` dhruva sarja, - chitraloka.com | Kannada Movie News, Reviews | Image

dhruva sarja,

  • ಧ್ರುವ ಸರ್ಜಾ ಕಾರು ಅಪಘಾತ

    dhruva sarja meets with an accident

    ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದಾಗ ಧ್ರುವ ಸರ್ಜಾ ಇದ್ದ ಕಾರಿಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯವಾಗಿಲ್ಲ. ಬಳ್ಳಾರಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರದ ಶೂಟಿಂಗ್‌ ಸಲುವಾಗಿ ಚಿತ್ರತಂಡ ಬಳ್ಳಾರಿಯಲ್ಲಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

    ಕಾರಿನ ಹಿಂಭಾಗಕ್ಕೆ ಹಾನಿಯಾಗಿದ್ದು, ಧ್ರುವ ಜೊತೆ ಕೆಲವು ಸ್ನೇಹಿತರಿದ್ದರು. ಆದರೆ, ಎಲ್ಲರೂ ಸೇಫ್ ಆಗಿದ್ದಾರೆ.

  • ಧ್ರುವ ಸರ್ಜಾ ಗಡ್ಡ ಬಿಟ್ಟರು..!

    dhruva sarja in new look for pogaru

    ಧ್ರುವ ಸರ್ಜಾ ಕೂಡಾ ಅಣ್ಣ ಚಿರಂಜೀವಿ ಸರ್ಜಾರಂತೆಯೇ ಗಡ್ಡಧಾರಿ. ಆದರೆ, ಅಣ್ಣನಷ್ಟಲ್ಲ. ಟ್ರಿಮ್ ಗಡ್ಡಧಾರಿ. ಅವರೀಗ ಸನ್ಯಾಸಿಯ ಲೆವೆಲ್ಲಿನಷ್ಟು ಗಡ್ಡ ಬಿಟ್ಟಿದ್ದಾರೆ. ಅದೂ ಪೊಗರು ಚಿತ್ರಕ್ಕಾಗಿ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವಾ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಹುಡುಗನ ವಯಸ್ಸಿನ ಪಾತ್ರಕ್ಕೆ ತೂಕ ಇಳಿಸಿಕೊಂಡಿದ್ದ ಧ್ರುವ, ಆ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಈಗ ಇಷ್ಟು ದೊಡ್ಡ ಗಡ್ಡ ಬಿಟ್ಟು, ನಟಿಸಬೇಕು.

    ಅಕ್ಟೋಬರ್ 1ರಿಂದ ಧ್ರುವ ಹೊಸ ಅವತಾರದಲ್ಲಿನ ಶೂಟಿಂಗ್ ಶುರುವಾಗಲಿದೆ. ಇಷ್ಟೆಲ್ಲ ಇದ್ದರೂ ಚಿತ್ರಕ್ಕಿನ್ನೂ ನಾಯಕಿ ಸಿಕ್ಕಿಲ್ಲ. ಪಾತ್ರಕ್ಕೆ ತಕ್ಕಂತ ನಾಯಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

  • ಧ್ರುವ ಸರ್ಜಾ ಚಿತ್ರಕ್ಕೆ ಬಾಲಿವುಡ್ ಕಥೆಗಾರ

    bollywood writer for dhruva's next

    ಒಂದರ ಹಿಂದೊಂದರಂತೆ ಮೂರು ಹಿಟ್ ನೀಡಿದ ಧ್ರುವ ಸರ್ಜಾ ಹೊಸ ಹೊಸ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. 

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಶಿರಾಜ್ ಅಹ್ಮದ್. ಯಾರು ಈ ಶಿರಾಜ್ ಅಹ್ಮದ್ ಎನ್ನಬೇಡಿ. ಆಶಿಕಿ 2, ಹಮಾರಿ ಅಧೂರಿ ಕಹಾನಿ, ಮರ್ಡರ್ 2, ಜಿಸ್ಮ್ 2,  ರೇಸ್ 2, ಒಂದು ತೆಲುಗು ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೇ ಬರೆದಿದ್ದವರು. ಈ ಹೊಸ ಚಿತ್ರಕ್ಕೆ ಜಗ್ಗುದಾದ ಚಿತ್ರ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

    ಆದರೆ, ಈ ಸುದ್ದಿಯನ್ನು ಧ್ರುವ ಸರ್ಜಾ ಇನ್ನೂ ಕನ್‍ಫರ್ಮ್ ಮಾಡಿಲ್ಲ.

  • ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್

    raghavendra rajkumar to act in pogaru

    ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸಿರುವ ಅಮ್ಮನ ಮನೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತ್ರಯಂಬಕಂ ಅನ್ನೋ ಚಿತ್ರದಲ್ಲಿಯೂ ನಟಿಸುತ್ತಿರುವ ರಾಘಣ್ಣ, ಅತಿಥಿ ನಟರಾಗಿ ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಧ್ರುವ-ರಶ್ಮಿಕಾ ಮಂದಣ್ಣ-ನಂದಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು ಚಿತ್ರದಲ್ಲಿ ರಾಘಣ್ಣ ಅವರಿಗಾಗಿಯೇ ವಿಶೇಷ ಪಾತ್ರವಿದೆಯಂತೆ. ಅದಕ್ಕಾಗಿ ರಾಘಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಅಣ್ಣ ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರವನ್ನು ಬಿಟ್ಟರೆ, ಬೇರೆ ಯಾವುದೇ ಚಿತ್ರದಲ್ಲಿ ರಾಘಣ್ಣ ಅತಿಥಿ ನಟರಾಗಿ ನಟಿಸಿಲ್ಲ. ಪೊಗರು ಮೂಲಕ ಮತ್ತೊಮ್ಮೆ ಅತಿಥಿ ನಟರಾಗುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

