` the kerala story, - chitraloka.com | Kannada Movie News, Reviews | Image

the kerala story,

  • 200 ಕೋಟಿ ಸೇರಿದ ಕೇರಳ ಸ್ಟೋರಿಗೆ ಕರ್ನಾಟಕದಲ್ಲೂ ವಿಘ್ನ..?

    200 ಕೋಟಿ ಸೇರಿದ ಕೇರಳ ಸ್ಟೋರಿಗೆ ಕರ್ನಾಟಕದಲ್ಲೂ ವಿಘ್ನ..?

    ಕೇರಳ ಸ್ಟೋರಿ. ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ತಮಿಳುನಾಡು, ಕೇರಳ, ಪ.ಬಂಗಾಳದಲ್ಲಿ ಸೂಕ್ತ ಶೋಗಳು ಸಿಕ್ಕಿಲ್ಲ. ಹೀಗಿದ್ದರೂ 200 ಕೋಟಿ ದಾಟಿರುವ ಕೇರಳ ಸ್ಟೋರಿ, ಬಿಡಗಡೆಯಾದ 2 ವಾರಗಳಲ್ಲೇ ದಾಖಲೆ ಬರೆದಿದೆ. ಇದರ ನಡುವೆ ಕೇರಳ ಸ್ಟೋರಿಗೆ ಕರ್ನಾಟಕದಲ್ಲಿಯೂ ವಿಘ್ನ ಎದುರಾಗಿದೆ.

    ಒಂದೆಡೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

    ಕೇರಳ ಸ್ಟೋರಿ ಚಿತ್ರ ಪ್ರದರ್ಶನದಿಂದ ಸೃಷ್ಟಿಯಾಗಬಲ್ಲ ಪ್ರತಿಭಟನೆ, ಹಿಂಸಾಚಾರ ತಪ್ಪಿಸಲು ಎಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಲಾಗಿದೆ.  ಬೆಂಗಳೂರು ನಗರ,ಮೈಸೂರು,ಹುಬ್ಬಳಿ ಧಾರವಾಡ ,ಮಂಗಳೂರು,ಬೆಳಗಾವಿ ,ಕಲಬುರಗಿ ನಗರ  ಸೇರಿದಂತೆ ಎಲ್ಲಾ ಜಿಲ್ಲಾ ಎಸ್ಪಿಗಳು ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ.

    ಮಣಿಪಾಲ್ದ ಕೆನಾರಾ ಮಾಲ್ನಲ್ಲಿ ಸುರೇಶ್ ಮಂಡನ್ ನೇತೃತ್ವದಲ್ಲಿ ದಿ ಕೇರಳ ಸ್ಟೋರಿ ಚಿತ್ರಪ್ರದರ್ಶನ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಹಿಂದೂ ಯುವತಿಯರಿಗಾಗಿ ಈ ಚಿತ್ರ ಪ್ರದರ್ಶನ ಆಯೋಜನೆ ಮಾಡಲಾಗಿದೆ. ರ್ದೇಶಕ ಸುದೀಪ್ತೋ ಸೇನ್ ನಿರ್ದೇಶಿಸಿದ್ದ ಚಿತ್ರದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ನಿಷೇಧಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಇತ್ತೀಚೆಗೆ ಸುಪ್ರೀಂಕೋರ್ಚ್ ತಡೆ ನೀಡಿತ್ತು.

    ಕೇರಳದಲ್ಲಿ ಸಾವಿರಾರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಸಿರಿಯಾ, ಅಷ್ಘಾನಿಸ್ತಾನದಂತಹ ಇಸ್ಲಾಂ ರಾಷ್ಟ್ರಗಳಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಆತ್ಮಾಹುತಿ ಬಾಂಬ್ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥೆಹಂದರದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಇದು ಕಪೋಲಕಲ್ಪಿತ ಕಥೆ ಎನ್ನುವವರಿಗೆ ಉತ್ತರವಾಗಿ ಚಿತ್ರತಂಡ ಐಸಿಸ್ ಸಂಘಟನೆಯಿಂದ ಬಚಾವ್ ಆಗಿ ಬಂದವರು ಹಾಗೂ ಮತಾಂತರದ ಜಾಲಕ್ಕೆ ಸಿಕ್ಕು ಬದುಕಿದವರನ್ನು ಪತ್ರಕರ್ತರ ಎದುರು ಕರೆದುಕೊಂಡು ಬಂದಿತ್ತು. ಒಟ್ಟಿನಲ್ಲಿ ಕೇರಳ ಸ್ಟೋರಿ ಸತ್ಯ ಘಟನೆ ಆಧರಿತ ಕಾಲ್ಪನಿಕ ಕಥಾಹಂದರದ ಚಿತ್ರ.

