ ಸಿನಿಮಾ ರಿಲೀಸ್ ಆಗುವುದಕ್ಕೆ ಮುಹೂರ್ತ ಕೂಡಿ ಬಂದಿದೆ. ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ 'ರಾಜ ಮಾರ್ತಾಂಡ' ಈಗ ಬಿಡುಗಡೆಗೆ ಸಿದ್ಧವಾಗಿದೆ. ರಾಜ ಮಾರ್ತಾಂಡದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿದ್ದರು. ತಮ್ಮ ಭಾಗದ ಚಿತ್ರೀಕರಣವನ್ನು ಚಿರಂಜೀವಿ ಸರ್ಜಾ ಮುಗಿಸಿಕೊಟ್ಟಿದ್ದರು. ಆದರೆ, ಡಬ್ಬಿಂಗ್ ಪಾತ್ರ ಪೂರ್ಣಗೊಂಡಿರಲಿಲ್ಲ. ಚಿರಂಜೀವಿ ಸರ್ಜಾ ನಿಧನದ ಬಳಿಕ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದರು. ಇದೀಗ ರಾಜ ಮಾರ್ತಾಂಡ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ.

    'ರಾಜ ಮಾರ್ತಾಂಡ' ಸಿನಿಮಾದ ಟ್ರೇಲರ್ ಅನ್ನು ಜೂನಿಯರ್ ಚಿರು (ರಾಯನ್ ರಾಜ್ ಸರ್ಜಾ) ಕೈಯಿಂದ ರಿಲೀಸ್ ಮಾಡಿಸಲಾಗಿತ್ತು.ಇದೀಗ ಸಿನಿಮಾವನ್ನು  ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಅಕ್ಟೋಬರ್ 6ಕ್ಕೆ ರಿಲೀಸ್ ಮಾಡೋ ಪ್ಲಾನ್ ಇದೆ.

    ಶಿವಕುಮಾರ್ ಅವರು ನಿರ್ಮಿಸಿರುವ, ರಾಮನಾರಾಯಣ್ ನಿರ್ದೇಶಿಸಿರುವ 'ರಾಜ ಮಾರ್ತಾಂಡ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ದೀಪ್ತಿ ಸಾತಿ, ಮೇಘಶ್ರೀ, ಟಗರು ಸರೋಜಾ ಖ್ಯಾತಿಯ ತ್ರಿವೇಣಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್  ಅಶ್ವತ್ಥ್ ಮುಂತಾದವರು ರಾಬಳಗದಲ್ಲಿದ್ದಾರೆ.  ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  • ಧ್ರುವ ಸರ್ಜಾ ಹೃದಯಗೆದ್ದ ಪ್ರೇರಣಾ ಯಾರು ಗೊತ್ತಾ..?

    who is prerna

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಮದುವೆಯಾಗುತ್ತಿರುವ ಹುಡುಗಿ ಪ್ರೇರಣಾ ಶಂಕರ್. ಇದೇ ಡಿಸೆಂಬರ್ 9ಕ್ಕೆ ಧ್ರುವ ಸರ್ಜಾ ಅವರೊಂದಿಗೆ ಉಂಗುರ ಬದಲಿಸಿಕೊಳ್ಳಲಿರುವ ಈ ಹುಡುಗಿ, ಧ್ರುವ ಸರ್ಜಾಗೆ ಬಾಲ್ಯ ಸ್ನೇಹಿತೆ. ಒಂದು ರೀತಿಯಲ್ಲಿ ಪ್ರೇರಣಾ, ಧ್ರುವ ಸರ್ಜಾಗೆ ಎದುರು ಮನೆ ಹುಡುಗಿಯೂ ಹೌದು, ಹಿಂದಿನ ಮನೆ ಹುಡುಗಿಯೂ ಹೌದು.

    ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಪರಿಚಯ ಹಲವು ವರ್ಷಗಳದ್ದಾದರೂ ಪ್ರೀತಿ ಸುಮಾರು 9 ವರ್ಷಗಳದ್ದಂತೆ. ಮೊದಲು ಧ್ರುವ ಸರ್ಜಾ ಅವರ ಮನೆಯ ಎದುರು ಮನೆಯಲ್ಲಿದ್ದ ಪ್ರೇರಣಾ ಶಂಕರ್, ಈಗ ಹಿಂದಿನ ರಸ್ತೆಯ ಮನೆಯಲ್ಲಿದ್ಧಾರೆ. ಪ್ರೇರಣಾ ಅವರ ತಂದೆ ಶಂಕರ್, ತಾಯಿಯ ಹೆಸರು ಸರಿತಾ. ಪ್ರೇರಣಾ, ಖಾಸಗಿ ಕಾಲೇಜ್ ಒಂದರಲ್ಲಿ ಲೆಕ್ಚರರ್.

    ಏಳೆಂಟು ವರ್ಷಗಳಿಂದ ಪರಿಚಯ, ಸ್ನೇಹ ಇಟ್ಟುಕೊಂಡಿದ್ದ ಇಬ್ಬರೂ ಯಾವಾಗ ಪ್ರೀತಿಸಲು ಶುರು ಮಾಡಿದರೋ ಗೊತ್ತಿಲ್ಲ. ಅವರ ಮನೆಯ ಸಮಾರಂಭಗಳಲ್ಲಿ ಇವರು, ಇವರ ಮನೆಯ ಕಾರ್ಯಕ್ರಮಗಳಲ್ಲಿ ಅವರೂ ಭಾಗವಹಿಸುತ್ತಿದ್ದರು. ಧ್ರುವ ಸರ್ಜಾ ಪ್ರೇರಣಾ ಮನೆಯ ಯಾವುದೇ ಕಾರ್ಯಕ್ರಮವನ್ನೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಹೀಗೆ ನಡೆಯುತ್ತಿದ್ದ ಪ್ರೀತಿಯನ್ನೂ ಇಬ್ಬರೂ ತಮ್ಮ ತಮ್ಮ ಮನೆಯ ಹಿರಿಯರಿಗೆ ತಿಳಿಸಿದ್ದಾರೆ. ಇಬ್ಬರೂ ಓಕೆ ಎಂದಿದ್ದಾರೆ. ಬನಶಂಕರಿಯಲ್ಲಿರೋ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆಯಲಿದ್ದು, ನಂತರ ಅಲ್ಲಿಯೇ ಇರುವ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮವೂ ಇದೆ.

  • ಧ್ರುವ ಸರ್ಜಾ, ಶಿವಣ್ಣ ಜೋಡಿ ಸಂಭ್ರಮ

    shivanna, dhruva during bharjari 75 days

    ಹ್ಯಾಟ್ರಿಕ್ ಹೀರೋ ಎಂದರೆ, ಕನ್ನಡಿಗರಿಗೆ ತಕ್ಷಣ ನೆನಪಾಗೋದು ಶಿವರಾಜ್ ಕುಮಾರ್. ಆನಂದ್, ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳು ಸತತವಾಗಿ ಹಿಟ್ ಆಗಿ ಶಿವರಾಜ್ ಕುಮಾರ್‍ಗೆ ಸಿಕ್ಕಿದ್ದು ಬಿರುದು ಅದು. ಈಗ ಅದೇ ಹಾದಿಯಲ್ಲಿರೋದು ಧ್ರುವ ಸರ್ಜಾ.

    ವಿಶೇಷವೇನು ಗೊತ್ತಾ..? ಸಂತೋಷ್‍ನಲ್ಲಿ ಮಫ್ತಿ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಅದರ ಪಕ್ಕದಲ್ಲೇ ಭರ್ಜರಿ ಶತದಿನೋತ್ಸವ ಸಮೀಪಿಸುತ್ತಿದೆ. ಚಿತ್ರದ 75ನೇ ದಿನದ ಸಂಭ್ರಮಕ್ಕೆ ಧ್ರುವ ಬಂದಿದ್ದರೆ, ಮಫ್ತಿ ಚಿತ್ರವನ್ನು ಪ್ರೇಕ್ಷಕರ ಜೊತೆ ನೋಡಲು ಶಿವರಾಜ್ ಕುಮಾರ್ ಬಂದಿದ್ದರು. 