  • ಧ್ರುವ ಸರ್ಜಾ ತೂಕ 30 ದಿನಗಳಲ್ಲಿ 18 ಕೆಜಿ ಇಳಿಕೆ

    ಧ್ರುವ ಸರ್ಜಾ ತೂಕ 30 ದಿನಗಳಲ್ಲಿ 18 ಕೆಜಿ ಇಳಿಕೆ

    ಚಿತ್ರ ಹಾಗೂ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳೋದು ಮತ್ತು ಇಳಿಸಿಕೊಳ್ಳೋ ಸಂಪ್ರದಾಯ ಶುರುವಾಗಿದ್ದು ನಟ ಕಮಲ್ ಹಾಸನ್ ಅವರಿಂದ. ಅದಾದ ಮೇಲೆ ಘಜನಿ, ದಂಗಲ್ ಚಿತ್ರಗಳಿಗಾಗಿ ಅಮೀರ್ ಖಾನ್, ಐ ಚಿತ್ರಕ್ಕಾಗಿ ವಿಕ್ರಂ, ಬಾಹುಬಲಿಗಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ನಟಿಯರಲ್ಲಿ ಝೀರೋ ಸೈಝ್ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ, ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ ವಿದ್ಯಾ ಬಾಲನ್.. ಹೀಗೆ ಹಲವರು ತೂಕ ಹೆಚ್ಚಿಸಿಕೊಂಡು ನಟಿಸಿದ್ದಾರೆ. ಇದೇ ಅಮೀರ್ ಖಾನ್ ಪಿಕೆ, ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ, ಸುದೀಪ್ ಮುಸ್ಸಂಜೆ ಮಾತು ಚಿತ್ರಕ್ಕಾಗಿ ತೆಳ್ಳಗೂ ಆಗಿದ್ದಾರೆ.

    ಧ್ರುವ ಸರ್ಜಾ ಕೂಡಾ ಪೊಗರು ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಬೈಸಪ್ಸ್ ಎಗರೆಗರಿ ಬೀಳುವಂತೆ ಕಟ್ಟುಮಸ್ತಾಗಿಸಿದ್ದರು. ಅದೇ ಚಿತ್ರದಲ್ಲಿ ತೂಕ ಇಳಿಸಿಕೊಂಡು ಸಣ್ಣದಾಗಿಯೂ ನಟಿಸಿದ್ದರು.  ಮಾರ್ಟಿನ್ ಚಿತ್ರದ ಪಾತ್ರಕ್ಕೆ ಅದೇ ದೇಹವನ್ನು ತುಸು ಇಳಿಸಿಕೊಂಡಿದ್ದರು. ಇದೀಗ ಮತ್ತೆ ಕೆಡಿ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಅದೂ 30 ದಿನಗಳಲ್ಲಿ 18 ಕೆಜಿ ಇಳಿಸಿಕೊಂಡಿದ್ದಾರೆ.

    30 ದಿನಗಳಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳೋದು ಸುಮ್ಮನೆ ಮಾತಲ್ಲ. ಆದರೆ ಇದು ಹೆಮ್ಮೆ ಪಡುವ ವಿಷಯವಂತೂ ಖಂಡಿತಾ ಅಲ್ಲ. ಸೈಡ್ ಎಫೆಕ್ಟ್ ಜಾಸ್ತಿ. ಡೆಡಿಕೇಷನ್ ಮೆಚ್ಚಬಹುದಾದರೂ ದೇಹದ ಮೇಲೆ ವಿಪರೀತ ಒತ್ತಡ ಹಾಕುವುದು ಯಾವತ್ತಿಗೂ ಅಪಾಯ. ಏನೇ ಫಿಟ್‍ನೆಸ್ ಇದ್ದರೂ, ಪ್ರತಿದಿನ ಕಸರತ್ತು ಮಾಡಿದರೂ ದೇಹ ಎಲ್ಲವನ್ನೂ ತಡೆದುಕೊಳ್ಳಲ್ಲ. ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡೆ ಎಂದು ಎಂದು ಪೋಸ್ಟ್ ಹಾಕಿದ್ದೇ ತಡ, ಅಭಿಮಾನಿಗಳು ಮೆಚ್ಚುಗೆಯ ಜೊತೆ ಜೊತೆಗೆ ಎಚ್ಚರಿಕೆ ಮಾತನ್ನೂ ಹೇಳಿದ್ದಾರೆ. ಪ್ರೀತಿ ಜೊತೆ ಕಾಳಜಿ ತೋರಿಸಿದ್ದಾರೆ. ಅಭಿಮಾನಿಗಳ ಆತಂಕ ಏಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

    ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡಿರೋದು ಕೆಡಿ ಚಿತ್ರಕ್ಕಾಗಿ. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಚಿತ್ರವಿದು.

  • ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೇಳಿದ್ದಿದು. ಟ್ರೇಲರ್ ರಿಲೀಸ್‍ಗಾಗಿಯೇ ಬಂದಿದ್ದ ಧ್ರುವ ತಮ್ಮ ಮತ್ತು ಪ್ರೇರಣಾ ಅವರೇ ಡೇಟಿಂಗ್ ಡೇಸ್ ಸೀಕ್ರೆಟ್ ಹೇಳಿದರು.

