` sarath babu, - chitraloka.com | Kannada Movie News, Reviews | Image

sarath babu,

  • ನಟ ಶರತ್ ಬಾಬು ಅವರಿಗೆ ಏನಾಗಿತ್ತು..?

    ನಟ ಶರತ್ ಬಾಬು ಅವರಿಗೆ ಏನಾಗಿತ್ತು..?

    ವಯಸ್ಸು 71 ವರ್ಷ. ನೋಡುವುದಕ್ಕೆ ಆರೋಗ್ಯವಾಗಿಯೇ ಇದ್ದರು. ಆದರೆ ದೇಹ ಜರ್ಝರಿತವಾಗಿ ಹೋಗಿತ್ತು. ಶರತ್ ಬಾಬು ಅವರ ದೇಹದ ಯಾವ ಅವಯವಗಳೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕರುಳು, ಶ್ವಾಸಕೋಶ, ಕಿಡ್ನಿ ಹಾಳಾಗಿದ್ದವು. ಉಸಿರಾಟ ಕಷ್ಟವಾಗಿತ್ತು. ವೆಂಟಿಲೇಟರಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಶರತ್ ಬಾಬು ಅವರನ್ನು ಉಳಿಸಿಕೊಳ್ಳೋಕೆ ಅವರ ಕುಟುಂಬ ಶಕ್ತಿಮೀರಿ ಪ್ರಯತ್ನಿಸುತ್ತಿತ್ತು. ಆದರೆ ಅದಾವುದೂ ಈಡೇರಲಿಲ್ಲ.

    ಮೇ 3ನೇ ತಾರೀಕು ಒಮ್ಮೆ ಶರತ್ ಬಾಬು ಅವರ ಸಾವಿನ ಸುದ್ದಿ ಹಬ್ಬಿತ್ತು. ಆದರೆ ಅದು ವದಂತಿಯೇ ಹೊರತು ಸತ್ಯವಾಗಿರಲಿಲ್ಲ. . ಕೆಲ ಸ್ಟಾರ್ ಕಲಾವಿದರು ಕೂಡ ಸಂತಾಪ ಸೂಚಿಸಿದ್ದರು. ಕೊನೆಗೆ ಕುಟುಂಬಸ್ಥರು ಶರತ್ ಬಾಬು ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಬೇಕಾಯ್ತು.

    ಹಲವು ದಿನಗಳಿಂದ ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅವರು ಈ ಬಾರಿ ಹುಷಾರಾಗಿ ವಾಪಸ್ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಅಭಿಮಾನಿಗಳು, ಆಪ್ತರು ಶರತ್ ಬಾಬು ಕ್ಷೇಮವಾಗಿ ಬರಲಿ ಎಂದು ಪ್ರಾರ್ಥಿಸಿದ್ದರು.  

    ಶರತ್ ಬಾಬು 1973ರಲ್ಲಿ ರಾಮರಾಜ್ಯಂ ಅನ್ನೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕೆಲವು ಚಿತ್ರಗಳಲ್ಲಿ ಹೀರೋ ಆಗಿಯೂ ನಟಿಸಿದ್ದರು. 9 ಬಾರಿ ನಂದಿ ಪ್ರಶಸ್ತಿ ಪಡೆದಿದ್ದ ಶರತ್ ಬಾಬು, ಕನ್ನಡದಲ್ಲಿ 14 ಚಿತ್ರಗಳಲ್ಲಿ ನಟಿಸಿದ್ದರು. ತುಳಸಿದಳ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಶರತ್ ಬಾಬು ಅವರನ್ನು, ಕನ್ನಡಿಗರು ಹೃದಯಕ್ಕೆ ಹತ್ತಿರ ಮಾಡಿಕೊಂಡಿದ್ದು ಅಮೃತವರ್ಷಿಣಿ ಚಿತ್ರದ ಹೇಮಂತ್ ಪಾತ್ರದಿಂದ. ಇದೀಗ ತೆರೆಗೆ ಬರುತ್ತಿರುವ ಮತ್ತೆ ಮದುವೆ ಚಿತ್ರದಲ್ಲಿಯೂ ಶರತ್ ಬಾಬು ನಟಿಸಿದ್ದಾರೆ. ಕನ್ನಡದಲ್ಲಿ ತುಳಸಿದಳ, ಅಮೃತವರ್ಷಿಣಿ ಅಲ್ಲದೆ ಕಂಪನ, ರಣಚಂಡಿ, ಉಷಾ, ಆರ್ಯನ್, ನಮ್ಮೆಜಮಾನ್ರು, ಜನುಮದಾತ, ನೀಲ, ಹೃದಯಾ ಹೃದಯಾ. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

