` dhruva sarja, - chitraloka.com | Kannada Movie News, Reviews | Image

dhruva sarja,

  • ಕೆಡಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ರಮೇಶ್ ಅರವಿಂದ್

    ಕೆಡಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ರಮೇಶ್ ಅರವಿಂದ್

    ಕೆಡಿ ದ ಡೆವಿಲ್. ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಮೊದಲ ಬಾರಿಗೆ ಜೊತೆಯಾಗಿರುವ ಸಿನಿಮಾ. ಈ ಸಿನಿಮಾದಲ್ಲಿ ಪ್ರೇಮ್ ಅವರು ಸ್ಟಾರ್`ಗಳ ಸೈನ್ಯವನ್ನೇ ತಂದು ಗುಡ್ಡೆ ಹಾಕ್ಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ಇರುವ ಈ ಚಿತ್ರದಲ್ಲೀಗ ರಮೇಶ್ ಅರವಿಂದ್ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅಣ್ಣನಾಗಿ ನಟಿಸುತ್ತಿದ್ದಾರೆ.

    ಈ ವಿಷಯವನ್ನು ಜೋಗಿ ಪ್ರೇಮ್ ಸ್ವತಃ ಬಹಿರಂಗಗೊಳಿಸಿದ್ದು, ಸದ್ಯದಲ್ಲೇ ರಮೇಶ್ ತಮ್ಮ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. 'ಕೆಡಿ' ಚಿತ್ರವು ಸ್ಯಾಂಡಲ್ವುಡ್ ಅಭಿಮಾನಿಗಳಲ್ಲಿ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ ಎನ್ನಬಹುದು. 'ಕೆಡಿ-ದಿ ಡೆವಿಲ್' ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ಮರಳುಗಾಡಿನಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆಯಲ್ಲಿ ನಟಿ ಮರಳಿನ ಜತೆ ಆಟವಾಡುತ್ತ ಎಂಜಾಯ್ ಮಾಡುತ್ತಿದ್ದಾರಂತೆ.  ಮಾರ್ಟಿನ್ ಚಿತ್ರೀಕರಣವೂ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಮಾರ್ಟಿನ್ ಬಿಡುಗಡೆ ನಂತರವೇ ಕೆಡಿ ಬಿಡುಗಡೆ ಎನ್ನಲಾಗಿದೆ.

  • ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 6ನೇ ಸಿನಿಮಾ ಶುರುವಾಗಿದೆ. ಕೆಡಿ. ಒಂದು ಸಿನಿಮಾ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಸೆಟ್ಟೇರಿರುವುದು ಧ್ರುವ ಸರ್ಜಾ ರೆಕಾರ್ಡ್. ಅತ್ತ ಮಾರ್ಟಿನ್ ತಯಾರಾಗುತ್ತಿರುವಾಗಲೇ ಇತ್ತ ಕೆಡಿ ಸೆಟ್ಟೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರೋ ಸಿನಿಮಾ ಕೆಡಿ. ಸಂಜಯ್ ದತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಟೈಟಲ್ ಲಾಂಚ್ ಟೀಸರ್ ರಿಲೀಸ್ ಆಗಿದೆ. ರಾಮಾಯಣ ಹೆಣ್ಣಿಗಾಗಿ.. ಮಹಾಭಾರತ ಮಣ್ಣಿಗಾಗಿ..

    ಈಗ ರಕ್ತಕ್ಕಾಗಿ ಯುದ್ಧ ನಡೆಯುತ್ತೆ ಎನ್ನುವ ಖಡಕ್ ಡೈಲಾಗ್.. ಜೈಲಿಂದ ರಿಲೀಸ್ ಆಗಿ ಬರುವ ಧ್ರುವ ಸರ್ಜಾ.. ಧ್ರುವನನ್ನು ಎತ್ತೋಕೆ ಸಾವಿರ ಜನ.. ಸ್ವಾಗತ ಮಾಡೋಕೆ ಲಕ್ಷ ಜನ.. ಬೆಂಕಿ ಶೂಗಳಲ್ಲಿ ಹೆಜ್ಜೆ ಹೆಜ್ಜೆಯಿಟ್ಟು ಹೋಗುವ ಧ್ರುವ ರೌಡಿಯೊಬ್ಬನನ್ನು ಮೂಟೆಯಲ್ಲಿ ಹಾಕಿಕೊಂಡು ಹೊರಡುವ ದೃಶ್ಯದ ಟೀಸರ್.. ಎಂದಿನಂತೆ ಪ್ರೇಮ್ ಸಖತ್ತಾಗಿಯೇ ಮಾಡಿದ್ದಾರೆ. ಧುವ ಸರ್ಜಾ ಖಡಕ್ ವಾಯ್ಸ್ ಇದೆ.

    ಈ ಸಿನಿಮಾಗಾಗಿ ಪ್ರೇಮ್ ಹಳೇ ಬೆಂಗಳೂರನ್ನು ಮರುಸೃಷ್ಟಿ ಮಾಡಲಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಒಂದನ್ನು ನಿರ್ಮಾಣ ಮಾಡಲಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿರುವ ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಕಥೆ ಬರೆಯಲಾಗಿದ್ದು, ಪ್ರೇಮ್ ಅವರ ಕರಿಯರ್ನಲ್ಲಿ ಬಹಳ ದೊಡ್ಡ ಸಿನಿಮಾ ಇದು ಎನ್ನಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಮ್ ಈಗಾಗಲೇ ಮೋಹನ್ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ ಸೇರಿದಂತೆ ಹಲವು ಕಲಾವಿದರನ್ನು ಭೇಟಿ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ 6 ನನ್ನ ಲಕ್ಕಿ ನಂಬರ್. ಇದು ನನ್ನ 6ನೇ ಸಿನಿಮಾ. ನನ್ನ ಜನ್ಮದಿನವೂ ಆರು. ಅಲ್ಲದೆ ಇನ್ನು ನನ್ನ ಮಗಳು ಹುಟ್ಟಿದ ನಂತರ ಸೆಟ್ಟೇರುತ್ತಿರುವ ಸಿನಿಮಾ. ಕೆವಿಎನ್ ಮತ್ತು ಪ್ರೇಮ್ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ನನ್ನ ಕೆರಿಯರ್‍ನಲ್ಲೇ ಇದು ಅದ್ಧೂರಿ ಚಿತ್ರವಾಗಲಿದೆ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗಾಗಿ ನಾನು ಎಷ್ಟು ಸಮಯ ಬೇಕಾದ್ರೂ ಕೊಡುತ್ತೇನೆ ಎಂದವರು ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ.

