` totapuri 2, - chitraloka.com | Kannada Movie News, Reviews | Image

totapuri 2,

  • ತೋತಾಪುರಿ 2 : ಸೀಕ್ವೆಲ್ ರಿಲೀಸ್`ಗೆ ರೆಡಿ

    ತೋತಾಪುರಿ 2 : ಸೀಕ್ವೆಲ್ ರಿಲೀಸ್`ಗೆ ರೆಡಿ

    ತೋತಾಪುರಿ. ಜಗ್ಗೇಶ್-ಆದಿತಿ ಪ್ರಭುದೇವ-ಧನಂಜಯ-ದತ್ತಣ್ಣ-ಸುಮನ್ ರಂಗನಾಥ್ ಅಭಿನಯದ ಸಿನಿಮಾ. ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶ ಸಾರಿದ್ದ ತೋತಾಪುರಿ, ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ತೋತಾಪುರಿ ಮಾಡುವಾಗಲೇ ಪಾರ್ಟ್-2 ತರುವುದಾಗಿ ಹೇಳಿದ್ದ ವಿಜಯ್ ಪ್ರಸಾದ್, ಅದರಂತೆಯೇ 2ನೇ ಭಾಗ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ.

    ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ತೋತಾಪುರಿ-2' ಚಿತ್ರದ ಫಸ್ಟ್ಲುಕ್ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.  ಪೋಸ್ಟರ್ನಲ್ಲಿ ನಾಯಕರಾದ ಡಾಲಿ ಡಾಲಿ ಧನಂಜಯ್ ಹಾಗೂ ಜಗ್ಗೇಶ್ ಅವರ ಕ್ಯಾರೆಕ್ಟರ್ ಹೇಗಿರುತ್ತೆ ಅನ್ನೋದರ ಝಲಕ್ ಇದೆ.

     ಶಿವಲಿಂಗ ಖ್ಯಾತಿಯ ನಿರ್ಮಾಪಕ ಕೆ ಎ ಸುರೇಶ್ ಥಿಯೇಟರ್ಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ನೀಡಲಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಫಸ್ಟ್ ಕಾಪಿ ಹೊರಬರಲಿದೆ. ನಂತರ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುವುದು, ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಚಿತ್ರದಲ್ಲಿದೆ ಎನ್ನುವುದು ಸುರೇಶ್ ಅವರ ವಿಶ್ವಾಸ.

  • ತೋತಾಪುರಿ 2 ಟ್ರೇಲರ್ ಬಂತು.. ಇದು ಹಾಂಂಂಗಿಲ್ಲ..

    ತೋತಾಪುರಿ 2 ಟ್ರೇಲರ್ ಬಂತು.. ಇದು ಹಾಂಂಂಗಿಲ್ಲ..

    ತೋತಾಪುರಿ ನೋಡಿದವರಿಗೆ ಇದು ಹಾಂಂಂಗ್ ಇರುತ್ತಾ ಅಂದ್ಕೊಂಡ್ರೆ, ಹಾಂಗಿಲ್ಲ ಅನ್ನೋ ಮೆಸೇಜ್ ಕೊಟ್ಟಿದೆ ತೋತಾಪುರಿ 2. ಎಂದಿನಂತೆ ಚೇಷ್ಟೆಗಳಿವೆಯಾದರೂ, ಅದನ್ನೂ ಮೀರಿ ಕಾಡುವುದು ಪ್ರೀತಿ. ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ಮಧ್ಯೆ ಹುಟ್ಟುವ ಪ್ರೀತಿಯ ಕಥೆ.

    ‘ತೋತಾಪುರಿ’ ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಕಥೆ ಮುಂದುವರಿದಿದೆ. ಜಗ್ಗೇಶ್-ಅದಿತಿ ಪ್ರಭುದೇವ ರೀತಿಯೇ ಸುಮನ್ ರಂಗನಾಥ್-ಧನಂಜಯ್ ಅವರ ಪ್ರೇಮ ಕಥೆಯೂ ಸೀಕ್ವೆಲ್ನಲ್ಲಿ ಹೈಲೈಟ್ ಆಗಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