    ಶರಣ್ ಸಿನಿಮಾ ಎಂದೊಡನೆ ನನಗೆ ನೆನಪಾಗೋದು ಪ್ರೇರಣಾ. ನಾವು ಡೇಟಿಂಗ್‍ನಲ್ಲಿದ್ದಾಗ ಪ್ರೇರಣಾ ಶರಣ್ ಚಿತ್ರಗಳನ್ನು ಮಾತ್ರ ತಪ್ಪಿಸುತ್ತಲೇ ಇರಲಿಲ್ಲ. ನಾನು ಬ್ಯುಸಿ ಇದ್ದರೂ ಶರಣ್ ಸರ್ ಚಿತ್ರಗಳನ್ನು ಮಿಸ್ ಮಾಡದೇ ನೋಡುತ್ತಿದ್ದೆವು. ಅಧ್ಯಕ್ಷ, ವಿಕ್ಟರಿ.. ಹೀಗೆ ಯಾವುದೇ ಚಿತ್ರಗಳನ್ನು ನಾವು ಮಿಸ್ ಮಾಡಿಕೊಂಡಿಲ್ಲ. ನನ್ನ ಪತ್ನಿ ಪ್ರೇರಣಾ ಶರಣ್ ಫ್ಯಾನ್ ಎಂದರು ಧ್ರುವ ಸರ್ಜಾ.

    ಎಲ್ಲ ನಟರ ಅಭಿಮಾನಿಗಳೂ ಎಲ್ಲ ನಟರ ಸಿನಿಮಾಗಳನ್ನೂ ನೋಡಬೇಕು ಎಂದರು ಧ್ರುವ ಸರ್ಜಾ. ನಾನು ನನ್ನ ಜೀವನದಲ್ಲಿ ದೇವರೇ.. ಈ ಚಿತ್ರಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದೆ. ಅದರಲ್ಲಿ ಒಂದು ಉಳಿದವರು ಕಂಡಂತೆ. ಇನ್ನೊಂದು ಅವತಾರ ಪುರುಷ. ಪುಷ್ಕರ್ ಅವರಂತಹ ನಿರ್ಮಾಪಕರಿಗಾಗಿ ಈ ಸಿನಿಮಾ ಗೆಲ್ಲಬೇಕು ಎಂದವರು ಸಿಂಪಲ್ ಸುನಿ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಧ್ರುವ ಸರ್ಜಾ ಪೊಗರಿಗೆ ಜಗಪತಿ ಖದರು

    jagapathi babu in dhruva sarja's pogaru

    ಪೊಗರು ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗು  ಚಿತ್ರರಂಗದ ಸ್ಟಾರ್ ವಿಲನ್ ಜಗಪತಿ ಬಾಬು ಧ್ರುವ ಸರ್ಜಾ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಜಗಪತಿ ಬಾಬು, ಸದ್ಯಕ್ಕೆ ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ನಟಿಸುತ್ತಿರುವ ಸೂಪರ್ ಸ್ಟಾರ್ ವಿಲನ್. ತೆಲುಗು, ತಮಿಳು, ಮಲಯಾಳಂನ ಎಲ್ಲ ಸ್ಟಾರ್ ನಟರೂ ಜಗಪತಿ ಬಾಬು ವಿಲನ್ ಆಗಲಿ ಎಂದು ಬಯಸುತ್ತಿರುವ ನಟ. ಕನ್ನಡದಲ್ಲಿಯೂ ಈಗಾಗಲೇ ಸುದೀಪ್ ಬಚ್ಚನ್ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು, ಪೊಗರು ಚಿತ್ರದಲ್ಲಿ ಧ್ರುವ ಎದುರು ವಿಲನ್ ಆಗುತ್ತಿದ್ದಾರೆ.

    ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾರ ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಕೂಡಾ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ. ನಂದಕಿಶೋರ್ ನಿರ್ದೇಶನದ ಸಿನಿಮಾದ ಶೂಟಿಂಗ್ 2ನೇ ಹಂತದಲ್ಲಿದೆ.

  • ಧ್ರುವ ಸರ್ಜಾ ಪೊಗರಿಗೆ ಜೊತೆಯಾದ ಶೃತಿಹಾಸನ್

    shruthi hassan in pogaru

    ಭಾರತೀಯ ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕನ್ನಡ ಬರುತ್ತಾರೆ ಎನ್ನುವ ಸುದ್ದಿ ಸುಮಾರು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಈಗದು ನಿಜವಾಗಿದೆ. ಶೃತಿ ಹಾಸನ್ ಕನ್ನಡಕ್ಕೆ ಪೊಗರು ತೋರಿಸಲು ಬರುತ್ತಿದ್ದಾರೆ. ಅರ್ಥಾತ್, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ.

    ಎಲ್ಲವೂ ಮೊದಲಿನ ಯೋಜನೆಯಂತೆಯೇ ಆಗಿದ್ದರೆ, ಧ್ರುವ ಸರ್ಜಾ ಹಯಗ್ರೀವ ಚಿತ್ರದಲ್ಲಿ ನಟಿಸಬೇಕಿತ್ತು. ನಂದ ಕಿಶೋರ್ ನಿರ್ದೇಶಿಸಬೇಕಿತ್ತು. ಆದರೆ ಈಗ ಧ್ರುವ ಸರ್ಜಾರ 4ನೇ ಚಿತ್ರದ ಟೈಟಲ್ ಮತ್ತು ಕಥೆ ಬದಲಾಗಿದೆ. ನಿರ್ದೇಶಕ ಮಾತ್ರ ಅದೇ ನಂದಕಿಶೋರ್.

    ಚಿತ್ರದ ಶೂಟಿಂಗ್ ಇದೇ ತಿಂಗಳ ಕೊನೆಯಲ್ಲಿ ಶುರುವಾಗಲಿದ್ದು, ಶೃತಿ ಹಾಸನ್ ಚಿತ್ರೀಕರಣಕ್ಕೆ ಬರಲಿದ್ದಾರೆ. ಚಿತ್ರದಲ್ಲಿ ನಾಯಕನ ಪ್ರಾಮಾಣಿಕತೆಯೇ ಅವನ ಪೊಗರು. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎಂದಿದ್ದಾರೆ ನಂದಕಿಶೋರ್. ಅಂದ ಹಾಗೆ ಇದು ರೀಮೇಕ್ ಅಲ್ಲ. ಸ್ವಮೇಕ್.