     

  • ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ

    ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ

    ಅಮೃತವರ್ಷಿಣಿಯ ಹೇಮಂತ್ ಪಾತ್ರವನ್ನು ಕನ್ನಡಿಗರು ಮರೆಯೋದಾದರೂ ಹೇಗೆ..? ಶರತ್ ಬಾಬು ಕನ್ನಡಿಗರಿಗೆ ಅಪರಿಚಿತರಲ್ಲ. ನಟಿಸಿರುವ ಚಿತ್ರಗಳು 50ಕ್ಕೂ ಹೆಚ್ಚು. ಜನುಮದಾತ, ನೀಲಾ, ರಣಚಂಡಿ, ಶಕ್ತಿ, ಬೃಂದಾವನ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಶರತ್ ಬಾಬು ತಮಿಳು, ತೆಲುಗಿನಲ್ಲಿ ದೊಡ್ಡ ನಟ. ಅವರಿಗೀಗ 71 ವರ್ಷ ವಯಸ್ಸು. ಅವರ ಆರೋಗ್ಯ ಏರುಪೇರಾಗಿದೆ. ಹೀಗಾಗಿ ಶರತ್ ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಯಾವ ಕಾಯಿಲೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ . . ಅಭಿಮಾನಿಗಳು ಕೂಡ ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. 1973ರಲ್ಲಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಶರತ್ ಬಾಬು, ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮುಳ್ಳ ಬಂಧಂ, ಸೀತಕೋಕ ಚಿಲುಕ, ಸಂಸಾರ ಒಂದು ಚದರಂಗಂ, ಅಣ್ಣಯ್ಯ, ಆಪದ್ಭಾಂದವುಡು ಮುಂತಾದ ಅದ್ಭುತ ಚಿತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ನೆಗೆಟಿವ್ ರೋಲ್ಗಳಲ್ಲೂ ಅವರು ಮಿಂಚಿದ್ದರು.

    ತೆಲುಗು ನಟಿ ಕಲ್ಯಾಣಿ ಪದಲಾ ಅವರ ಪೋಸ್ಟ್ ಮೂಲಕ ಈ ವಿಷಯ ಬಹಿರಂಗವಾಗಿದೆ. ಕಲ್ಯಾಣಿ ಪದಲ, ಕರಾಟೆ ಕಲ್ಯಾಣಿ ಎಂದೇ ಫೇಮಸ್ ಆಗಿರುವ ನಟಿ. ನನ್ನ ನೆಚ್ಚಿನ ಹೀರೋ ಬೇಗ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ ಕಲ್ಯಾಣಿ.