    ಟ್ರೇಲರ್ ನೋಡಿದವರಿಗೆ ಅಚ್ಚರಿ ಹುಟ್ಟಿಸುವುದು ಸುಮನ್ ರಂಗನಾಥ್. ಇದ್ದಕ್ಕಿದ್ದಂತೆ ಹದಿಹರೆಯದವರಂತೆ ಕಾಣುತ್ತಿರೋ ಸುಮನ್ ರಂಗನಾಥ್ ಚಿಕ್ಕೋರಾಗಿದ್ದು ಯಾವಾಗ ಅನ್ನೋ ಕುತೂಹಲ ಹುಟ್ಟುತ್ತದೆ. ಧನಂಜಯ್ ಅವರಿಗಷ್ಟೆ ಅಲ್ಲ, ಎಲ್ಲರಿಗೂ ಪ್ರೀತಿ ಹುಟ್ಟುವಂತೆ ಕಾಣುತ್ತಾರೆ ಸುಮನ್. ಜಗ್ಗೇಶ್ ಮತ್ತು ಆದಿತಿ ಮಧ್ಯೆ ಡೈರೆಕ್ಟ್ ಮೀನಿಂಗ್ ಡೈಲಾಗುಗಳಿವೆ. ಕೆಎ ಸುರೇಶ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಇದೆ.

     

  • ತೋತಾಪುರಿ 2 ರಿಲೀಸ್`ಗೆ ಮುಹೂರ್ತ ಫಿಕ್ಸ್

    ತೋತಾಪುರಿ 2 ರಿಲೀಸ್`ಗೆ ಮುಹೂರ್ತ ಫಿಕ್ಸ್

    ತೋತಾಪುರಿ ಚಿತ್ರದ ಸೀಕ್ವೆಲ್, ಸಿನಿಮಾ ಘೋಷಣೆಯಾದಾಗಲೇ ಫಿಕ್ಸ್ ಆಗಿತ್ತು. ಎರಡೂ ಭಾಗಗಳನ್ನು ಚಿತ್ರೀಕರಣ ಮಾಡಿದ್ದ ತೋತಾಪುರಿ ಟೀಂ, ಹೆಚ್ಚೂಕಡಿಮೆ ಒಂದು ವರ್ಷದ ನಂತರ ತೋತಾಪುರಿ 2 ಸೀಕ್ವೆಲ್ ರಿಲೀಸ್ ಮಾಡೋಕೆ ರೆಡಿಯಾಗಿದೆ. ಸೀಕ್ವೆಲ್`ನಲ್ಲಿ ಜಗ್ಗೇಶ್-ಆದಿತಿ ಪ್ರಭುದೇವ ಜೊತೆಗೆ ಡಾಲಿ ಧನಂಜಯ್, ಸುಮನ್ ರಂಗನಾಥ್ ಪಾತ್ರಗಳೂ ದೊಡ್ಡ ಮಟ್ಟದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ವಿಶೇಷ.

    2022ರ ಸೆಪ್ಟೆಂಬರ್ನಲ್ಲಿ ‘ತೋತಾಪುರಿ 1’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್..’ ಗೀತೆ ಬಹಳ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ‘ತೋತಾಪುರಿ 2’ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ಮಾಡಲಾಗಿದೆ. ಹೃದಯಶಿವ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಮೊದಲ ಮಳೆ ಮನದೊಳಗೆ…’ ಎಂದು ಈ ಹಾಡಿಗೆ ಜನಮೆಚ್ಚುಗೆ ಸಿಗುತ್ತಿದೆ. ಇದರಲ್ಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸಂಜಿತ್ ಹೆಗಡೆ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ.

    ಇನ್ನು ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗಲಿದ್ದು, ಆ ಡೇಟ್ ಸಂಚಲನ ಸೃಷ್ಟಿಸಿದೆ. ಯಾಕೆಂದರೆ ಆಗಸ್ಟ್ 10ರಂದು ರಜನಿಕಾಂತ್, ಶಿವಣ್ಣ, ತಮನ್ನಾ ಅಭಿನಯದ ಜೈಲರ್ ರಿಲೀಸ್ ಆಗುತ್ತಿದೆ. ಈ ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ ಎಂದು ಘೋಷಣೆ ಆದ ಬಳಿಕ ಇದರ ಎದುರು ಬರಲು ಕನ್ನಡದ ಯಾವುದೇ ಸಿನಿಮಾಗಳು ಸಿದ್ಧವಿರಲಿಲ್ಲ. ಆದರೆ, ಈಗ ‘ಜೈಲರ್’ ಎದುರು ಪೈಪೋಟಿ ನೀಡಲು ‘ತೋತಾಪುರಿ 2’ ಸಿನಿಮಾ ಸಜ್ಜಾಗಿದೆ. ವಿಜಯೇಂದ್ರ ಪ್ರಸಾದ್ ಅವರ ಚೇಷ್ಟೆ ಈ ಚಿತ್ರದಲ್ಲಿಯೂ ಕಂಟಿನ್ಯೂ ಆಗಲಿದೆ.