  • ಧ್ರುವ ಸರ್ಜಾ ಪೊಗರಿಳಿಸೋಕೆ ಡಬಲ್ ಬ್ಯೂಟಿ ಕ್ವೀನ್ಸ್..!

    dhuva's double pogaru

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

    ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ. 

     

     

  • ಧ್ರುವ ಸರ್ಜಾ ಮುಂದಿನ ಚಿತ್ರ ರೀಮೇಕ್..?

    dhruva sarja's nxt film is likely be a remake

    ನಟ ಧ್ರುವ ಸರ್ಜಾ ಪೊಗರು ಚಿತ್ರವನ್ನು ಹೆಚ್ಚೂ ಕಡಿಮೆ ಮುಗಿಸಿದ್ದಾರೆ. ಮುಂದಿನ ಚಿತ್ರವೂ ಫಿಕ್ಸ್ ಆಗಿದೆ. ಒನ್ಸ್ ಎಗೇಯ್ನ್ ನಂದ ಕಿಶೋರ್ ಜೊತೆ. ಮುಂದಿನ ಚಿತ್ರಕ್ಕೆ ನಿರ್ಮಾಪಕ ಉದಯ್ ಮೆಹ್ತಾ ಅನ್ನೋದು ಕೂಡ ಪಕ್ಕಾ ಆಗಿದೆ. ಇದರ ನಡುವೆಯೇ ಹೊರಬಂದಿರೋ ಸುದ್ದಿ ಇದು. ಧ್ರುವ ಮುಂದಿನ ಚಿತ್ರ ತೆಲುಗು ರೀಮೇಕ್ ಎಂಬ ಸುದ್ದಿ.

    ಕಾರಣ ಇಷ್ಟೆ, ಧ್ರುವ ಸರ್ಜಾ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೆ ಕಾಲ್‍ಶೀಟ್ ಕೊಟ್ಟಿದ್ದಾರೆ. ಅಧ್ಯಕ್ಷ ಇನ್ ಅಮೆರಿಕ ಚಿತ್ರವನ್ನು ನಿರ್ಮಿಸಿದ್ದ ಸಂಸ್ಥೆ ಅದು. ತೆಲುಗಿನಲ್ಲಿ ಅದೇ ಸಂಸ್ಥೆ ನಿನ್ನು ಕೋರಿ ಅನ್ನೋ ಸಿನಿಮಾ ನಿರ್ಮಾಣ ಮಾಡಿತ್ತು. ನಾನಿ ಅಭಿನಯದ ಆ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಅದೇ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಿದೆ ಎಂಬ ಸುದ್ದಿ ದೊಡ್ಡದಾಗಿ ಕೇಳಿ ಬರುತ್ತಿದೆ.

    ಅಂದಹಾಗೆ ಧ್ರುವ ಇದುವರೆಗೆ ನಟಿಸಿರುವ 3 ಚಿತ್ರಗಳೂ ಸ್ವಮೇಕ್. ಪೊಗರು ಕೂಡಾ ಸ್ವಮೇಕ್.  ತಮ್ಮ ಸ್ವಮೇಕ್ ಕಮಿಟ್‍ಮೆಂಟ್‍ನ್ನು ಧ್ರುವ ಮುರಿಯುತ್ತಾರಾ.. ಕಾದು ನೋಡಬೇಕಿದೆ

  • ಧ್ರುವ ಸರ್ಜಾ ಹೃದಯಗೆದ್ದ ಪ್ರೇರಣಾ ಯಾರು ಗೊತ್ತಾ..?

    who is prerna

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಮದುವೆಯಾಗುತ್ತಿರುವ ಹುಡುಗಿ ಪ್ರೇರಣಾ ಶಂಕರ್. ಇದೇ ಡಿಸೆಂಬರ್ 9ಕ್ಕೆ ಧ್ರುವ ಸರ್ಜಾ ಅವರೊಂದಿಗೆ ಉಂಗುರ ಬದಲಿಸಿಕೊಳ್ಳಲಿರುವ ಈ ಹುಡುಗಿ, ಧ್ರುವ ಸರ್ಜಾಗೆ ಬಾಲ್ಯ ಸ್ನೇಹಿತೆ. ಒಂದು ರೀತಿಯಲ್ಲಿ ಪ್ರೇರಣಾ, ಧ್ರುವ ಸರ್ಜಾಗೆ ಎದುರು ಮನೆ ಹುಡುಗಿಯೂ ಹೌದು, ಹಿಂದಿನ ಮನೆ ಹುಡುಗಿಯೂ ಹೌದು.

    ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಪರಿಚಯ ಹಲವು ವರ್ಷಗಳದ್ದಾದರೂ ಪ್ರೀತಿ ಸುಮಾರು 9 ವರ್ಷಗಳದ್ದಂತೆ. ಮೊದಲು ಧ್ರುವ ಸರ್ಜಾ ಅವರ ಮನೆಯ ಎದುರು ಮನೆಯಲ್ಲಿದ್ದ ಪ್ರೇರಣಾ ಶಂಕರ್, ಈಗ ಹಿಂದಿನ ರಸ್ತೆಯ ಮನೆಯಲ್ಲಿದ್ಧಾರೆ. ಪ್ರೇರಣಾ ಅವರ ತಂದೆ ಶಂಕರ್, ತಾಯಿಯ ಹೆಸರು ಸರಿತಾ. ಪ್ರೇರಣಾ, ಖಾಸಗಿ ಕಾಲೇಜ್ ಒಂದರಲ್ಲಿ ಲೆಕ್ಚರರ್.