    ಸಂಭ್ರಮವನ್ನು ಇಬ್ಬರೂ ಒಟ್ಟಿಗೇ ಆಚರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಧ್ರುವಾ ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದರು. ಕನ್ನಡಕ್ಕೊಬ್ಬರೇ ಹ್ಯಾಟ್ರಿಕ್ ಹೀರೋ, ಅದು ಶಿವಣ್ಣ ಎಂದರು. 

    ಧ್ರುವ ಸರ್ಜಾ ಬೆನ್ನು ತಟ್ಟಿದ ಶಿವಣ್ಣ, ಆರಂಭದ ದಿನಗಳನ್ನು ನೆನಪಿಸಿಕೊಂಡರು. ಧ್ರುವ ಸರ್ಜಾ ಸತತ ಹ್ಯಾಟ್ರಿಕ್ ಹಿಟ್ ನೀಡಿರುವುದನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಿದರು.

    Related Articles :-

    Shivarajakumar Attends Bharjari 75 Days Celebrations

  • ಧ್ರುವ ಸರ್ಜಾಗಾಗಿ ಹೊಸ ಚಿತ್ರ ವೇಯ್ಟಿಂಗ್

    pogaru team waiting for shruva sarja

    ಚಿರಂಜೀವಿ ಸರ್ಜಾ ಸಾವಿನ ಆಘಾತದಲ್ಲಿರೋ ಧ್ರುವ ಸರ್ಜಾ ಅವರಿಗಾಗಿ ಪೊಗರು ಚಿತ್ರತಂಡ ಕಾಯುತ್ತಿದೆ. ಒಂದಲ್ಲ, ಎರಡು ಸಿನಿಮಾಗಾಗಿ. ಪೊಗರು ಚಿತ್ರದ ಕೆಲಸ ಮುಗಿಸಿದ ತಕ್ಷಣವೇ ನಂದಕಿಶೋರ್, ಉದಯ್ ಮೆಹ್ತಾ ಜೊತೆ ಇನ್ನೊಂದು ಚಿತ್ರಕ್ಕೆ ಧ್ರುವ ರೆಡಿಯಾಗಬೇಕಿದೆ.

    ಹೊಸ ಚಿತ್ರದಲ್ಲಿ ವಿಭಿನ್ನ ಕಥೆಯಿದೆ. ಧ್ರುವ ಸರ್ಜಾ ಸ್ಟೈಲಿಷ್ ಲುಕ್‍ನಲ್ಲಿ ಕಾಣಿಸಿಕೊಳ್ತಾರೆ. ಆ ಚಿತ್ರಕ್ಕೆ ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದೇನೆ. ಪೊಗರು ರಿಲೀಸ್ ಆಗುವ ಮುನ್ನವೇ ಆ ಚಿತ್ರ ಶುರುವಾಗಲಿದೆ ಎಂದಿದ್ದಾರೆ ನಂದ ಕಿಶೋರ್.

    ಪೊಗರು ಮುಗಿದ ತಕ್ಷಣ ಈ ಚಿತ್ರ ಶುರು ಮಾಡುತ್ತೇವೆ. ಇದು ಪೊಗರುನಂತೆ ತಡವಾಗುವುದಿಲ್ಲ ಎಂದು ಭರವಸೆ ಕೊಡುತ್ತಾರೆ ಉದಯ್ ಮೆಹ್ತಾ. ಎಲ್ಲರೂ ಕಾಯುತ್ತಿರುವುದು ಧ್ರುವ ಸರ್ಜಾಗಾಗಿ..