` sumalatha ambareesh, - chitraloka.com | Kannada Movie News, Reviews | Image

sumalatha ambareesh,

  • ದುರ್ಯೋಧನ, ಭೀಷ್ಮನನ್ನು ನೋಡಲು ಕಾಯುತ್ತಿದ್ದೇನೆ - ಸುಮಲತಾ

    sumalatha eagerly waiting for muniratna;s kurukshetra

    ಮುನಿರತ್ನ ಕುರುಕ್ಷೇತ್ರ ಬಿಡುಗಡೆಗೆ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುವಂತೆಯೇ ಸುಮಲತಾ ಅಂಬರೀಷ್ ವಿಶೇಷವಾಗಿ ಕಾಯುತ್ತಿದ್ದಾರೆ. ಅವರ ಕಾಯುವಿಕೆಗೆ ವಿಶೇಷ ಅರ್ಥವೂ ಇದೆ. ಕುರುಕ್ಷೇತ್ರ ಚಿತ್ರ ರೆಬಲ್ ಸ್ಟಾರ್ ಅಂಬರೀಷ್ ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕೂ ಮೊದಲೇ ಶೂಟಿಂಗ್ ಆಗಿದ್ದರೂ, ಈಗ ರಿಲೀಸ್ ಆಗುತ್ತಿದೆ. ಅಂಬಿ, ಭೀಷ್ಮ ಪಿತಾಮಹನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನು ಸುಮಲತಾ ಅವರ ಪ್ರೀತಿಯ ಪುತ್ರ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ. ಇಡೀ ಚಿತ್ರವನ್ನು ದುರ್ಯೋಧನನ್ನು ಕೇಂದ್ರೀಕರಿಸಿ ಮಾಡಲಾಗಿದೆ. ಹೀಗಾಗಿಯೇ ಸುಮಲತಾ ಅಂಬರೀಷ್ `ಭೀಷ್ಮ, ದುರ್ಯೋಧನರನ್ನು ನೋಡಲು ನಾನು ಕಾತರುಳಾಗಿದ್ದೇನೆ' ಎಂದಿದ್ದಾರೆ. ಕುರುಕ್ಷೇತ್ರ ಆಗಸ್ಟ್ 2ರಂದು ರಿಲೀಸ್ ಆಗುತ್ತಿದೆ.

  • ನಿಮ್ಮ ಪ್ರೀತಿಗೆ ನಾ ಚಿರಋಣಿ - ಸುಮಲತಾ ಅಂಬರೀಷ್

    sumalatha thanks everyone for their love and support

    ಅಂಬರೀಷ್ ನಿಧನರಾದ ಕ್ಷಣದಿಂದ, ರಾಜ್ಯದ ಜನತೆ ತೋರಿಸಿದ ಪ್ರೀತಿಗೆ ಸುಮಲತಾ ಭಾವುಕರಾಗಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ಹಣೆಗೆ ಮಂಡ್ಯದ ಮಣ್ಣನ್ನಿಟ್ಟು ಬೀಳ್ಕೊಡುಗೆ ತೆಗೆದುಕೊಂಡಿದ್ದ ಸುಮಲತಾ, ಅಂಬಿಗೆ ನಮನ ಕಾರ್ಯಕ್ರಮದಲ್ಲಿ ರಾಜ್ಯದ ಸಿಎಂ, ಪೊಲೀಸರು ಹಾಗೂ ಜನತೆಗೆ ಧನ್ಯವಾದ ಅರ್ಪಿಸಿದ್ದರು. ಈಗ ತಮ್ಮ ಮನಸ್ಸಿನ ಭಾವನೆಯನ್ನೆಲ್ಲ ಅಕ್ಷರ ರೂಪಕ್ಕಿಳಿಸಿದ್ದಾರೆ. ತಮ್ಮ ಫೇಸ್‍ಬುಕ್, ಟ್ವಿಟರ್ ಖಾತೆಗಳಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

    ಈ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ನಾನು ಈ ಮೂಲಕ ಧನ್ಯವಾದವನ್ನು ತಿಳಿಸುತ್ತೇನೆ. ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು. ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ.

    ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವರಿಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ. ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ ಎಸ್ ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ.

    ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಿಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ. ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ.

    ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ. ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು.

    ನಂತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಚಿತ್ರರಂಗದ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ ಸುಮಲತಾ. ಅಷ್ಟೆ ಅಲ್ಲ, ಕೆಲವರ ಹೆಸರು ಮರೆತಿದ್ದರೆ, ಕ್ಷಮೆಯಿರಲಿ ಎಂದು ಕೂಡ ಕೇಳಿಕೊಂಡಿದ್ದಾರೆ.

  • ಪಾಸಿಟಿವ್ ರಿಪೋರ್ಟ್ ನಂತರ ಸುಮಲತಾ ಮಾಡಿದ ಮನವಿ ಇದು..!

    sumalatha ambareesh requests fans

    ಹಿರಿಯ ನಟಿ, ಸಂಸದೆ ಸುಮಲತಾ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಗಂಟಲು ನೋವು ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಇರುವುದು ಕಂಡು ಬಂದಿದೆ. ನಿರಂತರ ಕೆಲಸಗಳಿದ್ದವು. ಕೋವಿಡ್ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದ ಕಾರಣ, ಪರೀಕ್ಷೆಗೆ ಒಳಗಾದೆ. ಪಾಸಿಟಿವ್ ಬಂದಿದೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಎಂದು ಸ್ವತಃ ಮಾಹಿತಿ ನೀಡಿದ್ದಾರೆ ಸುಮಲತಾ ಅಂಬರೀಷ್.

    ತಮ್ಮ ಸಂಪರ್ಕಕ್ಕೆ ಬಂದಿದ್ದ ಎಲ್ಲರ ವಿವರಗಳನ್ನೂ ವೈದ್ಯರಿಗೆ ನೀಡಿದ್ದಾರೆ ಸುಮಲತಾ. ಕೆಲವರ ಹೆಸರು ಬಿಟ್ಟು ಹೋಗಿರಬಹುದು. ನನ್ನ ಸಂಪರ್ಕಕ್ಕೆ ಬಂದವರಲ್ಲಿ ಯಾರಿಗಾದರೂ ಚೈನೀಸ್ ವೈರಸ್ ಕೊರೊನಾ ಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ ಸುಮಲತಾ.

  • ಮಕ್ಕಳ ಬಗ್ಗೆ ಸುಳ್ಳುಸುಳ್ಳೇ ಬರೆಯಬೇಡಿ - ಅಂಬರೀಷ್

    ambareesh son abhi

    ಈ ಅಂಬರೀಷ್ ಬಗ್ಗೆ ಏನ್ ಬೇಕಾದರೂ ಬರೆದುಕೊಳ್ಳಿ, ಹೇಳಿಕೊಳ್ಳಿ..ಜನಕ್ಕೆ ಅಂಬರೀಷ್ ಏನಂತ ಗೊತ್ತು. ಆದರೆ, ಸಣ್ಣ ಸಣ್ಣ ಹುಡುಗರ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲ ಬರೆಯಬೇಡಿ. ಇದು ಅಂಬರೀಷ್ ಅವರ ಮಾತು ಮತ್ತು ನೋವು.