  • 9 ದಿನಕ್ಕೇ 113 ಕೋಟಿ : ಕೇರಳ ಸ್ಟೋರಿ ದಾಖಲೆ

    9 ದಿನಕ್ಕೇ 113 ಕೋಟಿ : ಕೇರಳ ಸ್ಟೋರಿ ದಾಖಲೆ

    ದಿ ಕೇರಳ ಸ್ಟೋರಿ ಸಿನಿಮಾವು ತೆರೆಕಂಡ 9ನೇ ದಿನಕ್ಕೆ ಶತಕೋಟಿ ಕ್ಲಬ್ ಸೇರಿದೆ. ಈ ಸಿನಿಮಾವು ಭಾರತದಲ್ಲಿ ಒಟ್ಟು 112.99 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೊದಲ ದಿನ 8.05 ಕೋಟಿ ರೂ. ಗಳಿಸಿದ್ದ ದಿ ಕೇರಳ ಸ್ಟೋರಿ ಸಿನಿಮಾ ಮೊದಲ ವಾರಕ್ಕೆ 81.14 ಕೋಟಿ ರೂ. ಗಳಿಸಿತ್ತು. ಇದೀಗ 9ನೇ ದಿನಕ್ಕೆ 112.99 ಕೋಟಿ ರೂ. ಗಳಿಸಿದೆ. ಸುದಿಪ್ತೋ ಸೇನ್ ನಿರ್ದೇಶನ ಮಾಡಿರುವ ದಿ ಕೇರಳ ಸ್ಟೋರಿ, ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ, ಕೂಡ ಭಾರತದಲ್ಲಿ ಈ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೇ ಮಾಡಿದೆ.

    ಸಾಮಾನ್ಯವಾಗಿ ಯಾವುದೇ ಸಿನಿಮಾ ಆರಂಭದಲ್ಲಿ ಉತ್ತಮ ಗಳಿಕೆ ಮಾಡುತ್ತದೆ. ದಿನ ಕಳೆದಂತೆ, ಕಲೆಕ್ಷನ್ ಕುಸಿತ ಕಂಡು ಬರುತ್ತದೆ. ಆದರೆ 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಆಗಿದ್ದೇ ಬೇರೆ. ಈ ಸಿನಿಮಾವು 9ನೇ ದಿನದ ಕಲೆಕ್ಷನ್ನಲ್ಲಿ ದೊಡ್ಡ ದಾಖಲೆಯನ್ನೇ ಬರೆದಿದೆ.

    'ದಿ ಕೇರಳ ಸ್ಟೋರಿ' ಸಿನಿಮಾವು ಮೊದಲ ದಿನ 8.05 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 11.01 ಕೋಟಿ ರೂ., 3ನೇ ದಿನ 16.43 ಕೋಟಿ ರೂ., 4ನೇ ದಿನ 10.03 ಕೋಟಿ ರೂ., 5ನೇ ದಿನ 11.07 ಕೋಟಿ ರೂ., 6ನೇ ದಿನ 12.01 ಕೋಟಿ ರೂ., 7ನೇ ದಿನ 12.54 ಕೋಟಿ ರೂ., 8ನೇ ದಿನ 12.35 ಕೋಟಿ ರೂ. ಗಳಿಸಿತ್ತು. ಆದರೆ 9ನೇ ದಿನ ಕಲೆಕ್ಷನ್ ಮಾತ್ರ ಎಲ್ಲರಲ್ಲೂ ಅಚ್ಚರಿಯನ್ನು ಉಂಟು ಮಾಡಿದೆ. ಇದುವರೆಗಿನ ಎಲ್ಲ ದಿನಗಳ ಕಲೆಕ್ಷನ್ ಅನ್ನು 9ನೇ ದಿನದ ಕಲೆಕ್ಷನ್ ಉಡೀಸ್ ಮಾಡಿದೆ. ಶನಿವಾರ ಈ ಸಿನಿಮಾ 19.50 ಕೋಟಿ ರೂ. ಗಳಿಸಿ, ತನ್ನ ನಾಗಾಲೋಟವನ್ನು ಮುಂದುವರಿಸಿದೆ.

    ವಿರೋಧ ನಡುವೆಯೂ ಭಾರತದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರವು ಅಮೆರಿಕ ಹಾಗೂ ಕೆನಡಾದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಾ ಶರ್ಮ ನಾಯಕಿಯಾಗಿದ್ದು, ಫಾತಿಮಾ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಬಲೆ ಬೀಸಿ ಮುಸ್ಲಿಮ್ ಧರ್ಮಕ್ಕೆ ಮತಾಂತರ ಮಾಡಿ, ಐಸಿಸ್ ಉಗ್ರರನ್ನಾಗಿಸುವ ನೈಜಕಥೆ ಸಿನಿಮಾದಲ್ಲಿದೆ.