    ಸಂಜಯ್ ದತ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೌಥ್ ಸಿನಿಮಾದಲ್ಲಿ ಎನರ್ಜಿ ಇರುತ್ತೆ. ಪ್ರೇಮ್ ಅವರ ತಲೆಯಲ್ಲಿ ಏನಿದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಹೊಸದೇನನ್ನೋ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಇದೆ. ಪ್ರೇಮ್ ಹೇಳಿದಂತೆ ನಟಿಸುತ್ತೇನೆ ಎಂದರು ಸಂಜಯ್ ದತ್. ಧ್ರುವ ಸರ್ಜಾ ಸಂಜಯ್ ದತ್ ಕಾಲುಮುಟ್ಟಿ ಆಶೀರ್ವಾದ ಪಡೆದರು.

    ಅಂದಹಾಗೆ ಎಲ್ಲ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದ್ದು ಒಂದೊಂದು ಭಾಷೆಯ ಟೀಸರ್‍ಗೂ ಒಬ್ಬೊಬ್ಬ ಸ್ಟಾರ್ ವಾಯ್ಸ್ ಕೊಟ್ಟಿದ್ಧಾರೆ. ತಮಿಳಿಗೆ ವಿಜಯ್ ಸೇತುಪತಿ, ಮಲಯಾಳಂಗೆ ಮೋಹನ್ ಲಾಲ್, ಹಿಂದಿಗೆ ಸಂಜಯ್ ದತ್ ವಾಯ್ಸ್ ಕೊಟ್ಟಿದ್ದಾರೆ.

  • ಕೆಡಿ ಶೂಟಿಂಗ್`ನಲ್ಲಿ ಗಾಯ : ಸಂಜಯ್ ದತ್ ಮುಂಬೈಗೆ ವಾಪಸ್

    ಕೆಡಿ ಶೂಟಿಂಗ್`ನಲ್ಲಿ ಗಾಯ : ಸಂಜಯ್ ದತ್ ಮುಂಬೈಗೆ ವಾಪಸ್

    ಕೆಡಿ ಚಿತ್ರದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದೆ. ಬಾಂಬ್ ಬ್ಲಾಸ್ಟ್ ದೃಶ್ಯದ ಚಿತ್ರೀಕರಣ ವೇಳೆ ನಟ ಸಂಜಯ್ ದತ್ ಅವರು ಗಾಯಗೊಂಡಿದ್ದಾರೆ. ದತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡ ಸಂಜಯ್ ದತ್ ಮುಂಬೈಗೆ ವಾಪಸ್ ಆಗಿದ್ದಾರೆ. ದತ್ ಅವರ ಮುಖ, ಮೊಣಕೈಗೆ ಗಾಯಗಳಾಗಿವೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಗಾಯ ಸೀರಿಯಸ್ ಆಗಿಲ್ಲ. ಆದರೆ ತಾತ್ಕಾಲಿಕವಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.

    ಮಾಗಡಿ ರೋಡ್‍ನಲ್ಲಿ ಹಾಕಿರುವ ಸೆಟ್‍ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ದೃಶ್ಯ ಚಿತ್ರೀಕರಣ ವೇಳೆ ಈ ಅಪಘಾತ ಸಂಭವಿಸಿದೆ. 1970ರ ಕಾಲಘಟ್ಟದ ಕಥೆಯಲ್ಲಿ ಸಂಜಯ್ ದತ್ ಪ್ರಮುಖ ವಿಲನ್ ರೋಲ್ ಮಾಡುತ್ತಿದ್ದಾರೆ.

    ಘಟನೆಯ ಬಗ್ಗೆ ಸಂಜಯ್ ದತ್ ನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿ ಹರದಾಡುತ್ತಿದೆ. ಆ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ, ನನಗೆ ಏನೂ ಆಗಿಲ್ಲ ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆಡಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ, ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಚಿತ್ರತಂಡವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    . ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಂಜಯ್ ದತ್ ಶೀಘ್ರವೇ ಮುಂಬೈಗೆ ಸ್ಥಳಾಂತರಿಸಲಾಗಿದ್ದು, ಸಂಜಯ್ ದತ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವಘಡದ ಬಳಿಕ ಶೂಟಿಂಗ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದಿದ್ದಾರೆ ಕೆಡಿ ಸಿನಿಮಾದ ಸಹ ನಿರ್ಮಾಪಕ ಸುಪ್ರೀತ್.

    ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನವರ ಕೆಡಿ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

  • ಗೆಳೆಯನಿಗೆ ಫಾರ್ಚೂನರ್ ಕಾರು ಗಿಫ್ಟ್ ಕೊಟ್ಟ ಧ್ರುವ ಸರ್ಜಾ

    ಗೆಳೆಯನಿಗೆ ಫಾರ್ಚೂನರ್ ಕಾರು ಗಿಫ್ಟ್ ಕೊಟ್ಟ ಧ್ರುವ ಸರ್ಜಾ

    ಒಬ್ಬ ಗೆಳೆಯನಿಗೆ ಏನು ಗಿಫ್ಟ್ ಕೊಡಬಹುದು..? ಅಚ್ಚರಿಯಾದರೂ ಸತ್ಯ. ಧ್ರುವ ಸರ್ಜಾ ತಮ್ಮ ಆತ್ಮೀಯ ಗೆಳೆಯನಿಗೆ ಫಾರ್ಚೂನರ್ ಕಾರು ಗಿಫ್ಟ್ ಕೊಟ್ಟಿದ್ದಾರೆ. 52 ಲಕ್ಷದ ಟೊಯೊಟಾ ಫಾರ್ಚೂನರ್ ಕಾರು. ಅದರ ಹಿಂದೆ ಒಂದು ಸೆಂಟಿಮೆಂಟ್ ಕಥೆಯೂ ಇದೆ. ಧ್ರುವ ಸರ್ಜಾರ ಆತ್ಮೀಯ ಗೆಳೆಯ ಅಶ್ವಿನ್ ಅವರಿಗೇ ಈ ಕಾರು ಗಿಫ್ಟ್ ಆಗಿ ಕೊಟ್ಟಿದ್ದಾರೆ ಧ್ರುವ ಸರ್ಜಾ.

     ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಸ್ವತಃ ಅವರಿಗೇ ಆಶ್ಚರ್ಯವಾಗುವಂತೆ ಸರ್ಪ್ರೈಸ್ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ . ಬಹಳ ಸಣ್ಣ ವಯಸ್ಸಿನಲ್ಲೇ ಅಶ್ವಿನ್ರ ಪೋಷಕರು ಕಾಲವಾಗಿದ್ದಾರೆ. ಕೇವಲ ಕಾರನ್ನು ಉಡುಗೊರೆಯಾಗಿ ನೀಡಿದ್ದು ಮಾತ್ರವೇ ಅಲ್ಲದೆ, ಅಶ್ವಿನ್ರ ಅಪ್ಪ-ಅಮ್ಮನ ಹಳೆಯ ಫೋಟೊವನ್ನು ಎಲ್ಲಿಂದಲೋ ಹುಡುಕಿ ತೆಗೆಸಿ ಅದನ್ನು ಕಾರಿನ ಒಳಗೆ ಲಗತ್ತಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಅಪೂರ್ವ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ನಾನು ಬುದ್ದಿ ಬಂದಾಗಿನಿಂದಲೂ ನೋಡದ ಅಪ್ಪಅಮ್ಮನ ಫೋಟೋ ಜೊತೆಯಲ್ಲಿಟ್ಟು ಕಾರು ಗಿಫ್ಟ್ ಕೊಟ್ಟಿದ್ದಾರೆ. ಅದೆಲ್ಲಿಂದ ಆ ಫೋಟೋ ಹುಡುಕಿದರೋ ಗೊತ್ತಿಲ್ಲ ಎಂದಿರುವ ಅಶ್ವಿನ್, ಸ್ವತಃ ವಿಡಿಯೋ ಮಾಡಿ ಈ ಸ್ಟೋರಿ ಹೇಳಿಕೊಂಡಿದ್ದಾರೆ. ಧ್ರುವ ಸರ್ಜಾ ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಬಿಲ್ ಕೊಟ್ಟಿದ್ದಾರೆ. ಶಾಲೆಯ ಫೀಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ಸಹಾಯ ಮಾಡಿದ್ದಾರೆ. ಆದರೆ ಯಾವುದನ್ನೂ ಪ್ರಚಾರ ಮಾಡಿಕೊಂಡವರಲ್ಲ. ನನಗೂ ಸಹ ಈ ಉಡುಗೊರೆ ಕೊಟ್ಟ ವಿಡಿಯೋ ಹೊರಗೆ ಹೋಗಬಾರದು ಎಂದಿದ್ದರು. ಆದರೆ ಅವರು ಮಾಡುವ ಕಾರ್ಯವನ್ನು ಜನರಿಗೆ ಹೇಳಬೇಕು ಎಂದು ವಿಡಿಯೋ ಹಾಕಿಕೊಂಡಿದ್ದೇನೆಎಂದಿದ್ದಾರೆ.

  • ಚಾಮುಂಡಿ ತೇರು ಎಳೆದಿದ್ದೇ ಧ್ರುವ-ಪ್ರೇಮ್ ಚಿತ್ರಕ್ಕೆ ಫಸ್ಟ್ ಸೀನ್..!

    ಚಾಮುಂಡಿ ತೇರು ಎಳೆದಿದ್ದೇ ಧ್ರುವ-ಪ್ರೇಮ್ ಚಿತ್ರಕ್ಕೆ ಫಸ್ಟ್ ಸೀನ್..!

    ಜೋಗಿ ಪ್ರೇಮ್ ಮತ್ತು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಚಿತ್ರ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಧ್ರುವ. ಪ್ರೇಮ್ ಕೂಡಾ ಅಷ್ಟೆ, ಏಕ್ ಲವ್ ಯಾ ರಿಲೀಸ್ ಆಗುವುದಕ್ಕೂ ಮೊದಲೇ ಈ ಚಿತ್ರ ಒಪ್ಪಿಕೊಂಡಿದ್ದರು. ಏಕ್ ಲವ್ ಯಾ ರಿಲೀಸ್ ಆದ ಬೆನ್ನಲ್ಲೇ ಹೊಸ ಸಿನಿಮಾ ಶುರು ಕೂಡಾ ಮಾಡಿದ್ದಾರೆ. ಅವರದ್ದೂ ದಾಖಲೆಯೇ. ಡಾ.ರಾಜ್ ಹುಟ್ಟುಹಬ್ಬದ ದಿನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

    ಚಾಮುಂಡೇಶ್ವರಿ ತೇರು ಎಳೆಯುವ ದೃಶ್ಯವನ್ನು ಚಿತ್ರೀಕರಿಸೋದ್ರೊಂದಿಗೆ ಸಿನಿಮಾ ಶುರು ಮಾಡಿದ್ದಾರೆ ಪ್ರೇಮ್. ಮುಹೂರ್ತದಲ್ಲಿ ನಿರ್ಮಾಪಕ ನಿಶಾ ವೆಂಕಟ್ ಕೊಣಂಕಿ, ರಕ್ಷಿತಾ ಪ್ರೇಮ್ ಹಾಜರಿದ್ದರು.