    ಏಳೆಂಟು ವರ್ಷಗಳಿಂದ ಪರಿಚಯ, ಸ್ನೇಹ ಇಟ್ಟುಕೊಂಡಿದ್ದ ಇಬ್ಬರೂ ಯಾವಾಗ ಪ್ರೀತಿಸಲು ಶುರು ಮಾಡಿದರೋ ಗೊತ್ತಿಲ್ಲ. ಅವರ ಮನೆಯ ಸಮಾರಂಭಗಳಲ್ಲಿ ಇವರು, ಇವರ ಮನೆಯ ಕಾರ್ಯಕ್ರಮಗಳಲ್ಲಿ ಅವರೂ ಭಾಗವಹಿಸುತ್ತಿದ್ದರು. ಧ್ರುವ ಸರ್ಜಾ ಪ್ರೇರಣಾ ಮನೆಯ ಯಾವುದೇ ಕಾರ್ಯಕ್ರಮವನ್ನೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಹೀಗೆ ನಡೆಯುತ್ತಿದ್ದ ಪ್ರೀತಿಯನ್ನೂ ಇಬ್ಬರೂ ತಮ್ಮ ತಮ್ಮ ಮನೆಯ ಹಿರಿಯರಿಗೆ ತಿಳಿಸಿದ್ದಾರೆ. ಇಬ್ಬರೂ ಓಕೆ ಎಂದಿದ್ದಾರೆ. ಬನಶಂಕರಿಯಲ್ಲಿರೋ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆಯಲಿದ್ದು, ನಂತರ ಅಲ್ಲಿಯೇ ಇರುವ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮವೂ ಇದೆ.

  • ಧ್ರುವ ಸರ್ಜಾ, ಶಿವಣ್ಣ ಜೋಡಿ ಸಂಭ್ರಮ

    shivanna, dhruva during bharjari 75 days

    ಹ್ಯಾಟ್ರಿಕ್ ಹೀರೋ ಎಂದರೆ, ಕನ್ನಡಿಗರಿಗೆ ತಕ್ಷಣ ನೆನಪಾಗೋದು ಶಿವರಾಜ್ ಕುಮಾರ್. ಆನಂದ್, ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳು ಸತತವಾಗಿ ಹಿಟ್ ಆಗಿ ಶಿವರಾಜ್ ಕುಮಾರ್‍ಗೆ ಸಿಕ್ಕಿದ್ದು ಬಿರುದು ಅದು. ಈಗ ಅದೇ ಹಾದಿಯಲ್ಲಿರೋದು ಧ್ರುವ ಸರ್ಜಾ.

    ವಿಶೇಷವೇನು ಗೊತ್ತಾ..? ಸಂತೋಷ್‍ನಲ್ಲಿ ಮಫ್ತಿ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಅದರ ಪಕ್ಕದಲ್ಲೇ ಭರ್ಜರಿ ಶತದಿನೋತ್ಸವ ಸಮೀಪಿಸುತ್ತಿದೆ. ಚಿತ್ರದ 75ನೇ ದಿನದ ಸಂಭ್ರಮಕ್ಕೆ ಧ್ರುವ ಬಂದಿದ್ದರೆ, ಮಫ್ತಿ ಚಿತ್ರವನ್ನು ಪ್ರೇಕ್ಷಕರ ಜೊತೆ ನೋಡಲು ಶಿವರಾಜ್ ಕುಮಾರ್ ಬಂದಿದ್ದರು. 

    ಸಂಭ್ರಮವನ್ನು ಇಬ್ಬರೂ ಒಟ್ಟಿಗೇ ಆಚರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಧ್ರುವಾ ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದರು. ಕನ್ನಡಕ್ಕೊಬ್ಬರೇ ಹ್ಯಾಟ್ರಿಕ್ ಹೀರೋ, ಅದು ಶಿವಣ್ಣ ಎಂದರು. 

    ಧ್ರುವ ಸರ್ಜಾ ಬೆನ್ನು ತಟ್ಟಿದ ಶಿವಣ್ಣ, ಆರಂಭದ ದಿನಗಳನ್ನು ನೆನಪಿಸಿಕೊಂಡರು. ಧ್ರುವ ಸರ್ಜಾ ಸತತ ಹ್ಯಾಟ್ರಿಕ್ ಹಿಟ್ ನೀಡಿರುವುದನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಿದರು.

    Related Articles :-

    Shivarajakumar Attends Bharjari 75 Days Celebrations

  • ಧ್ರುವ ಸರ್ಜಾಗಾಗಿ ಹೊಸ ಚಿತ್ರ ವೇಯ್ಟಿಂಗ್

    pogaru team waiting for shruva sarja

    ಚಿರಂಜೀವಿ ಸರ್ಜಾ ಸಾವಿನ ಆಘಾತದಲ್ಲಿರೋ ಧ್ರುವ ಸರ್ಜಾ ಅವರಿಗಾಗಿ ಪೊಗರು ಚಿತ್ರತಂಡ ಕಾಯುತ್ತಿದೆ. ಒಂದಲ್ಲ, ಎರಡು ಸಿನಿಮಾಗಾಗಿ. ಪೊಗರು ಚಿತ್ರದ ಕೆಲಸ ಮುಗಿಸಿದ ತಕ್ಷಣವೇ ನಂದಕಿಶೋರ್, ಉದಯ್ ಮೆಹ್ತಾ ಜೊತೆ ಇನ್ನೊಂದು ಚಿತ್ರಕ್ಕೆ ಧ್ರುವ ರೆಡಿಯಾಗಬೇಕಿದೆ.

    ಹೊಸ ಚಿತ್ರದಲ್ಲಿ ವಿಭಿನ್ನ ಕಥೆಯಿದೆ. ಧ್ರುವ ಸರ್ಜಾ ಸ್ಟೈಲಿಷ್ ಲುಕ್‍ನಲ್ಲಿ ಕಾಣಿಸಿಕೊಳ್ತಾರೆ. ಆ ಚಿತ್ರಕ್ಕೆ ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದೇನೆ. ಪೊಗರು ರಿಲೀಸ್ ಆಗುವ ಮುನ್ನವೇ ಆ ಚಿತ್ರ ಶುರುವಾಗಲಿದೆ ಎಂದಿದ್ದಾರೆ ನಂದ ಕಿಶೋರ್.