  • ಅವರೆಲ್ಲ ಬ್ಯಾನ್ ಮಾಡಿದ್ದರೂ.. ಸೂಪರ್ ಹಿಟ್ ಆಗುತ್ತಿದೆ ಕೇರಳ ಸ್ಟೋರಿ

    ಅವರೆಲ್ಲ ಬ್ಯಾನ್ ಮಾಡಿದ್ದರೂ.. ಸೂಪರ್ ಹಿಟ್ ಆಗುತ್ತಿದೆ ಕೇರಳ ಸ್ಟೋರಿ

    ಕೇರಳ ಸ್ಟೋರಿ. ಕೇರಳದಲ್ಲಿ ನಡೆಯುವ ಹಿಂದೂ ಯುವತಿಯರ ಮತಾಂತರ ಮತ್ತು ಉಗ್ರರನ್ನಾಗಿಸುವ ಕಥೆ. ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಸೂಪರ್ ಹಿಟ್ ಆಗಿದೆ. ಮೊದಲ ದಿನ 8 ಕೋಟಿ ಗಳಿಸಿದ್ದ ಸಿನಿಮಾ, 2ನೇ ದಿನ 11 ಕೋಟಿ ಗಳಿಸಿತ್ತು. 3ನೇ ದಿನ 12 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಇದೀಗ ಸೂಪರ್ ಹಿಟ್ ಆಗುವ ಹಾದಿಯಲ್ಲಿದೆ. ಚಿತ್ರಕ್ಕೆ ನಿರ್ಬಂಧ ಹೇರುವ ಎಲ್ಲ ಪ್ರಯತ್ನಗಳೂ ಜರುಗಿದವು. ಚಿತ್ರಕ್ಕೆ ನಿಷೇಧ ಹೇರುವ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಕೇರಳದಲ್ಲಿ ಚಿತ್ರ ಮಂದಿರಗಳ ಮೇಲೆ ದಾಳಿ ನಡೆಯಿತು. ಚಿತ್ರ ಪ್ರದರ್ಶನ ರದ್ದಾಯಿತು. ಆದರೆ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕಳೆದ ವರ್ಷ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡಿತ್ತು. 252.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಜೆಟ್ ಕೂಡ ಕೇವಲ 15-20 ಕೋಟಿ ರೂಪಾಯಿ. ಒಟ್ಟಾರೆ ಕಲೆಕ್ಷನ್ ಸಿನಿಮಾವನ್ನು ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿತ್ತು. ಆ ಸಿನಿಮಾ ಕೂಡ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ 'ದಿ ಕೇರಳ ಸ್ಟೋರಿ' ಕೂಡ ವಿವಾದಗಳ ಜತೆಗೆ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಎನ್ನಲಾಗಿದೆ.

  • ಕೇರಳ ಸ್ಟೋರಿ : ಕೆಲವು ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ.. ಕೆಲವು ರಾಜ್ಯಗಳಲ್ಲಿ ಬ್ಯಾನ್

    ಕೇರಳ ಸ್ಟೋರಿ : ಕೆಲವು ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ.. ಕೆಲವು ರಾಜ್ಯಗಳಲ್ಲಿ ಬ್ಯಾನ್

    ಭಾರತ ಇಬ್ಭಾಗವಾಗುತ್ತಿದೆಯಾ..? ಅತಿಯಾಯ್ತು ಎನ್ನಿಸಬಹುದೇನೋ.. ಆದರೆ ಸಿನಿಮಾಗಳ ವಿಷಯದಲ್ಲಿ ಆ ರೀತಿಯ ಅರ್ಥ ಮೂಡುತ್ತಿರುವುದು ಸತ್ಯ. ಈ ಹಿಂದೆ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಇದೇ ರೀತಿ ಆಗಿತ್ತು. ಈಗ ಕೇರಳ ಸ್ಟೋರಿಗೆ. ಕೇರಳದಲ್ಲಿ ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಮೋಸದಿಂದ ಮತಾಂತರ ಮಾಡಿ, ಐಸಿಸ್ ಉಗ್ರರ ಗುಂಪಿಗೆ ಸೇರಿಸಲಾಗುತ್ತಿದೆ ಎಂಬ ಕಥೆಯನ್ನು ಸಿನಿಮಾ ಮಾಡಲಾಗಿದೆ. ಇದೀಗ ಈ ಚಿತ್ರ ಬಿಡುಗಡೆಯೂ ಆಗಿದೆ. ಚಿತ್ರದ ವಿರುದ್ಧ ಪರ ವಿರೋಧ ನಿಲುವು ವ್ಯಕ್ತವಾಗುತ್ತಿವೆ.

    ಕೇರಳ ಸ್ಟೋರಿ ಚಿತ್ರಕ್ಕೆ ತಮಿಳುನಾಡು, ಪ.ಬಂಗಾಳ ನಿಷೇಧ ಹೇರಿವೆ. ಅಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಕೇರಳದಲ್ಲಿ ಸಿನಿಮಾ ಶೋಗಳಿವೆ. ಆದರೆ ಪ್ರದರ್ಶನ ಮಾಡುವುದಕ್ಕೆ ಗಲಾಟೆ ನಡೆಯುತ್ತಿವೆ. ಹೀಗಾಗಿ ಸೂಕ್ತ ರೀತಿಯಲ್ಲಿ ಪ್ರದರ್ಶನವಾಗುತ್ತಿಲ್ಲ. ಜನರಿದ್ದಾರೆ, ಸಿನಿಮಾ ನೋಡುವವರೂ ಇದ್ದಾರೆ. ಪ್ರದರ್ಶನ ಇಲ್ಲ.