    ಇದು 70ರ ದಶಕದ ಅಂಡರ್‍ವಲ್ರ್ಡ್ ಸಿನಿಮಾ. ಭಿನ್ನವಾದ ಲುಕ್ ಇದೆ. ಕಥೆಯೂ ಚೆನ್ನಾಗಿದೆ. ರೌಡಿಸಂ ಜೊತೆಗೆ ಸೆಂಟಿಮೆಂಟ್ ಕೂಡಾ ಇದೆ. ಒಳ್ಳೆಯ ಹಾಡುಗಳೂ ಇರುತ್ತವೆ. ಖಂಡಿತಾ ಈ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯಲಿದೆ ಎಂದಿದ್ದಾರೆ ಧ್ರುವಾ.

  • ಚಿರಂಜೀವಿ ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಪತ್ನಿಗೆ ಸೀಮಂತ

    ಚಿರಂಜೀವಿ ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಪತ್ನಿಗೆ ಸೀಮಂತ

    ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಈ ಸಂಭ್ರಮದ ಸೀಮಂತವನ್ನು ಧ್ರುವ ಸರ್ಜಾ ತಮ್ಮ ಫಾರ್ಮ್ ಹೌಸ್ನಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

    ಇತ್ತೀಚೆಗೆ ಧ್ರುವ ಸರ್ಜಾ ಅಣ್ಣನ ಸಮಾಧಿ ಬಳಿ ಮಲಗಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಅಣ್ಣನ ನೆನಪಿನಲ್ಲಿಯೇ ಇರುವ ಧ್ರುವ, ಈಗ ಸಮಾಧಿ ಇರುವ ಫಾರ್ಮ್ ಹೌಸಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಚಿರು ಸಮಾಧಿ ಬಳಿ ಸೀಮಂತ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿರು ಫೋಟೋ ನೋಡಿದ ತಕ್ಷಣ ದೊಡ್ಡ ಎಂದು ಧ್ರುವ ಪುತ್ರಿ ಕರೆಯುತ್ತಾಳೆ.

    ಅಭಿಮಾನಿಗಳಿಗೆ ಧ್ರುವ ಸರ್ಜಾ ಅವರ ಪತ್ನಿಯ ಪ್ರೇಮ ಹಾಗೂ ಅಣ್ಣನ ಜೊತೆಗೆ ಇಟ್ಟುಕೊಂಡಿರೋ ಬಾಂಧವ್ಯ ಇಷ್ಟವಾಗುತ್ತಿದೆ.

  • ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೂ ಮೊದಲು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕೆಲವು ಚಿತ್ರಗಳು ಕಂಪ್ಲೀಟ್ ಆಗಿದ್ದವು. ಇನ್ನೂ ಕೆಲವು ಶೂಟಿಂಗ್ ಆಗಿದ್ದವು. ಪೋಸ್ಟ್ ಪ್ರೊಡಕ್ಷನ್ ಆಗಿರಲಿಲ್ಲ. ಅಂತಹ ಚಿತ್ರಗಳಲ್ಲಿ ಒಂದು ರಾಜಮಾರ್ತಾಂಡ. ಆ ಚಿತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ ಧ್ರುವ ಸರ್ಜಾ.

    ಚಿರು ಅವರ ಯಾವುದೇ ಚಿತ್ರಗಳಿಗೆ ಬೇಕಿರುವ ಎಲ್ಲ ಸಪೋರ್ಟ್ ಮಾಡುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ರಾಜಮಾರ್ತಾಂಡ ಡಬ್ಬಿಂಗ್ ಮುಗಿಸಿದ್ದಾರೆ ಧ್ರುವ. ಸಮಾಧಾನ.. ಸಮಾಧಾನ.. ಅಕ್ಕ ತಂಗಿಯರೇ.. ಅಣ್ಣ ತಮ್ಮಂದಿರೇ.. ಬಂಧು ಬಾಂಧವರೇ.. ನನ್ನ ನಂಬಿ ವೋಟ್ ಹಾಕಿ.. ನನ್ನ ಕೊನೆ ಉಸಿರು ಇರುವವರೆಗೆ ನಿಮ್ಮಗಳಿಗೋಸ್ಕರವೇ ಹೋರಾಡ್ತೀನಿ.. ಅಂತಾ ಧ್ರುವ ಹೇಳೋ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದು ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹೇಳೋ ಡೈಲಾಗ್.