    ಪೊಗರು ಮುಗಿದ ತಕ್ಷಣ ಈ ಚಿತ್ರ ಶುರು ಮಾಡುತ್ತೇವೆ. ಇದು ಪೊಗರುನಂತೆ ತಡವಾಗುವುದಿಲ್ಲ ಎಂದು ಭರವಸೆ ಕೊಡುತ್ತಾರೆ ಉದಯ್ ಮೆಹ್ತಾ. ಎಲ್ಲರೂ ಕಾಯುತ್ತಿರುವುದು ಧ್ರುವ ಸರ್ಜಾಗಾಗಿ..

  • ಧ್ರುವ ಸರ್ಜಾರ ದುಬಾರಿಗೆ ಬ್ರೇಕ್..?

    ಧ್ರುವ ಸರ್ಜಾರ ದುಬಾರಿಗೆ ಬ್ರೇಕ್..?

    ಪೊಗರು ರಿಲೀಸ್ ಆಗುವ ಮುನ್ನವೇ ಸೆಟ್ಟೇರಿದ್ದ ಸಿನಿಮಾ ದುಬಾರಿ. ಧ್ರುವ ಸರ್ಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಬೇಕಿದ್ದ ಚಿತ್ರಕ್ಕೆ ಡೈರೆಕ್ಟರ್ ಆಗಿದ್ದವರು ನಂದ ಕಿಶೋರ್. ಆದರೆ.. ಇದ್ದಕ್ಕಿದ್ದಂತೆ ಬೇರೆಯದೇ ಸುದ್ದಿ ಬರುತ್ತಿದೆ. ನಿರ್ಮಾಪಕ ಉದಯ್ ಮೆಹ್ತಾ ಡೈರೆಕ್ಟರ್ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

    ಈ ಸುದ್ದಿಗೆ ಪುಷ್ಠಿ ಕೊಡುವಂತೆ ನಿರ್ದೇಶಕ ನಂದ ಕಿಶೋರ್, ಪಡ್ಡೆಹುಲಿ ಶ್ರೇಯಸ್ ಮಂಜು, ಏಕ್ ಲವ್ ಯಾ ನಾಯಕಿ ರೀಷ್ಮಾ ನಾಣಯ್ಯ ಅವರ ಹೊಸ ಚಿತ್ರದ ಕೆಲಸ ಶುರು ಮಾಡಿದ್ದಾರೆ. ದುಬಾರಿ ನಿಧಾನಕ್ಕೆ ಟೇಕಾಫ್ ಆಗಲಿದೆಯಂತೆ. ಡೈರೆಕ್ಟರ್ ಬದಲಾಗ್ತಾರಾ..? ವೇಯ್ಟ್.. ವೇಯ್ಟ್.. ವೇಯ್ಟ್.

  • ಧ್ರುವ ಸರ್ಜಾರ ಹಯಗ್ರೀವ ಡ್ರಾಪ್ ಆಯ್ತಾ..?

    dhruva's hayagreeva

    ಧ್ರುವ ಸರ್ಜಾ ಮತ್ತು ನಂದಕಿಶೋರ್ ಕಾಂಬಿನೇಷನ್‍ನಲ್ಲಿ ಮೊದಲು ಬರಬೇಕಿದ್ದ ಚಿತ್ರ ಹಯಗ್ರೀವ. ಅದು  ಡ್ರಾಪ್ ಆಗಿದ್ದಕ್ಕೆ ಕೂಡಾ ನಂದಕಿಶೋರ್ ಕಾರಣ ಹೇಳುತ್ತಾರೆ. ಅದು ಡ್ರಾಪ್ ಆಗಿಲ್ಲ, ಮುಂದೂಡಲ್ಪಟ್ಟಿದೆ ಎನ್ನುವುದು ನಂದಕಿಶೋರ್ ಮಾತು.

    ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು 6 ವರ್ಷಗಳಾದರೂ ಅಭಿನಯಿಸಿದ್ದು ಮೂರೇ ಸಿನಿಮಾ. ಒಂದೊಂದು ಸಿನಿಮಾಗೆ 2 ವರ್ಷ ಗ್ಯಾಪ್. ಹಯಗ್ರೀವ ಚಿತ್ರ ಕೂಡಾ ಅಷ್ಟೇ ಸಮಯ ಬೇಡುತ್ತಿದ್ದ ಸಿನಿಮಾ. ಅದಕ್ಕಾಗಿ ಧ್ರುವ ಸರ್ಜಾ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಎರಡು ಗೆಟಪ್‍ಗಳಿಗಾಗಿ ದೇಹ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಇದಕ್ಕಾಗಿಯೇ 8 ತಿಂಗಳು ಬೇಕಾಗುತ್ತಿತ್ತು. ಹೀಗಾಗಿ ಧ್ರುವ ಸರ್ಜಾ ಇನ್ನು ಮುಂದೆ ವರ್ಷಕ್ಕೆ ಕನಿಷ್ಠ 2 ಚಿತ್ರಗಳನ್ನಾದರೂ ಕೊಡುವ ಯೋಜನೆಯಲ್ಲಿದ್ದಾರೆ. ಹೀಗಾಗಿ ಸದ್ಯಕ್ಕೆ ಹಯಗ್ರೀವ ಪ್ರಾಜೆಕ್ಟ್ ತೆಗೆದುಕೊಳ್ಳುತ್ತಿಲ್ಲ. ಪೊಗರು ಮುಗಿಸಿದ ನಂತರ ಇನ್ನೆರಡು ಚಿತ್ರಗಳು ನಂದ ಕಿಶೋರ್ ನಿರ್ದೇಶನಕ್ಕೆ ಕ್ಯೂನಲ್ಲಿವೆ. ಆ ಪ್ರಾಜೆಕ್ಟ್ ಮುಗಿದ ನಂತರ, ಮತ್ತೆ ಹಯಗ್ರೀವ ಶುರುವಾಗಲಿದೆ.