    ರಾಜಸ್ತಾನದಲ್ಲಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಗಳಾಗುತ್ತಿವೆ. ಶೋಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗುತ್ತಿದೆ. ಏರ್ ಕಂಡೀಷನ್ ಆಫ್ ಮಾಡಿ ಕಿರುಕುಳ ನೀಡಿಯೂ ಆಗಿದೆ. ಅಲ್ಲಿಗೆ ಕೇರಳ ಮತ್ತು ರಾಜಸ್ತಾನದಲ್ಲಿ ಅಧಿಕೃತವಾಗಿ ಬ್ಯಾನ್ ಮಾಡಿಲ್ಲ.

    ಇದು ನಿಷೇಧ ಮಾಡಿದವರ ಕಥೆಯಾದರೆ, ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

    ಅತ್ತ ಸುಪ್ರೀಂಕೋರ್ಟಿನಲ್ಲಿ ಚಿತ್ರದ ನಿರ್ಮಾಪಕ ವಿಫುಲ್ ಶಾ ನಿಷೇಧದ ವಿರುದ್ಧ ದೂರು ದಾಖಲಿಸಿದ್ದಾರೆ. ಚಿತ್ರವನ್ನು ಪ್ರದರ್ಶನ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ಕಪಿಲ್ ಸಿಬಲ್ ಕೂಡಾ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ.

    ಇನ್ನು ಚಿತ್ರವನ್ನು ನಿಷೇಧಿಸಿರುವ ಬಗ್ಗೆ ಕೆಲವು ನಟರು ಧ್ವನಿ ಎತ್ತಿದ್ದಾರೆ. ಅನುಪಮ್ ಖೇರ್, ಶಬಾನಾ ಅಜ್ಮಿ, ಕಂಗನಾ ರಣಾವತ್ ಮೊದಲಾದವರು ಚಿತ್ರದ ಬ್ಯಾನ್ ಬಗ್ಗೆ ಪ್ರಶ್ನಿಸಿದ್ದಾರೆ. ನಟ ಪ್ರಕಾಶ್ ರೈ ಮೊದಲಾದವರು ನಿಷೇಧದ ಪರ ಧ್ವನಿ ಎತ್ತಿರುವವರ ಪರ ನಿಂತಿದ್ದಾರೆ.

    ಇವೆಲ್ಲದರ ನಡುವೆ ಉಳಿದ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕೇರಳ ಸ್ಟೋರಿ 50 ಕೋಟಿಯ ಕ್ಲಬ್ ಸೇರಿದೆ. ಸೋಮವಾರ, ಮಂಗಳವಾರವೂ ಕಲೆಕ್ಷನ್ ಚೆನ್ನಾಗಿದ್ದು, ಈಗಾಗಲೇ ಒಟ್ಟಾರೆ ಬಜೆಟ್ಟಿಗಿಂತ ಡಬಲ್ ಕಲೆಕ್ಷನ್ ಆಗಿದೆ. ಸೂಪರ್ ಹಿಟ್ ಲಿಸ್ಟಿಗೆ ಸೇರಿಯಾಗಿದೆ.

  • ಕೇರಳ ಸ್ಟೋರಿ ನಾನ್ ಸ್ಟಾಪ್ ಅಬ್ಬರ : ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ

    ಕೇರಳ ಸ್ಟೋರಿ ನಾನ್ ಸ್ಟಾಪ್ ಅಬ್ಬರ : ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ

    ಈ ವರ್ಷದ ವಿವಾದಾತ್ಮಕ ಚಿತ್ರವೂ ಆಗಿರುವ ಕೇರಳ ಸ್ಟೋರಿ ಅದ್ಧೂರಿ ಪ್ರದರ್ಶನ ಮುಂದುವರೆಸಿದೆ. ಪ.ಬಂಗಾಳ, ತಮಿಳುನಾಡಿನಲ್ಲಿ ಅಧಿಕೃತ ನಿಷೇಧ ಇರುವ ಚಿತ್ರಕ್ಕೆ ಕೇರಳ, ರಾಜಸ್ತಾನ, ಪಾಂಡಿಚೆರಿಗಳಲ್ಲಿ ಭಾಗಶಃ ಪ್ರದರ್ಶನಗಳಿವೆ. ಪ್ರೇಕ್ಷಕರು ಯಾವಾಗ ಗಲಾಟೆಯಾಗುತ್ತದೆಯೋ ಏನೋ ಎಂಬ ಆತಂಕದಲ್ಲಿ ಸಿನಿಮಾದಿಂದ ದೂರ ಉಳಿದಿದ್ದಾರೆ. ಇತ್ತ ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗಿದೆ. ಇದೆಲ್ಲದರ ನಡುವೆ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ 60 ಕೋಟಿ ದಾಟಿ ಮುನ್ನಡೆದಿದೆ.