    ಬಹುತೇಕ ಎಲ್ಲ ಕೆಲಸವನ್ನೂ ಕಂಪ್ಲೀಟ್ ಮಾಡಿರುವ ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಜೂನ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

    mothers days special

    ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

    ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

  • ಜನವರಿ 29ಕ್ಕೆ ಪೊಗರು

    ಜನವರಿ 29ಕ್ಕೆ ಪೊಗರು

    ಕನ್ನಡದ ಮೊದಲ ಸ್ಟಾರ್ ಸಿನಿಮಾ ರಿಲೀಸ್ ಆಗೋಕೆ ಮುಹೂರ್ತ ಕೂಡಿ ಬಂದಂತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು, 2020ರಲ್ಲಿ ಕಂಪ್ಲೀಟ್ ಸೆನ್ಸೇಷನ್ ಸೃಷ್ಟಿಸಿತ್ತು. ಈಗ ಸಿನಿಮಾ ರಿಲೀಸ್ ಆಗೋಕೆ ಡೇಟ್ ಫಿಕ್ಸ್ ಮಾಡಿದೆ. ಜನವರಿ 29ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

    ನಂದಕಿಶೋರ್ ನಿರ್ದೇಶಿಸಿರುವ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗಿನಲ್ಲೂ ಬರುತ್ತಿದೆ. ಹಾಲಿವುಡ್ ನಟರೂ ನಟಿಸಿರುವ ಚಿತ್ರವಿದು. ಸಹಜವಾಗಿಯೇ ಹೆವಿ ನಿರೀಕ್ಷೆ ಇದೆ.

    ಜನವರಿ 29ರ ಹೊತ್ತಿಗೆ ಕರ್ನಾಟಕದಲ್ಲಿ ಪ್ರೇಕ್ಷಕರ ಭರ್ತಿಗೆ ಇರುವ ನಿರ್ಬಂಧ ಸಡಿಲಿಕೆಯಾಗುವ ನಿರೀಕ್ಷೆಯೂ ಇದೆ.

  • ಜೆಂಟಲ್‍ಮನ್ ಡೈನಮಿಕ್ ಪ್ರಿನ್ಸ್ ಆಟಕ್ಕೆ ಆ್ಯಕ್ಷನ್ ಪ್ರಿನ್ಸ್ ಪವರ್

    Dhruva Sarja To Release The Songs Of prajwal Devaraj's 'Gentleman'

    ಇವರು ಡೈನಮಿಕ್ ಪ್ರಿನ್ಸ್. ಅರ್ಥಾತ್ ಪ್ರಜ್ವಲ್‌ ದೇವರಾಜ್. ಅವರು ಆ್ಯಕ್ಷನ್  ಪ್ರಿನ್ಸ್. ಅಂದ್ರೆ ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೇ ಌಕ್ಟ್ ಮಾಡುತ್ತಿದ್ದಾರಾ ಎಂದೆಲ್ಲ ಕೇಳಬೇಡಿ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಆದರೆ, ಡಿಫರೆಂಟ್ ಕಾನ್ಸೆಪ್ಟ್‌ ಮೂಲಕವೇ ಟ್ರೆಂಡ್ ಸೃಷ್ಟಿಸಿರುವ ಜಂಟಲ್‌ಮನ್‌ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಮುಖ್ಯ ಅತಿಥಿ.

    ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಆನಂದ್‌ ಆಡಿಯೋ ಯೂ ಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ರಿಲೀಸ್ ಆಗುತ್ತಿದೆ. ಅದೇ ದಿನ 12 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಟ್ರೇಲರ್‌ ಬಿಡುಗಡೆಯೂ ಇದೆ. ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಚೀಫ್ ಗೆಸ್ಟ್.

    ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ನಾಯಕನಾಗಿ ನಟಿಸಿದ್ದಾರೆ ಪ್ರಜ್ವಲ್‌. ಅಂದರೆ ದಿನಕ್ಕೆ 18 ಗಂಟೆ ನಿದ್ರೆ, 6 ಗಂಟೆ ಮಾತ್ರ ಎಚ್ಚರ ಇರುವ ನಾಯಕ. ಆ 6 ಗಂಟೆಗಳಲ್ಲಿ ಹೀರೋ ಲವ್ ಮಾಡಬೇಕು, ಫೈಟ್ ಮಾಡಬೇಕು. ಅಕಸ್ಮಾತ್ ಆಗಿ ಸಿಲುಕಿಕೊಳ್ಳೋ ಸಮಸ್ಯೆಯಿಂದ ಹೊರಬರಬೇಕು. ಜಾಗ ಸಿಕ್ಕರೆ ಗೊರಕೆ ಹೊಡೆಯೋ ಹೀರೋ ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಚಿತ್ರದ ಕಥೆ.

    ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ಮಾಪಕ. ಜಡೇಶ್‌ ಕುಮಾರ್‌ ನಿರ್ದೇಶಕ. ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ಹೀರೋಯಿನ್. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದಲ್ಲಿ ಪೊಲೀಸ್ ಆಫೀಸರ್. ಉಳಿದ ಡೀಟೈಲ್ಸ್.. ಏನಿದ್ದರೂ ಜನವರಿ 6ಕ್ಕೆ ಕೊಡ್ತಾರೆ.

  • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

    rachitha ram, dhruva sarja reveals secret

    ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

    ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

    ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

    ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

  • ಡಿ-ಬಾಸ್ ಅಂದ್ರೆ ದರ್ಶನ್ ಮಾತ್ರ, ನಾನಲ್ಲ - ಧ್ರುವ ಸರ್ಜಾ

    dhruva sarja reacts on d boss compliments

    ಡಿ-ಬಾಸ್ ಅನ್ನೊದು ಚಾಲೆಂಜಿಂಗ್ ಸ್ಟಾರ್‍ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರು. ಈಗ ಅದನ್ನು ಧ್ರುವ ಸರ್ಜಾ ಕೂಡಾ ಹೇಳಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣವಾಗಿದ್ದು, ಅವರ ಹುಟ್ಟುಹಬ್ಬ. ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎಂದು ಬರೆದಿದ್ದರು. ದರ್ಶನ್ ಮತ್ತು ಧ್ರುವ ಎರಡೂ ಹೆಸರಿನ ಆರಂಭದ ಅಕ್ಷರ ಡಿ ಆಗಿರುವುದು ಕೂಡಾ ಇದಕ್ಕೆ ಕಾರಣ. ಇದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಡಿ ಬಾಸ್ ಅಂದ್ರೆ ದರ್ಶನ್ ಒಬ್ಬರೇ. ನನಗೆ ಯಾವತ್ತಿಗೂ ಆಂಜನೇಯನೇ ಬಾಸ್. ದರ್ಶನ್ ಹಿರಿಯ ನಟ. ನಿಮ್ಮಂತೆಯೇ ನಾನು ಕೂಡಾ ಅವರ ಅಭಿಮಾನಿ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ.  ದರ್ಶನ್, ಸದಾ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಧ್ರುವ ಸರ್ಜಾ.