    Related Articles :-

    Shraddha Srinath For Hayagreeva

    Dhruva Sarja's Hayagreeva Launched

  • ಧ್ರುವ ಹನಿಮೂನ್ ಬಿಟ್ಟು.. ಹೋಗಿದ್ದಾದರೂ ಎಲ್ಲಿಗೆ..?

    dhruva sarja back to shooting post wedding

    ಮೊನ್ನೆ ಮೊನ್ನೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿರುವ ಧ್ರುವ ಸರ್ಜಾ, ದಾಂಪತ್ಯ ಜೀವನದ ಆರಂಭದಲ್ಲಿ ಹನಿಮೂನ್ಗೆ ಹೋಗ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಪತ್ನಿ ಪ್ರೇರಣಾರನ್ನು ಮನೆಯಲ್ಲಿಯೇ ಬಿಟ್ಟ ಧ್ರುವ, ಶೂಟಿಂಗ್ಗೆ ಹೊರಟಿದ್ದಾರೆ.

    ಪೊಗರು ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದ್ದು, ಮದುವೆಯಾದ ಬೆನ್ನಲ್ಲೇ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಧ್ರುವ ಸರ್ಜಾ. ಪೊಗರು ಶೂಟಿಂಗ್ ಮುಗಿದಿಲ್ಲ ಎಂಬ ಕಾರಣಕ್ಕೇ ಗಡ್ಡ, ಕೂದಲನ್ನು ಕಟ್ ಮಾಡಿಕೊಳ್ಳದೆ ಅದೇ ಗೆಟಪ್ಪಿನಲ್ಲಿದ್ದ ಧ್ರುವ ಸರ್ಜಾ, ಸಿನಿಮಾ ಬಗ್ಗೆ ತಮ್ಮ ಕಮಿಟ್ಮೆಂಟ್ ಹೇಗಿದೆ ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ್ದಾರೆ.

    ನಂದ ಕಿಶೋರ್ ನಿರ್ದೇಶನದಲ್ಲಿ ಬರುತ್ತಿರುವ ಪೊಗರು ಚಿತ್ರದಲ್ಲಿ ಧ್ರುವಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್. ಚಿತ್ರದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು, ಸಂಕ್ರಾಂತಿ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

  • ಧ್ರುವ-ಪ್ರೇಮ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ

    ಧ್ರುವ-ಪ್ರೇಮ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ಟೈಟಲ್ ಲಾಂಚ್ ಟೀಸರ್ ಸಖತ್ತಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಬ್ಯಾನರ್‍ನಲ್ಲಿ ಬರುತ್ತಿರುವ ಕೆಡಿಯಲ್ಲಿ ಸಂಜಯ್ ದತ್ ಕೂಡಾ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಟೀಸರ್ ಮಾತ್ರ ಬೊಂಬಾಟ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಡಿ ದ ಡೆವಿಲ್ ಅನ್ನೋದು ಚಿತ್ರದ ಟೈಟಲ್.

    60ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ ರೌಡಿ ಕಾಳಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ದಾಖಲೆಯೆಂದರೆ ಚಿತ್ರದ ರೈಟ್ಸ್ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಸೇಲ್ ಆಗಿರುವುದು.

    ಹಿಂದಿಯಲ್ಲಿ ಅನಿಲ್ ತಡಾನಿ, ತೆಲುಗಿನಲ್ಲಿ ಸಾಯಿ ಕೊರಪ್ಪಾಟೆ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಅನಿಲ್ ತಡಾನಿ ಕೆಜಿಎಫ್, ಕಾಂತಾರ ಚಿತ್ರಗಳ ವಿತರಣೆ ಮಾಡಿದ್ದವರು. ತೆಲುಗಿನಲ್ಲಿ ಈಗ, ಬಾಹುಬಲಿ ಚಿತ್ರಗಳ ಖ್ಯಾತಿಯ ವಾರಾಹಿ ಸಂಸ್ಥೆಯ ಮೂಲಕ ಕೆಡಿ ಡಿಸ್ಟ್ರಿಬ್ಯೂಷನ್ ವಿತರಣೆ ಯಾಗಿದೆ. ತಮಿಳು ವಿತರಣೆ ಹಕ್ಕು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿದ್ದರೆ ಮಲಯಾಳಂನಲ್ಲಿ ಮೋಹನ್ ಲಾಲ್ ಅವರ ಆಶೀರ್ವಾದ್ ಸಂಸ್ಥೆ ವಿತರಣೆ ಮಾಡುತ್ತಿದೆ.