    ಇದೀಗ ಹಲವು ವಿವಾದಗಳ ನಡುವೆಯೇ ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ ಸಿಕ್ಕಿದೆ. ಚಿತ್ರವು ಇಸ್ಲಾಮಿಕ್ ಸ್ಟೇಟ್ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸುತ್ತದೆ. ಇದನ್ನು ಕೋಮುವಾದದ ಮಾದರಿಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ ಅವರನ್ನು ಐಸಿಸ್ಗೆ ಸೇರಿಸಿದ ಬಗ್ಗೆ ಬಹಳ ನಿದರ್ಶನಗಳಿವೆ. ಚಿತ್ರ ಅದನ್ನು ತೋರಿಸಿದೆ. ಆದರೆ ಇದರಿಂದ ಅನೇಕರಿಗೆ ಅಸಮಾಧಾನವಾಗಿದೆ. ಐಸಿಸ್ಅನ್ನು ಮುಸ್ಲಿಮರು ಅಥವಾ ಇಸ್ಲಾಂ ಎಂದು ಯಾರೂ ಹೇಳುತ್ತಿಲ್ಲ. ಲವ್ ಜಿಹಾದ್ ಎಂಬುದು ಸತ್ಯ. ಬಲವಂತದ ಮತಾಂತರ ಅಥವಾ ಪ್ರೀತಿ ಹೆಸರಿನಲ್ಲಿ ಮತಾಂತರ ಮಾಡುವುದು ಸ್ವೀಕಾರಾರ್ಹವಲ್ಲ ಎಂದಿದೆ ಕೇರಳ ಕ್ಯಾಥೊಲಿಕ್ ಬಿಷಪ್ಗಳ ಪರಿಷತ್ತು.

    ನಿರ್ದೇಶಕ ಸುದೀಪ್ತೋ ಸೇನ್ ನಿರ್ದೇಶಿಸಿ ವಿಫುಲ್ ಶಾ ನಿರ್ಮಿಸಿರುವ ಚಿತ್ರವು ಕೇರಳದ 32,000 ಹಿಂದೂ ಯುವತಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಿಸಿ ಸಿರಿಯಾ, ಅಷ್ಘಾನಿಸ್ತಾನದಂತಹ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಐಸಿಸ್ಗೆ ಸೇರಿಸಲಾಗಿದೆ. ಅವರನ್ನು ಆತ್ಮಾಹುತಿ ಬಾಂಬ್ ದಾಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥಾ ಹೊಂದರವನ್ನು ಹೊಂದಿದೆ.

    ಇದೀಗ ನಾಳೆ ಅಂದ್ರೆ 12ನೇ ತಾರೀಕು ಕೇರಳ ಸ್ಟೋರಿ 37 ದೇಶಗಳಲ್ಲಿ ರಿಲೀಸ್ ಆಗುತ್ತಿದೆ.

  • ಕೇರಳ ಸ್ಟೋರಿ ವಿವಾದ : 32 ಸಾವಿರ ಯುವತಿಯರು, ಐಸಿಸಿಸ್..ಮತಾಂತರದ ಕರಾಳ ಜಾಲದ ಕಥೆ..!

    ಕೇರಳ ಸ್ಟೋರಿ ವಿವಾದ : 32 ಸಾವಿರ ಯುವತಿಯರು, ಐಸಿಸಿಸ್..ಮತಾಂತರದ ಕರಾಳ ಜಾಲದ ಕಥೆ..!

    ಕಳೆದ ವರ್ಷ ಕಾಶ್ಮೀರ್ ಫೈಲ್ಸ್ ಚಿತ್ರ ತೆರೆಗೆ ಬಂದಿತ್ತು. ಜಮ್ಮು ಕಾಶ್ಮೀರದಲ್ಲಿ 90ರ ದಶಕದಲ್ಲಿ ನಡೆದ ಅತ್ಯಾಚಾರ, ಹತ್ಯಾಕಾಂಡ, ಅವುಗಳನ್ನು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದ ಕಥೆ, ದೊಡ್ಡವರು, ಸರ್ಕಾರಗಳು ಮೌನವಾಗಿ ನೋಡಿದ ಘಟನೆಗಳನ್ನು ಹಸಿಹಸಿಯಾಗಿ ತೋರಿಸಲಾಗಿತ್ತು. ಸಹಜವಾಗಿಯೇ ಅದು ವಿರೋಧಕ್ಕೆ ತುತ್ತಾಯಿತು. ಇದೀಗ ಮತ್ತೊಂದು ಅಂತಹುದೇ ಸಿನಿಮಾ ಬರುತ್ತಿದೆ. ಕೇರಳ ಸ್ಟೋರಿ.