    ಅವರ ನೋವಿಗೆ ಕಾರಣವಿದೆ. ಇತ್ತೀಚೆಗೆ ಆದಿಕೇಶವಲು ಅವರ ಮೊಮ್ಮಗ ಗೀತಾ ವಿಷ್ಣು, ಕುಡಿದ ಅಮಲಿನಲ್ಲಿ ಅಪಘಾತ ಮಾಡಿದ್ದ. ಅಷ್ಟೇ ಆಗಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಆತನ ಕಾರ್‍ನಲ್ಲಿ ಸ್ಯಾಂಡಲ್‍ವುಡ್‍ನ ಒಬ್ಬ ನಟಿ ಹಾಗೂ ಇಬ್ಬರು ಸ್ಟಾರ್‍ನಟರು ಇದ್ದರಂತೆ ಎಂಬ ಸುದ್ದಿ ಹಬ್ಬಿತು. ಅದಕ್ಕೆ ತಕ್ಕಂತೆ ಆತನ ಕಾರ್‍ನಲ್ಲಿ ಗಾಂಜಾ ಕೂಡಾ ಸಿಕ್ಕಿತು.

    ಸಾರ್ವಜನಿಕ ಸುದ್ದಿ ವಾಹಿನಿಗಳಂತೂ ನೇರವಾಗಿ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಹೆಸರನ್ನು ಬ್ರೇಕಿಂಗ್ ನ್ಯೂಸ್‍ನಲ್ಲಿ ಬಿಟ್ಟವು. ವಿಚಾರವೇನೆಂದರೆ, ಪ್ರಜ್ವಲ್ ಆಗಲೀ, ದಿಗಂತ್ ಆಗಲೀ ಇಬ್ಬರೂ ಬೆಂಗಳೂರಿನಲ್ಲೇ ಇರಲಿಲ್ಲ. ಇಬ್ಬರೂ ನಟರು ಆ ಸುದ್ದಿ ವಾಹಿನಿಗೆ ಉಪ್ಪಿನಕಾಯಿ ಹಾಕಿದರು. ನಂತರ ತೇಲಿ ಬಂದ ಹೆಸರೇ ಅಭಿಷೇಕ್ ಅಂಬರೀಷ್ ಅವರದ್ದು.

    ಅಂಬರೀಷ್ ಮತ್ತು ಸುಮಲತಾ ಬೇಸರಗೊಂಡಿರುವುದು ಇದೇ ಕಾರಣಕ್ಕೆ. ವಾಸ್ತವ ಏನೆಂದರೆ, ಅಭಿಷೇಕ್ ಕಳೆದ ತಿಂಗಳಿಂದ ಇಂಡಿಯಾದಲ್ಲೇ ಇಲ್ಲ. ಮಾರ್ಷಲ್ ಆಟ್ರ್ಸ್ ಕಲಿಯುತ್ತಿರುವ ಅಭಿಷೇಕ್, ಥೈಲ್ಯಾಂಡ್‍ನಲ್ಲೇ  ಇದ್ದಾರೆ. ಅವರ ಜೊತೆ ತೆಲುಗು ಚಿತ್ರರಂಗದ ಮಂಚು ಮನೋಜ್ ಕೂಡಾ ಇದ್ದಾರೆ.

    ಹೀಗೆ ದೇಶದಲ್ಲೇ ಇಲ್ಲದ ವ್ಯಕ್ತಿ, ಅಪಘಾತ ಸ್ಥಳಕ್ಕೆ ಬರುವುದಾದರೂ ಹೇಗೆ..? ಕಾಮನ್‍ಸೆನ್ಸ್ ಬೇಡವಾ..? ಕನಿಷ್ಠ ಸುದ್ದಿ ಹಾಕುವ ಮುನ್ನ ಒಂದು ಫೋನ್ ಮಾಡಿ ಸ್ಪಷ್ಟೀಕರಣ ಕೇಳೊಕಾಗಲ್ಲವಾ..? ಆಗ ಸಮಸ್ಯೆಗಳೇ ಇರೋದಿಲ್ಲವಲ್ಲಾ..? ಇದು ಅಂಬರೀಷ್ ಮತ್ತು ಸುಮಲತಾ ಅಂಬರೀಷ್ ಕೇಳುತ್ತಿರುವ ಪ್ರಶ್ನೆ. 

    ಸುದ್ದಿ ಎಂದ ಮೇಲೆ ಇಂಥವು ಬರ್ತವೆ. ಹೋಗ್ತವೆ. ಆದರೆ, ಒಬ್ಬ ಸೆಲಬ್ರಿಟಿಯ ಬಗ್ಗೆ ಸುದ್ದಿ ಬಂದಾಗ, ಫೋನ್ ಮಾಡಿ, ವಿವರ ಕೇಳೋಕೂ ಆಗಲ್ಲ ಎಂದರೆ ಹೇಗೆ..? ಅಂಬರೀಷ್ ಕೇಳೋದ್ರಲ್ಲಿ ಅರ್ಥವಿದೆ.

  • ಮಗ ಫೈರ್.. ಅಮ್ಮ ಫೈರ್‍ಬ್ರಾಂಡ್

    sumalatha is a fire brand mother in thayige thakka maga

    ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸುಮಲತಾ ಮತ್ತೊಮ್ಮೆ ಅಜಯ್ ರಾವ್‍ಗೆ ಅಮ್ಮನಾಗಿದ್ದಾರೆ. ಸುಮಲತಾ ತಾಯಿಗೆ ತಕ್ಕ ಮಗ ಚಿತ್ರದ ಅಮ್ಮನ ಪಾತ್ರ ಒಪ್ಪಿಕೊಳ್ಳೋಕೆ ಕಾರಣಗಳಿವೆ. ಚಿತ್ರದಲ್ಲಿ ಅವರದ್ದು ಮಾಮೂಲಿಯಾಗಿ ಕಣ್ಣೀರಿಡುವ, ಕಷ್ಟಪಡುವ ತಾಯಿಯ ಪಾತ್ರ ಅಲ್ಲ. ಮಗನನ್ನು ಬೆಂಕಿಯಾಗಿ ಬೆಳೆಸುವ ರೆಬಲ್ ಅಮ್ಮನ ಪಾತ್ರ.

    `ನ್ಯಾಯಕ್ಕಾಗಿ ಹೋರಾಡುವ ಮಗನಿಗೆ ಫೈಟ್ ಮಾಡು ಎನ್ನುವ, ಮಗನ ಕೋಪವನ್ನೂ ಸಮರ್ಥಿಸಿಕೊಳ್ಳುವ ಸ್ಟ್ರಾಂಗ್ ಅಮ್ಮನ ಪಾತ್ರ ನನ್ನದು. ಚಿತ್ರದ ಟೈಟಲ್ ರೋಲ್. ಈ ಕಾರಣಕ್ಕೇ ಒಪ್ಪಿಕೊಂಡೆ' ಅನ್ನೋದು ಸುಮಲತಾ ಮಾತು.