    ಇದೇ ವೇಳೆ ಮುಂದಿನ ವರ್ಷ ಮದುವೆಯಾಗುವ ಸುಳಿವನ್ನೂ ಕೊಟ್ಟಿದ್ದಾರೆ ಧ್ರುವ. ಲವ್ ಮ್ಯಾರೇಜ್ ಆಗ್ತಾರಂತೆ. ಆದ್ರೆ, ಹುಡುಗಿಯೇ ಸಿಕ್ಕಿಲ್ವಂತೆ. ಇನ್ನೊಂದ್ ವರ್ಷದಲ್ಲಿ ಹುಡುಗಿ ಹುಡುಕಿ ಲವ್ ಮಾಡಿ ಮದ್ದೆ ಆಗ್ತಾರಂತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್.

  • ಡಿ.24ಕ್ಕೆ ಪೊಗರು ದರ್ಶನ

    pogaru likely to release on dec 24th

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ನಂದ ಕಿಶೋರ್ ನಿರ್ದೇಶನದ ಸಿನಿಮಾ ಪೊಗರು. ಒನ್ಸ್ ಎಗೇಯ್ನ್ ಧ್ರುವ ಅವರ ಹಿಂದಿನ ಸಿನಿಮಾಗಳಂತೆಯೇ ಸುದೀರ್ಘ ಸಮಯ ತೆಗೆದುಕೊಂಡ ಚಿತ್ರ. ಚಿತ್ರಕ್ಕೆ ಇನ್ನೂ 15 ದಿನಗಳ ಶೂಟಿಂಗ್ ಬಾಕಿಯಿದೆಯಂತೆ. ಆದರೆ ಎಲ್ಲವೂ ಪಕ್ಕಾ ಪ್ಲಾನ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಜೊತೆ ಜೊತೆಯಾಗಿ ನಡೆಯುತ್ತಿವೆ.

    ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದಿದ್ದಾರೆ ನಂದಕಿಶೋರ್.

    ಇಷ್ಟಕ್ಕೂ ಚಿತ್ರದ ಕಥೆಯೇನು..? ಚಿತ್ರದಲ್ಲಿ ನಾಯಕ ಒರಟನೆಂದರೆ ಒರಟ. ಮಹಾಒರಟ. ರಶ್ಮಿಕಾ ಮಂದಣ್ಣ ಟೀಚರ್. ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್ ಕೂಡಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲೊಂದು ತಾಯಿ-ಮಗನ ಸೆಂಟಿಮೆಂಟ್ ಕಥೆಯಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ನಂದಕಿಶೋರ್.

  • ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

    ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

    ಕನ್‍ಫ್ಯೂಸ್ ಏನೂ ಆಗಬೇಡಿ. ಧ್ರುವ ಸರ್ಜಾ ತಮಿಳು ಚಿತ್ರವನ್ನೇನು ಒಪ್ಪಿಕೊಂಡಿಲ್ಲ. ಆದರೆ ತಮಿಳು ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಚಿತ್ರದ ಹೆಸರು ಸೆಮ್ಮ ತಿಮಿರು. ಕನ್ನಡದ ಪೊಗರು ಚಿತ್ರ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲಿ ಸೆಮ್ಮ ತಿಮಿರು ಅನ್ನೋ ಹೆಸರಿಡಲಾಗಿದೆ.

    ಬಹುಶಃ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಪೊಗರು ರಿಲೀಸ್ ಆಗಬಹುದು. ಒಟ್ಟಿಗೇ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್‍ನಲ್ಲಿದೆ ಪೊಗರು ಟೀಂ. ಬಿ.ಕೆ. ಗಂಗಾಧರ್ ನಿರ್ಮಾಣದ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ಧ್ರುವ ಸರ್ಜಾ ಎದುರು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಂದನ್ ಶೆಟ್ಟಿ ನಿರ್ದೇಶಿಸಿರುವ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ.

  • ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..!

    dhruva sarja lends his voice to ap arjun's kiss movie

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

    ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

    ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

    ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.

  • ತೆಲುಗಿನಲ್ಲೂ ಖರಾಬು ದಾಖಲೆ

    pogaru karabuu song image

    ಧ್ರುವ ಸರ್ಜಾ ಅಭಿನಯದ ಪೊಗರು ತೆಲುಗಿನಲ್ಲೂ ಬಂದಾಗಿದೆ. ಕನ್ನಡದಲ್ಲಿ ಈಗಾಗಲೇ 10 ಕೋಟಿ ವೀಕ್ಷಣೆ ಪಡೆದಿರುವ ಹಾಡು, ತೆಲುಗಿನಲ್ಲೂ ರೋಮಾಂಚನ ಸೃಷ್ಟಿಸಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ.