    ಇದು ಕೇರಳದಲ್ಲಿ ಹಿಂದೂ, ಕ್ರಿಶ್ಚಿಯನ್ ಯವತಿಯರನ್ನು ಮತಾಂತರ ಮಾಡಿ, ದಾರಿ ತಪ್ಪಿಸಿ, ಪ್ರೆಗ್ನೆಂಟ್ ಮಾಡಿ ಐಸಿಸ್ ಉಗ್ರರಿಗೆ ಒಪ್ಪಿಸುತ್ತಿರುವ ಕರಾಳ ಕಥೆ. ಹಾಗೆ ಬಲವಂತದ ಮತಾಂತರಕ್ಕೆ ತುತ್ತಾದವರು 32 ಸಾವಿರಕ್ಕೂ ಹೆಚ್ಚು. ಅದನ್ನೇ ಸಿನಿಮಾ ಮಾಡಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

    ಹಿಜಾಬ್ ಧರಿಸಿದರೆ ಅತ್ಯಾಚಾರ ಆಗಲ್ಲ. ಅಲ್ಲಾನೇ ರಕ್ಷಿಸುತ್ತಾನೆ.

    ಹೆಂಡತಿಗಾಗಿ ಕಣ್ಣೀರು ಹಾಕುವ ಶಿವನನ್ನು ದೇವರು ಎಂದು ಹೇಗೆ ನಂಬುತ್ತೀರಿ. ಅಲ್ಲಾ ಒಬ್ಬನೇ ದೇವರು. ಎಂಬಂತಹ ಡೈಲಾಗ್`ಗಳಿವೆ. ಅಂತಹ ಯುವತಿಯರನ್ನು ಬ್ರೇನ್ ವಾಷ್ ಮಾಡಿ ಐಸಿಸ್`ಗೆ ಸೇರಿಸುವ ದೊಡ್ಡ ಜಾಲವೇ ಕೇರಳದಲ್ಲಿ ಸಕ್ರಿಯವಾಗಿದೆ ಎನ್ನುವುದು ಬಹಿರಂಗವಾಗಿತ್ತು. ಅಂತಹ ಯುವತಿ/ಯುವಕರನ್ನು ರಕ್ಷಿಸಲಾಗಿತ್ತು. ಇನ್ನೂ ಕೆಲವರು ಕೇರಳದವರೇ ಐಸಿಸ್`ನಲ್ಲಿ ಸಕ್ರಿಯರಾಗಿರುವುದು ಎನ್`ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಲವ್ ಜಿಹಾದ್ ಹಾಗೂ ಐಸಿಸ್`ಗೆ ಸೇರಿಸುವ ಜಾಲದ ವಿರುದ್ಧ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಸಂಘಟನೆಗಳು ಕಾನೂನು ಹೋರಾಟವನ್ನೂ ನಡೆಸುತ್ತಿವೆ. ಇದನ್ನೇ ಸಿನಿಮಾದಲ್ಲಿ ತೋರಿಸಲಾಗಿದೆ. ಇದರ ವಿರುದ್ಧ ಕೇರಳದ ಕಾಂಗ್ರೆಸ್, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದೊಂದು ಸಂಘಪರಿವಾರದ ಅಜೆಂಡಾ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಇದೆಲ್ಲದರ ಮಧ್ಯೆ ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.

  • ಕೇರಳ ಸ್ಟೋರಿಗೆ ಮತ್ತೊಂದು ರಾಜ್ಯ ಬ್ಯಾನ್ : ಮೂರು ದಿನಕ್ಕೇ 35 ಕೋಟಿ..!

    the Kerala story image

    ಕೇರಳ ಸ್ಟೋರಿಗೆ ಕೇರಳದಲ್ಲೇ ಶೋಗಳಿಲ್ಲ. 30 ಚಿತ್ರಮಂದಿರಗಳಲ್ಲಿ ಪ್ರದರ್ಶನಗಳೇನೋ ಇವೆ. ಆದರೆ ಶೋ ಆರಂಭಕ್ಕೆ ಮೊದಲು ನಡೆಯುತ್ತಿರುವ ಗಲಾಟೆಗಳ ಕಾರಣ ಚಿತ್ರಮಂದಿರಕ್ಕೆ ಜನ ಹೋಗುತ್ತಿಲ್ಲ. ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆಯಾದ 2 ದಿನಗಳ ನಂತರ ನಿಷೇಧವಾಗಿದೆ. ಮೊದಲ ದಿನವಂತೂ ಟಿಕೆಟ್ ನೀಡಿದ ಮೇಲೆ ಥಿಯೇಟರ್ ಎದುರು ಗಲಾಟೆಯಾಗಿ ಪ್ರದರ್ಶನಗಳು ರದ್ದಾಗಿದ್ದವು.