    `ಚಿತ್ರ ಶುರು ಮಾಡಿದಾಗ ನನಗೆ ಸುಮಲತಾ ಅವರನ್ನು ಬಿಟ್ಟು ಬೇರೊಬ್ಬರು ಕಲ್ಪನೆಗೂ ಬರಲಿಲ್ಲ. ಡೈನಮಿಕ್ ತಾಯಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿಯೊಬ್ಬ ಮಗನೂ ನನಗೂ ಇಂಥ ಅಮ್ಮ ಇರಬೇಕು ಎನಿಸಬೇಕು. ಹಾಗಿದ್ದಾರೆ ಸುಮಲತಾ' ಇದು ನಿರ್ದೇಶಕ ಶಶಾಂಕ್ ಸುಮಲತಾಗೆ ಕೊಟ್ಟಿರುವ ಮಾತಿನ ಕಾಣಿಕೆ. 

    ಅಜಯ್ ರಾವ್, ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ ಬರುತ್ತಿದೆ.

  • ಮಂಡ್ಯ ಸ್ಟಾರ್ ವಾರ್ - ಸುಮಲತಾಗೆ ರೈತ ಸಂಘ ಬೆಂಬಲ

    sumalatha gets massive support from fanfare

    ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ ಮುಖಾಮುಖಿ. ಸುಮಲತಾಗೆ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್ ಬೆಂಬಲ, ನಿಖಿಲ್ ಬೆನ್ನಹಿಂದೆ ಕುಮಾರಸ್ವಾಮಿ.. ಹೀಗೆ ಮಂಡ್ಯ ಸ್ಟಾರ್ ವಾರ್ ಭಲೇ ಜೋರು. ಸುಮಲತಾ ನಾಮಪತ್ರ ಸಲ್ಲಿಸಿದ್ದಾರೆ. ಬಹಿರಂಗ ಸಮಾವೇಶವನ್ನೂ ಮಾಡಿದ್ದಾರೆ. ನೆರೆದಿದ್ದ ಅಪಾರ ಜನಸ್ತೋಮದ ಎದುರು ಪ್ರೀತಿಯ ಮತ ಕೇಳಿದ್ದಾರೆ. ವಿಶೇಷವೆಂದರೆ ಸುಮಲತಾಗೆ ರೈತ ಸಂಘ ಬೆಂಬಲ ನೀಡಿರುವುದು. ವೇದಿಕೆಯಲ್ಲಿ ಸುಮಲತಾಗೆ ಹಸಿರು ಶಾಲು ಹಾಕುವ ಮೂಲಕ, ರೈತ ಸಂಘ ತನ್ನ ಬೆಂಬಲ ಸುಮಲತಾಗೆ ಎಂದಿದೆ. ಅಷ್ಟೇ ಅಲ್ಲದೆ, ಸುಮಲತಾ ಭಾಗವಹಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸಿವೆ.

    ಸುಮಲತಾ : ನನಗೆ ಬೇರೆ ಬೇರೆ ಕ್ಷೇತ್ರದಿಂದ ಆಫರ್‍ಗಳಿದ್ದವು. ಎಂಎಲ್‍ಸಿ ಆಗುವ ಅವಕಾಶವೂ ಇತ್ತು. ಅಧಿಕಾರದ ಆಸೆಯಿದ್ದರೆ, ಅದನ್ನು ಒಪ್ಪಿಕೊಂಡು ಇರಬಹುದಿತ್ತು. ಆದರೆ ನನಗೆ ಮಂಡ್ಯದ ಜನರ ಸೇವೆ ಮಾಡುವ ಕನಸಿದೆ. ಅವರ ಋಣ ನನ್ನ ಮೇಲಿದೆ. ಅವರು ನನ್ನ ಮಾತುಗಳನ್ನು ಕೇಳದಂತೆ ಕೇಬಲ್ ಕಟ್ ಮಾಡಬಹುದು. ನಮ್ಮ ಪ್ರೀತಿಯ ಕೊಂಡಿಯನ್ನು ಕಟ್ ಮಾಡುವುದು ಸಾಧ್ಯವಿಲ್ಲ.

    ನಾನು ಎಲ್ಲಿಂದಲೋ ಬಂದವರು ಎನ್ನುತ್ತಾರೆ. ನಾನು 40 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. 27 ವರ್ಷ ಅಂಬರೀಷ್ ಪತ್ನಿ. ನಾನು ಹುಚ್ಚೇಗೌಡರ ಸೊಸೆ. ಈ ಮಣ್ಣಿನ ಸೊಸೆ. ಅಭಿಷೇಕ್ ತಾಯಿ. ಇದಕ್ಕಿಂತ ಸಾಕ್ಷಿ ಬೇಕಾ..?

    ಮಂಡ್ಯದ ಜನ ಮುಗ್ಧರು. ಆದರೆ, ಮುಠ್ಠಾಳರಲ್ಲ. ಮಂಡ್ಯದ ಜನ ಸ್ವಾಭಿಮಾನವನ್ನು ತೋರಿಸಬೇಕಾದ ಕಾಲವಿದು. ಸ್ವಾಭಿಮಾನದಿಂದ ಮತ ಚಲಾಯಿಸಿ. ನಾನು ನಿಮ್ಮಲ್ಲಿ ಬೇಡುವುದು ಪ್ರೀತಿಯನ್ನು ಮಾತ್ರ.

     

    ದರ್ಶನ್ : ಇಂದಿನಿಂದ ನಮ್ಮ ಪರೇಡ್ ಶುರು. ಅಮ್ಮನನ್ನು ಗೆಲ್ಲಿಸುವುದೇ ನಮ್ಮ ಜವಾಬ್ದಾರಿ. ಇವತ್ತು ಯಾರೇ ಬೈಯ್ಯಲಿ.. ಏನೇ ಅನ್ನಲಿ.. ನಮಗೆ ಎಷ್ಟೇ ಬೇಸರವಾಗಲಿ.. ನಾವು ಕೋಪ ಮಾಡಿಕೊಳ್ಳಲ್ಲ. ಮೇ 23ನೇ ತಾರೀಕು ನಮ್ಮನ್ನು ಆಡಿಕೊಂಡವರಿಗೆ, ನಮ್ಮನ್ನು ಟೀಕೆ ಮಾಡುತ್ತಿರುವವರಿಗೆ ಪಡಾಪಡಾ ಎಂಬ ಉತ್ತರ ಸಿಗುವಂತೆ ಮಾಡಿ.

    ಯಶ್ : ನಾವೇನು ಪಾಕಿಸ್ತಾನದಿಂದ ಬಂದಿಲ್ಲ. ಇಲ್ಲೇ.. ಪಕ್ಕದ ಮೈಸೂರಿಂದ ಬಂದಿದ್ದೇವೆ. ನಾವೂ ಮಂಡ್ಯದ ಅಲೆಮನೆ ಬೆಲ್ಲ ತಿಂದವರೇ. ಇಲ್ಲಿಯ ಕೆರೆಗಳಲ್ಲಿ ಈಜು ಹೊಡೆದವರೇ. ಸುಮಲತಾ ಅಕ್ಕನ ಪರ ಮತ ಕೇಳುವುದು ತಪ್ಪು ಎನ್ನುವುದಾದರೆ, ನಾವು ಪದೇ ಪದೇ ಆ ತಪ್ಪು ಮಾಡುತ್ತೇವೆ. ದಯವಿಟ್ಟು 

  • ಮೇ END.. ಅಂಬರೀಷ್ ಫ್ಯಾಮಿಲಿ ವಾರ

    may month will be ambareesh family week

    ಮೇ 29, ಅಂಬರೀಷ್ ಹುಟ್ಟುಹಬ್ಬ. ಆ ದಿನ ಅಂಬರೀಷ್‍ರನ್ನು ಸ್ಟಾರ್ ಮಾಡಿದ ಸಿನಿಮಾ ಅಂತ ಮರುಬಿಡುಗಡೆ.