  • ನಟ ಶರತ್ ಬಾಬು ಸಾವಿನ ಸುದ್ದಿ ಸತ್ಯವಲ್ಲ

    ನಟ ಶರತ್ ಬಾಬು ಸಾವಿನ ಸುದ್ದಿ ಸತ್ಯವಲ್ಲ

    ಅಮೃತವರ್ಷಿಣಿ ಖ್ಯಾತಿಯ ಶರತ್ ಬಾಬು ಅವರ ಆರೋಗ್ಯ ಹಲವು ತಿಂಗಳಿಂದ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಇದ್ದಕ್ಕಿದ್ದಂತೆ ಶರತ್ ಬಾಬು ಮೃತಪಟ್ಟರಂತೆ ಎಂಬ ಸುದ್ದಿ ಹಬ್ಬಿದವು. ತೆಲುಗು, ಇಂಗ್ಲಿಷ್ ಸುದ್ದಿ ಚಾನೆಲ್ಲುಗಳಲ್ಲಿ ಇದು ಸುದ್ದಿಯೂ ಆಗಿ ಹೋಯ್ತು. ಆದರೆ ಯಾವಾಗ ಕಮಲ್ ಹಾಸನ್ ಅವರಂತಹ ಖ್ಯಾತರು ಸಂತಾಪ ಸೂಚಿಸಿದರೋ.. ಕನ್ನಡದಲ್ಲಿಯೂ ಕೆಲವು ನ್ಯೂಸ್ ಚಾನೆಲ್ಲುಗಳು, ವೆಬ್ ಸೈಟುಗಳು ಸುದ್ದಿಯನ್ನು ಪ್ರಕಟಿಸಿದವು. ನಂತರ ಕಮಲ್ ಹಾಸನ್ ಸೇರಿದಂತೆ ಹಲವು ಕಲಾವಿದರು ತಮ್ಮ ಸಂತಾಪವನ್ನು ಡಿಲೀಟ್ ಮಾಡಿದರು. ನ್ಯೂಸ್ ಚಾನೆಲ್ಲುಗಳೂ ಸುದ್ದಿಯನ್ನು ಡಿಲೀಟ್ ಮಾಡಿದವು.

    ಶರತ್ ಬಾಬು ಅವರು ನಿಧಾನವಾಗಿ ಹುಷಾರಾಗುತ್ತಿದ್ದಾರೆ. ಹೈದರಾಬಾದ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರನ್ನು ಮತ್ತೊಂದು ಕೊಠಡಿಗೆ ಶಿಫ್ಟ್ ಮಾಡಲಾಗುತ್ತಿದೆ. ಅವರು ಬೇಗ ಗುಣವಾಗಲಿದ್ದಾರೆ ಎಂಬ ನಂಬಿಕೆ ಇದೆ. ಸದ್ಯಕ್ಕೆ ಹಬ್ಬಿರುವುದು ಸುಳ್ಳು ಸುದ್ದಿಯಾಗಿದೆ. ಶರತ್ ಬಾಬು ಅವರು ಶೀಘ್ರವೇ ಸಂಪೂರ್ಣ ಗುಣಮುಖರಾಗಿ, ಮಾಧ್ಯಮಗಳೊಂದಿಗೆ ಮಾತನಾಡಲಿ ಅಂತ ಹಾರೈಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸುದ್ದಿಯನ್ನು ನಂಬಬೇಡಿ ಎಂಬುದು ನನ್ನ ಮನವಿ ಎಂಬುದು ಅವರ ಕುಟುಂಬದವರು ಮಾಡಿರುವ ಮನವಿ.

    ನಟ ಶರತ್ ಬಾಬು ಅವರ ಕಿಡ್ನಿ, ಲಂಗ್ಸ್, ಲಿವರ್ ಮತ್ತಿತರರ ಅಂಗಾಂಗಳಿಗೆ ತೊಂದರೆ ಆಗಿದ್ದು, ಸದ್ಯದ ಆರೋಗ್ಯ ಪರಿಸ್ಥಿತಿ ತುಂಬ ಗಂಭೀರವಾಗಿದೆ. ಸರಿಯಾದ ಚಿಕಿತ್ಸೆ ದೊರಕದೇ ಹೋದಲ್ಲಿ, ಬಹು ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆಗಳೂ ಇವೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಉಸಿರಾಟಕ್ಕೆ ಸಮಸ್ಯೆ ಆಗಬಾರದು ಎಂದು ಅವರನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಅವರು ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.