    ಚಂದನ್ ಶೆಟ್ಟಿ ರಚಿಸಿ, ಸಂಗೀತ ನೀಡಿರುವ ಹಾಡು ಖರಾಬು ಸಾಂಗ್. ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿರುವ ಹಾಡು, ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅವರಿಂದ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ. ಧ್ರುವ ಸರ್ಜಾಗೆ ತೆಲುಗಿನಲ್ಲಿದು ಮೊದಲ ಪ್ರಯತ್ನ.

    you_tube_chitraloka1.gif

    ತೆಲುಗಿನಲ್ಲಿ ಅಲಾ ವೈಕುಂಠಪುರಂಲೋ ಚಿತ್ರದ ರಾಮುಲೋ.. ರಾಮುಲಾ ಹಾಡಿದ್ದ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.

     

  • ತೆಲುಗುಗೆ ಪೊಗರಿನ ಖರಾಬ್ ಸಾಂಗ್

    pogaru image

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ರಿಲೀಸ್`ಗೆ ರೆಡಿ. ಸದ್ಯಕ್ಕೆ ಈ ಚಿತ್ರದ ಖರಾಬು ಸಾಂಗ್ ಸಿಕ್ಕಾಪಟ್ಟೆ ಹವಾ ಎಬ್ಬಿಸಿಬಿಟ್ಟಿದೆ. ಕನ್ನಡದಲ್ಲಿ ಈಗಾಗಲೇ 9 ಕೋಟಿಗೂ ಹೆಚ್ಚು ಜನ ನೋಡಿರೋ ಹಾಡಿದು. ಈಗ ಈ ಹಾಡಿನ ತೆಲುಗು ವರ್ಷನ್ ತೆಲುಗಿನಲ್ಲಿ ಆಗಸ್ಟ್ 6ರಂದು ರಿಲೀಸ್ ಆಗುತ್ತಿದೆ. ತೆಲುಗಿಗೆ ಧ್ರುವ ಸರ್ಜಾ ಹೊಸಬರಾದರೂ, ರಶ್ಮಿಕಾ ಮಂದಣ್ಣ, ಟಾಲಿವುಡ್ ಪ್ರೇಕ್ಷಕರ ಹಾಟ್ ಫೇವರಿಟ್. ತೆಲುಗಿನಲ್ಲಿ ಸತತ ಹಿಟ್ ಕೊಟ್ಟಿರೋ ರಶ್ಮಿಕಾ ಇರೋದ್ರಿಂದ ಈ ಹಾಡು ತೆಲುಗಿನಲ್ಲೂ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.

    you_tube_chitraloka1.gif

    ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಧ್ರುವ ಸರ್ಜಾ ಜೊತೆಗೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್, ರವಿಶಂಕರ್, ಮಯೂರಿ, ಸಾಧುಕೋಕಿಲ.. ಮೊದಲಾದವರು ನಟಿಸಿದ್ದಾರೆ. ಚಂದನ್ ಶೆಟ್ಟಿ, ಸ್ವತಃ ಸಂಗೀತ ನೀಡಿ, ಬರೆದು ಹಾಡಿರುವ ಖರಾಬ್ ಸಾಂಗ್ ತೆಲುಗಿನಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ.

  • ದುಃಖದಲ್ಲಿದ್ದ ಅಭಿಮಾನಿಯ ಕುಟುಂಬಕ್ಕೆ ಹೆಗಲು ಕೊಟ್ಟ ಧ್ರುವ ಸರ್ಜಾ

    ದುಃಖದಲ್ಲಿದ್ದ ಅಭಿಮಾನಿಯ ಕುಟುಂಬಕ್ಕೆ ಹೆಗಲು ಕೊಟ್ಟ ಧ್ರುವ ಸರ್ಜಾ

    ಧ್ರುವ ಸರ್ಜಾ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ಇತ್ತೀಚೆಗೆ ಧ್ರುವ ಸರ್ಜಾ ಅವರ ಅಭಿಮಾನಿ ಪೃಥ್ವಿರಾಜ್ ಎಂಬುವವರು ಅಪಘಾತಕ್ಕೀಡಾಗಿದ್ದರು. ಬ್ರೇನ್ ಡೆಡ್ ಸ್ಥಿತಿ ತಲುಪಿದ್ದರು. ಕುಟುಂಬಸ್ಥರು ದೇಹದಾನ ಮಾಡಲು ನಿರ್ಧರಿಸಿದ್ದರು. ಇದೆಲ್ಲದರ ಜೊತೆಗೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಪ್ರತಿ ಭಾನುವಾರ ಧ್ರುವ ಸರ್ಜಾರನ್ನು ನೋಡಲು ಮನೆಗೇ ಬರುತ್ತಿದ್ದ ಅಭಿಮಾನಿ ಪೃಥ್ವಿರಾಜ್.

    ಆ ಹಿನ್ನೆಲೆಯಲ್ಲಿ ನೆಚ್ಚಿನ ಅಭಿಮಾನಿಯನ್ನು ನೋಡಲು ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೃಥ್ವಿ ಅವರ ಪೋಷಕರನ್ನು ಭೇಟಿ ಮಾಡಿರುವ ಧ್ರುವ ಸರ್ಜಾ, ಅವರಿಗೆ ಧೈರ್ಯ ತುಂಬಿದ್ದಾರೆ. 'ನಾನು ಪ್ರತಿಯೊಬ್ಬರಲ್ಲೂ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿ, ವಾಹನ ಚಾಲನೆ ವೇಳೆ ಜಾಗರೂಕರಾಗಿರಿ. ನಮ್ಮ ಅಜ್ಜಿಯನ್ನು ಆಸ್ಪತ್ರೆಯಲ್ಲಿ ನೋಡಿದ ಮೇಲೆ, ಮತ್ತೆ ಆಸ್ಪತ್ರೆಗೆ ಹೋಗುವುದು ಬೇಡ ಎಂದುಕೊಂಡಿದ್ದೆ. ಆದರೆ ಪೃಥ್ವಿಗಾಗಿ ಬರಬೇಕಾಯ್ತು. ಆ ಪೋಷಕರನ್ನು ನೋಡಿ, ಏನು ಹೇಳಬೇಕೋ ಗೊತ್ತಾಗುತ್ತಿಲ್ಲ..' ಎಂದು ಭಾವುಕರಾಗಿದ್ದಾರೆ ಧ್ರುವ ಸರ್ಜಾ.