    ಮೇ 24, ಸುಮಲತಾ ಅಂಬರೀಷ್ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಬಿಡುಗಡೆ. 

    ಮೇ 31, ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಬಿಡುಗಡೆ. ಅಫ್‍ಕೋರ್ಸ್, ಅದೇ ಚಿತ್ರದಲ್ಲಿ ದರ್ಶನ್ ಕೂಡಾ ಅತಿಥಿ ನಟ. ತಮ್ಮನಿಗಾಗಿ.

    ಅಂಬರೀಷ್ ಇಲ್ಲದೇ ಆಚರಿಸಲಾಗುತ್ತಿರುವ ಮೊದಲ ಹುಟ್ಟುಹಬ್ಬಕ್ಕೆ ಅವರ ಇಡೀ ಕುಟುಂಬವೇ ತೆರೆಯ ಮೇಲೆ ರಾರಾಜಿಸಲಿದೆ. ಹೀಗಾಗಿ ಮೇ ತಿಂಗಳ ಕೊನೆಯ ವಾರವನ್ನು ಅಂಬರೀಷ್ ಫ್ಯಾಮಿಲಿ ವೀಕ್ ಎನ್ನಬಹುದು.

  • ಯಂಗ್ ರೆಬಲ್‍ಗೆ ಕಿಚ್ಚನ ಸ್ವಾಗತ.. ಸುಮಲತಾ ಸಂತಸ

    sudeep welcomes young rebel star

    ಜ್ಯೂನಿಯರ್ ಅಂಬರೀಷ್ ಅಭಿಷೇಕ್ ಅಭಿನಯದ ಮೊದಲ ಸಿನಿಮಾದ ಟೀಸರ್ ಫೆಬ್ರವರಿ 14ಕ್ಕೆ ಬರುತ್ತಿದೆ. ಟೀಸರ್‍ಗೆ ಮುನ್ನ ಚಿತ್ರದ ಫಸ್ಟ್‍ಲುಕ್ ಹೊರಬಿಟ್ಟಿದೆ ಅಮರ್ ಟೀಂ. ಫೆಬ್ರವರಿ 14ರಂದು ಟೀಸರ್ ಬರುತ್ತಿದೆ ಎಂದು ಬಿಟ್ಟಿರುವ ಪೋಸ್ಟರ್‍ಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಸ್ವಾಗತ ಕೋರಿದ್ದಾರೆ.

    ನಾಗಶೇಖರ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕ. ತಾನ್ಯಾ ಹೋಪ್ ನಾಯಕಿ. 

    ಕಿಚ್ಚನ ಸ್ವಾಗತಕ್ಕೆ ಖುಷಿಗೊಂಡಿರುವುದು ಸುಮಲತಾ. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಸದಾ ಅಭಿ ಹಾಗೂ ನನ್ನನ್ನು ಉತ್ಸಾಹಿಗಳನ್ನಾಗಿಸುತ್ತೆ. ಬಾಂಧವ್ಯ ಹೀಗೆಯೇ ಮುಂದುವರಿಯಲಿ ಎಂದಿದ್ದಾರೆ ಸುಮಲತಾ.

    ಕಿಚ್ಚ ಅಷ್ಟೇ ಅಲ್ಲ, ಚಿತ್ರರಂಗದ ಹಲವು ಗಣ್ಯರು ಅಭಿಷೇಕ್‍ಗೆ ಸ್ವಾಗತ ಕೋರಿದ್ದಾರೆ.

  • ರಾಜಕೀಯಕ್ಕಾಗಿ ಮಂಡ್ಯ ಅಲ್ಲ. ಮಂಡ್ಯಕ್ಕಾಗಿ ರಾಜಕೀಯಕ್ಕೆ - ಸುಮಲತಾ

    sumalatha amabareesh talks on elections

    ಸುಮಲತಾ ಅಂಬರೀಷ್ ರಾಜಕೀಯ ಪ್ರವೇಶಿಸುವ ಬಗ್ಗೆ ದೃಢ ನಿರ್ಧಾರ ಮಾಡಿ ಆಗಿದೆ. ಸುಮಲತಾ ಮಂಡ್ಯದಿಂದ ಸ್ಪರ್ಧಿಸೋದು ಪಕ್ಕಾ. ಟಿಕೆಟ್ ಸಿಕ್ಕರೆ ಕಾಂಗ್ರೆಸ್‍ನಿಂದ ಅಥವಾ ಟಿಕೆಟ್ ಸಿಕ್ಕದೇ ಹೋದರೆ ಪಕ್ಷೇತರರಾಗಿ ಸ್ಪರ್ಧಿಸುವ ಸೂಚನೆ ಕೊಟ್ಟಿರುವ ಸುಮಲತಾ, ಮಂಡ್ಯಕ್ಕೆ ಭೇಟಿ ನೀಡಿದ್ದರು. 

    ಪತಿಯ ಹುಟ್ಟೂರು ಚಿಕ್ಕರಸಿನಕೆರೆಯಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಸುಮಲತಾ, ನಂತರ ಹುತಾತ್ಮ ಯೋಧ ಗುರು ಮನೆಗೆ ಭೇಟಿ ಕೊಟ್ಟರು. ಗುರು ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ತಾವು ನೀಡಲು ನಿರ್ಧರಿಸಿರುವ ಅರ್ಧ ಎಕರೆ ಜಮೀನಿನ ಅಧಿಕಾರ ಹಸ್ತಾಂತರದ ಕುರಿತು ಮಾತುಕತೆ ನಡೆಸಿದ್ರು. 

    ಅದಾದ ಮೇಲೆ ಕಾರ್ಯಕರ್ತರು, ಅಂಬಿ ಅಭಿಮಾನಿಗಳೊಂದಿಗೆ ಮಾತನಾಡಿದ ಸುಮಲತಾ, ನಾನು ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆಯೇ ಹೊರತು, ರಾಜಕೀಯಕ್ಕಾಗಿ ಮಂಡ್ಯಕ್ಕೆ ಬರುತ್ತಿಲ್ಲ. ನನಗೆ ರಾಜಕೀಯಕ್ಕಿಂತಲೂ ಮಂಡ್ಯದ ಜನ ಮುಖ್ಯ ಎಂದರು.