    ಇದೀಗ ಆ ಲಿಸ್ಟಿಗೆ ಪ.ಬಂಗಾಳ ಕೂಡಾ ಸೇರಿದೆ. ಅಲ್ಲಿಗೆ ಮೂರು ರಾಜ್ಯಗಳಲ್ಲಿ ನಿಷೇಧವಾಗಿರುವ ಕೇರಳ ಸ್ಟೋರಿಗೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿಯೂ ಇದೆ. ಕೇರಳದಲ್ಲಿ ನಡೆದ ಹಾಗೂ ನಡೆಯುತ್ತಿರುವ ನೈಜ ಘಟನೆಗಳಿಗೆ ಸಿನಿಮಾ ರೂಪ ನೀಡಿರುವ ಚಿತ್ರ ಕೇರಳ ಸ್ಟೋರಿ.

    ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಪಕ್ಷಗಳ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಚಿತ್ರಕ್ಕೆ ದೊಡ್ಡ ಸ್ವಾಗತ ಹಾಗೂ ಬಿಜೆಪಿಯೇತರ ರಾಜ್ಯಗಳಲ್ಲಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ. ಹೀಗಿದ್ದರೂ ಚಿತ್ರ ಮೂರು ದಿನಗಳಲ್ಲಿ 35 ಕೋಟಿ ಬಿಸಿನೆಸ್ ಮಾಡಿದೆ. 4ನೇ ದಿನದ ಲೆಕ್ಕ ಇನ್ನೂ ಬರಬೇಕಿದೆ. ಸೋಮವಾರವಾದ್ದರಿಂದ ಸಹಜವಾಗಿಯೇ ಕಲೆಕ್ಷನ್ ಕಡಿಮೆಯಾಗಿರುವ ಸಾಧ್ಯತೆ ಇದೆ. ಅದಾ ಶರ್ಮ ಬಿಟ್ಟರೆ ಬೇರೆ ಸ್ಟಾರ್ ನಟರಿಲ್ಲ. ಅದಾ ಶರ್ಮ ಕೂಡಾ ಸ್ಟಾರ್ ನಟಿಯೇನಲ್ಲ. ಕೇವಲ ಕಥೆ ಹಾಗೂ ವಿವಾದಗಳಿಂದಾಗಿಯೇ ಗೊತ್ತಾಗಿರುವ ಚಿತ್ರ ಕೇರಳ ಸ್ಟೋರಿ. ಚಿತ್ರ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. 

  • ಕೇರಳ ಸ್ಟೋರಿಯ 10 ದೃಶ್ಯಗಳಿಗೆ ಕತ್ತರಿ : ಚಿತ್ರ ನಿಷೇಧಕ್ಕೆ ಒಪ್ಪದ ಸುಪ್ರೀಂಕೋರ್ಟ್

    ಕೇರಳ ಸ್ಟೋರಿಯ 10 ದೃಶ್ಯಗಳಿಗೆ ಕತ್ತರಿ : ಚಿತ್ರ ನಿಷೇಧಕ್ಕೆ ಒಪ್ಪದ ಸುಪ್ರೀಂಕೋರ್ಟ್

    ಕೇರಳ ಸ್ಟೋರಿ. ಕಾಶ್ಮೀರ್ ಫೈಲ್ಸ್ ನಂತರ ಅಂತಹುದೇ ವಿವಾದಾತ್ಮಕ ಕಥೆ ಹೊತ್ತು ಬಂದಿರುವ ಚಿತ್ರ. ಕೇರಳದಲ್ಲಿ ಹಲವು ಯುವತಿಯರು ಬಲವಂತವಾಗಿ, ಸಂಚಿನಿಂದ ಮತಾಂತರವಾಗಿ, ಐಸಿಸ್, ಅಲ್‍ಕೈದಾ ಸೇರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸತ್ಯಘಟನೆಗಳನ್ನಾಧರಿಸಿ ತೆಗೆದಿರುವ ಸಿನಿಮಾ. ಈ ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.

    ಸುದಿಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ ಸಿಕ್ಕಿದೆ. ಕೇವಲ ವಯಸ್ಕರಷ್ಟೆ ಸಿನಿಮಾ ನೋಡಬಹುದಾಗಿದೆ. ಸಿನಿಮಾದಲ್ಲಿದ್ದ ಬರೋಬ್ಬರಿ 10 ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿಸಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನದ ದೃಶ್ಯಗಳು ಸಹ ಇದರಲ್ಲಿ ಸೇರಿವೆ ಹಾಗೂ ಸಚಿವರೊಬ್ಬರು ಕೇರಳವನ್ನು ಮುಸ್ಲಿಂ ಬಾಹುಳ್ಯದ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಸಂಭಾಷಣೆಗಳನ್ನು ಸಹ ತೆಗೆದು ಹಾಕಲಾಗಿದೆ.