    ಮಗನ ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದ ಪೃಥ್ವಿರಾಜ್ ಅವರ ತಂದೆಯನ್ನು ಗಮನಿಸಿದ ಧ್ರುವ ಸರ್ಜಾ ತಕ್ಷಣ 5 ಲಕ್ಷ ರೂ. ನೆರವು ನೀಡಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡುವ ಭರವಸೆ ನೀಡಿದ್ದಾರೆ.

  • ದುಬಾರಿ ಅಲ್ಲ. ಧ್ರುವ ಸರ್ಜಾರ ಹೊಸ ಸಿನಿಮಾ ಯಾವುದು..?

    ದುಬಾರಿ ಅಲ್ಲ. ಧ್ರುವ ಸರ್ಜಾರ ಹೊಸ ಸಿನಿಮಾ ಯಾವುದು..?

    ಪೊಗರು ಇನ್ನೂ ರಿಲೀಸ್ ಆಗುವ ಮೊದಲೇ ಸೆಟ್ಟೇರಿದ್ದ ಸಿನಿಮಾ ಪೊಗರು. ಧ್ರುವ ಸರ್ಜಾ, ಶ್ರೀಲೀಲಾ ಮತ್ತು ನಂದ ಕಿಶೋರ್ ಕಾಂಬಿನೇಷನ್‍ನಲ್ಲಿ ಶುರುವಾದ ಚಿತ್ರಕ್ಕೆ ಉದಯ್ ಮೆಹ್ತಾ ಪ್ರೊಡ್ಯೂಸರ್. ಆದರೆ ಈಗ ದುಬಾರಿಗೆ ಬ್ರೇಕ್ ಬಿದ್ದಿದೆ. ಯಾಕೆ..? ಏನು..? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರೆಲ್ಲ ಫುಲ್ ಸೈಲೆಂಟ್. ಸದ್ಯಕ್ಕೆ ಧ್ರುವ ಸರ್ಜಾ ಹೊಸ ಹೊಸ ಸ್ಕ್ರಿಪ್ಟ್ ನೋಡುವಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರೊಡ್ಯೂಸರ್ ಬದಲಾಗಿಲ್ಲ. ಅದೇ ಉದಯ್ ಕೆ.ಮೆಹ್ತಾ. ಆದರೆ ನಿರ್ದೇಶಕರು ಬದಲಾಗಲಿದ್ದಾರೆ. ತಂತ್ರಜ್ಞರ ಟೀಂ ಎಲ್ಲ ಫೈನಲ್ ಆಗೋದು ಆನಂತರವೇ.

    ಸದ್ಯಕ್ಕೆ ಧ್ರುವ ಸರ್ಜಾಗೆ ಕಥೆ ಹೇಳುತ್ತಿರುವವರಲ್ಲಿ ಜಗ್ಗುದಾದಾ ಖ್ಯಾತಿಯ ರಾಘವೇಂದ್ರ ಹೆಗಡೆ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಎ.ಹರ್ಷ, ಎ.ಪಿ.ಅರ್ಜುನ್ ಅವರ ಬಳಿಯಿರುವ ಸ್ಕ್ರಿಪ್ಟ್‍ಗಳನ್ನೂ ನೋಡುತ್ತಿದ್ದಾರೆ ಧ್ರುವ ಸರ್ಜಾ. ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬರಲಿದೆ.

  • ಧ್ರುವ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ..

    dhruva sarja's love story

    ಧ್ರುವ ಸರ್ಜಾ ಅವರ ಪಾಲಿಗೆ ಸರ್ವಸ್ವವೂ ಆಗಿರುವುದು ಅರ್ಜುನ್ ಸರ್ಜಾ. ಮಾವನನ್ನು ತಂದೆಯಂತೆಯೇ ಗೌರವಿಸುವ ಅರ್ಜುನ್ ಸರ್ಜಾ, ಲವ್ ವಿಷಯದಲ್ಲಿ ಮಾತ್ರ ಡಿಫರೆಂಟು. ಏಕಂದ್ರೆ, ಧ್ರುವ ಸರ್ಜಾ, ಪ್ರೇರಣಾ ಲವ್ ಸ್ಟೋರಿ, ಅರ್ಜುನ್ ಸರ್ಜಾಗೆ ಮೊದಲು ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ. ನಿಶ್ಚಿತಾರ್ಥದದ ವೇಳೆ ಸ್ವತಃ ಅವರೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಥೇಟು ಸಿನಿಮಾ ಸ್ಟೈಲ್‍ನಲ್ಲಿ ಹೋಗಿ ಪ್ರೇರಣಾ ಅವರ ಅಪ್ಪನ ಬಳಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡ್ರಿ ಎಂದು ಕೇಳಿದ್ದ ಧ್ರುವಾ. ಅದಾದ ಮೇಲೇ ನನಗೂಗ ಗೊತ್ತಾಗಿದ್ದು ಎಂದರು ಅರ್ಜುನ್ ಸರ್ಜಾ.

    ಅರ್ಜುನ್ ಸರ್ಜಾ ಹಾಗೆ ಹೇಳುತ್ತಿದ್ದರೆ ಪಕ್ಕದಲ್ಲೇ ಇದ್ದ ಧ್ರುವ, ಪ್ರೇರಣಾ, ಅಣ್ಣ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ... ಹೀಗೆ ಎಲ್ಲರ ಮುಖದಲ್ಲೂ ನಗುವೋ ನಗು.