  • ರೇವಣ್ಣ ಮಾತಿಗೆ ಸುಮಲತಾ ಕೊಟ್ಟ ಉತ್ತರ 

    sumalatha's reaction to hd revanna's statement

    sಸುಮಲತಾ ಅವರು ಗಂಡ ಸತ್ತ ಒಂದು  ತಿಂಗಳಲ್ಲಿ ರಾಜಕೀಯಕ್ಕೆ ಬಂದಿದ್ದಾರೆ ಎಂದರೆ ಏನರ್ಥ..? ಎಂದಿರುವ ರೇವಣ್ಣ, ನಂತರ ಕ್ಷಮೆಯನ್ನೂ ಕೇಳಿಲ್ಲ.  ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಎಂದಿರೋ ರೇವಣ್ಣ, ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಎಂದು ಉತ್ತರ ಕೊಟ್ಟಿದ್ದಾರೆ.

    ರೇವಣ್ಣನವರ ಮಾತುಗಳಿಗೆ ಸುಮಲತಾ ಕೊಟ್ಟರೋ ಪ್ರತಿಕ್ರಿಯೆ ಇಷ್ಟೆ. ನಾನು ರೇವಣ್ಣನವರ ಮಾತುಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ. ನನ್ನ ಬೆಂಬಲಿಗರಿಗೂ ಅಷ್ಟೆ, ಅವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಹೇಳಿದ್ದೇನೆ. ನಿಖಿಲ್ ಕೂಡಾ ನನ್ನ ಮಗ ಅಭಿಯಿದ್ದ ಹಾಗೆ. ಆತನ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ನನಗೆ ನೋವಾಗುತ್ತೆ ಎಂದು ಉತ್ತರ ಕೊಟ್ಟಿದ್ದಾರೆ ಸುಮಲತಾ.

  • ಸುದೀಪ್‍ಗೆ ಸುಮಲತಾ ಥ್ಯಾಂಕ್ಯೂ ಎಂದಾಗ..

    sumalatha praises sudeep

    ಅಂಬಿ ಮಾಮಂಗೆ ಆರೋಗ್ಯ ಆಗಾಗ್ಗೆ ಕೈ ಕೊಡುತ್ತಲೇ ಇತ್ತು. ಸಹಕರಿಸ್ತಾ ಇರಲಿಲ್ಲ. ಆದರೆ, ಸಿನಿಮಾಗೆ ಎಲ್ಲಿಯೂ ತೊಂದರೆ ಮಾಡಲಿಲ್ಲ. ಬದಲಿಗೆ ಇಡೀ ಸಿನಿಮಾ ತಂಡಕ್ಕೆ ಅವರೇ ಹುರುಪು ತುಂಬಿದರು. ಶಕ್ತಿ ತುಂಬಿದರು. ನಿಮ್ಮೊಂದಿಗೆ ಸಿನಿಮಾ ಮಾಡುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಯೂ ಮಾಮಾ..

    ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ನಿರ್ಮಾಪಕರೂ ಆಗಿರುವ ಸುದೀಪ್ ಇಂಥಾದ್ದೊಂದು ಟ್ವೀಟ್ ಮಾಡಿದ್ರು. ಎಷ್ಟೆಂದರೂ 14 ವರ್ಷಗಳ ನಂತರ ಅಂಬರೀಷ್ ಸೋಲೋ ಹೀರೋ ಆಗಿ ನಟಿಸಿರುವ ಸಿನಿಮಾ ಇದು. ಗುರುದತ್ ಗಾಣಿಗ ಅನ್ನೋ ಹೊಸ ಹುಡುಗ ನಿರ್ದೇಶಿಸಿರುವ ಸಿನಿಮಾ.

    ಅಂಬಿಯ ಈ ಟ್ವೀಟ್ ನೋಡುತ್ತಿದ್ದಂತೆಯೇ ಸುಮಲತಾ ಅವರ ರಿಯಾಕ್ಷನ್ ಹೀಗಿತ್ತು. ಅಂಬಿಯನ್ನು ಅಂಥಾದ್ದೊಂದು ಪಾತ್ರ ಮಾಡಲು ಪ್ರೇರೇಪಿಸಿದ್ದಕ್ಕೆ ಥ್ಯಾಂಕ್ಯೂ. ಅಂಬಿಯ ಇದುವರೆಗಿನ ಎಲ್ಲ ಚಿತ್ರಗಳನ್ನು ನೋಡಿದ್ರೆ, ಇದು ಅವರ ದಿ ಬೆಸ್ಟ್ ಎನಿಸುತ್ತೆ. ಅಂಥಾದ್ದೊಂದು ಸಿನಿಮಾ ಮಾಡಿದ್ದಕ್ಕೆ ನೀನು ಗರ್ವ ಪಡಬೇಕು ಎಂದರು ಸುಮಲತಾ.

    ಸುದೀಪ್ ಸುಮಲತಾ ಅವರ ಪ್ರೀತಿಯ ಮಾತಿಗೆ ಹೇಳಿದ್ದು ಒಂದೇ ಮಾತು. `ಥ್ಯಾಂಕ್ಯೂ ಅಕ್ಕಾ, ಇದು ನನಗೆ ಸಿಕ್ಕ ಗೌರವ'. 

    ಸುದೀಪ್‍ಗೆ ಗೌರವ ತಂದುಕೊಟ್ಟ, ಸುಮಲತಾಗೆ ಇಷ್ಟವಾದ, ಚಿತ್ರರಂಗಕ್ಕೆ ಚಿತ್ರರಂಗವೇ ಕಾತುರದಿಂದ ಎದುರು ನೋಡುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ.. ಇದೇ ವಾರ ರಿಲೀಸ್. 

  • ಸುಮಕ್ಕನಿಗೆ ಕಿಚ್ಚನ ಹಾರೈಕೆ

    sudeeo wishes sumalatha

    ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಹೊರಟಿರುವ ಸುಮಲತಾ ಅಂಬರೀಷ್ ಅವರಿಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಶುಭವಾಗಲಿ ಅಕ್ಕಾ.. ಅಂಬರೀಷ್ ಮಾಮಾ ನಿಮ್ಮ ಜೊತೆಯಲ್ಲಿದ್ದಾರೆ. ನಿಮ್ಮ ಶಕ್ತಿ ಅವರೇ. ಅವರಿಗೆ ಶಕ್ತಿಯಾಗಿದ್ದ ಅದೇ ಜನ, ಈಗ ನಿಮ್ಮ ಜೊತೆಗಿರುತ್ತಾರೆ. ಅವರ ಸೇವೆ ಮಾಡುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

    ಸುದೀಪ್ ಹಾರೈಕೆಗೆ ಧನ್ಯವಾದ ಹೇಳಿರುವ ಸುಮಲತಾ, ನಿನ್ನ ಈ ಮಾತು ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದಿದ್ದಾರೆ.