    ಚಿತ್ರದಲ್ಲಿ ಧ್ರುವ ಸರ್ಜಾ ನಿರ್ವಹಿಸುತ್ತಿರುವ ಪಾತ್ರದ ಹೆಸರು ಕಾಳಿ ಅಲಿಯಾಸ್ ಕಾಳಿದಾಸ. ಕಥಾನಾಯಕನ ಹೆಸರನ್ನೇ ತುಂಡರಿಸಿ ಕಥಾಹಂದರಕ್ಕೆ ಹೊಂದುವಂತೆ 'ಕೆ ಡಿ' ಎಂದು ಪ್ರೇಮ್ ಹೆಸರಿಟ್ಟಿದ್ದಾರೆ. ತಮಿಳು ಟೀಸರ್‌ಗೆ ವಿಜಯ್ ಸೇತುಪತಿ ಧ್ವನಿ ನೀಡಿದ್ದಾರೆ, ಮಲಯಾಳಂ ಟೀಸರ್‌ಗೆ ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಯಶ್ ಅವರ ಕೆಜಿಎಫ್ ಚಾಪ್ಟರ್-2 ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸಂಜಯ್ ದತ್ ಮತ್ತೊಮ್ಮೆ ದಕ್ಷಿಣಕ್ಕೆ ಮರಳಲಿದ್ದು, ಕೆಡಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

  • ಧ್ರುವ-ಪ್ರೇಮ್ ಚಿತ್ರಕ್ಕೆ ಅಧೀರನ ಎಂಟ್ರಿ

    ಧ್ರುವ-ಪ್ರೇಮ್ ಚಿತ್ರಕ್ಕೆ ಅಧೀರನ ಎಂಟ್ರಿ

    ಜೋಗಿ ಪ್ರೇಮ್ ಮತ್ತು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಾಗಿ ಸೇರಿದಾಗಲೇ ಸೆನ್ಸೇಷನ್ ಶುರುವಾಗಿತ್ತು. ಈಗ ಈ ಚಿತ್ರದಿಂದ ಇನ್ನೊಂದು ಸಂಚಲನಾತ್ಮಕ ಸುದ್ದಿ ಹೊರಬಿದ್ದಿದೆ. ಅಧೀರನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸಂಜಯ್ ದತ್, ಈ ಚಿತ್ರದಲ್ಲೂ ಖಳನಾಗಿ ಮಿಂಚಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇದರ ನಡುವೆಯೇ ಪ್ರೇಮ್ ಮತ್ತು ಸಂಜಯ್ ದತ್ ಮಧ್ಯೆ ಮಾತುಕತೆ ಮುಗಿದಿದೆ ಎನ್ನಲಾಗಿದ್ದು, ಸಂಜಯ್ ದತ್ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ.

  • ಧ್ರುವಾ ಪೊಗರಿಗೆ ಕಿರಿಕ್ ರಶ್ಮಿಕಾ ಜೋಡಿ

    rashmika to act with dhruva sarja

    ಕಿರಿಕ್ ಪಾರ್ಟಿಯಿಂದ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ, ನಂತರ ಕನ್ನಡದಲ್ಲಿ ನಟಿಸಿದ್ದು ಅಂಜನೀಪುತ್ರ, ಚಮಕ್ ಚಿತ್ರಗಳಲ್ಲಿ. ತೆಲುಗಿನಲ್ಲಿ ಗೀತ ಗೋವಿಂದಂ ಹಿಟ್ ಆದ ನಂತರ ಸ್ಟಾರ್ ಆದ ರಶ್ಮಿಕಾ, ತೆಲುಗಿನಲ್ಲಿಯೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಸದ್ಯಕ್ಕೆ ಯಜಮಾನ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಮತ್ತೊಂದು ಕನ್ನಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ಪೊಗರು.

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗೆ ರಶ್ಮಿಕಾ ಓಕೆ ಎಂದಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಚಿತ್ರಕಥೆ ಬರೆದಿರುವುದು ಅರ್ಜುನ್ ಸರ್ಜಾ. ಪೊಗರು ಚಿತ್ರದ 2ನೇ ಹಂತದ ಚಿತ್ರೀಕರಣ ನವೆಂಬರ್ 20ರಿಂದ ಶುರುವಾಗಲಿದೆ.

  • ಧ್ರುವಾಗೆ ಜಗಪತಿ ಬಾಬು ವಿಲನ್

    jagapathi babu is villain to dhruva sarja

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಜಗಪತಿ ಬಾಬು ವಿಲನ್ ಆಗಿ ಬರುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗು ಸಿನಿಮಾರಂಗದಲ್ಲಿ ಹೀರೋ ಆಗಿ ವಿಜೃಂಭಿಸಿದ್ದ ಜಗಪತಿ ಬಾಬು, ಈಗ ಪೋಷಕ, ವಿಲನ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸುದೀಪ್ ಎದುರು ಬಚ್ಚನ್, ಜಾಗ್ವಾರ್, ವಿಜಯಾದಿತ್ಯ ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಜಗಪತಿ ಬಾಬು, ಪೊಗರುನಿಂದ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ.

    ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದ ಚಿತ್ರೀಕರಣ ಜೂನ್ 15ರಿಂದ ಶುರುವಾಗಲಿದೆ. ಜಗಪತಿ ಬಾಬು ದೃಶ್ಯಗಳು ಜುಲೈನಲ್ಲಿವೆ. ಕಥೆ, ಪಾತ್ರ ಅವರಿಗೆ ಇಷ್ಟವಾಗಿದೆಯಂತೆ. ಜಗಪತಿ ಬಾಬು ಡೇಟ್ಸ್ ಹೇಳೋದಷ್ಟೇ ಬಾಕಿ ಎಂದಿದೆ ಚಿತ್ರತಂಡ.

    ಧ್ರುವಾ ಪೊಗರಿಗೆ ಇನ್ನೂ ನಾಯಕಿ ಸಿಕ್ಕಿಲ್ಲ. ಇನ್ನೊಂದು ವಾರದಲ್ಲಿ ಚಿತ್ರದ ಎಲ್ಲ ಕಲಾವಿದರ ಆಯ್ಕೆ ಅಂತಿಮವಾಗಲಿದೆ. ಗಂಗಾಧರ್ ನಿರ್ಮಾಣದ ಚಿತ್ರ ಅದ್ಧೂರಿಯಾಗಿ ಮೂಡಿಬರಲಿದೆ ಅನ್ನೋದು ನಿರ್ದೇಶಕ ನಂದಕಿಶೋರ್ ಭರವಸೆ.