    ಇವುಗಳ ಜೊತೆಗೆ ಹಿಂದು ದೇವರುಗಳ ಬಗ್ಗೆ ಮುಸ್ಲಿಂ ಪಾತ್ರಗಳ ಕೈಯಲ್ಲಿ ಹೇಳಿಸಿದ್ದ ಸಂಭಾಷಣೆಗಳು, ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆರೋಪದ ಮಾದರಿಯ ಸಂಭಾಷಣೆಗಳುಳ್ಳ ದೃಶ್ಯಗಳನ್ನು ಸಹ ಸೆನ್ಸಾರ್ ಮಂಡಳಿಯು ಡಿಲೀಟ್ ಮಾಡಿಸಿದೆ.

    ಈ ನಡುವೆ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಿರ್ದೇಶಕ ಸುದಿಪ್ತೊ ಸೇನ್

    ನೀವು ಸಾಕ್ಷರತೆಯಲ್ಲಿ ನಂಬರ್ 1, ಶಿಕ್ಷಣವು ಸಹಿಷ್ಣುತೆಯನ್ನು ಕಲಿಸುತ್ತದೆ. ದಯವಿಟ್ಟು ದಿ ಕೇರಳ ಸ್ಟೋರಿ ಸಿನಿಮಾ ನೋಡಿ. ನಿಮಗೆ ಇಷ್ಟವಾಗದೇ ಇದ್ದರೆ ಆ ನಂತರ ನಾವು ಚರ್ಚಿಸೋಣ. ಈ ಸಿನಿಮಾಕ್ಕಾಗಿ ನಾವು ಏಳು ವರ್ಷಗಳ ಕಾಲ ಕೇರಳದಲ್ಲಿ ಕೆಲಸ ಮಾಡಿದ್ದೇವೆ. ನಾವೂ ಸಹ ನಿಮ್ಮವರೇ, ನಾವೂ ಸಹ ಭಾರತೀಯರೆ ಎಂದಿದ್ದಾರೆ.

    ಸಿನಿಮಾದ ಟ್ರೈಲರ್ನಲ್ಲಿ ಕೇರಳದ 32,000 ಯುವತಿಯರನ್ನು ಮತಾಂತರ ಮಾಡಲಾಗಿದೆ ಎಂಬ ಸಂಭಾಷಣೆ ಹಾಗೂ ಟೆಕ್ಸ್ಟ್ ಇದೆ. ಇದರ ಬಗ್ಗೆ ತೀವ್ರ ತಕರಾರು ಎದ್ದಿದ್ದು ಮುಸ್ಲಿಂ ಯೂಥ್ ಲೀಗ್ ಸಂಘಟನೆಯು, ಕೇರಳದ 32,000 ಯುವತಿಯರು ಐಎಸ್ ಸೇರಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ 1 ಕೋಟಿ ಬಹುಮಾನ ನೀಡುತ್ತೇವೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಗೆ ಸವಾಲು ಎಸೆದಿದೆ.

    ಇದಕ್ಕೆ ಪ್ರತಿಯಾಗಿ ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿಲ್ಲ. ಅವರನ್ನು ಉಗ್ರರ ಸಂಘಟನೆಗೆ ಸೇರಿಸಿಲ್ಲ ಎನ್ನುವುದು ಸುಳ್ಳು ಎಂದು ಸಾಬೀತು ಮಾಡಿದರೆ 10 ಕೋಟಿ ನೀಡುತ್ತೇವೆ ಎಂದು ಆರ್.ಎಸ್.ಎಸ್.ಮುಖಂಡರು ಚಾಲೆಂಜ್ ಹಾಕಿದ್ದಾರೆ. ಈ ಸಿನಿಮಾ ಮೇ 5ರಂದು ಹಿಂದಿ, ಮಲಯಾಳಂ, ತೆಲುಗು, ತಮಿಳಿನಲ್ಲಿ ಬರುತ್ತಿದೆ. ಆದರೆ ಕನ್ನಡದಲ್ಲಿ ಈ ಚಿತ್ರ ಡಬ್ ಆಗಿಲ್ಲ.

    ಮತ್ತೊಂದೆಡೆ ಚಿತ್ರದ ಬಿಡುಗಡೆಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟಿನಲ್ಲಿ ಕೆಲವು ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಈಗಾಗಲೇ ಚಿತ್ರ ಸೆನ್ಸಾರ್ ಆಗಿದೆ. ನೀವು ಬ್ಯಾನ್ ಮಾಡುವ ಬಗ್ಗೆ ಏನೇ ಇದ್ದರೂ ಮೊದಲು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಎಂದು ಹೇಳಿರುವ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದೆ. ಹಾಗಂತ ಕೇರಳ ಸ್ಟೋರಿ ಬಿಡುಗಡೆಗೆ ಹಾದಿ ಮುಕ್ತವಾಗಿಯೇನೂ ಇಲ್ಲ. ಕೇರಳ ಹೈಕೋರ್ಟಿನ ಮೊರೆ ಹೋಗಲು ಅವಕಾಶವೂ ಇದೆ.