  • ಸುಮಲತಾ ಅಂಬರೀಷ್ ಪಾಲಿಟಿಕ್ಸ್ ಎಂಟ್ರಿ ಮಂಡ್ಯದಿಂದ ಪಕ್ಕಾ

    sumalatha hints at political entry

    ಅಂಬರೀಷ್ ನಿಧನರಾದಾಗಿನಿಂದಲೂ ಅದೊಂದು ಪ್ರಶ್ನೆ ಅಭಿಮಾನಿಗಳನ್ನು, ರಾಜಕೀಯ ನಾಯಕರನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಂಡ್ಯದ ಜನರನ್ನು ಕಾಡುತ್ತಲೇ ಇದೆ. ಸುಮಲತಾ ಅಂಬರೀಷ್ ರಾಜಕೀಯಕ್ಕೆ ಬರುತ್ತಾರಾ ಎನ್ನುವುದು. ಈ ಮೊದಲು ಅಂಬಿ ರಾಜಕೀಯದಲ್ಲಿದ್ದರೂ, ಸುಮಲತಾ ರಾಜಕೀಯದಿಂದ ದೂರವೇ ಇದ್ದರು. ಆದರೆ, ಅಂಬಿಯಿಲ್ಲದ ಆ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

    ಶುಕ್ರವಾರ ಸುಮಲತಾ ಅವರ ಮನೆಗೆ ಹೆಚ್ಚೂ ಕಡಿಮೆ ದಾಳಿಯನ್ನೇ ಇಟ್ಟ ಅಂಬರೀಷ್ ಅಭಿಮಾನಿಗಳು, ಮಂಡ್ಯದಿಂದ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದಾರೆ. ಅಭಿಮಾನಿಗಳ ಒತ್ತಾಸೆಯ ಎದುರು ಮೌನಕ್ಕೆ ಶರಣಾಗಿದ್ದ ಸುಮಲತಾ ಕೊನೆಗೂ ಮಾತನಾಡಿದ್ದಾರೆ. `ರಾಜಕೀಯಕ್ಕೆ ಸೇರಬೇಕು, ಬರಬೇಕು ಎಂಬ ಯಾವ ಆಲೋಚನೆಯೂ ನನಗಿಲ್ಲ. ಅಕಸ್ಮಾತ್, ರಾಜಕೀಯಕ್ಕೆ ಬರುವುದಾದರೆ ಅದು ಮಂಡ್ಯದಿಂದ ಮಾತ್ರ. ಅಂಬಿ ರಾಜಕೀಯದಲ್ಲಿದ್ದವರು. ಕಾಂಗ್ರೆಸ್‍ನಲ್ಲಿದ್ದವರು. ಹೀಗಾಗಿ ಕಾಂಗ್ರೆಸ್ ನಾಯಕರ ಜೊತೆಯಲ್ಲೂ ಮಾತನಾಡುತ್ತೇನೆ. ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ' ಎಂದಿದ್ದಾರೆ.

    ಬಹುತೇಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧಿಸುವುದು ಹೆಚ್ಚೂ ಕಡಿಮೆ ಖಚಿತವಾದಂತಿದೆ.

  • ಸುಮಲತಾ ಪರ ಪ್ರಚಾರ - ಯಶ್, ದರ್ಶನ್‍ಗೆ ಕೆಡುತ್ತಾ ಗ್ರಹಚಾರ..?

    jds mla warns sumalatha supporters

    ಮಂಡ್ಯದಿಂದ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಸುಮಲತಾ ಪರ ಬಹುತೇಕ ಚಿತ್ರರಂಗದ ಸ್ಟಾರ್ ನಟರು ಒಗ್ಗೂಡುತ್ತಿದ್ದಾರೆ. ಕೆಲವರು ಹೋಗಲಾಗದೇ ಇದ್ದರೂ, ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗಲೇ, ಸುಮಲತಾ ಪರ ಪ್ರಚಾರಕ್ಕೆ ಹೋದವರಿಗೆ ಗ್ರಹಚಾರ ಕೆಡುತ್ತಾ..? ಅಂಥಾದ್ದೊಂದು ಅನುಮಾನ ಮೂಡಿಸಿರುವುದು ಜೆಡಿಎಸ್ ಶಾಸಕ ಕೆ.ಸಿ. ನಾರಾಯಣ ಗೌಡ ಹೇಳಿಕೆ.

    ಸುಮ್ಮನೆ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾತನಾಡಬೇಡಿ. ನಿಮ್ಮ ಪಾಡಿಗೆ ನೀವು ಶೂಟಿಂಗ್ ಮಾಡಿಕೊಂಡಿರಿ. ನಿಮಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಗೌರವದಿಂದ ಮನೆಯಲ್ಲಿರಿ. ಇಲ್ಲದೇ ಹೋದರೆ, ನಿಮ್ಮ ಆಸ್ತಿಪಾಸ್ತಿ ತನಿಖೆ ಮಾಡಿಸಬೇಕಾಗಬಹುದು. ಸರ್ಕಾರ ನಮ್ಮದಿದೆ ಎಂದಿದ್ದಾರೆ ನಾರಾಯಣ ಗೌಡ. 

    ಸಿನಿಮಾ ನಟರು ಒಬ್ಬ ವ್ಯಕ್ತಿಯ ಪರ ಪ್ರಚಾರಕ್ಕೆ ಬಂದ್ರೆ ಹುಷಾರ್. ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ ನಾರಾಯಣ ಗೌಡ. ಈ ಹಿಂದೆ ಸಚಿವ ಡಿ.ಸಿ.ತಮ್ಮಣ್ಣ, ಎಚ್.ಡಿ.ರೇವಣ್ಣ, ಶಾಸಕ ಕೆ.ಟಿ.ಶ್ರೀಕಂಠೇಗೌಡ ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್ ಶಾಸಕ ಚಿತ್ರರಂಗದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ.

    ಹಾಗಾದರೆ, ಸುಮಲತಾ ಪರ ಬಹಿರಂಗವಾಗಿ ಬೆಂಬಲ ಘೋಷಿಸಿರುವ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಶುಭ ಹಾರೈಸಿರುವ ಕಿಚ್ಚ ಸುದೀಪ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್ ಸೇರಿದಂತೆ ಚಿತ್ರರಂಗದ ಬಹುತೇಕರ ಮೇಲೆ ಸರ್ಕಾರ ಕೆಂಗಣ್ಣು ಬೀರುತ್ತಾ..? ನೋಡಬೇಕಷ್ಟೆ.

  • ಸುಮಲತಾ ಪರ ಪ್ರಚಾರ - ಸುದೀಪ್ ಹೇಳಿದ್ದೇನು..?

    sudeep reacts on sumalatha's political campaign

    ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು 100% ಪಕ್ಕಾ. ಕಾಂಗ್ರೆಸ್ ಟಿಕೆಟ್ ಇಲ್ಲ ಎಂದಿರುವ ಕಾರಣ, ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಇನ್ನು ಚಿತ್ರರಂಗದಿಂದ ಸುಮಲತಾ ಪರ ಯಾರು ಪ್ರಚಾರಕ್ಕೆ ಹೋಗ್ತಾರೆ ಎಂಬ ಬಗ್ಗೆ ಅನುಮಾನಗಳೇನೂ ಇಲ್ಲ. ದರ್ಶನ್, ಅಮ್ಮನ ಪರ ಪ್ರಚಾರ ಮಾಡ್ತೀನಿ ಎಂದು ಈಗಾಗಲೇ ಘೋಷಿಸಿ ಆಗಿದೆ. ಯಶ್ ಕೂಡಾ ಹೋಗಬಹುದು. ಸುದೀಪ್ ಹೋಗ್ತಾರಾ..?

    ಈ ಪ್ರಶ್ನೆಗೆ ಸುದೀಪ್ ಕೊಟ್ಟಿರುವ ಉತ್ತರ ಇದು. ಅಲ್ಲಿ ದರ್ಶನ್ ಹೋಗ್ತಾರೆ.  ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ..? ನನಗೆ ಯಾರೂ ಕರೆದಿಲ್ಲ. ನಾನು ರಾಜಕೀಯದಿಂದ ದೂರ. ನನ್ನನ್ನು ನಂಬಿ ಹಲವು ನಿರ್ಮಾಪಕರು ಹಣ ಹಾಕಿದ್ದಾರೆ. ಹಾಗಾಗಿ ನಾನು ಸಿನಿಮಾಗಳಲ್ಲಿ ಬ್ಯುಸಿ ಎಂದಿದ್ದಾರೆ ಕಿಚ್ಚ ಸುದೀಪ್.

  • ಸುಮಲತಾ ಪರ ಪ್ರಚಾರಕ್ಕೆ ಚರಣ್ ರಾಜ್ ರೆಡಿ

    charan raj to campaign for sumalatha

    ಮಂಡ್ಯದಲ್ಲಿ ಸ್ಪರ್ಧಿಸಲು ರೆಡಿಯಾಗಿರುವ, ಈಗಾಗಲೇ ಮಂಡ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ನಾನು ಹೋಗುತ್ತೇನೆ ಎಂದು ಘೋಷಿಸಿದ್ದಾರೆ ನಟ ಚರಣ್ ರಾಜ್. ಅಂಬರೀಷ್ ನನಗೆ ಅಣ್ಣನಿದ್ದ ಹಾಗೆ. ಅವರ ಮನೆಯಲ್ಲಿ ಅನ್ನ ತಿಂದಿದ್ದೇನೆ. ಅಂಬರೀಷ್‍ಗಾಗಿ ನಾನು ಸುಮಲತಾ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಚರಣ್ ರಾಜ್.

    ಸುಮಲತಾ ಜೊತೆ ಕನ್ನಡದಲ್ಲಿ ನಟಿಸಿದ ಹೀರೋಗಳಲ್ಲಿ ಚರಣ್‍ರಾಜ್ ಕೂಡಾ ಒಬ್ಬರು. ಚರಣ್ ರಾಜ್-ಸುಮಲತಾ ಜೋಡಿಯ ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ.. ಹಾಡು ಕನ್ನಡ ಚಿತ್ರರಸಿಕರ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು.

  • ಸುಮಲತಾ ಬೆಂಬಲಕ್ಕೆ ರಾಕ್‍ಲೈನ್, ದೊಡ್ಡಣ್ಣ

    rockline and doddanna supports sumalatha

    ಗಂಡ ಸತ್ತ ತಿಂಗಳಿಗೆಲ್ಲ ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಇವು ಸಚಿವ ಹೆಚ್.ಡಿ.ರೇವಣ್ಣ ಸುಮಲತಾ ವಿರುದ್ಧ ಆಡಿರುವ ಮಾತುಗಳು. ರೇವಣ್ಣನವರ ಈ ಮಾತು ಚಿತ್ರರಂಗದವರನ್ನು ಕೆರಳಿಸಿದೆ. ಅದರಲ್ಲೂ ಅಂಬಿ ಆಪ್ತಬಳಗದಲ್ಲಿದ್ದ ರಾಕ್‍ಲೈನ್, ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೊಡ್ಡಣ್ಣ : ಜನರಿಗೆ ಯಾರನ್ನು ಯಾವಾಗ ಮನೆಗೆ ಕಳುಹಿಸಬೇಕು ಎಂದು ಗೊತ್ತಿದೆ. ಜನರೇ ನಿರ್ಧರಿಸ್ತಾರೆ ಬಿಡಿ.

    ರಾಕ್‍ಲೈನ್ ವೆಂಕಟೇಶ್ : ಇದರ ಬಗ್ಗೆ ನಾನು ಏನೂ ಮಾತನಾಡೋದಿಲ್ಲ. ಅಂಬರೀಷ್ ನನ್ನ ಪಾಲಿಗೆ ಅಣ್ಣನಂತೆ ಇದ್ದವರು. ಸುಮಲತಾ ಅವರೊಂದಿಗೆ ನಾವಿರುತ್ತೇವೆ. ಉಳಿದದ್ದು ಜನರಿಗೆ ಬಿಟ್ಟಿದ್ದು

  • ಸುಮಲತಾ ರಾಜಕೀಯ, ರೇವಣ್ಣ ಹೇಳಿಕೆ - ಏನ್ ಹೇಳಿದ್ರು ಶಿವಣ್ಣ..?

    shivanna's first reaction on sumalath's political entry

    ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧೆ ಮಾಡೋದು, ಪಕ್ಷೇತರರಾಗಿ ಕಣಕ್ಕಿಳಿಯುವುದು ಖಚಿತವಾಗಿದ್ದೇ ತಡ, ರಾಜಕೀಯದ ಕೊಳಕು ನಾಲಗೆಗೆ ಸಿಕ್ಕಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಣ್ಣ ಹೆಚ್.ಡಿ.ರೇವಣ್ಣ ಆಡಿರುವ ಮಾತು ವಿವಾದವಾಗಿದೆ. ಈ ಕುರಿತಂತೆ ಹಲವರು ಖಂಡಿಸಿದ್ದಾರೆ. ಟೀಕಿಸಿದ್ದಾರೆ. ರೇವಣ್ಣ ಒಬ್ಬರನ್ನು ಬಿಟ್ಟು, ಉಳಿದವರೆಲ್ಲ ಸಾರಿ..ಸ್ಸಾರಿ ಎಂದಿದ್ದಾರೆ. ಈ ಕುರಿತು ಶಿವರಾಜ್ ಕುಮಾರ್ ಹೇಳಿರೋದು ಇಷ್ಟು.

    ರೇವಣ್ಣ ಹೇಳಿಕೆಗೆ : ಸುಮಲತಾ ಅವರ ಬಗ್ಗೆಯಷ್ಟೇ ಅಲ್ಲ, ಯಾವುದೇ ಹೆಣ್ಣಿನ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡಬಾರದು. ರೇವಣ್ಣನವರು ಮಾತನಾಡಿರುವುದು ತಪ್ಪು. ಸುಮಲತಾ ಪರ ಬೆಂಬಲ..? : ಆ ಬಗ್ಗೆ ಯೋಚಿಸಿಲ್ಲ. ರಾಜಕೀಯ ಪ್ರವೇಶ ಅವರ ವೈಯಕ್ತಿಕ ನಿರ್ಧಾರ. ಸುಮಲತಾ ಅವರಿಗೆ ಒಳ್ಳೆಯದಾಗಲಿ. 

    ಅಂಬರೀಷ್ ಬಗ್ಗೆ : ಅಂಬರೀಷ್ ನನಗೆ ತಂದೆ ಸಮಾನರು. ಅವರ ಬಗ್ಗೆ ನನಗೆ ಯಾವತ್ತೂ ನನಗೆ ಗೌರವ ಇದ್ದೇ ಇರುತ್ತೆ.

    ಇನ್ನು ಪತ್ನಿ ಗೀತಾ ಅವರು ಜೆಡಿಎಸ್‍ನಿಂದ ಕಣಕ್ಕಿಳಿದಾಗ ಪ್ರಚಾರ ಮಾಡಿದ್ದಕ್ಕೆ ಉತ್ತರಿಸಿರುವ ಶಿವಣ್ಣ,  ನನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತೇನೆ. ಒಬ್ಬ ಪತಿಯಾಗಿ ನಾನು ನನ್ನ ಪತ್ನಿಯನ್ನು ಬೆಂಬಲಿಸಿದ್ದೇನೆ. ಗಂಡನಾಗಿ ಅಷ್ಟೂ ಕರ್ತವ್ಯ ನಿಭಾಯಿಸದಿದ್ದರೆ ಹೇಗೆ ಎಂದಿದ್ದಾರೆ.

  • ಸುಮಲತಾಗೆ ಡಬಲ್ ಗಜ ಬಲ - ಮಂಡ್ಯ ಸ್ಟಾರ್ ವಾರ್

    sumalatha gets double power support

    ಮಂಡ್ಯದಲ್ಲೀಗ ಸ್ಟಾರ್ ವಾರ್. ಒಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ. ಅವರೂ ಸಿನಿಮಾದವರೇ. ಇನ್ನೊಂದ್ ಕಡೆ ಸುಮಲತಾ ಅಂಬರೀಷ್. ಅವರೂ ಸಿನಿಮಾದವರೇ. ಇಬ್ಬರಿಗೂ ಮಂಡ್ಯ ಬೇಕು. 

    ಅಂಬರೀಷ್ ಪತ್ನಿ ಎಂದೇ ಗುರುತಿಸಿಕೊಂಡಿದ್ದ ಸುಮಲತಾ ಈಗ ಮಂಡ್ಯ ಚುನಾವಣೆ ಯುದ್ಧಕ್ಕಿಳಿದಿದ್ದಾರೆ. ಅವರ ಜೊತೆಗೀಗ ನಿಂತಿರುವುದು ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು. ಗಜಕೇಸರಿ ಯಶ್ ಮತ್ತು ಗಜ ದರ್ಶನ್ ಎಡಬಲಗಳಲ್ಲಿ ಕುಳಿತು ಅಮ್ಮನಿಗೆ ಬೆಂಬಲ ಘೋಷಿಸಿದ್ರು.

    ದರ್ಶನ್ ನನ್ನ ದೊಡ್ಡ ಮಗ, ಯಶ್ ನನ್ನ ಮನೆ ಮಗ ಎಂದಿದ್ದರು ಸುಮಲತಾ. ವಿಧೇಯ ಮಕ್ಕಳಂತೆ ಸುಮಲತಾ ಅಕ್ಕಪಕ್ಕ ಕುಳಿತಿದ್ದ ದರ್ಶನ್-ಯಶ್, ತಾಯಿಗೆ ಬೆಂಬಲ ಎಂದು ಹೇಳಿದರು. ನನ್ನ ಇಬ್ಬರು ಅಣ್ಣಂದಿರು ಇವತ್ತು ನಮ್ಮ ಜೊತೆಗಿದ್ದಾರೆ ಎಂದರು ಅಭಿಷೇಕ್ ಅಂಬರೀಷ್.

    ಎಲ್ಲಿಯೂ ನಿಖಿಲ್ ಬಗ್ಗೆ ಕೆಟ್ಟದಾಗಿ ಮಾತನಾಡದ ಸುಮಲತಾಗೆ ಎದುರಾದ ದೊಡ್ಡ ಪ್ರಶ್ನೆ, ಗೆದ್ದರೆ.. ನೀವು ಗೆದ್ದ ಮೇಲೆ ಬಿಜೆಪಿಗೆ ಹೋಗ್ತೀರಾ.. ಕಾಂಗ್ರೆಸ್‍ಗೆ ಹೋಗ್ತೀರಾ ಎಂಬುದು. ಅದನ್ನು ನಾನು ಜನರ ಮುಂದಿಡುತ್ತೇನೆ. ಜನ ಏನ್ ಹೇಳ್ತಾರೋ ಹಾಗೆ ನಡೆದುಕೊಳ್ತೇನೆ ಎಂದರು ಸುಮಲತಾ.

  • ಸುಮಲತಾಗೆ ದರ್ಶನ್ ಮಾಡಿರೋ ಪ್ರಾಮಿಸ್ ಇದು

    sumalatha talks about darshan and yash in mandya

    ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ ಎನ್ನುತ್ತಿದ್ದರು ಅಂಬರೀಷ್. ದರ್ಶನ್ ಕೂಡಾ ಹಾಗೆಯೇ ಇದ್ದಾರೆ. ಅಭಿಷೇಕ್‍ರನ್ನು ಅಷ್ಟೇ ಪ್ರೀತಿಯಿಂದ ತಮ್ಮ ಎನ್ನುತ್ತಾರೆ. ಅದೇ ಮಾತನ್ನು ಈಗ ಸುಮಲತಾ ಕೂಡಾ ಹೇಳಿದ್ದಾರೆ. 

    ದರ್ಶನ್ ನನ್ನ ದೊಡ್ಡ ಮಗ. ಯಶ್ ಮನೆ ಮಗ ಎಂದಿರೋ ಸುಮಲತಾ ದರ್ಶನ್‍ಗೆ ನೋಡಪ್ಪ, ನಾನು ಅಭಿಷೇಕ್ ಕಡೆಯಿಂದ ಏನೇನೆಲ್ಲ ನಿರೀಕ್ಷೆ ಮಾಡ್ತೀನೋ, ನಿನ್ನಿಂದಲೂ ಅದನ್ನೇ ನಿರೀಕ್ಷೆ ಮಾಡ್ತೀನಿ ಅಂತಾರಂತೆ. ಆಗೆಲ್ಲ ದರ್ಶನ್ ಹೇಳೋದು ಒಂದೇ ಮಾತು. ನೀವು ಅಭಿಷೇಕ್ ಕಡೆಯಿಂದ ಏನೇನು ನೋಡ್ತೀರೋ, ನನ್ನಿಂದ ಅದರ ಎರಡರಷ್ಟು ನಿರೀಕ್ಷೆ ಮಾಡಿ ಅಂತಾನೆ.

    ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ, ಸ್ವತಃ ಈ ಮಾತು ಹೇಳಿದ್ದಾರೆ. ಅಲ್ಲಿಗೆ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರಕ್ಕೆ ಬರೋದು ಹೆಚ್ಚು ಕಡಿಮೆ ಕನ್‍ಫರ್ಮ್.

    ದರ್ಶನ್ ಅವರಂತೂ ನಾನು ಸುಮಲತಾ ಅವರ ಜೊತೆ ಇರ್ತೇನೆ. ನನಗೆ ಪಕ್ಷ ಬೇಕಿಲ್ಲ. ನನ್ನವರು ಮುಖ್ಯ ಎಂದಿದ್ದಾರೆ.